ಎಲ್ಲೇ ಇರು, ಹೇಗೇ ಇರು ಎಂದೆಂದೂ ಮನದಲ್ಲಿ…


Team Udayavani, Sep 5, 2017, 10:34 AM IST

05-JOSH-6.jpg

ಎರಡು ವರ್ಷ ಜೊತೆಗೂಡಿ ಕನಸಿನ ಮನೆ ಕಟ್ಟಿದ್ದ ನಾವು ಇಂದು ಎದುರಿಗೆ ಸಿಕ್ಕರೆ ಅಪರಿಚಿತರು. ಪ್ರೀತಿಯ ಹಕ್ಕಿ ಎದೆಯ ಗೂಡಲ್ಲಿ ಅವಿತಿದೆ. ಇಂದು ನಿನ್ನ ಕನಸುಗಳಲ್ಲಿ ನಾನಿರುವೆನೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕನವರಿಕೆಯಲ್ಲಿ ನೀನಿರುವೆ ಗೆಳೆಯಾ… 

ಗೆಳೆಯಾ,
ನಿನ್ನೊಂದಿಗೆ ಕಳೆದ ಆ ಕ್ಷಣಗಳು ಇಂದಿಗೂ ಕಣ್ಣೆದುರಿಗೇ ಇವೆ. ನಾನು ಅತ್ತಾಗಲೆಲ್ಲಾ ಕಣ್ಣೀರೊರೆಸಿ ನೀನು ಧೈರ್ಯ ತುಂಬಿದ ಕ್ಷಣಗಳನ್ನು ಹೇಗೆ ಮರೆಯಲಿ ಹೇಳು? ಮರೆತು ಹೋಗುವಂಥ ನೆನಪುಗಳಲ್ಲ ನೀನು ನನಗೆ ಕೊಟ್ಟಿದ್ದು. ನೀನಾಡಿದ ಪ್ರೀತಿಯ ಮಾತು, ಬೈಗುಳ ಇದಾವುದನ್ನೂ ನಾನು ಮರೆತಿಲ್ಲ. ಮಗಾ… ಚಿನ್ನು.. ಪುಟ್ಟಾ… ಎಂಬ ಮಾತು ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ಅದೆಷ್ಟೋ ದಿನಗಳೇ ಆಯಿತು. ಈ ಮೊದಲು, ಒಂದು ದಿನ ಕೂಡ ನಿನ್ನನ್ನು ಬಿಟ್ಟಿರಲು ಕಷ್ಟ ಎನ್ನುತ್ತಿದ್ದವನು, ಈಗ ತಿಂಗಳಾಗುತ್ತ ಬಂತು ನನ್ನ ಬಳಿ ಮಾತಾಡದೆ. ಈಗೀಗ ನನಗೂ ನೀನು ಮಾಡುವುದೇ ಸರಿ, ನಾನು ಮಾಡುವುದೆಲ್ಲ ತಪ್ಪು ಅನಿಸುತ್ತಿದೆ. ನಾನೇ ಸರಿ ಇಲ್ಲ ಎಂಬ ಭಾವನೆ ಚುಚ್ಚುತ್ತಿದೆ ನನ್ನನ್ನು.

ನನ್ನೆಲ್ಲ ನೋವುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳುವ ಅವಕಾಶವಿತ್ತು. ಆದರೆ, ನೀನೇ ನೋವು ಕೊಟ್ಟಾಗ ಅದನ್ನು ಯಾರೊಂದಿಗೆ ಹಂಚಿಕೊಳ್ಳಲಿ? ಎರಡು ವರ್ಷ ಜೊತೆಗೂಡಿ ಕನಸಿನ ಮನೆ ಕಟ್ಟಿದ್ದ ನಾವು ಇಂದು ಎದುರಿಗೆ ಸಿಕ್ಕರೆ ಅಪರಿಚಿತರು! ಪ್ರೀತಿಯ ಹಕ್ಕಿ ಎದೆಯ ಗೂಡಲ್ಲಿ ಅವಿತಿದೆ. ಇಂದು ನಿನ್ನ ಕನಸುಗಳಲ್ಲಿ ನಾನಿರುವೆನೋ ಇಲ್ಲವೋ ಗೊತ್ತಿಲ್ಲ. ಆದರೆ, ನನ್ನ ಕನವರಿಕೆಯಲ್ಲಿ ನೀನಿರುವೆ ಗೆಳೆಯಾ. ಕಟ್ಟಿಕೊಂಡ ಕನಸುಗಳು ನಂಬಿಕೆ ಕಳೆದುಕೊಂಡು ಬೆತ್ತಲಾದರೂ ಜೀವನ ನಡೆಸಬೇಕಾದ ಅನಿವಾರ್ಯ ನನಗಿದೆ.

ನಿನಗೆ ನೆನಪಿರಬೇಕು, ನಿನ್ನ ಸಿಟ್ಟು ಒಂದಲ್ಲ ಒಂದು ದಿನ ನಮ್ಮಿಬ್ಬರನ್ನು ಬೇರೆ ಮಾಡುತ್ತದೆ ಎಂದು ನಾನು ಅಂದೊಮ್ಮೆ ಹೇಳಿದ್ದೆ. ಈಗ ಆಗಿರುವುದೂ ಅದೇ ಅಲ್ಲವೇ? ನಿನ್ನ ಜಾಗದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಈ ಮನಸ್ಸು ಒಪ್ಪುವುದಿಲ್ಲ. ಮನೆಯವರ ಒತ್ತಾಯಕ್ಕೆ, ಬದುಕಿನ ಅನಿವಾರ್ಯತೆಯ ಕಾರಣದಿಂದ ಬೇರೆಯವರು ಬರಬಹುದೇ ವಿನಃ ನಾನಾಗಿಯೇ ಯಾರನ್ನೂ ಮನಸ್ಸಿಗೆ ತಂದುಕೊಳ್ಳುವುದಿಲ್ಲ.

ನಿನಗೆ ನನ್ನ ಮೇಲಿನ ಪ್ರೀತಿಗಿಂತ ಅನುಮಾನವೇ ಜಾಸ್ತಿ ಆಗಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಕ್ಕಿಂತ ಪರಸ್ಪರರನ್ನು ದೂರುವುದರಲ್ಲೇ ಹೆಚ್ಚು ಸಮಯ ಕಳೆದೆವು. ನಿನಗೆ ನನ್ನ ತಪ್ಪು ಹುಡುಕುವುದರಲ್ಲೇ ಆನಂದ ಸಿಗುತ್ತಿತ್ತೋ ಏನೋ! ಆಗ ನಿನ್ನ ಕಣ್ಣುಗಳನ್ನು ಕಂಡಾಗ ಭಯವಾಗುತ್ತಿತ್ತು.
ನಮ್ಮಿಬ್ಬರ ಜಗಳಗಳೂ ಮಿತಿ ಮೀರಿಬಿಟ್ಟವು. ಅರಳಬೇಕಿದ್ದ ಗುಲಾಬಿ, ಬಾಡಿ ಹೋಯಿತು!

ಹೋಗ್ಲಿ ಬಿಡು… ಆಗಿದ್ದೆಲ್ಲ ಆಯಿತು. ಮುಂದೆ ನಿನ್ನ ಜೀವನದಲ್ಲಿ ಬರುವವಳ ಮೇಲಾದರೂ ನಂಬಿಕೆ ಇಡು. ನೀ ಹೇಗಿದ್ದರೂ, ಯಾರ ಜೊತೆ ಇದ್ದರೂ ನಿನ್ನ ಖುಷಿಯನ್ನೇ ಬಯಸುವವಳು ನಾನು. ನೆನಪಿಡು, ನಂಬಿಕೆಯೇ ಜೀವನ… 

ನಿನ್ನಿಂದ ಎಷ್ಟೇ ಬೈಸಿಕೊಂಡರೂ ನಿನ್ನ ನೆನಪುಗಳು ನನ್ನ ಸುತ್ತ ಸುತ್ತುತ್ತಲೇ ಗಿರಕಿ ಹೊಡೆಯುತ್ತಿವೆ. ಕ್ಷಮಿಸು. ಒಂದು ಸಲ, ಒಂದೇ ಒಂದು ಸಲ ನಿನ್ನ ಧ್ವನಿ ಕೇಳಬೇಕೆಂದು ಅನ್ನಿಸುತ್ತಿದೆ. ಒಂದು ಸಲ ನಿನ್ನ ನಗು ನೋಡಬೇಕೆಂದು ಹೃದಯ ಹಂಬಲಿಸಿದೆ. ನನ್ನ ಮರೆತು ನೀನು ಖುಷಿಯಾಗಿದ್ದೀಯ? ಒಮ್ಮೆ ಕೇಳು, ನಿನ್ನ ಹೃದಯದಲ್ಲಿ ಯಾರ ಗುರುತಿದೆ ಎಂದು…

ಮಿಸ್‌ ಯು ಬಂಗಾರು…

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.