ಚಾಕ್ಲೆಟ್‌: ಏಕ್‌ ಪ್ರೇಮ್‌ ಕಥಾ!


Team Udayavani, Sep 26, 2017, 11:57 AM IST

26-ZZ-9.jpg

ಮೋಡ ಕವಿದ ವಾತಾವರಣ. ಮಳೆ ಹನಿಗಳು ಒಂದೊಂದಾಗಿ ಇಳೆಗೆ ಜಾರುತ್ತಿದ್ದವು. ವಿಶ್ವವಿದ್ಯಾಲಯದ ವನದಲ್ಲಿ ಅರಳಿದ್ದ ಕೆಂಡಸಂಪಿಗೆಯ ಸುಗಂಧ ಘಮ್‌ ಎಂದು ಮೂಗಿಗೆ ತಾಕುತ್ತಿತ್ತು. ನಾನು ರಾಣಿ ಚನ್ನಮ್ಮ ವಿವಿಯ ಬಸ್‌ ತಂಗುದಾಣದಲ್ಲಿ ನಮ್ಮೂರ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದೆ. ಬಸ್‌ ಬೇಗ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಆಗಲೇ, ಒಂದು ಹಳೆಯ ಹಾಡಿನ ಮಾಧುರ್ಯದಂತೆ ನಡೆದು ಬಂದೆ ನೀನು! ನಿನ್ನನ್ನು ನೋಡಿದ್ದೇ- ಹೃದಯದ ಬಡಿತದಲ್ಲಿ ಏರಿಳಿತ ಆಗತೊಡಗಿತ್ತು ಆವತ್ತು ಗಿಳಿಬಣ್ಣದ ಸಲ್ವಾರ್‌ ಕಮೀಜ್‌ ಧರಿಸಿದ್ದ, ನಂದಬಟ್ಟಲು ಹೂವಿನ ಮೊಗದ ಹುಡುಗಿ ನೀನು! ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡು ಹಂಸದ ನಡಿಗೆಯಲ್ಲಿ ಬಳುಕುತ್ತಾ ಬರುತ್ತಿದ್ದೆ.

ಬಸ್‌ ಬಂದಾಗ ನನ್ನ ಪಕ್ಕದ ಸೀಟಿನಲ್ಲೇ ಕುಳಿತುಕೊಂಡು, ಮಧುರ ಕಂಠದಲ್ಲಿ, “ಸ್ವಲ್ಪ ನಿಮ್ಮ ಫೋನ್‌ ಕೊಡುತ್ತೀರಾ ಪ್ಲೀಜ್‌?’ ಎಂದು ಕೇಳಿದೆ. ಯಾರಿಗೋ ಕರೆ ಮಾಡಿ, “ನಾನು ಬರುತ್ತಿದ್ದೇನೆ. ನನ್ನ ಫೋನ್‌ ಸ್ವಿಚ್ಡ್ ಆಫ್ ಆಗಿದೆ’ ಎಂದೆ. ನಂತರ ಬ್ಯಾಗ್‌ನಿಂದ ಡೈರಿಮಿಲ್ಕ್ ಚಾಕ್ಲೆಟ್‌ ತೆಗೆದು “ತಗೊಳ್ಳಿ’ ಎಂದೆ. ನಾನು ಬೇಡ ಅಂತ ನಿರಾಕರಿಸಿದರೆ, ತಗೊಳೆಬೇಕು ಅಂತ ಮುದ್ದು ಕಂದಮ್ಮನ ಹಾಗೆ ಹಟಕ್ಕೆ ಬಿದ್ದೆ ನೋಡು: ಆಗಲೇ, ಆಗಲೇ ಈ ದಿಲ್‌ ಅನ್ನೋದು ನಿನಗೆ ಫಿದಾ ಆಗಿಬಿಡು¤. ಮನಸ್ಸು ರಾಜಿಯಾಯಿತು. ಪದೇಪದೆ ಮುಂಗುರುಳನ್ನು ಸರಿ ಮಾಡುತ್ತಾ ಮಾತಿಗೆ ಇಳಿಯುತ್ತಿದ್ದ ನಿನ್ನ ಸಲುಗೆಯ ಮಾತುಗಳನ್ನು ಕೇಳುತ್ತಲೇ ಇರಬೇಕು ಅಂತನ್ನಿಸುತ್ತಿರುವಾಗಲೇ, ಹಾಳಾದ ನಮ್ಮೂರಿನ ಸ್ಟಾಪ್‌ ಬಂತು. ಬಸ್‌ ಇಳಿದು, ಮನಸ್ಸಿಲ್ಲದ ಮನಸ್ಸಿನಿಂದಲೇ ಮನಗೆ ಹೋದೆ. ಆದರೆ ಮನಸ್ಸನ್ನು ಕದ್ದ ಮಹಾರಾಣೀ… ಹೇಳು, ನಾಳೆ ಸಿಕ್ತೀಯ? ಆಗಲೂ ಚಾಕ್ಲೆಟ್‌ ತರ್ತಿಯಾ?

ನಿನಗಾಗಿ ಕಾಯುತ್ತಿರುವ
ಚಾಕ್ಲೆಟ್‌ ಬಾಯ್‌
ಆರೀಫ್ ವಾಲೀಕಾರ, ಬೆಳಗಾವಿ

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.