ಕಮಾನ್‌ ಕಮಾನ್‌ ಮುಂದೆ ಬನ್ನಿ…


Team Udayavani, Dec 19, 2017, 11:01 AM IST

19-10.jpg

“ಬೆಂಗಳೂರು ಮಹಾನಗರದಲ್ಲಿ, ಅದೂ ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪುಣ್ಯ ಮಾಡಿರಬೇಕು’ ಎಂದು ನೆರೆಹೊರೆಯವರು, ನೆಂಟರಿಷ್ಟರು ಹೇಳುವುದುಂಟು. ಅಂಥ ಮಾತುಗಳನ್ನು ಕೇಳಿದಾಗ ಅಂಥದೊಂದು ಅವಕಾಶ ಬೇಗನೆ ಬರಬಾರದೇ ಎಂಬ ಭಾವ ಜೊತೆಯಾಗುವುದುಂಟು. ಹೀಗೆ ಹಂಬಲಿಸುವವರಿಗೆ ಒಂದು ಅಚ್ಚರಿಯ ಪ್ರಕಟಣೆ ಅನ್ನುವಂತೆ- ಇದೀಗ ಬಿಎಂಟಿಸಿಯಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ ಒಟ್ಟು 2225 ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ…

ಖಾಸಗಿ ಕಂಪನಿಗಳಿಗೆ ಮತ್ತೆ ಮತ್ತೆ ಸಂದರ್ಶನಕ್ಕೆ ಹೋಗುವುದು, ಪರೀಕ್ಷೆಗಳಿಗೆ ಹಾಜರಾಗುವುದು, ಹೀಗೆ… ಎಷ್ಟು ಪ್ರಯತ್ನ ಮಾಡೋದು? ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಾದ್ರೂ ಒಂದು ಕೆಲಸ ಸಿಕ್ಕಿದ್ರೆ ಚೆನ್ನಾಗಿರುತ್ತೆ… ಎಂದು ಎಲ್ಲರೂ ಆಗಾಗ ಯೋಚಿಸುವುದುಂಟು. ಅನೇಕ ಬಾರಿ ಸರ್ಕಾರದ ಇಲಾಖೆಗಳು ಕರೆಯುವ ಪರೀಕ್ಷೆಗಳನ್ನು ಬರೆದೂ ನೌಕರಿ ಸಿಗದಿದ್ದಾಗ ಬೇಸರವಾಗುವುದುಂಟು. ಆದರೆ, ಅವಕಾಶಗಳು ಪದೇ ಪದೇ ಬರುವುದಿಲ್ಲ. ಅದೂ ರಾಜ್ಯ ಸರ್ಕಾರ ಸ್ವಾಮ್ಯದ ಇಲಾಖೆಗಳಲ್ಲಿ ಅವಕಾಶಗಳಂತೂ ತೀರಾ ವಿರಳ ಎಂದುಕೊಂಡು ಖಾಸಗಿ ಕಂಪನಿಗಳಲ್ಲೇ ಭವಿಷ್ಯ ಮತ್ತು ಬಾಳಿನ ಅರ್ಥ ಹುಡುಕುವವರಿದ್ದಾರೆ. 

ಆದರೆ ಕೆಲವರು ಬಂದ ಅವಕಾಶವನ್ನು ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟುಕೊಡದೆ ನಾನು ಉದ್ಯೋಗ ಪಡೆದೇ ಪಡೆಯುತ್ತೇನೆ ಎಂದು ಭಗೀರಥ ಪ್ರಯತ್ನ ಮಾಡುತ್ತಾರೆ. ಜೊತೆಗೆ ತಮ್ಮ ಪ್ರಯತ್ನದಲ್ಲಿ ಗೆಲುವನ್ನೂ ಕಾಣುತ್ತಾರೆ. ಈ ರೀತಿ ನೌಕರಿಗಾಗಿ ಹಂಬಲಿಸುವವರಿಗಾಗಿ ಬೆಂಗಳೂರು ಮೆಟ್ರೋ ಪಾಲಿಟನ್‌ ಟ್ರಾನ್ಸ್‌ಪೊàರ್ಟ್‌ ಕಾರ್ಪೊರೇಷನ್‌ (ಬಿಎಂಟಿಸಿ)  ಅವಕಾಶವೊಂದನ್ನು ನೀಡಿದೆ.  ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ ಸೇರಿದಂತೆ ಸಾಮಾನ್ಯ ಮತ್ತು ಹೈದರಾಬಾದ್‌ ಕರ್ನಾಟಕ ಭಾಗದ ಹುದ್ದೆಗಳು ಸೇರಿ ಒಟ್ಟು 2225 ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ.

ಎಷ್ಟ್ ಓದಿರಬೇಕು?
ಎಲ್ಲ ಹುದ್ದೆಗಳಿಗೂ ಎಸ್ಸೆಸ್ಸೆಲ್ಸಿ, ಪಿಯುಸಿ ತತ್ಸಮಾನ ವಿದ್ಯಾರ್ಹತೆ ಮುಖ್ಯವಾಗಿದ್ದು, ಕುಶಲಕರ್ಮಿ(ಆಟೋ ಮೆಕ್ಯಾನಿಕ್‌, ಆಟೋ ಬಾಡಿ ಬಿಲ್ಡರ್‌, ಆಟೋ ಮೆಷಿನಿಸ್ಟ್, ಆಟೋ ಪೇಂಟರ್‌ ಮತ್ತು ಆಟೋ ಎಲೆಕ್ಟ್ರಿಷಿಯನ್‌) ಹುದ್ದೆಗಳಿಗೆ ಅಂಗೀಕೃತ ಸಂಸ್ಥೆಯಲ್ಲಿನ ಮೆಕಾನಿಕಲ್/ ಆಟೋಮೊಬೈಲ್/ ವೆಲ್ಡಿಂಗ್‌ ಮತ್ತು ಎಲೆಕ್ಟ್ರಿಕಲ್ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಅಥವಾ ತತ್ಸಮಾನ ಓದು ಜೊತೆಗೆ ಅನುಭವ ಪಡೆದಿರಬೇಕು.

ವಯಸ್ಸಿನ ಡೆಡ್‌ಲೈನ್‌
ಚಾಲಕ ಹುದ್ದೆಗೆ ಕನಿಷ್ಠ 24 ವರ್ಷದಿಂದ ಗರಿಷ್ಠ 35 ವರ್ಷಗಳು. ಇತರ ಹುದ್ದೆಗಳಿಗೆ 18 ವರ್ಷಗಳಿಂದ 35ವರ್ಷಗಳ ವಯೋಮಿತಿ ನಿರ್ಧರಿಸಿದ್ದು, ಪರಿಶಿಷ್ಟರಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಜೊತೆಗೆ ದೇಹದಾಡ್ಯìತೆ ಕಡ್ಡಾಯವಾಗಿದೆ. ಚಾಲಕ ಹುದ್ದೆಗೆ 12,400ರಿಂದ 19,500ರೂ., ಸಹಾಯಕ ಸಂಚಾರ ನಿರೀಕ್ಷಕ, ಕುಶಲಕರ್ಮಿ ಹುದ್ದೆಗೆ-13970- 20740ರೂ. ನಿರ್ವಾಹಕ, ಭದ್ರತಾ ರಕ್ಷಕ, ತಾಂತ್ರಿಕ ಸಹಾಯಕ ಹುದ್ದೆಗೆ 11640- 15700 ರೂ. ವೇತನವನ್ನು ನಿಗದಿ ಪಡಿಸಲಾಗಿದೆ.

ಪರೀಕ್ಷಾ ವಿಧಾನ
ಹುದ್ದೆಗಳಿಗನುಗುಣವಾಗಿ ಪರೀಕ್ಷೆಗಳನ್ನು ನಿಗದಿ ಮಾಡಿದ್ದು ಚಾಲಕ ಹುದ್ದೆಗೆ ವಾಹನ ಚಾಲನೆ, ಭದ್ರತಾ ರಕ್ಷಕ ಹುದ್ದೆಗೆ ನಾಲ್ಕು ನೂರು ಮೀಟರ್‌ ಓಟ, ಉದ್ದ ಜಿಗಿತ, ಗುಂಡು ಎಸೆತದ ಪರೀಕ್ಷೆಗಳಿವೆ. ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ ಸೇರಿದಂತೆ ಇತರ ಹುದ್ದೆಗಳಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳನ್ನು ಆನ್‌ಲೈನ್‌(www.mybmtc.com) ಮೂಲಕ ಸಲ್ಲಿಸತಕ್ಕದ್ದು, ಅರ್ಜಿಸಲ್ಲಿಕೆಗೆ ಡಿಸೆಂಬರ್‌ 26 ಕಡೆಯ ದಿನವಾಗಿದೆ. “ಸಾಮಾನ್ಯ ವರ್ಗಕ್ಕೆ ಶುಲ್ಕ 420 ರೂ. ಮತ್ತು ಪರಿಶಿಷ್ಟರಿಗೆ 220 ರೂ. ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು tinyurl.com/y829w983 ಜಾಲತಾಣದಲ್ಲಿ ಪಡೆಯಬಹುದಾಗಿದೆ.

ಹುದ್ದೆಗಳ ವಿಂಗಡನೆ
ಹುದ್ದೆಗಳು – ಸಾಮಾನ್ಯ ಅಭ್ಯರ್ಥಿ – ಹೈಕ ಅಭ್ಯರ್ಥಿ
ಚಾಲಕ ಹುದ್ದೆ- 392 – 108
ನಿರ್ವಾಹಕ ಹುದ್ದೆ – (ಪಿಯುಸಿ ತತ್ಸಮಾನ)- 283- 91
ನಿರ್ವಾಹಕ ಹುದ್ದೆ – ( ಜೆಒಸಿ)-141- 19
ಸಹಾಯಕ ಸಂಚಾರ ನಿರೀಕ್ಷಕ-23- 16
ಭದ್ರತಾ ರಕ್ಷಕ- 149 – 23
ತಾಂತ್ರಿಕ ಸಹಾಯಕ- 778- 120
ಆಟೊ ಮೆಕ್ಯಾನಿಕ್‌- 38- 14
ಆಟೋ ಬಾಡಿ ಬಿಲ್ಡರ್‌- 9-5
ಆಟೋ ಎಲೆಕ್ಟ್ರಿಷಿಯನ್‌- 7-5
ಆಟೋ ಪೇಂಟರ್‌- 0- 1
ಆಟೋ ವೆಲ್ಡರ್‌- 0- 2
ಆಟೋ ಮೆಷಿನಿಸ್ಟ್‌- 0-1

ಅನಂತನಾಗ್‌ ಎನ್‌.

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.