ಬೈಟು ಕಾಫಿ ಕುಡಿಯೋಣ, ಬರ್ತಿಯಾ?


Team Udayavani, Dec 19, 2017, 11:10 AM IST

19-11.jpg

ಕಾದಿರುವೇ ನಿನಗಾಗಿ…
ಮನಸಿನ ಕಿಟಕಿಯನ್ನು ತಟ್ಟಿ ದೂರ ಓಡಿಹೋದ ಗೆಳೆಯನೇ. ನಿನಗಾಗಿ ಈ ಮನ ಕಾಯುತ್ತಿದೆ. ನಿನಗಾಗಿ ಕಾದಿರುವ ಈ ನಿನ್ನ ಗೆಳತಿಯ ಮನದ ಮಾತುಗಳನ್ನು ಒಮ್ಮೆ ಕೇಳಲಾರೆಯಾ? ನೀನಿರದ ಈ ಜೀವನ ನನಗೆ ಬೇಡವಾಗಿದೆ. ಬದುಕಿನ ಪ್ರತಿ ಘಳಿಗೆಯೂ ನೀನೇ ಬೇಕು ಎನಿಸುತ್ತಿದೆ.

  ನಿನ್ನ ಬಿಟ್ಟು ಈಗ ನಾನೀಗ ಒಬ್ಬಳೇ ಇರಲಾರೆ. ಈ ಮನದ ಪುಟದಲ್ಲಿ ನಿನ್ನದೇ ಮುನ್ನುಡಿ ಬರೆಯುವ ಆಸೆ. ನಿದ್ರೆಯನ್ನು ಕದ್ದಿರುವ ಚೋರನೇ, ಎಷ್ಟು ದಿನ ಅಂತ ಹೀಗೆ ಕನಸಿನಲ್ಲೇ ಕಾಡುವೆ? ಈ ಅಸಹಾಯಕ ಹೃದಯದ ಪರಿತಾಪವನ್ನು ನೋಡಲಿಕ್ಕಾದರೂ ಒಮ್ಮೆ ಬಾ. 

ಏನಿದ್ದೇನು, ಎಲ್ಲಾ ಬರಿದು ನೀನಿರದೆ
ಹೋಗಿದೆ ನೆಮ್ಮದಿ ನನ್ನನು ತೊರೆದು, ನೀನಿರದೆ
ಎಂಬ ಹಾಡೊಂದಿದೆ. ನನ್ನ ಈ ಕ್ಷಣದ ಪರಿಸ್ಥಿತಿಯನ್ನು ಕಂಡೇ ಆ ಹಾಡು ಬರೆದರೇನೋ ಅನಿಸುತ್ತದೆ ನನಗೆ. ನನ್ನ ಬದುಕು ಹೀಗೆಲ್ಲಾ ತಿರುವು ಪಡೆದುಕೊಳ್ಳುತ್ತೆ ಎಂಬ ಸಣ್ಣದೊಂದು ಅಂದಾಜೂ ನನಗಿರಲಿಲ್ಲ. ಮುಂದೆ ಹೀಗೆಲ್ಲಾ ಆಗಿಬಿಡುತ್ತೆ ಎಂದು ಗೊತ್ತಿದ್ದಿದ್ರೆ ದೇವರಾಣೆಗೂ ನಿನ್ನನ್ನು ನೋಡುತ್ತಿರಲಿಲ್ಲ. ನೀನೇ ದುಂಬಾಲು ಬಿದ್ದಿದ್ರೂ (ಈಗಲೂ ಹಾಗೇ ತಾನೇ ಆಗಿದ್ದು…) ನಾನು ಮರುಳಾಗ್ತಾ ಇರಲಿಲ್ಲ. ಆದರೆ, ಏನೇನೋ ಆಗಿ ಹೋಯ್ತು. ಈಗ ಈ ಮನಸಿಗೆ ಎಷ್ಟೇ ಬುದ್ಧಿ ಹೇಳಿದರೂ ಸಾಲುತ್ತಿಲ್ಲ. ಅದು ಪ್ರತೀ ದಿನ, ಪ್ರತೀ ಕ್ಷಣ ನಿನ್ನನ್ನೇ ಜಪಿಸುತ್ತಿದೆ. ನಿನ್ನದೇ ಗುನುಗಿನಲ್ಲಿ ಕಳೆದು ಹೋಗುವ ನನ್ನ ಕಣ್ಣು ಎಲ್ಲೆಲ್ಲೂ ನಿನ್ನನ್ನೇ ಹುಡುಕುತ್ತಿದೆ. ನಿನ್ನ ಒಂದು ನೋಟಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ. ನೀನಿಲ್ಲದೆ ಈ ಮನಸಿನ ಗಡಿಯಾರ ನಿಂತು ಹೋದ ಹಾಗಿದೆ. ಇದಕ್ಕೊಮ್ಮೆ ಕೀಲಿ ನೀಡಲಿಕ್ಕಾದರೂ ಬರುವೆಯಾ?

  ನೀನಿರದೆ ಈ ಮನದ ಹೂದೋಟ ಬಾಡಿದೆ. ನಿಂತ ನೀರಿನಂತಾಗಿರುವ ಈ ಜೀವನಕ್ಕೆ ಹೊಸ ನೀರಿನಂತೆ ಬಂದು ನದಿ ಸಮುದ್ರ ಸೇರುವಂತೆ ಮಾಡುವೆಯಾ? ನಿನ್ನ ನೆನಪಲ್ಲೇ ಕಳೆದು ಹೋಗುವ ನನಗೆ ಸರಿಯಾದ ದಾರಿ ತೋರಿಸಲು ಬರುವೆಯಾ? ಹೀಗೆ ಎಷ್ಟು ದಿನ ಅಂತ ನಿನ್ನ ನೆನಪಲ್ಲೇ ಕಳೆಯಲಿ ಎಂದು ನನಗೆ ತಿಳಿಯುತ್ತಿಲ್ಲ. ಮುಸ್ಸಂಜೆಯಲ್ಲಿ ಬೀಸುವ ತಂಗಾಳಿ ನನ್ನ ಸ್ಪರ್ಶಿಸಿದಾಗ ನಿನ್ನ ಇರುವಿಕೆ ಅಲ್ಲಿ ಭಾಸವಾಗುತ್ತದೆ. ತಿಳಿ ನೀಲಿ ಆಗಸದಲ್ಲಿ ಹುಣ್ಣಿಮೆಯ ಚಂದಿರ ಮೂಡಿ ಬಂದಾಗ ನಿನ್ನ ಕಂಡಂತೆ ಈ ಮನ ನಲಿಯುತ್ತದೆ. ಆಕಾಶ ಖುಷಿಯಿಂದ ಅಂಬರ ಧಾರೆ ಸುರಿಸುವಾಗ ನಿನ್ನೊಂದಿಗೆ ಒಂದೇ ಕೊಡೆಯಲ್ಲಿ ಸುತ್ತುವ ಬಯಕೆ ನನ್ನದು. ಈ ಚಳಿಯಲ್ಲಿ ನಿನ್ನ ಜೊತೆ ಬಿಸಿ ಬಿಸಿ ಬೈಟು ಕಾಫಿ ಕುಡಿಯುವ ಆಸೆ ನನ್ನದು. ಒಮ್ಮೆ ಸಿಗುವೆಯಾ? 

ರುಬಿನಾ ಅಂಜುಮ್‌

ಟಾಪ್ ನ್ಯೂಸ್

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.