ಹತ್ತು ರೂ. ಕೊಟ್ಟ ದೇವರು!


Team Udayavani, Dec 26, 2017, 6:15 AM IST

devaru.jpg

ಹದಿನೈದು ವರ್ಷಗಳ ಹಿಂದಿನ ಮಾತು. ಪುಟ್ಟ ಮುದ್ದುಮಗನೊಂದಿಗೆ ತವರು ಮನೆಗೆ ಬರುವ ಸಡಗರದಲ್ಲಿ, ನಾಲ್ಕಾರು ಬ್ಯಾಗುಗಳ ಲಗೇಜನ್ನು ಹಿಡಿದು ಬಸ್ಸು ಹತ್ತಿ ತರೀಕೆರೆಗೆ ಬಂದು ತಲುಪಿದೆ. ಅಲ್ಲಿಂದ ನನ್ನೂರಿಗೆ ಬರಲು ಮತ್ತೂಂದು ಬಸ್‌ ಹತ್ತಬೇಕಿತ್ತು. ಕಂಕುಳಲ್ಲಿ ಗುಂಗುರು ಕೂದಲಿನ ಪುಟ್ಟ ಕಂದ, ಭುಜದಲ್ಲಿ ನೇತುಹಾಕಿಕೊಂಡ ಒಂದು ಬ್ಯಾಗು, ಕೈಯಲ್ಲೆರಡು ಬಟ್ಟೆ ಬ್ಯಾಗು, ಸಾಲದ್ದಕ್ಕೆ ಅಂಗೈಯಲ್ಲೊಂದು ಹಣವಿದ್ದ ಪರ್ಸ್‌! ರಷ್‌ ಆಗಿದ್ದ ಬಸ್ಸಿನೊಳಗೆ ಹೇಗೋ ನುಗ್ಗಿ ಸೀಟೊಂದನ್ನು ಹಿಡಿದು ಕುಳಿತು ನಿಟ್ಟುಸಿರುಬಿಟ್ಟೆ.

ಕಿರಿಕಿರಿ ಉಂಟು ಮಾಡುತ್ತಿದ್ದ ಮಗನನ್ನು ಹೇಗೋ ಸಂತೈಸುತ್ತಿರುವಾಗಲೇ ಕಂಡಕ್ಟರ್‌ ಟಿಕೆಟ್‌ ಕೇಳುತ್ತಾ ಹತ್ತಿರ ಬಂದಾಗ, ಹಣ ಕೊಡಲು ಅಂಗೈ ನೋಡಿದಾಗಲೇ ಗೊತ್ತಾಗಿದ್ದು, ಪರ್ಸ್‌ ಕಳುವಾಗಿದೆ ಅಂತ. ಆತಂಕ, ಗಾಬರಿ. ಈಗೇನು ಮಾಡುವುದು? ಟಿಕೇಟಿಗೆ ಎಲ್ಲಿಂದ ಹಣ ನೀಡಲಿ? ಕಣ್ಣಲ್ಲಿ ನೀರು ತುಂಬಿ ಬಂತು. ಯಾವ ಸಂದರ್ಭದಲ್ಲೂ ಇಂಥ ದೀನ ಸ್ಥಿತಿ ಬಂದಿರಲಿಲ್ಲ. ಕಂಡಕ್ಟರ್‌ ಆಗಲೇ ಪಕ್ಕದಲ್ಲಿ ನಿಂತಿದ್ದ. ನಿಧಾನವಾಗಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯತ್ತ ತಿರುಗಿದೆ. ಆತನತ್ತ ನೋಡಲೂ ಅಂಜಿಕೆ, ಅಳುಕು.

ಆ ಹೊತ್ತಿನಲ್ಲಿ ಬೇರೆ ದಾರಿಯೇ ಕಾಣಲಿಲ್ಲ; “ರೀ, ನನ್ನ ಬಳಿ ಹಣವಿಲ್ಲ, ಪರ್ಸ್‌ ಕಳೆದುಹೋಗಿದೆ, ಟಿಕೆಟ್‌ ಮಾಡಿಸಲು 10 ರೂ. ಇದ್ದರೆ ಕೊಡ್ತೀರಾ? ಊರಿಗೆ ಹೋದಮೇಲೆ ನಿಮ್ಮ ಅಕೌಂಟಿಗೆ ಹಣ ಹಾಕುತ್ತೇನೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಆತನ ಬಳಿ ಅಂಗಲಾಚಿದೆ. 

ಥಟ್ಟನೆ ಆತ “ಅಯ್ಯೋ ಅದಕ್ಯಾಕೆ ಅಳ್ತೀರಾ? ಪರವಾಗಿಲ್ಲ ತೆಗೆದುಕೊಳ್ಳಿ’ ಎಂದು ಕೂಡಲೇ 10 ರೂ.ನ ನೋಟೊಂದನ್ನು ನೀಡಿದಾಗ ಕೃತಜ್ಞತೆಯಿಂದ ಆತನಿಗೆ ಏನು ಹೇಳಬೇಕೆಂಬುದೇ ನನಗೆ ತಿಳಿಯಲಿಲ್ಲ. ಕಂಡಕ್ಟರ್‌ಗೆ ಹಣ ನೀಡಿ, ಈತನ ಕಡೆ ತಿರುಗಿ, “ನಿಮ್ಮಿಂದ ಬಹಳ ಉಪಕಾರವಾಯಿತು. ನನ್ನನ್ನು ನಂಬಿ ಹಣ ನೀಡಿದರಲ್ಲ, ನಿಮ್ಮ ಈ ಋಣ ಎಂದಿಗೂ ಮರೆಯಲಾರೆ, ನಿಮ್ಮ ಫೋನ್‌ ನಂಬರ್‌ ಕೊಡಿ, ಅಕೌಂಟ್‌ ನಂಬರ್‌ ಕೊಡಿ. ಊರಿಗೆ ಹೋದ ಮೇಲೆ ಹಣ ಹಾಕುತ್ತೇನೆ’ ಎಂದಾಗ ಆತ, “ಅಯ್ಯೋ ಅದೇನು ಬೇಡ. ನಿಮ್ಮನ್ನು ನಾನು ನನ್ನ ತಂಗಿನೋ ಅಥವಾ ಅಕ್ಕನೋ ಎಂದು ಭಾವಿಸಿರುವೆ’ ಎಂದು ತನ್ನ ಹೆಸರು ಹಾಗೂ ವಿಳಾಸವನ್ನೂ ನೀಡದೆ ಮುಂದಿನ ನಿಲ್ದಾಣದಲ್ಲಿ ಇಳಿದೇ ಹೋದ. ನಿಜಕ್ಕೂ ಆತ ಅವತ್ತು ದೇವರ ರೂಪದಲ್ಲಿ ಬಂದಿದ್ದ.

– ಎಸ್‌. ಗುಣ ಶಂಕರಘಟ್ಟ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.