ಮನೆಯೇ ಕಾರ್ಯಾಲಯ


Team Udayavani, Jan 2, 2018, 10:50 AM IST

02-17.jpg

ಬೆಳಗ್ಗಿನಿಂದ ಸಂಜೆವರೆಗೂ ಆಫೀಸಿನಲ್ಲಿ ದುಡಿಯುವ ಅನಿವಾರ್ಯತೆ ಈಗಿಲ್ಲ. “ದುಡಿಯುವ ಅನಿವಾರ್ಯತೆ ಇಲ್ಲವೇ?!’ ಎಂದು ಅಷ್ಟು ಬೇಗ ಖುಷಿಪಡದಿರಿ. ಇಲ್ಲಿ ಹೇಳ್ತಿರೋದು “ಆಫೀಸಿನಲ್ಲಿ’ ದುಡಿಯುವ ಅನಿವಾರ್ಯತೆ ಇಲ್ಲ ಎಂದು. ಅಂದರೆ, ಮನೆಯಲ್ಲಿ ನಿಮ್ಮವರ ಜೊತೆ ಇದ್ದುಕೊಂಡೇ ಕಚೇರಿ ಕೆಲಸ ಮಾಡಬಹುದು. ಹಾಜರಾತಿ ನೀಡಲೇಬೇಕಿದ್ದ ಮದುವೆಗೆ ಹೋಗಿಯೂ, ಅಲ್ಲಿಂದಲೇ ಫೈಲುಗಳನ್ನು ಮೂವ್‌ ಮಾಡಬಹುದು. “ವರ್ಕ್‌ ಫ್ರಂ ಹೋಂ’ ಎನ್ನುವ ಪದ್ಧತಿ ಹಳತೇ, ಆದರಿದು “ವರ್ಕ್‌ ಅವೇ ಫ್ರಂ ಆಫೀಸ್‌’. ಬಹಳಷ್ಟು ಎಂ.ಎನ್‌.ಸಿ ಕಂಪನಿಗಳು ತಮ್ಮ ನೌಕರರಿಗೆ ಈ ಸವಲತ್ತನ್ನು ದಯಾಲಿಸುತ್ತಿವೆ. ಕಾನ್‌ಫ‌ರೆನ್ಸ್‌ ಕಾಲ್‌, ವಾಟ್ಸಾಪ್‌, ಸ್ಕೈಪ್‌ನಂಥ ಹಲವು ತಂತ್ರಜ್ಞಾನಗಳಿಂದ ಇದು ಸಾಧ್ಯವಾಗುತ್ತಿದೆ. ಇಷ್ಟು ಒಳ್ಳೆಯ ಸವಲತ್ತು ಎಲ್ಲಾ ಕಂಪನಿಗಳಲ್ಲೂ ಇರಬಾರಾದಿತ್ತಾ ಅನ್ನೋ ಹಾಗಿಲ್ಲ. ಏಕೆಂದರೆ ಇದರ ಹಿಂದೆ ಒಂದು ಗುಟ್ಟೂ ಇದೆ. 

ಚಳಿಗಾಲದ ಚುಮು ಚುಮು ಬೆಳಗಿನಲ್ಲಿ ಬೇಗ ಎದ್ದು, 7 ಗಂಟೆಗೆಲ್ಲ ಆಫೀಸಿನಲ್ಲಿರಬೇಕಾದ ನಟರಾಜ, ಮನೆಯಿಂದಲೇ ಕೆಲಸ ಶುರು ಮಾಡಿ, ಬೆಳಗ್ಗೆ 9ರ ಸುಮಾರಿಗೆ ತಿಂಡಿ ಮುಗಿಸಿ ನಿರುಮ್ಮಳವಾಗಿ ಆಫೀಸಿಗೆ ಹೊರಡುತ್ತಾನೆ, ಅಷ್ಟು ಹೊತ್ತಿಗೆಲ್ಲ ಆಫೀಸಿನಲ್ಲಿ ಮಾಡಲೇಬೇಕಿದ್ದ ನಟರಾಜನ ಕೆಲವು ಕೆಲಸಗಳು ಮುಗಿದಿರುತ್ತವೆ. ಮಕ್ಕಳು ಶಾಲೆಯಿಂದ ಬಂದ ನಂತರ ಪರೀಕ್ಷೆಗೆ ಓದಿಸಬೇಕೆಂದು ಸಂಜೆ 5ರ ಹೊತ್ತಿಗೆ ಮನೆ ಸೇರುವ ಸುಧಾ, ಮಕ್ಕಳಿಗೆ ತಿಂಡಿ ಕೊಟ್ಟು, ಒಂದು ಸುತ್ತಿನ ಪಾಠ ಮುಗಿಸಿ, ಓದಲು, ಬರೆಯಲು ಹೇಳಿ, 6.30ಕ್ಕೆ ಕಚೇರಿಯ ಮೀಟಿಂಗ್‌ Join ಆಗುತ್ತಾಳೆ’. 

ಇತ್ತೀಚೆಗೆ ಶುರು ಮಾಡಿದ ಹೊಸ ಪ್ರಾಜೆಕ್ಟ್ ಮುಗಿಯುವ ಹಂತದಲ್ಲಿರುವಾಗಲೇ ರಮೇಶ್‌ಗೆ ಆ್ಯಕ್ಸಿಡೆಂಟ್‌ ಆಗಿದೆ. ಆಫೀಸಿಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದೇ, ಮನೆಯಿಂದಲೇ ಕೆಲಸ ಮಾಡಿ ಪ್ರೊಜೆಕ್ಟ್ ಮುಗಿಸಿದ್ದೇ ಅಲ್ಲದೆ ಬಾಸ್‌ನಿಂದ ಭೇಷ್‌ ಎನ್ನಿಸಿಕೊಂಡಿದ್ದಾನೆ. ತಾಯ್ತನದ ಖುಷಿಯನ್ನು ಅನುಭವಿಸುತ್ತಿರುವ ದಿವ್ಯಾ ತನ್ನ ಆರು ತಿಂಗಳಿಂದ ಮನೆಯಲ್ಲಿದ್ದುಕೊಂಡು ಮಗುವನ್ನು ನೋಡಿಕೊಳ್ಳುತ್ತಿದ್ದಾಳೆ. ಹಾಗೆಂದು ಕಚೇರಿ ಕೆಲಸಕ್ಕೆ ರಾಜಿನಾಮೆ ನೀಡಿಲ್ಲ. ಮಗುವನ್ನು ನೋಡಿಕೊಂಡೇ ಕಚೇರಿ ಕೆಲಸವನ್ನೂ ನಿರ್ವಹಿಸುತ್ತಿದ್ದಾಳೆ.

ಕಚೇರಿ ಕೆಲಸ ಆಫೀಸ್‌ನಿಂದಾಚೆಗೂ ವಿಸ್ತರಿಸುತ್ತಿದೆ. ತಮ್ಮ ಕೆಲಸದ ಅವಧಿಯ ನಂತರವೂ ಇವರು ಕೆಲಸದ ಬಗ್ಗೆ, ಜವಾಬ್ದಾರಿಯ ಬಗ್ಗೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ. ಅವರು ಎಲ್ಲಿರುತ್ತಾರೋ ಅಲ್ಲಿಯೇ ಒಂದು ಆಫೀಸ್‌ ಕ್ಯುಬಿಕಲ್‌ ನಿರ್ಮಿಸಿಕೊಂಡು ಬಿಡುತ್ತಾರೆ. ತಮ್ಮ ಕೆಲಸದಲ್ಲಿಯೇ ತಲ್ಲೀನರಾಗಿ ಹೋಗುತ್ತಾರೆ. ತಮಗೆ ನಿರ್ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ, ಅಚ್ಚುಕಟ್ಟಾಗಿ ನಿಭಾಯಿಸುವುದಲ್ಲದೇ, ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತಾರೆ. 

  ಆಧುನಿಕ ಸಂವಹನ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲಸವನ್ನು ಆಫೀಸಿನಿಂದಾಚೆಗೆ ವಿಸ್ತರಿಸುವಲ್ಲಿ ಐ.ಟಿ. ಕಂಪನಿಗಳದ್ದೇ ಸಿಂಹಪಾಲು. ಇತ್ತೀಚೆಗೆ ಈ ಒಂದು ಸೌಲಭ್ಯ ಉದ್ಯೋಗಿಗಳನ್ನು ಜವಾಬ್ದಾರಿಗಳನ್ನಾಗಿ ಮಾಡಲು ಮತ್ತು ಅವರಿಂದ ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಕಂಪನಿಗಳಿಗೆ ಸಹಕಾರಿಯಾಗಿದೆ. ಹಾಗೆಂದು ಎಲ್ಲಾ ಐ.ಟಿ. ಕಂಪನಿಗಳು ಈ ಸೌಲಭ್ಯ ಒದಗಿಸುವುದಿಲ್ಲ. ಈ ಕಂಪನಿಗಳಲ್ಲಿ ಎರಡು ಬಣಗಳಿವೆ. ಆಫೀಸಿನಿಂದಾಚೆಗೆ ಮಾಡುವ ಕೆಲಸ ಯಾವುದೇ ಉಸ್ತುವಾರಿಯಿಲ್ಲದೇ, ಬೇಜವಾಬ್ದಾರಿಯಿಂದ ಕೂಡಿರುತ್ತದೆಂದೂ, ಉದ್ಯೋಗಿಯು ಹೆಚ್ಚಿನ ಸಮಯವನ್ನು ತನ್ನ ಖಾಸಗಿ ಕೆಲಸಗಳಿಗೆ ವ್ಯಯಿಸುತ್ತಾನೆಂದೂ ಒಂದು ಬಣ ವಾದಿಸುತ್ತದೆ. ಆದರೆ, ಮನೆಯಲ್ಲಿದ್ದೇ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಉದ್ಯೋಗಿಯು ಸಂತೃಪ್ತಿಯಿಂದ, ಹೆಚ್ಚಿನ ಒತ್ತಡವಿಲ್ಲದೆ, ಮಾನಸಿಕ ನೆಮ್ಮದಿಯಿಂದ ದುಡಿಮೆಗೆ ನಿಲ್ಲುತ್ತಾನೆ. ಇದರಿಂದ ಉದ್ಯೋಗಿಯ ಸಾಮರ್ಥಯ ಮತ್ತು ಜವಾಬ್ದಾರಿ ಹೆಚ್ಚಾಗುತ್ತದೆಂದೂ ಇನ್ನೊಂದು ಬಣ ವಾದಿಸುತ್ತದೆ. 

ಖಾಸಗಿತನ ಇರೋಲ್ಲ
“ಝಿಂದಗಿ ನಾ ಮಿಲೇಗಿ ದುಬಾರಾ’ ಹಿಂದಿ ಸಿನಿಮಾದಲ್ಲಿ ಮೂವರು ಸ್ನೇಹಿತರು ಐರೋಪ್ಯ ದೇಶಗಳಿಗೆ ಪ್ರವಾಸ ಹೋದಾಗ ಕಾರಿನಲ್ಲಿ ಪ್ರಯಾಣಿಸುವ ದೃಶ್ಯವೊಂದು ಬರುತ್ತದೆ. ಸುತ್ತಲೂ ಕಣಿವೆ, ಬೆಟ್ಟ ಗುಡ್ಡಗಳ ಹಸಿರು ಪ್ರದೇಶ. ನಡುವೆ ಕಾರು ಗಕ್ಕನೆ ನಿಲ್ಲುತ್ತದೆ. ಒಬ್ಬ ಸ್ನೇಹಿತ ಕಾರಿನಿಂದಿಳಿದು ಲ್ಯಾಪ್‌ಟಾಪ್‌ ಹೊರತೆಗೆಯುತ್ತಾನೆ. ಮಿಕ್ಕ ಇಬ್ಬರು ಗೆಳೆಯರು ಆಶ್ಚರ್ಯದಿಂದ ಏನಾಗುತ್ತಿದೆಯೆಂದು ನೋಡುತ್ತಿದ್ದರೆ, ಸ್ನೇಹಿತ ಮಹಾಶಯ ಜಪಾನಿ ಬಾಸ್‌ನೊಂದಿಗೆ ಕಚೇರಿ ವಿಚಾರವಾಗಿ ಸಂವಹನದಲ್ಲಿ ತೊಡಗುತ್ತಾನೆ. 

ಆ ಸಂದರ್ಭದಲ್ಲಿ ಒಬ್ಬ ಗೆಳೆಯ ಹೇಳುತ್ತಾನೆ “ಮೊದಲು ಸುತ್ತಲಿನ ಸುಂದರ ಪ್ರಕೃತಿಯನ್ನು ನೋಡು. ಆಮೇಲೆ ಅದರ ನಡುವೆ ನಿಂತು ಲ್ಯಾಪ್‌ಟಾಪ್‌ ಎದುರುಗಡೆ ಬಾಸ್‌ಗೆ ಸಲಾಮು ಹಾಕುತ್ತಿರುವ ನಮ್ಮ ಗೆಳೆಯನನ್ನು ನೋಡು!’ ಒಂದು ರೀತಿಯಲ್ಲಿ ನಮ್ಮ ಔದ್ಯೋಗಿಕ ಬದುಕಿನ ಅನಿವಾರ್ಯತೆಯನ್ನು ಅಣಕ ಮಾಡುತ್ತಿರುವಂತಿದೆ ಈ ದೃಶ್ಯ. ಈ ದೃಷ್ಟಿಯಿಂದ ನೋಡುವುದಾದರೆ ಖಾಸಗಿತನವನ್ನು(ಪ್ರೈವೇಟ್‌ ಸ್ಪೇಸ್‌) ಆಕ್ರಮಿಸಿಕೊಂಡುಬಿಟ್ಟಿದೆ ಎಂದೆನಿಸುವುದೂ ಸುಳ್ಳಲ್ಲ.

ಮಾನವ ಗಂಟೆಗಳ ಲೆಕ್ಕಾಚಾರ
ಕಂಪನಿಗಳು ಸಮ್ಮ ನೌಕರರಿಗೆ ವರ್ಕ್‌ ಫ್ರಂ ಹೋಂ ಸೌಲಭ್ಯವನ್ನು ನೀಡುವುದರ ಹಿಂದೆ ಭಾರಿ ಲೆಕ್ಕಾಚಾರವಿದೆ. ಬೆಂಗಳೂರಿನಂಥ ನಗರಗಳಲ್ಲಿ ಮನೆಯಿಂದ ಆಫೀಸಿಗೆ ಮತ್ತು ಆಫೀಸಿನಿಂದ ಮನೆಗೆ ಇರುವ ಪ್ರಯಾಣದ ಅವಧಿ ಸುಮಾರು ಎರಡೂವರೆ ಗಂಟೆ ಅಂದುಕೊಳ್ಳೋಣ. ಕಂಪನಿಯಲ್ಲಿ 40 ಉದ್ಯೋಗಿಗಳಿದ್ದಾರೆಂದರೆ, ಸುಮಾರು 100 ಮಾನವ ಗಂಟೆಗಳು ಬರೀ ಪ್ರಯಾಣಕ್ಕೇ ವ್ಯಯವಾಗುತ್ತದೆ. ಇದು ಒಬ್ಬ ಉದ್ಯೋಗಿಯ 12 ದಿನಗಳ ಕೆಲಸದ ಅವಧಿ. ಪ್ರತಿ ಉದ್ಯೋಗಿಯು ಪ್ರತಿ ತಿಂಗಳು, ಒಂದು ವಾರದಷ್ಟು ಕೆಲಸದ ಅವಧಿಯನ್ನು ಪ್ರಯಾಣದಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ. 

ಅದೇ ವರ್ಕ್‌ ಅವೇ ಫ್ರಂ ಆಫೀಸ್‌ ಕೊಟ್ಟುಬಿಟ್ಟರೆ ಅಷ್ಟು ಅವಧಿ ಉಳಿಸಿದಂತಾಯಿತಲ್ಲ. ನೆನಪಿರಲಿ, ಕಂಪನಿಗಳ ಲೆಕ್ಕದಲ್ಲಿ “ಟೈಮ್‌ ಈಸ್‌ ಮನಿ’ ಅಂದರೆ “ಸಮಯ ಎಂದರೆ ಹಣ’. ಆಫೀಸ್‌ ಕ್ಯಾಬ್‌, ಕಚೇರಿ ಜಾಗ, ರಜಾದಿನಗಳು, ವಿದ್ಯುತ್‌ ಬಾಡಿಗೆ, ಆಫೀಸ್‌ ಸಪ್ಲೆ„ಸ್‌ ಎಲ್ಲದರ ಲೆಕ್ಕಾಚಾರವನ್ನೂ ಸಂಸ್ಥೆ ಮಾಡುತ್ತೆ. ಒಂದೇ ಆಫೀಸಾದರೆ ಈ ಮೊತ್ತ ಹೆಚ್ಚು ಎಂದೆನಿಸಲಿಕ್ಕಿಲ್ಲ. ಆದರೆ ನೂರಾರು ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಂಸ್ಥೆಯಾದರೆ ಈ ಮೊತ್ತ ತುಂಬಾ ದೊಡ್ಡದಿರುತ್ತೆ.

ಕಚೇರಿ ಬದುಕು
“ವರ್ಕ್‌ ಅವೇ ಫ್ರಂ ಆಫೀಸ್‌’ ನಿಂದಾಗುವ ಒಂದು ತೊಡಕೆಂದರೆ ಕಚೇರಿ ಕೆಲಸ ಯಾಂತ್ರಿಕವಾಗಿಬಿಡುವ ಅಪಾಯ. ಅಂದರೆ ವಿಡಿಯೊ ಕಾಲ್‌, ಫೋನ್‌ ಕಾಲ್ಸ್‌ ಮುಂತಾದ ಸಂವಹನ ತಂತ್ರಜ್ಞಾನಗಳಿದ್ದರೂ ಮುಖತಃ ಸಂವಹನೆಯಲ್ಲಿರುವ ಮಾನವೀಯ ಸ್ಪರ್ಶ ಇಲ್ಲವಾಗಿ, ತಪ್ಪಾಗಿ ವಿಷಯಗಳನ್ನು ಅಧೈìಸಿಕೊಳ್ಳಬಹುದು. ಅಥವಾ ಸಂವಹನೆಗೇ ಹೆಚ್ಚಿನ ಸಮಯ ವ್ಯಯವಾಗಬಹುದು. ಅಲ್ಲದೆ ಕಚೇರಿ ವಾತಾವರಣವನ್ನು ನೌಕರರು ಮಿಸ್‌ ಮಾಡಿಕೊಳ್ಳಬಹುದು. ತಮ್ಮ ಜೊತೆಗೆ ಯಾರು ಯಾರು ಕೆಲಸ ಮಾಡುತ್ತಿದ್ದಾರೆ, ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಏನೇನು ಪ್ರಗತಿಯಾಗಿದೆ ಮುಂತಾದ ಸಂಗತಿಗಳು ತಿಳಿಯದೇ ಹೋಗಬಹುದು. ಅದೇ ಕಚೇರಿಯಲ್ಲಾದರೆ ವಿರಾಮದ ವೇಳೆ ಸಹೋದ್ಯೋಗಿಗಳೊಂದಿಗೆ ಮಾತಾಡುತ್ತಾ ಅಂಥ ವಿಚಾರಗಳು ಕಿವಿಗೆ ಬೀಳುತ್ತವೆ.

ಟೆಕ್ಕಿಗಳು ಮಾತ್ರವಲ್ಲ
ವರ್ಕ್‌ ಅವೇ ಪ್ರಂ ಆಫೀಸ್‌ ಸವಲತ್ತು ಕೇವಲ ಎಂ.ಎನ್‌.ಸಿ ಅಥವಾ ಸಾಫ್ಟ್ವೇರ್‌ ಕಂಪನಿಗಳಲ್ಲಿ ಮಾತ್ರವೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಇದೆ. ಆಯಾ ತರಗತಿಗಳದೇ ಒಂದೊಂದು ಪ್ರತ್ಯೇಕ ವಾಟ್ಸಾಪ್‌ ಗ್ರೂಪ್‌ಗ್ಳಿರುತ್ತವೆ. ಆ ದಿನದ ಪಠ್ಯಗಳನ್ನು, ಹೋಂವರ್ಕ್‌ಗಳನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿನಿಮಯ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಕಲಿಕೆಗೆ ಸಂಬಂಧಿಸಿದ ಯಾವುದೇ ಸಂದೇಹವನ್ನು ಯಾವ ಹೊತ್ತಿನಲ್ಲಿ ಬೇಕಾದರೂ ವಾಟ್ಸಾಪ್‌ ಗ್ರೂಪಿನಲ್ಲಿ ಹಂಚಿಕೊಂಡು ಪರಿಹರಿಸಿಕೊಳ್ಳಬಹುದು. ಇದರಿಂದ ಇತರೆ ವಿದ್ಯಾರ್ಥಿಗಳೂ ಆ ವಿಷಯದ ಕುರಿತು ತಿಳಿದುಕೊಂಡಂತಾಗುತ್ತದೆ. ಹೀಗಾಗಿ ಅನೇಕ ಶಿಕ್ಷಣ ಸಂಸ್ಥೆಗಳು ವಾಟ್ಸಾಪ್‌ ಕಲಿಕೆಗೆ ಒತ್ತು ನೀಡುತ್ತಿವೆ. 

ವಾಟ್ಸಾಪ್‌ ಬೇಡವೇ ಬೇಡ
ಕೆಲವು ಕಂಪನಿಗಳು ವಾಟ್ಸಾಪ್‌, ಸ್ಕೈಪ್‌, ಟೀಮ್‌ವ್ಯೂವರ್‌ ಮುಂತಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅದಕ್ಕೆ ಕಾರಣ ಕಾನ್ಫಿಡೆನ್ಷಿಯಾಲಿಟಿ, ಅರ್ಥಾತ್‌ ಗೌಪ್ಯತೆ. ವಾಟ್ಸಾಪಿನಲ್ಲಿ ಹಂಚಿಕೊಳ್ಳುವ ಯಾವ ಮಾಹಿತಿಗಳೂ ಜಗಜ್ಜಾಹೀರಾಗುವುದಿಲ್ಲ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ. ಅಲ್ಲದೆ ಈ ಮಾಹಿತಿಗಳನ್ನು ತಂತ್ರಜ್ಞಾನ ಸಂಸ್ಥೆ ಯಾವುದೇ ರೀತಿಯಲ್ಲಿಯೂ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೆಲ ಕಂಪನಿಗಳು ಕಚೇರಿ ಕೆಲಸಕ್ಕೆ ತಮ್ಮದೇ ಸ್ವಂತ ಸರ್ವರ್‌ ಮತ್ತು ಇಮೇಲ್‌ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಈ ಕಂಪನಿಗಳು ವರ್ಕ್‌ ಅವೇ ಫ್ರಂ ಆಫೀಸ್‌ ಸವಲತ್ತು ನೀಡುವುದಿಲ್ಲವೆಂದಲ್ಲ. ಆದರೆ ಅವರದೇ ಪ್ರತ್ಯೇಕ ಇಂಟರ್‌ನೆಟ್‌ ಸಂಪರ್ಕ, ಪ್ರತ್ಯೇಕ ಲ್ಯಾಪ್‌ಟಾಪ್‌ಗ್ಳನ್ನು ಒದಗಿಸುತ್ತವೆ.

ಬಲರಾಜ್‌

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.