ನಿನ್ನ ನೋಡುವ ಲಗನ್‌ ಯಾವಾಗ್‌ ಬರುತ್ತೂ…


Team Udayavani, Jan 16, 2018, 3:15 PM IST

19-34.jpg

ನಿನಗೆ ನನ್ನ ಮೇಲೆ ಗಮನವಿರುತ್ತಿರಲಿಲ್ಲ ನಿಜ. ಆದರೆ, ಅದನ್ನೆಲ್ಲಾ ನಾನು ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ನೀನು ನನ್ನ ಹೀರೋ ಆಗಿದ್ದೆ. ನೀನು ಯಾರ್ಯಾರ ಜೊತೆಯೋ ಕೈಕೈ ಹಿಡಿದು ಪಾರ್ಕ್‌ನಲ್ಲಿ, ಸಮುದ್ರ ತೀರದಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ಕ್ಲಬ್ಬುಗಳಲ್ಲಿ ಅಡ್ಡಾಡುತ್ತಿದ್ದರೂ ನಂಗೆ ಅಸೂಯೆಯಾಗುತ್ತಿರಲಿಲ್ಲ. ನಿನ್ನ ಪಕ್ಕದಲ್ಲಿ  ನನ್ನನ್ನೇ ಕಲ್ಪಿಸಿಕೊಂಡು ಪುಳಕಗೊಳ್ಳುತ್ತಿದ್ದೆ.

ಓ ನನ್ನ ಗ್ರೀಕು ವೀರ,
 ನಿನಗೆ ಮಾರು ಹೋಗದವರಾರು ಹೇಳು? ಎಷ್ಟೋ ಜನ ನಿನಗೆ ಮನಸೋತಿದ್ದಾರೆ. ನಾನೂ ಮನ ಸೋತೆ. ನಿನ್ನ ಚೆಂದಕ್ಕೆ ಬೆರಗಾದೆ. ನಿನ್ನ ಎತ್ತರಕ್ಕೆ ಮರುಳಾದೆ. ನಿನ್ನ ಆ್ಯಂಗ್ರಿ ಯಂಗ್‌ ಮ್ಯಾನ್‌ ಮುಖಭಾವದಲ್ಲೂ ಕಂಡೂ ಕಾಣದೆ ಇಣುಕುತ್ತಿದ್ದ ಮಾರ್ದವತೆಗೆ ಸೋತುಹೋದೆ. ನನ್ನ ಗೆಳತಿಯರೆಲ್ಲ ಅದೇನೇ ಗಳುವಿನ ಹಾಗೆ ಉದ್ದಕ್ಕೆ ಇದಾನೆ, ಅವನನ್ನೇನು ಇಷ್ಟಪಡ್ತೀಯೋ? ಎಂದು ರೇಗಿಸುತ್ತಿದರೂ, ನಿನ್ನಿಂದ ನನ್ನ ಮನ ಒಂದಿಂಚೂ ಆಚೀಚೆ ಅಲ್ಲಾಡಲಿಲ್ಲ. ನಿನ್ನನ್ನು ನೋಡುವುದೇ ನನ್ನ ಖುಷಿಯಾಗಿತ್ತು. ಕದ್ದು ಮುಚ್ಚಿ ನಿನ್ನನ್ನು ನೋಡಲು ಧಾವಿಸಿ ಬರುತ್ತಿದ್ದೆ. 

ನಿನಗೆ ನನ್ನ ಮೇಲೆ ಗಮನವಿರುತ್ತಿರಲಿಲ್ಲ ನಿಜ. ಆದರೆ, ಅದನ್ನೆಲ್ಲಾ ನಾನು ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ನೀನು ನನ್ನ ಹೀರೋ ಆಗಿದ್ದೆ. ನೀನು ಯಾರ್ಯಾರ ಜೊತೆಯೋ ಕೈಕೈ ಹಿಡಿದು ಪಾರ್ಕ್‌ನಲ್ಲಿ, ಸಮುದ್ರ ತೀರದಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ಕ್ಲಬ್ಬುಗಳಲ್ಲಿ ಅಡ್ಡಾಡುತ್ತಿದ್ದರೂ ನಂಗೆ ಅಸೂಯೆಯಾಗುತ್ತಿರಲಿಲ್ಲ. ನಿನ್ನ ಪಕ್ಕದಲ್ಲಿ  ನನ್ನನ್ನೇ ಕಲ್ಪಿಸಿಕೊಂಡು ಪುಳಕಗೊಳ್ಳುತ್ತಿದ್ದೆ. ನೀನು ಮಾತನಾಡುವ ಪ್ರತಿಯೊಂದು  ಡೈಲಾಗೂ  ನನಗೆ ಶೃತಿ ಮಾಡಿದ ವೀಣೆಯ ನಾದದಂತೆ ಕಿವಿಗಳಲ್ಲಿ ಝೇಂಕರಿಸುತ್ತಿತ್ತು. ನೀನು ಮೋಟರ್‌ ಬೈಕಿನಲ್ಲಿ ಬಂದ ದಿನ ನನ್ನ ಕಣ್ಣಿಗೆ ಹಬ್ಬ. ಬೈಕಿನಲ್ಲಿ ಲೀಲಾಜಾಲವಾಗಿ ನೀನು ಹಾಡುತ್ತಾ, ಎರಡೂ ಕೈ ಬಿಟ್ಟು ಓಡುವ ಬೈಕಿನಿಂದ ಎದ್ದು ನಿಲ್ಲುವ ಪರಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ನೀನೇನೇ ಮಾಡಿದರೂ ನನಗೆ ಚೆಂದ. ಒಂದಿನ ಅದ್ಯಾರಿಗೋ ನೀನು ಇಟ್ಟಾಡಿಸಿಕೊಂಡು ಹೊಡೀತಿದ್ಯಲ್ಲ… ಅಬ್ಟಾ ಎಷ್ಟು ಶಕ್ತಿ ನಿನಗೆ! 

ನಿನ್ನನ್ನ ಗ್ರೀಕು ವೀರ ಅಂತ ಯಾಕೆ ಕರೀತೀನಿ ಗೊತ್ತಾ? ಗ್ರೀಕ್‌ ವೀರ ಅಲೆಕ್ಸಾಂಡರ್‌ ವೀರಾಧಿವೀರ. ಸಾಹಸಿ. ಅವನು ತುಂಬಾ ಎತ್ತರಕ್ಕೆ ಇದ್ನಂತೆ. ನೀನೂ ನಂಗೆ ಹಾಗೇ ಕಾಣಿ¤àಯ. ಅವತ್ತೂಂದಿನ ನೀನು ಬಾಂಬೆ ಬೀಚಿನಲ್ಲಿ  ಆ ಕುಳ್ಳ ಹುಡುಗಿ- ಯಾರವಳು? ಮೌಸು ಯಾ ಅವಳ ಜೊತೆ ಮಳೆಯಲ್ಲಿ ಕೈಕೈ ಹಿಡಿದು ಹೆಜ್ಜೆ ಹಾಕುತ್ತಿದ್ದೆ. ಅವಳು ನಿಂಗೆ ಒಳ್ಳೇ ಜೋಡಿ ಅಲ್ವೇ ಅಲ್ಲ. ನಾನೇ ಸರಿ ನಿಂಗೆ, ಅಲ್ವಾ? ಅಯ್ಯೋ ಬಿಡು, ನಿಂಗೇನು ಗೊತ್ತು ನಾ ನಿನ್ನ ಎಷ್ಟು ಆರಾಧಿಸ್ತೀನಿ ಅಂತ! ಇನ್ನೊಂದು ದಿನ ಕ್ರಿಶ್ಚಿಯನ್‌ ಆಂಥೋನಿ ಥರಾ ಡ್ರೆಸ್‌ ಮಾಡ್ಕೊಂಡು “ಮೈ ನೇಮ್‌ ಈಸ್‌ ಆಂಥೋನಿ ಗುಂಜಾಸ್‌’ ಅಂತ ಅವಳಾರಿಗೋ ರೋಸ್‌ ಕೊಡ್ತಾ ಇದ್ಯಲ್ಲ! ನಂಗೆ ಒಂದಿನಾನೂ ರೆಡ್‌ ರೋಸ್‌ ಕೊಡಬೇಕಂತ ಅನಿಸಲಿಲ್ವಾ? ಅವತ್ತೂಂದು ದಿನ “ಓ ಸಾಥಿರೇ ತೆರೇ ಬಿ ನಭಿ ಕ್ಯಾ ಜೀನಾ’ ಅಂತ ಫ‌ುಲ್‌ ದೇವದಾಸ್‌ ಸ್ಟೈಲಲ್ಲಿ ಹೇಳ್ತಾ ಇದ್ಯಲ್ಲ… ಅದನ್ನು ನೋಡಿ ನಂಗೆಷ್ಟು ಅಳು ಬಂತು ಗೊತ್ತಾ? ನೀನು ಯಾಕೆ ಯಾರ್ಯಾರಿಗೋ ಕೊರಗೋದು? ನಾನಿಲ್ವಾ? ನಂಗೆ ಒಂದು ಸಾರಿ, ಒಂದೇ ಒಂದು ಸಾರಿ ರೋಸ್‌ ಕೊಟ್ಟು “ಐ ಲವ್‌ ಯು’ ಅಂತ ಹೇಳಬಾರದಾ? ನಿನ್ನನ್ನು ಆರಾಧಿಸುವ ನನ್ನ ಕಣ್ಣುಗಳನ್ನು ನೀನು ಎಂದೂ ಗಮನಿಸಲೇ ಇಲ್ವಾ? ನೀನು ನನ್ನ ಮುಂದೆ ಮಂಡಿಯೂರಿ, ರೋಸ್‌ ಕೊಟ್ಟು ಐ ಲವ್‌ ಯು ಹೇಳ್ತೀಯಾ ಅಂತ ವರ್ಷಗಳೀಂದ ಕಾಯ್ತಾನೇ ಇದೀನಿ. ನನ್ನ ತಲೆ ಕೂದಲು ಬೆಳ್ಳಗಾಗ್ತಾ ಇದೆ. ನೀನು ಮುದುಕ ಆಗ್ತಾ ಇದೀಯ. ಹೋ… ಮುದುಕ ಆದರೂ ರಸಿಕತೆ ನೋಡು! ಏನೂ ಕಡಿಮೆಯಿಲ್ಲ. ಆ ಟಬು ಜೊತೆ “ಜಾನೆ ದೋ ನಾ ಜಾನೆ ಜಾನೆ ದೋನ’ ಅಂತ ಕುಲುಕುತ್ತಾ ಹಾಡು ಹೇಳ್ತೀಯಲ್ಲ! ಆಗ ನಂಗೆ ಎಷ್ಟು ಹೊಟ್ಟೆ ಉರೀತು ಗೊತ್ತಾ?  ಥೂ ನಿನ್ನ ನಿನ್‌ ಮಕ್ಕಿಷ್ಟು ದ್ವಾಸೆ ಹುಯ್ಯ! ನಂಗೆ ಒಂದೇ ಒಂದು ಆಸೆ.. ಒಮ್ಮೆ ನಿನ್ನನ್ನು ಹತ್ತಿರದಿಂದ ನೋಡಿ ಹಗ್‌ ಮಾಡ್ಕೊಬೇಕು ಅಂತ! ಮೊದಲಿನ ಹುಚ್ಚು ಉದ್ವೇಗ ಕುದಿಯುವ ಪ್ರೀತಿ ಈಗ ಇಲ್ಲದಿದ್ದರೂ ಬೆಚ್ಚಗಿನ ಪ್ರೀತಿ ಇನ್ನೂ ಇದೆ ಕಣೋ. ಅದು ಎದೆಯ ಗೂಡಲ್ಲಿ ನಂದಾದೀಪದ ಹಾಗೆ ಶಾಂತವಾಗಿ ಉರಿಯುತ್ತಿದೆ. ನಿನ್ನ ನೋಡುವ ಆ ಲಗನ್‌ ಯಾವಾಗ ಬರತ್ತೋ ಏನೋ?  ಜಯ್‌ ಆಲಿಯಾಸ್‌ ಅಮಿತಾಬ್‌ ಜೀ ತು ಹಮ್ಸ್ ಪ್ಯಾರ್‌ ಕರನೆಕೀ ಜರಾಸಿ ಭೂಲ್‌ ಕರದೋ, ಮೆರ ದಿಲ್‌ ಬೇಚೈನ್‌ ಹೈ ಹಮ್‌ ಸಫ‌ರ್‌ ಕೆ ಲಿಯೆ! 

ಅದೇ ನಿನ್ನ ಆಂಟಿ ಪ್ರೀತ್ಸೆ!
ವೀಣಾ 

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.