ಹೃದಯದಲಿ ಇದೇನಿದೂ ನದಿಯೊಂದು ಓಡಿದೆ…


Team Udayavani, Jan 23, 2018, 3:06 PM IST

23-30.jpg

ನಿನ್ನ ಹರವಾದ ಎದೆಯ ಮೇಲೆ ತಲೆಯಿಟ್ಟು ಗಳಿಗೆ ಮಲಗುವಾಸೆ. ಆ ಮೂಲಕ ಮನದ ನೋವನ್ನೆಲ್ಲ ಹೊರಹಾಕಿ ನಿಟ್ಟುಸಿರಾಗುವಾಸೆ.

ನೀನು ಹೀಗೆ ನನ್ನೊಳಗೆ ಪ್ರವೇಶಿಸಿ, ನನ್ನ ಅಸ್ತಿತ್ವವೇ ಮರೆಯಾಗುವಂತೆ ಮಾಡ್ತೀಯಾ ಅಂದುಕೊಂಡಿರಲಿಲ್ಲ ಗೆಳೆಯಾ. ಈ ಪ್ರೀತಿ ಹೀಗೆ ಹೇಳದೆ ಕೇಳದೆ ಒಳ ನುಗ್ಗತ್ತೆ ಅಂತ ಕಲ್ಪನೆ ಕೂಡ ಇರಲಿಲ್ಲ. ಅದ್ಯಾವ ಗಳಿಗೆಯಲಿ ನಿನ್ನ ನೋಡಿದೆನೋ, ಅವತ್ತಿನಿಂದ ನನ್ನಲಿ ನೀನೇ ತುಂಬಿಕೊಂಡಿದೀಯಾ. ನಿನ್ನ ಕಣ್ಣನೋಟ ಮರೆಯಲಾಗುತ್ತಿಲ್ಲ. ನೀನಿಲ್ಲದಾಗ ಎಷ್ಟು ಹಾಯಾಗಿತ್ತು  ಈ ಮನಸ್ಸು. ನೀ ಬಂದ ಮೇಲೆ ಬರೀ ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಕಾಲೇಜು, ಫ್ರೆಂಡ್ಸ್‌ ಅಂತ ಅಲೆಯುತ್ತಿದ್ದ ನನಗೀಗ ನಿನ್ನನ್ನು ಬಿಟ್ಟರೆ ಎಲ್ಲವೂ ಶೂನ್ಯವೆನಿಸುತ್ತಿದೆ. 

ನನ್ನ ಮುಂಗುರುಳ ಮುದ್ದಿಸಿ, ಕಣ್ಣಲಿ ಕಣ್ಣಿಟ್ಟು ನೋಡುತ್ತ, ಎಡಗೆನ್ನೆಯ ಸುಂದರ ಸಮ್ಮೊàಹಕ ಗುಳಿಕೆನ್ನೆಗೆ ಬೆರಗಾಗಿ ನಿನ್ನ ನೀ ಮರೆತದ್ದನ್ನು ನಾ ಅದ್ಹೇಗೆ ಮರೆಯಲಿ? ಗೊತ್ತೇನೇ ಹುಡುಗಿ, ನಿನ್ನ ನೋಡದೆ ಅದೆಷ್ಟು ಚಡಪಡಿಸುತ್ತಿದೆ ನನ್ನ ಮನ ಎಂದು ಫೋನಾಯಿಸಿದಾಗ ಆಕಾಶಕ್ಕೆ ಲಗ್ಗೆ ಹಾಕಿದಷ್ಟು ಸಂಭ್ರಮದಲ್ಲಿ ಮನ ಹಿಗ್ಗುತ್ತದೆ. ಈ ಒಲವಿಗೆ, ಈ ಸಾಂಗತ್ಯಕ್ಕೆ, ಈ ಸಿಹಿಸಂಕಟಕ್ಕೆ ಮುನ್ನುಡಿ ಬರೆದ ಮಾಯಗಾರ ನೀನು. ನೀನಿಲ್ಲದೆ ಊಟ ರುಚಿಸುತ್ತಿಲ್ಲ, ನೀನಿಲ್ಲದೆ ನಿದಿರೆ ಹತ್ತಿರ ಸುಳಿಯುತ್ತಿಲ್ಲ. ನನಗೇನಾಗಿದೆ ಅಂತ ನನ್ನನ್ನೇ ನಾನು ಕೇಳುವಂತಾಗಿದೆ. ಇದಕ್ಕೆಲ್ಲ ದಿವ್ಯಔಷಧ ನೀನೇ ಅಂತಲೂ ಗೊತ್ತು. ನೀನಿಲ್ಲದೆ ಈ ಸಂಜೆ, ಈ ಏಕಾಂತ, ಈ ಕುಳಿರ್ಗಾಳಿ ನನ್ನನ್ನು ಅಣಕಿಸಿದಂತೆ ಭಾಸವಾಗ್ತಿದೆ ಕಣೋ. ಎಂದಿಗೂ ನೀ ನನ್ನವಳೇ ಕೂಸೆ, ನೀನೇ ನನ್ನುಸಿರು ಎನ್ನುತ ಓಲೈಸುವ ನಿನ್ನ ಪ್ರೀತಿಯ ಪರಿಗೆ ಬೆರಗಾದೆ.

    ನೀನಿಲ್ಲದೆ ನಿಲ್ಲಲ್ಲ ಈ ಜೀವ. ಅರಳಲ್ಲ ಯಾವ ಭಾವ. ಗೊತ್ತೆ ಇದೆಯಲ್ಲ ನಿನಗ ನನ್ನ ಸ್ವಭಾವ? ಹೂಮುತ್ತಿಗಾಗಿ ಕಾದಿದೆ ಹಣೆ. ನಿನ್ನ ಇಂಪಾದ ದನಿಯ ಕೇಳುವ ತವಕದಲ್ಲಿರುವೆ. ಅಗಲುವಿಕೆಗೆ ಪೂರ್ಣವಿರಾಮ ನೀಡು. ನಿನ್ನ ಕೋಪ ತಾಪಗಳೇನೇ ಇದ್ದರೂ ಮರೆತು ಬಿಡು. ನಮ್ಮಿಬ್ಬರ ಕನಸುಗಳು ಒಂದೇ, ಒಲವ ದಾರಿಯೂ ಒಂದೇ. ಸೇರುವ ಗುರಿಯೂ ಒಂದೇ ಇರುವಾಗ ಮತ್ತೇಕೆ ತಡ ಕೂಸೆ? ನಿನ್ನ ಹರವಾದ ಎದೆಯ ಮೇಲೆ ತಲೆಯಿಟ್ಟು ಗಳಿಗೆ ಮಲಗುವಾಸೆ. ಆ ಮೂಲಕ ಮನದ ನೋವನ್ನೆಲ್ಲ ಹೊರಹಾಕಿ ನಿಟ್ಟುಸಿರಾಗುವಾಸೆ. ನೀನಾಡದ ಮಾತು ಮಾತಲ್ಲ, ನಿನ್ನ ನೋಡದ ಕಂಗಳು ಕಂಗಳಲ್ಲ. ನೀನಿಲ್ಲದ ಯಾವ ಸಿರಿ ಬೇಡ.ನಿಜವಾದ ಸಿರಿ ನನಗೆ ನೀನು ಕಣೋ. ನೀನೇ ವೇದ್ಯ, ನೀನೇ ನೈವೇದ್ಯ ಈ ಹೃದಯಕೆ. ಕಾರಣ ಹೇಳದೆ ಬಂದು ಸೇರು ನಿನ್ನ ರಾಣಿಯ ಒಲವ ತೋಟಕೆ. ವಿರಹ ಸಾಕಿನ್ನು ವಿಲಾಸ ಬೇಕಿನ್ನು. ಯಾವ ಹೂವು ಯಾರ ಮುಡಿಗೊ ಅಂತ ನನ್ನ ಕಂಡಾಗಲೆಲ್ಲ ಹಾಡುತ್ತಿದ್ದೆಯಲ್ಲವೆ? ಈಗ ಈ ಹೂವು ನಿನಗಾಗಿ ಕಾಯುತ್ತಿದೆ ಬಾ ಒಲವೆ.

ನಿನ್ನೊಲವಿನ ಪೂಜೆಯ ಆರಾಧಕಿ,
ಜಯಶ್ರೀ ಭ. ಭಂಡಾರಿ

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.