ಹೃದಯದಲಿ ಇದೇನಿದೂ ನದಿಯೊಂದು ಓಡಿದೆ…


Team Udayavani, Jan 23, 2018, 3:06 PM IST

23-30.jpg

ನಿನ್ನ ಹರವಾದ ಎದೆಯ ಮೇಲೆ ತಲೆಯಿಟ್ಟು ಗಳಿಗೆ ಮಲಗುವಾಸೆ. ಆ ಮೂಲಕ ಮನದ ನೋವನ್ನೆಲ್ಲ ಹೊರಹಾಕಿ ನಿಟ್ಟುಸಿರಾಗುವಾಸೆ.

ನೀನು ಹೀಗೆ ನನ್ನೊಳಗೆ ಪ್ರವೇಶಿಸಿ, ನನ್ನ ಅಸ್ತಿತ್ವವೇ ಮರೆಯಾಗುವಂತೆ ಮಾಡ್ತೀಯಾ ಅಂದುಕೊಂಡಿರಲಿಲ್ಲ ಗೆಳೆಯಾ. ಈ ಪ್ರೀತಿ ಹೀಗೆ ಹೇಳದೆ ಕೇಳದೆ ಒಳ ನುಗ್ಗತ್ತೆ ಅಂತ ಕಲ್ಪನೆ ಕೂಡ ಇರಲಿಲ್ಲ. ಅದ್ಯಾವ ಗಳಿಗೆಯಲಿ ನಿನ್ನ ನೋಡಿದೆನೋ, ಅವತ್ತಿನಿಂದ ನನ್ನಲಿ ನೀನೇ ತುಂಬಿಕೊಂಡಿದೀಯಾ. ನಿನ್ನ ಕಣ್ಣನೋಟ ಮರೆಯಲಾಗುತ್ತಿಲ್ಲ. ನೀನಿಲ್ಲದಾಗ ಎಷ್ಟು ಹಾಯಾಗಿತ್ತು  ಈ ಮನಸ್ಸು. ನೀ ಬಂದ ಮೇಲೆ ಬರೀ ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಕಾಲೇಜು, ಫ್ರೆಂಡ್ಸ್‌ ಅಂತ ಅಲೆಯುತ್ತಿದ್ದ ನನಗೀಗ ನಿನ್ನನ್ನು ಬಿಟ್ಟರೆ ಎಲ್ಲವೂ ಶೂನ್ಯವೆನಿಸುತ್ತಿದೆ. 

ನನ್ನ ಮುಂಗುರುಳ ಮುದ್ದಿಸಿ, ಕಣ್ಣಲಿ ಕಣ್ಣಿಟ್ಟು ನೋಡುತ್ತ, ಎಡಗೆನ್ನೆಯ ಸುಂದರ ಸಮ್ಮೊàಹಕ ಗುಳಿಕೆನ್ನೆಗೆ ಬೆರಗಾಗಿ ನಿನ್ನ ನೀ ಮರೆತದ್ದನ್ನು ನಾ ಅದ್ಹೇಗೆ ಮರೆಯಲಿ? ಗೊತ್ತೇನೇ ಹುಡುಗಿ, ನಿನ್ನ ನೋಡದೆ ಅದೆಷ್ಟು ಚಡಪಡಿಸುತ್ತಿದೆ ನನ್ನ ಮನ ಎಂದು ಫೋನಾಯಿಸಿದಾಗ ಆಕಾಶಕ್ಕೆ ಲಗ್ಗೆ ಹಾಕಿದಷ್ಟು ಸಂಭ್ರಮದಲ್ಲಿ ಮನ ಹಿಗ್ಗುತ್ತದೆ. ಈ ಒಲವಿಗೆ, ಈ ಸಾಂಗತ್ಯಕ್ಕೆ, ಈ ಸಿಹಿಸಂಕಟಕ್ಕೆ ಮುನ್ನುಡಿ ಬರೆದ ಮಾಯಗಾರ ನೀನು. ನೀನಿಲ್ಲದೆ ಊಟ ರುಚಿಸುತ್ತಿಲ್ಲ, ನೀನಿಲ್ಲದೆ ನಿದಿರೆ ಹತ್ತಿರ ಸುಳಿಯುತ್ತಿಲ್ಲ. ನನಗೇನಾಗಿದೆ ಅಂತ ನನ್ನನ್ನೇ ನಾನು ಕೇಳುವಂತಾಗಿದೆ. ಇದಕ್ಕೆಲ್ಲ ದಿವ್ಯಔಷಧ ನೀನೇ ಅಂತಲೂ ಗೊತ್ತು. ನೀನಿಲ್ಲದೆ ಈ ಸಂಜೆ, ಈ ಏಕಾಂತ, ಈ ಕುಳಿರ್ಗಾಳಿ ನನ್ನನ್ನು ಅಣಕಿಸಿದಂತೆ ಭಾಸವಾಗ್ತಿದೆ ಕಣೋ. ಎಂದಿಗೂ ನೀ ನನ್ನವಳೇ ಕೂಸೆ, ನೀನೇ ನನ್ನುಸಿರು ಎನ್ನುತ ಓಲೈಸುವ ನಿನ್ನ ಪ್ರೀತಿಯ ಪರಿಗೆ ಬೆರಗಾದೆ.

    ನೀನಿಲ್ಲದೆ ನಿಲ್ಲಲ್ಲ ಈ ಜೀವ. ಅರಳಲ್ಲ ಯಾವ ಭಾವ. ಗೊತ್ತೆ ಇದೆಯಲ್ಲ ನಿನಗ ನನ್ನ ಸ್ವಭಾವ? ಹೂಮುತ್ತಿಗಾಗಿ ಕಾದಿದೆ ಹಣೆ. ನಿನ್ನ ಇಂಪಾದ ದನಿಯ ಕೇಳುವ ತವಕದಲ್ಲಿರುವೆ. ಅಗಲುವಿಕೆಗೆ ಪೂರ್ಣವಿರಾಮ ನೀಡು. ನಿನ್ನ ಕೋಪ ತಾಪಗಳೇನೇ ಇದ್ದರೂ ಮರೆತು ಬಿಡು. ನಮ್ಮಿಬ್ಬರ ಕನಸುಗಳು ಒಂದೇ, ಒಲವ ದಾರಿಯೂ ಒಂದೇ. ಸೇರುವ ಗುರಿಯೂ ಒಂದೇ ಇರುವಾಗ ಮತ್ತೇಕೆ ತಡ ಕೂಸೆ? ನಿನ್ನ ಹರವಾದ ಎದೆಯ ಮೇಲೆ ತಲೆಯಿಟ್ಟು ಗಳಿಗೆ ಮಲಗುವಾಸೆ. ಆ ಮೂಲಕ ಮನದ ನೋವನ್ನೆಲ್ಲ ಹೊರಹಾಕಿ ನಿಟ್ಟುಸಿರಾಗುವಾಸೆ. ನೀನಾಡದ ಮಾತು ಮಾತಲ್ಲ, ನಿನ್ನ ನೋಡದ ಕಂಗಳು ಕಂಗಳಲ್ಲ. ನೀನಿಲ್ಲದ ಯಾವ ಸಿರಿ ಬೇಡ.ನಿಜವಾದ ಸಿರಿ ನನಗೆ ನೀನು ಕಣೋ. ನೀನೇ ವೇದ್ಯ, ನೀನೇ ನೈವೇದ್ಯ ಈ ಹೃದಯಕೆ. ಕಾರಣ ಹೇಳದೆ ಬಂದು ಸೇರು ನಿನ್ನ ರಾಣಿಯ ಒಲವ ತೋಟಕೆ. ವಿರಹ ಸಾಕಿನ್ನು ವಿಲಾಸ ಬೇಕಿನ್ನು. ಯಾವ ಹೂವು ಯಾರ ಮುಡಿಗೊ ಅಂತ ನನ್ನ ಕಂಡಾಗಲೆಲ್ಲ ಹಾಡುತ್ತಿದ್ದೆಯಲ್ಲವೆ? ಈಗ ಈ ಹೂವು ನಿನಗಾಗಿ ಕಾಯುತ್ತಿದೆ ಬಾ ಒಲವೆ.

ನಿನ್ನೊಲವಿನ ಪೂಜೆಯ ಆರಾಧಕಿ,
ಜಯಶ್ರೀ ಭ. ಭಂಡಾರಿ

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.