ಒಂದು ಸೈಕಲ್‌ ಅಪಹರಣ


Team Udayavani, Jan 30, 2018, 1:21 PM IST

31-32.jpg

ಇಪ್ಪತ್ತು ವರ್ಷಗಳ ಹಿಂದೆ ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿದ್ದುಕೊಂಡು ಪಿಯುಸಿ ಓದುತ್ತಿದ್ದ ಸಮಯ. ಪ್ರಥಮ ಪಿಯುಸಿಯಿಂದ ಹಿಡಿದು ಪದವಿಯವರೆಗೆ ಅಭ್ಯಾಸ ಮಾಡುವ ಒಟ್ಟು 50 ವಿದ್ಯಾರ್ಥಿಗಳ ಸಂಗಮವೇ ನಮ್ಮ ಹಾಸ್ಟೆಲ್‌. ಅದು, ನಮ್ಮ ಪಾಲಿಗೆ ಮಿನಿ ವಿಶ್ವವಿದ್ಯಾನಿಲಯದಂತೆ ಭಾಸವಾಗುತ್ತಿತ್ತು. ಬಗೆಬಗೆಯ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ಹಿರಿಯ- ಕಿರಿಯ ಸ್ನೇಹಿತರಿದ್ದರು. ಎಲ್ಲರೂ ಹಳ್ಳಿಗಾಡಿನಿಂದ ಬಂದವರಾಗಿದ್ದೆವು. ನಗರದಲ್ಲಿದ್ದ ನಮ್ಮ ಹಾಸ್ಟೆಲ್‌ನ ಆಜುಬಾಜು ರಸ್ತೆಗಳಲ್ಲಿ ಸೈಕಲ್‌ ಕಲಿಯಲು ನಗರದ ಹುಡುಗರು ಬರುತ್ತಿದ್ದರು. ಆ ಹುಡುಗರಿಗೆ ಸೈಕಲ್‌ ಓಡಿಸುವಾಗ ಅಲ್ಪಸ್ವಲ್ಪ ಸಹಾಯ ಮಾಡಿ ಕೊನೆಗೆ ನಾವು ಸಹಿತ ಮನಸ್ಸಿಚ್ಛೆ ಸೈಕಲ್‌ ಓಡಿಸುತ್ತಿದ್ವಿ. 

ನಾವು ದ್ವಿತೀಯ ಪಿಯುಸಿಗೆ ಬಂದಾಗ ಪ್ರಥಮ ಪಿಯುಸಿಗೆ ಹೊಸದಾಗಿ ಹುಡುಗ್ರು ಹಾಸ್ಟೆಲ್‌ ಸೇರಿದರು. ಅವರಲ್ಲಿ ಕೆಲವರು ವಿಜ್ಞಾನ ವಿಭಾಗಕ್ಕೆ ಸೇರಿದ್ದರಿಂದ ಲ್ಯಾಬ್‌, ಟ್ಯೂಶನ್‌ಗೆ ಹೋಗಿ ಬರಲು ಅಂತ ಸೈಕಲ… ತಂದಿದ್ರು. ಅವರ ಸೈಕಲ್‌ ನೋಡಿದಾಗ ನಮೂ ಓಡಿಸುವ ಮನಸ್ಸಾಗಿ ಕೇಳುತ್ತಿದ್ವಿ. ಕೆಲ ಸ್ನೇಹಿತರು ಕೊಡುತ್ತಿದ್ರು. ಅದರಲ್ಲಿ ಒಬ್ಬ ಸ್ನೇಹಿತ ಮಾತ್ರ ಸೈಕಲ್‌ ಕೊಡೋದಿರ್ಲಿ, ಮುಟ್ಟಲೂ ಬಿಡುತ್ತಿರಲಿಲ್ಲ. ಅವನ ಈ ರೀತಿ ವರ್ತನೆ ಸೈಕಲ್‌ ವ್ಯಾಮೋಹಿಗಳಾದ ನಮಗೆಲ್ಲಾ ಬಹಳ ಬೇಸರವಾಗುತ್ತಿತ್ತು.

  ಒಂದು ದಿನ ನಾನು, ನನ್ನ ಸ್ನೇಹಿತ ವಿಚಾರ ಮಾಡಿಯೇ ಒಂದು ನಿರ್ಧಾರ ಕೈಗೊಂಡೆವು. ಅದೇನೆಂದರೆ, ಇವನೂ ನಮ್ಮ ಹಾಗೆ ನಡೆದುಕೊಂಡೇ ಕಾಲೇಜ್‌ಗೆ ಹೋಗಿ ಬಬೇìಕು. ಅದಕ್ಕೆ ಇವನ ಸೈಕಲ್‌ ಅನ್ನು ಮುಚ್ಚಿಡ್ಬೇಕು. ಇವನಿಗೆ ಸೈಕಲ್‌ ಕಳೆದಾಗ ಆಗುವ ನೋವು ಗೊತ್ತಾಗಲಿ ಎಂದು ನಿರ್ಣಯಿಸಿದೆವು. ಸೈಕಲ್‌ ಅಪಹರಣ ಮಾಡಿಡಲು ಯಾವುದು ಸೂಕ್ತ ಸ್ಥಳವೆಂದು ತಿಳಿದು, ಮೂರ್ನಾಲ್ಕು ಜಾಗ ನೋಡಿ ಅದರಲ್ಲಿ ನಮ್ಮ ಹಾಸ್ಟೆಲ್‌ನ ಪಕ್ಕದಲ್ಲಿರುವ ಮುರುಕು ಶೆಡ್‌ ಸೂಕ್ತವೆಂದು ಲೆಕ್ಕ ಹಾಕಿ, ರಾತ್ರಿ ಎಲ್ಲರೂ ಮಲಗಿದ ಮೇಲೆ ಸೈಕಲ್‌ ಎತ್ತಿಕೊಂಡು ಶೆಡ್‌ನೊಳಗೆ ಇಟ್ಟು ಮತ್ತೆ ನಮ್ಮ ರೂಮಿಗೆ ಬಂದು ಮಲಗಿದೆವು. 

   ಬೆಳಕು ಹರಿದ ಮೇಲೆ ನಮ್ಮ ಗೆಳೆಯ ಟ್ಯೂಶನ್‌ಗೆ ಹೋಗಲು ಸೈಕಲ್‌ ನೋಡಿದ. ಸೈಕಲ್‌ ಎಲ್ಲಿಯೂ ಕಾಣುತ್ತಿಲ್ಲ. ಭಯಗೊಂಡು ಎಲ್ಲಾ ಕಡೆಯೂ ಹುಡುಕಿದ, ಎಲ್ಲಿಯೂ ಸಿಗಲಿಲ್ಲ. ಮುಖ ಬಾಡಿಸಿಕೊಂಡು ಟ್ಯೂಶನ್‌ಗೆ ಹೋಗಿ ಬಂದ ಮೇಲೆಯೂ ಹುಡುಕಿದ. ಎಲ್ಲಿಯೂ ಸಿಗುತ್ತಿಲ್ಲ. ಹಾಸ್ಟೆಲ್‌ನ ಹಿರಿಯ ಸ್ನೇಹಿತರು ಅವನನ್ನು ಗೇಲಿ ಮಾಡಿದ್ರು. “ಒಂದು ದಿನಾನೂ ನೀನು ಸೈಕಲ್‌ ಅನ್ನು ಯಾಗೂì ಕೊಡಲಿಲ್ಲ. ಈಗ ನಿನಗ ಚಲೋ ಮಾಡ್ಯಾರ ನೋಡು’ ಅಂತಿದ್ರು. ಪೊಲೀಸ್‌, ವಕೀಲರು ಆಗಬೇಕೆಂದು ಗುರಿ ಇಟ್ಕೊಂಡು ಓದಲು ಬಂದಿದ್ದ ಸ್ನೇಹಿತರು, ಸೈಕಲ… ಪತ್ತೆಹಚ್ಚುವ ನಾನಾ ಮಾರ್ಗಗಳನ್ನು ಬೋಧಿಸಿದರು. ಯಾವುದೂ ಉಪಯೋಗಕ್ಕೆ ಬರಲಿಲ್ಲ.

   ಸೈಕಲ್‌ ಕಳಕೊಂಡ ಗೆಳೆಯ ಸಾಕಷ್ಟು ನೊಂದಿದ್ದ. ಆ ಸಮಯದಲ್ಲಿ ಅವನನ್ನು ಸಂತೈಸಿದ ನಾವು, “ನಿನ್ನ ಸೈಕಲ್‌ ಹುಡುಕಿ ಕೊಟ್ಟೇ ಕೊಡುತ್ತೇವೆ. ಆದರೆ, ಒಂದು ಕಂಡೀಶನ್‌. ಇನ್ಮುಂದೆ, ಅದನ್ನು ನೀನೊಬ್ಬನೇ ಬಳಸುವಂತಿಲ್ಲ. ನಾವು ಕೇಳಿದಾಗಲೆಲ್ಲಾ ಸೈಕಲ್‌ ಕೊಡಬೇಕು. ತರಕಾರಿ ತರಲು, ಹಾಸ್ಟೆಲ್‌ನ ಇತರ ಕಾರ್ಯಗಳಿಗೂ ಸೈಕಲ್‌ ಕೊಡಬೇಕು’ ಎಂದು ಹೇಳಿದೆವು. ಅವನು ಮರುಮಾತಾಡದೆ ಒಪ್ಪಿಕೊಂಡ. ಏಕೆಂದರೆ, ಸೈಕಲ… ಮಾಯವಾಗಿ ಆಗಲೇ ಮೂರು ದಿನಗಳಾಗಿದ್ದವು. ಹೀಗಾಗಿ,ಯಾವುದೇ ಕಂಡಿಶನ್‌ ಹಾಕಿದರೂ ಒಲ್ಲೆ ಅನ್ನಲಿಲ್ಲ ಗೆಳೆಯ.

ಅಲ್ಲಿ ಇಲ್ಲಿ ಹುಡುಕಿದಂತೆ ನಾಟಕವಾಡಿ ಕೊನೆಗೆ, ನಾವು ಮುಂಚೆ ಇಟ್ಟಿದ್ದ ಹಾಳಾದ ಶೆಡ್‌ ನಿಂದ ಸೈಕಲ… ಎತ್ತಿಕೊಂಡು ಬಂದಾಗ ಗೆಳೆಯ ನಿಟ್ಟುಸಿರು ಬಿಟ್ಟು, ಓಡೋಡಿ ಬಂದು ಸೈಕಲ್‌ನ್ನು ತಬ್ಬಿಕೊಂಡ.

ಮಲ್ಲಪ್ಪ ಫ‌ಕರೇಣ್ಣನವರ

ಟಾಪ್ ನ್ಯೂಸ್

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.