ಕಣ್ತುಂಬಿಕೊಂಡು ನಿಂತವನ ಎದುರಿಗೆ ಮರಳಿನ ಗೂಡಿತ್ತು!


Team Udayavani, Mar 13, 2018, 2:45 PM IST

maralu.jpg

ಇನ್ನೇನು ಸಂಜೆ ಕೊನೆಯಾಗುವುದರಲ್ಲಿತ್ತು. ಕಡಲ ಕಿನಾರೆಯಲ್ಲಿ ಕುಳಿತ ಅವನು,ಕಣ್ಣ ತುಂಬಾ ವಿಷಾದ ಭಾವ ತೊಟ್ಟು ಸೂರ್ಯಾಸ್ತವನ್ನು ಒಂದೇ ಸಮನೆ ದಿಟ್ಟಿಸುತ್ತಿದ್ದ.ಕಡಲ ಅಲೆಗಳ ಸದ್ದು, ಅವನ ಮನದ ಮಾತು, ಅವನಿಗೇ ಕೇಳಿಸದಷ್ಟು ಜೋರಾಗಿತ್ತು. ಅವನ ಪಾಲಿಗೆ ಪ್ರೀತಿಯೆಂಬುದು ಮುಂಜಾನೆ ಉದಯಿಸಿ ಸಂಜೆ ವೇಳೆಗೆ ಅಸ್ತಂಗತವಾಗುವ ಸೂರ್ಯನಂತಾಗಿತ್ತು. ಮನದ ಬಾನಲಿ ಅವಳು ಉಳಿಸಿಹೋದ ನೆನಪುಗಳ ರಂಗು ವಾಸಿಯಾಗದ ಗಾಯದಂತೆ ಕಾಡುತ್ತಾ, ಎದೆಗೂಡಿನ ದೀಪವೇ ಆರಿಹೋಗಿ, ಬದುಕಲ್ಲಿ ಕಗ್ಗತ್ತಲು ಆವರಿಸಿಕೊಂಡಂಥ ದಿಗಿಲು. ಬೇಡ ಬೇಡ ಎಂದುಕೊಂಡರೂ ಕಳೆದುಹೋದ ದಿನಗಳೆಡೆಗೆ ಮತ್ತೆ ಮತ್ತೆ ಹೊರಳಿಕೊಳ್ಳಲು ಯತ್ನಿಸುತ್ತಿತ್ತು-ಅವನ ಮನಸ್ಸು.

ಅದೇ ಸಮುದ್ರ ತೀರದುದ್ದಕ್ಕೂ ಅವಳೊಂದಿಗೆ ಜೊತೆ ಜೊತೆಯಾಗಿ ನಡೆದದ್ದು, ಹೆಜ್ಜೆ ಗುರುತುಗಳ ಮೇಲೆ ಚಿತ್ತಾರ ಬರೆದದ್ದು, ಮರಳಿನ ಮೇಲೆ ಇಬ್ಬರ ಹೆಸರನ್ನೂ ಗೀಚಿ ಸಂಭ್ರಮಿಸಿದ್ದು, ತಂಗಾಳಿ ಸೋಕಿ ಕೆನ್ನೆಗಿಳಿದ ಅವಳ ಮುಂಗುರುಳನ್ನು ನಯವಾಗಿ ನೇವರಿಸಿದ್ದು, ಇವನ ಮೇಲೆ ನೀರನ್ನು ಎರಚಿ ಅವಳು ಕಿಚಾಯಿಸಿ ನಗೆ ಬೀರಿದ್ದು, ಒಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡದ್ದು .. ಹೀಗೆ  ಪ್ರತಿಯೊಂದು ನೆನಪುಗಳು ಅವನೆದೆಯಲ್ಲಿ ಹಚ್ಚ ಹಸಿರಾಗಿದ್ದವು. ಕೊನೆಗೆ ಅವಳಿಗೆ, ಇವನ ಪ್ರೀತಿಗಿಂತ ಹೆತ್ತವರ ಪ್ರೀತಿಯೇ ಹೆಚ್ಚೆನಿಸಿ, ತಂದೆ ತಾಯಿಯರ ಪ್ರತಿಷ್ಠೆಗಾಗಿ ಇವನ ಪ್ರೀತಿಗೆ ಗೋರಿ ಕಟ್ಟಿ, ಆ ಗೋರಿಯನ್ನು ತನ್ನ ಮದುವೆಯ ಕರೆಯೋಲೆಗಳಿಂದ ಅಲಂಕರಿಸಿ ಹೋಗಿದ್ದಳು.ಇವನು, ಹೋಗಲೋ ಬೇಡವೋ ಎಂದು ಯೋಚಿಸುತ್ತಲೇ ಆ ಮದುವೆಗೆ ಹೋಗಿ, ಕೊನೆಯ ಸಾಲಿನಲ್ಲಿ ಕುಳಿತು, ಹೆಚ್ಚು ಹೊತ್ತು ಅಲ್ಲಿರಲಾಗದೆ ಅರ್ಧದಲ್ಲೇ ಎದ್ದು ಬಂದಿದ್ದ.

ಈ ಎಲ್ಲಾ ನೆನಪುಗಳಿಂದಾಚೆಗೆ ಬರುವ ಹೊತ್ತಿಗೆ ದೂರದಲ್ಲಿ ಅರ್ಧಂಬರ್ಧ ಕಾಣುತ್ತಿದ್ದ ಸೂರ್ಯ ಮುಳುಗುತ್ತಿದ್ದನೋ ಅಥವಾ ಮೂಡುತ್ತಿದ್ದನೋ? ಏನೊಂದೂ ತಿಳಿಯದ ಶೂನ್ಯತೆ ಅವನಲ್ಲಿ ತುಂಬಿತ್ತು. ಎಲ್ಲವೂ ಮುಗಿದು ಹೋಯಿತು ಎಂದುಕೊಂಡು ಅವನು ಅಲ್ಲಿಂದೆದ್ದು ಹೊರಡಲು ಅನುವಾದಾಗ, ಅಲ್ಲಿಗೆ ಈ ಮೊದಲೇ ಬಂದು ಹಾಜರಿ ಹಾಕಿ ಹೋಗಿದ್ದ ಪ್ರೇಮಿಗಳಿಬ್ಬರು ಕಟ್ಟಿ ಹೋದ ಮರಳಿನ ಗೂಡು ಅಲೆಗಳ ದಾಳಿಗೆ ತುತ್ತಾಗಿ ಇನ್ನೇನು ಕುಸಿದು ಬೀಳುವುದರಲ್ಲಿತ್ತು.

-ಷಣ್ಮುಖ ತಾಂಡೇಲ್‌, ಹೊನ್ನಾವರ

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.