ಕಳ್ಳ ಜ್ವರದ ಕಹಾನಿ


Team Udayavani, Apr 24, 2018, 2:32 PM IST

kalla-jwara.jpg

ಮೇಷ್ಟ್ರ ಕೆಂಗಣ್ಣಿನಿಂದ ಪಾರಾದರೆ ಸಾಕೆಂದು ಆ ಕ್ಷಣಕ್ಕೆ ಹೊಳೆದ ಸುಳ್ಳು ಹೇಳಿ ತಪ್ಪಿಸಿಕೊಂಡೆ. ಮರುದಿನ ಅವರು ನನ್ನನ್ನು ನೋಡಿ ಮಾತಿಗೆ ಶುರುವಿಟ್ಟ ತಕ್ಷಣ ಕಾಲುಗಳಲ್ಲಿ ನಡುಕ ಶುರುವಾಯಿತು…

1964ನೇ ಇಸವಿ. ಆಗ ನಾನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಬೆಂಗಳೂರಿನ ಚಾಮರಾಜಪೇಟೆಯ ಪ್ರೌಢಶಾಲೆಯಲ್ಲಿ ಓದುತ್ತಿದ್ದೆ. ನಮಗೆ ಗಣಿತ ಪಾಠ ಮಾಡುತ್ತಿದ್ದ ಉಪಾಧ್ಯಾಯರು ಕೆ. ದೊರೆಸ್ವಾಮಿ! ನಾನು ಬೇರೆ ಎಲ್ಲಾ ವಿಷಯಗಳಲ್ಲೂ ಹೆಚ್ಚಿನ ಅಂಕಗಳನ್ನು ಗಳಿಸುತ್ತಿದ್ದರೂ ಲೆಕ್ಕದಲ್ಲಿ ಮಾತ್ರ 40ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಲಾಗುತ್ತಿರಲಿಲ್ಲ.

ನನಗೋ ಲೆಕ್ಕವೆಂದರೆ ಕಬ್ಬಿಣದ ಕಡಲೆ. ಹಾಗೆ ನೋಡಿದರೆ, ದೊರೆಸ್ವಾಮಿಯವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆಳವಾಗಿ ನಾಟುವಂತೆ ಲೆಕ್ಕ ಹೇಳಿಕೊಡುತ್ತಿದ್ದರು. ಅವರ ತರಗತಿಯೆಂದರೆ ಯಾವ ವಿದ್ಯಾರ್ಥಿಯೇ ಆಗಲಿ ಗೈರಾಗುತ್ತಿರಲಿಲ್ಲ. ಜೊತೆಗೆ ಅವರು ಪಾಠ ಮಾಡುತ್ತಿದ್ದ ಸಮಯದಲ್ಲಿ ತರಗತಿ ಪಿನ್‌ಡ್ರಾಪ್‌ ಸೈಲೆನ್ಸ್‌ನಿಂದ ಕೂಡಿರುತ್ತಿತ್ತು.

  ಒಂದು ದಿನ, ಶಾಲೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರಟ ನಾನು ಶಾಲೆಗೆ ಹೋಗದೆ ಸಿನಿಮಾ ನೋಡಿಕೊಂಡು ಸಂಜೆ ಮನೆಗೆ ಹಿಂತಿರುಗುತ್ತಿದ್ದೆ. ಮಾರನೇ ದಿನ ಬೆಳಗ್ಗೆ ಶಾಲೆಗೆ ಹೋದಾಗ ಎದುರಿಗೆ ಸಿಕ್ಕ ದೊರೆಸ್ವಾಮಿಗಳು- “ನಿನ್ನೆ ಯಾಕೆ ಬರಲಿಲ್ಲ ಶಾಲೆಗೆ?’ ಎಂದು ಕೇಳಿದರು.

ಅವರ ಏಕ್‌ದಂ ಪ್ರಶ್ನೆಯಿಂದ ತಡಬಡಿಸಿದ ನಾನು “ಏನಿಲ್ಲ ಸಾರ್‌! ವಿಪರೀತ ಜ್ವರ ಬಂದಿತ್ತು. ಅದಕ್ಕೆ ಬರಲಿಲ್ಲ’ ಎಂದುಬಿಟ್ಟೆ. ಅವರಿಂದ ತಪ್ಪಿಸಿಕೊಂಡರೆ ಸಾಕು ಎಂಬ ಅವಸರದಲ್ಲಿ ಸುಳ್ಳು ಹೇಳಿಬಿಟ್ಟಿದ್ದೆ. ಅವರು “ಓ… ಹೌದಾ!? ಸರಿ ಒಳಗೆ ಹೋಗು’ ಎಂದು ಸುಮ್ಮನಾಗಿಬಿಟ್ಟರು.

  ಮಾರನೇ ದಿನ ಅವರು ನನ್ನನ್ನು ನೋಡಿದೊಡನೆಯೇ ಹತ್ತಿರ ಕರೆದು “ನಿನ್ನೆ ರಾತ್ರಿ ನಿಮ್ಮ ತಂದೆ ಸಿಕ್ಕಿದ್ದರಪ್ಪಾ… ನಾನು, ಈಗ ನಿಮ್ಮ ಮಗ ಹುಷಾರಾಗಿದ್ದಾನೆ ತಾನೇ?’ ಅಂತ ಕೇಳಿದೆ. ಅದಕ್ಕೆ ಅವರು ಅಚ್ಚರಿಪಡುತ್ತಾ, “ನಮ್ಮ ಮಗನಿಗೆ ಜ್ವರ ಬಂದೇ ಇಲ್ವಲ್ಲ ಅಂದರಲ್ಲಪ್ಪಾ’ ಅಂದರು.

ಉಪಾಧ್ಯಾಯರ ಈ ಮಾತು ಕೇಳಿ ನನ್ನ ಕಾಲುಗಳು ಕಂಪಿಸಿದವು. ನಿಜಕ್ಕೂ ಜ್ವರ ಬಂದಹಾಗೆ ಅನ್ನಿಸತೊಡಗಿತು. ನನ್ನ ತಂದೆಗೆ ಉಪಾಧ್ಯಾಯರ ಪರಿಚಯ ಚೆನ್ನಾಗಿಯೇ ಇತ್ತು. ಸುಳ್ಳು ಹೇಳುವಾಗ ನನಗೆ ಆ ಸಂಗತಿ ನೆನಪಾಗಲೇ ಇಲ್ಲ.    ನನ್ನ ತಂದೆ ಮಹಾ ಕೋಪಿಷ್ಟರು ಬೇರೆ. ಸುಳ್ಳು ಕಪಟ ಮೋಸ ಎಂದರೆ ಅವರು ಸಹಿಸುತ್ತಿರಲಿಲ್ಲ.

ತಪ್ಪು ಮಾಡಿ ಸಿಕ್ಕಿಬಿದ್ದಿದ್ದಾಗಿದೆ. ಮನೆಯಲ್ಲಿ ಬೈಗುಳ ಮತ್ತು ಏಟು ಎರಡೂ ಸಿಗಬಹುದು ಅಂದುಕೊಂಡೇ ಹೋದೆ. ನನ್ನ ಪುಣ್ಯಕ್ಕೆ ಅಂದು ಮನೆಗೆ ಹೋದಾಗ ನಮ್ಮ ತಂದೆಯವರು ಶಾಂತಚಿತ್ತರಾಗಿದ್ದರು. ಅವತ್ತು, ನನ್ನ ಮೇಲೆ ಸಿಡುಕಲಿಲ್ಲ. ಸಮಾಧಾನದಿಂದಲೇ, “ಇನ್ನು ಮುಂದೆ ಹೀಗೆಲ್ಲಾ ಸುಳ್ಳು ಹೇಳಿ ಶಾಲೆ ತಪ್ಪಿಸಬೇಡ’ ಎಂದು ಬುದ್ಧಿಮಾತು ಹೇಳಿದರು. ಈ ಘಟನೆ ನಡೆದು 54 ವರ್ಷಗಳೇ ಆಗಿವೆ. ಆದರೂ ನನ್ನ ಮನದಲ್ಲಿ ಹಚ್ಚಹಸುರಾಗಿದೆ.

* ಎಂ.ಕೆ. ಮಂಜುನಾಥ್‌, ಬೆಂಗಳೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.