ಯಾರಿಗೂ ಎಸ್‌ ಅಂದಿಲ್ಲ ನೋ ಅಂತಾನೂ ಹೇಳಿಲ್ಲ!


Team Udayavani, May 1, 2018, 7:50 PM IST

o.jpg

ಹುಡುಗ ಹೇಗಿಬೇಕು ಅಂದ್ರೆ, ತುಂಬಾ ಸುಂದರವಾಗಿರೋದೇನ್‌ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್‌ ಮಾಡ್ಸ್‌ಬೇಕಾಗುತ್ತೆ. ಕಲರ್‌ ಕಪ್ಪಿದ್ರೂ ಪರವಾಗಿಲ್ಲ (ಕಂಡಿಷನ್ಸ್ ಅಪ್ಲೈ) ಮನಸ್ಸು ಬೆಳ್ಳಗಿರಬೇಕು…

ರೀ ಇವ್ರೆ , ಕರೆಕ್ಟ್ ಆಗಿ ಕೇಳಿಸ್ಕೋಬಿಡಿ ಸಾರ್‌. ನನ್‌ ಹೆಸ್ರು ಚಂದ್ರಿಕಾ. ಏನ್‌ ಹೇಳಿ… ಚಂದ್ರಿ ಅಲ್ಲ, ಚಂದ್ರಶ್ರೀನೂ ಅಲ್ಲ, ಚಂದ್ರಮ್ಮ ಅಂತೇನಾದ್ರೂ ಕರೆದ್ರೋ- ನಿಮ್ಗೆ ಒದೆ ಗ್ಯಾರಂಟಿ. ಗೊತ್ತಾಯ್ತು ತಾನೆ? ನನ್‌ ಹೆಸರು ಚಂದ್ರಿಕಾ. ಈ ವಾರವಷ್ಟೇ 19ರಿಂದ 20ನೇ ವರ್ಷಕ್ಕೆ ಝಂಯ್ಕ ಅಂತ ಜಂಪ್‌ ಮಾಡ್ತಾ ಇದೀನಿ. ಅಂಗಡಿಗೆ ಹೋದಾಗ ಚಿಲ್ಲರೆ ಕೊಡುವ ನೆಪದಲ್ಲಿ ನನ್ನ ಕೈ ಮುಟ್ಟಲು ಅಲ್ಲಿರುವ ಪುಟ್ಟರಾಜು ಅಂಕಲ್, ಕಾಲ್ ಮಾಡಿದ ತಕ್ಷಣ ಆಟೋ ತಗೊಂಡು ಬಂದೇಬಿಡುವ ಸಯ್ಯದ್‌, ಪಾಠ ಹೇಳಿಕೊಡುವ ವೇಳೆಯಲ್ಲೇ ಅಕಸ್ಮಾತ್‌ ಅನ್ನುವಂತೆ ಕಣ್ಣು ಹೊಡೆಯುವ ವಿಜಿ ಮೇಷ್ಟ್ರು, ದಿನವೂ ಕಲರ್‌ ಕಲರ್‌ ಗುಲಾಬಿ ನಗುವ ವಿನ್ಸೆಂಟ್‌, ಈ ಹುಡುಗಿ ನನಗೇ ಅಂತ ಆಗಲೇ ಐದಾರು ಜನರಿಗೆ ಹೇಳಿರುವ ಅಮ್ಮನ ತಮ್ಮ ಹರೀಶ್‌ ಮಾಮ… ಹೀಗೆ ಸಾಕಷ್ಟು ಜನ ನನ್ನನ್ನು ಕಾಡಲು ಶುರು ಮಾಡಿದ್ರಲ್ಲ- ಅವತ್ತೇ, ನಾನು ಡ್ರೀಂ ಗರ್ಲ್, ನಾನು ಸುಂದರಿ ಅಂತ ಗ್ಯಾರಂಟಿ ಆಗೋಯ್ತು ನನಗೆ .

  ಇಷ್ಟು ಜನರ ಪ್ರೀತಿಯ(?)ಹೊಳೆಯಲ್ಲಿ ಮುಳುಗದೇ ಇವತ್ತು ಕಾಲೇಜಿನ ಮೆಟ್ಟಿಲ ಮೇಲೆ ಬಂದು ನಿಂತಿದ್ದೀನಿ, ನನ್ನನ್ನ ಅಷ್ಟೊಂದು ಪ್ರೀತಿಸುತ್ತಿದ್ದ ಹುಡುಗರಲ್ಲಿ ಯಾರೊಬ್ಬರಿಗಾದರೂ ಎಸ್‌ ಎಂದುಬಿಡಲೇ ಅಂತ ಸಾವಿರ ಸಲ ಯೋಚಿಸುತ್ತಿದ್ದೆ. ಆಗಲೇ ಆಸೆಬುರುಕ ಮನಸ್ಸು, ಏಯ್ ಸುಮ್ನಿರು, ಸ್ವಲ್ಪ ಕಾದರೆ ಚೆನ್ನಾಗಿರೋ ಹೊಸಾ ಮೊಬೈಲ್ ಸಿಗುತ್ತೆ ನೋಡು, ಅದೇ ಥರಾ, ಸ್ವಲ್ಪ ದಿನ ಕಾದರೆ ಇನ್ನೂ ಚಂದದ ಹುಡುಗ ಸಿಕ್ತಾನೆ ಅಂತ ಪಿಸುಗುಡುತ್ತಿತ್ತು! ಹಾಗಾಗಿ, ತಾಳಿದವಳು ಬಾಳಿಯಾಳು ಅಂದ್ಕೊಂಡು, ಎಲ್ರುನ್ನೂ ಆಟ ಆಡಿಸ್ಕೊಂಡು, ಯಾರಿಗೂ ಎಸ್‌ ಅನ್ನದೆ, ಯಾರಿಗೂ ನೋ ಅನ್ನದೆ ಸುಮ್ನೆ ಉಳಿದಿºಟ್ಟೆ.

ಈಗ, ನನ್‌ ಬಗ್ಗೆ ಎರಡೇ(?) ಸಾಲಲ್ಲಿ ಹೇಳಿºಡ್ತೀನಿ. ಯೆಸ್‌, ನಂಗೆ ಕೋಪ ಬೇಗ ಬರುತ್ತೆ. ಅಳು ಮಾತ್ರ ಶತಾಬ್ಧಿ ಎಕ್ಸ್‌ಪ್ರೆಸ್‌ಗಿಂತಲೂ ಸ್ಪೀಡು, ಅಮ್ಮ ಅಂದ್ರೆ ಇಷ್ಟ, ಅಪ್ಪ ಅಂದ್ರೆ ಪ್ರಾಣ. ಪಟಪಟಾಂತ ಮಾತಾಡ್ತೀನಿ. ಇನ್ನೂ ಹದಿನೈದ್‌ ವರ್ಷ ಬೆಂಗ್ಳೂರ್‌ ಬಿಟ್ಟು ಆಚೆ ಹೋಗಲ್ಲ. ರಸ್ತೆ ಬದಿಯ ಪಾನಿಪುರಿ ಜೊತೆಗೆ, ಮಲ್ಲೇಶ್ವರಂ ಜನತಾ ಹೋಟ್ಲಿನ ಮಸಾಲ ದೋಸೆ, ಸಿ.ಟಿ.ಆರ್‌ ಬೆಣ್ಣೆದೋಸೆ, ವೀಣಾ ಸ್ಟೋರ್ ಇಡ್ಲಿ-ವಡೆ, ಜಯನಗರದ ಕೂಲ್‌ ಜಾಯಿಂಟು, ಸಜ್ಜನ್‌ ರಾವ್‌ ಸರ್ಕಲ್ಲಿನ ವಿ.ಬಿ ಬೇಕರಿ, ಸುಪ್ರಭಾತ ಕಾಫಿ ಹೌಸಿನ ಅನ್ನ ಸಾಂಬಾರ್‌ ಇಲ್ಲಿಗೆಲ್ಲಾ ಹೋಗೋದು ಅಂದ್ರೆ  ಪಂಚಪ್ರಾಣ. ವಾರಕ್ಕೆರಡು ಸಲ ಕರ್ಕೊಂಡ್‌ ಹೋದ್ರು ಸಾಕು.

ಈಗ, ಮೇನ್‌ ಪಾಯಿಂಟ್‌ಗೆ ಬರ್ತೀನಿ. ಹುಡುಗ ಹೇಗಿಬೇìಕು ಅಂದ್ರೆ, ತುಂಬಾ ಸುಂದರವಾಗಿರೋದೇನ್‌ ಬೇಡ, ಹಾಗಿದ್ರೆ ಗೆಳತಿಯರಿಗೆ ಮೀಟ್‌ ಮಾಡ್ಸ್‌ಬೇಕಾಗುತ್ತೆ. ಕಲರ್‌ ಕಪ್ಪಿದ್ರೂ ಪರವಾಗಿಲ್ಲ (ಕಂಡಿಷನ್ಸ್ ಅಪ್ಲೈ) ಮನಸ್ಸು ಬೆಳ್ಳಗಿರಬೇಕು…

ನನ್ನನ್ನ, ನನ್ನ ಮನೆಯವರನ್ನ, ಪ್ರೀತಿಸಿ ಗೌರವಿಸುವ ಹೃದಯವಿರಬೇಕು, ಪಾರ್ಕಲ್ಲಿ ಕೂತಿರೋವಾಗ ಒಂದು ಫೀಟ್‌ ದೂರ, ನನಗೆ ತುಂಬಾ ಬೇಜಾರಾದಾಗ ನಾನು ಕರೆದಷ್ಟು ಹತ್ತಿರ ಬಬೇìಕು. ಯಾವುದೇ ಕಾರಣಕ್ಕೂ ನನಗೆ ಬಯ್ಯೋ ಹಾಗಿಲ್ಲ. ಅಕಸ್ಮಾತ್‌ ಹೊಡೆಯೋದಾದ್ರೆ, ನನ್ನಿಂದಾನು ಹೊಡೆತ ತಿನ್ನೋಕೆ ರೆಡಿ ಇಬೇìಕು…

ಏನಪ್ಪ ಈ ಹುಡುಗಿ ಹೀಗೆಲ್ಲಾ ಮಾತಾಡ್ತಾಳೆ  ಅಂತ ಕೋಪ ಮಾಡ್ಕೊತೀರೇನೋ. ನಿಮ್ಮನ್ನ ಸುಮ್ನೆ ಗೋಳು ಹೊಯೊಬೇಕು ಅನ್ನಿಸ್ತು. ಅದ್ಕೆ ಹೀಗೆಲ್ಲ ಮಾತಾಡಿºಟ್ಟೆ. ಕೊನೆಯವರೆಗೂ ನಿನ್‌ ಜೊತೆ ಇರ್ತೀನಿ ಅನ್ನುವ ಸಣ್ಣ ಭರವಸೆಯನ್ನು ನನಗೆ, ಮತ್ತು ಪ್ರಾಮಾಣಿಕವಾಗಿ ಒಂದೊಳ್ಳೇ ಬದುಕನ್ನ ನಿಮ್ಮ ಮಗಳಿಗೆ ಕೊಡ್ತೀನಿ ಅನ್ನುವ ಧೈರ್ಯವನ್ನ ನನ್ನ ಅಪ್ಪ ಅಮ್ಮನಿಗೆ ಕೊಡುವ ಯಾರಾದರೂ ಹುಡುಗ ಇದ್ರೆ ಯಾವುದೇ ಶರತ್ತಿಲ್ಲದೆ ಅವನ ಪ್ರೀತಿಗೆ ಎಸ್‌ ಅನ್ನೋಕೆ ಈ ಚಂದ್ರಿಕಾ ಅನ್ನುವ ಚಾಂದಿನಿ ಕಾಯುತ್ತಿದ್ದಾಳೆ. ನೋಟ್‌ ಮಾಡ್ಕೊಳ್ಳಿ, ನೋಟ್‌ ಮಾಡ್ಕೊಳ್ಳಿ, ನೋಟ್‌ ಮಾಡ್ಕೊಳ್ಳಿ.

ಚಂದ್ರಿಕಾ

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.