ಪ್ರೀತಿ ಸಂಹಿತೆ ಜಾರಿಯಾಗಿದೆ!


Team Udayavani, May 15, 2018, 1:54 PM IST

n-7.jpg

ನನ್ನನ್ನು ಸತಾಯಿಸಿ ಕಾಡಿಸಿದ ತುಂಟ ತರುಣಿಯರೇ, ಇಂದಲ್ಲ ನಾಳೆ ನಾನು ನಿಮ್ಮ ಹೃದಯದ ಬಾಗಿಲು ತಟ್ಟುವವನೇ ಎಂಬ ಭರವಸೆಯಲ್ಲಿ ದಿನ ದೂಡುತ್ತಿರುವ ಕೋಮಲಾಂಗಿಯರೇ… ದಯವಿಟ್ಟು ಸ್ವಲ್ಪ ಲಕ್ಷಗೊಟ್ಟು ಕೇಳಿ.

ಅಂದು ನಾನು ಹಿಂಬಾಲಿಸುತ್ತಿರುವುದನ್ನು ಗಮನಿಸಿದರೂ ತಿರುಗಿ ನೋಡದೇ ಹೋದ ಹುಡುಗಿಯರೇ, ಒಂದು ಕಿರುನಗೆಗಾಗಿ ನನ್ನನ್ನು ಸತಾಯಿಸಿ ಕಾಡಿಸಿದ ತುಂಟ ತರುಣಿಯರೇ, ಇಂದಲ್ಲ ನಾಳೆ ನಾನು ನಿಮ್ಮ ಹೃದಯದ ಬಾಗಿಲು ತಟ್ಟುವವನೇ ಎಂಬ ಭರವಸೆಯಲ್ಲಿ ದಿನ ದೂಡುತ್ತಿರುವ ಕೋಮಲಾಂಗಿಯರೇ ದಯವಿಟ್ಟು ಸ್ವಲ್ಪ ಲಕ್ಷ್ಯಗೊಟ್ಟು ಕೇಳಿರಿ. 

ಇದೇ ಮೇ 20ಕ್ಕೆ ನನಗಾಗಿಯೇ ಹುಟ್ಟಿಬಂದ ಅವಳಿಗೆ ನನ್ನ ಅಧಿಕೃತ ಪ್ರೇಮ ನಿವೇದನಾ ಮುಹೂರ್ತ ಹಾಗೂ 21ಕ್ಕೆ ಅದರ ಫ‌ಲಿತಾಂಶವೂ ಫಿಕ್ಸಾಗಿದೆ. ಆದ್ದರಿಂದ ಇಂದಿನಿಂದ ನನಗೆ ಪ್ರೀತಿಸಂಹಿತೆ ಜಾರಿಯಾಗಿದೆ.
ಇಂದಿನಿಂದ ನಾನು ಯಾವ ಹುಡುಗಿಗೂ ಕಾಳು ಹಾಕುವಂತಿಲ್ಲ. ನೀವಾಗಿಯೇ ಬಂದು – “ಸತ್ಯ ಕಣೋ. ನಾನು ನಿನ್ನನ್ನು ಪ್ರೀತಿಸುತ್ತೇನೆ, ನೀ ಒಪ್ಪಿಕೊಳ್ಳದಿದ್ದರೆ ಸಾಯುತ್ತೇನೆ’ ಎಂದರೂ ನಾನು ಯಾವ ಭರವಸೆಯನ್ನೂ ನೀಡುವಂತಿಲ್ಲ. ಪ್ರತಿದಿನವೂ ತಪ್ಪದೇ ಎದುರಾಗಿ, ಸತ್ತು ಹೋಗುವಂಥ ಸ್ಮೈಲ್ ಕೊಟ್ಟು, ಏನೂ ಆಗೇ ಇಲ್ಲ ಎನ್ನುವಂತೆ ನಕ್ಕು ಮುಂದೆ ಸಾಗುವ ಹುಡುಗಿಯರ ಕುರಿತು ಕವನ ಗೀಚುವಂತಿಲ್ಲ. ಅಲ್ಲದೇ ಅದು ನನ್ನ ಪ್ರತಿಭಾ ಸಾಧನೆಯೆಂದು ಕೊಚ್ಚಿಕೊಳ್ಳುವಂತಿಲ್ಲ. 

 ಇದುವರೆಗೂ ನನ್ನ ಕಾಲೇಜು ಜೀವನದಲ್ಲಿ ಯಾರಿಗೇನೆ ಸಹಾಯ, ಸೇವೆ ಒದಗಿಸಿದ್ದರೂ, ಏನೇನೋ ಸಾಹಸ ಮಾಡಿ ನೋಟ್ಸು, ಕ್ವಶ್ಚನ್‌ ಪೇಪರ್‌ ತಂದುಕೊಟ್ಟಿದ್ದರೂ, ಕೆಲವೊಮ್ಮೆ ಕಾಪಿ ಚೀಟಿ ಸಪ್ಲೆ„ ಮಾಡಿ ಪ್ರೀತಿ, ಮೆಚ್ಚುಗೆ, ಸಿಂಪತಿ…ಮತ್ತು ಎಂತೆಂಥದೋ ಮೆಚ್ಚುಗೆಗೆ ಪಾತ್ರನಾಗಿದ್ದರೂ, ಅದನ್ನೆಲ್ಲ ಅಪ್ಪಿತಪ್ಪಿಯೂ ನಾನು ಹೇಳಿಕೊಳ್ಳುವಂತಿಲ್ಲ. ಕಾಲೇಜು ಗೋಡೆಗಳು, ಪಾರ್ಕಿನ ಮರಗಳ ಕಾಂಡದ ಮೇಲೆ ಯಾರದ್ದಾದರೂ ಹೆಸರಿನೊಂದಿಗೆ ನನ್ನ ಹೆಸರನ್ನು ಗೀಚಿದ ಕುರುಹುಗಳಿದ್ದರೆ ಅವೆಲ್ಲವನ್ನೂ ನಾನು ಈಗಿಂದೀಗಲೇ ಅಳಿಸಿ ಹಾಕಬೇಕು. ಹಳೆಯ ಹುಡುಗಿಯರು ಕೊಟ್ಟ ಪ್ರೇಮ ಪತ್ರಗಳನ್ನು ಸುಟ್ಟು ಹಾಕಬೇಕು. ಗೆಳತಿಯರೊಂದಿಗಿನ ಸೆಲ್ಫಿ, ಫೋಟೋಗಳನ್ನು ಫೇಸುºಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌ ಡಿಪಿಗಳಲ್ಲಿ ಬಹಿರಂಗಪಡಿಸುವಂತಿಲ್ಲ. ಹಳೆಯ ಗೆಳತಿ ಕೊಟ್ಟ ಹೀರೋ ಪೆನ್ನನ್ನು ಬಳಸುವಂತಿಲ್ಲ. ಒಳಗೊಳಗೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವಂತಿಲ್ಲ. ಪ್ರೇಮದ ಹೊಸ ಯೋಜನೆ ಪ್ರಕಟಿಸುವಂತಿಲ್ಲ. 

ಇನ್ನೇನಿದ್ದರೂ, ನಿಗದಿತ ದಿನದಂದು ನಡೆಯುವ ಪ್ರೇಮ ನಿವೇದನೆ ಹಾಗೂ ಅವಳು ನೀಡಲಿರುವ ಧನಾತ್ಮಕ ಫ‌ಲಿತಾಂಶದತ್ತಲೇ ನನ್ನ ಚಿತ್ತ. ಬೇಕಂತಲೇ ಬಂದು ನುಲಿದು, ನಲಿದು ಚಿತ್ತ ಚಂಚಲಗೊಳಿಸಿ ಪ್ರೀತಿ ಸಂಹಿತೆ ಉಲ್ಲಂ ಸಬಾರದೆಂದು ಎಲ್ಲ ತುಂಟಿಯರಿಗೂ ವಿನಂತಿಸಲಾಗಿದೆ. ಪ್ರೀತಿಯ ವಿಷಯಕ್ಕೆ ಬಂದಾಗ, ನಾನು ಯಾವಾಗ, ಏನು ಮಾಡುತ್ತೇನೆ ಎಂದು ನನಗೇ ಗೊತ್ತಾಗದ ಕಾರಣ, ನನ್ನಿಂದ ಯಾವುದೇ ಅಪರಾಧವಾಗದಂತೆ ಕೆಲದಿನಗಳ ಮಟ್ಟಿಗೆ ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿಸಲಾಗಿದೆ…

ಅಶೋಕ ವಿ. ಬಳ್ಳಾ 

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.