ಬಂಗಾರದಿಂದ ಬಣ್ಣಾನ ತಂದ…


Team Udayavani, May 22, 2018, 6:00 AM IST

6.jpg

ಹಳದಿ ಲೋಹ ಎಂದೇ ಹೆಸರಾಗಿರುವ ಚಿನ್ನಕ್ಕೆ ಆಭರಣದ ರೂಪ ನೀಡುವ ಕಲೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದೆ. ಆಭರಣ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಅಕ್ಕಸಾಲಿಗರು ರಾಜ ಮಹಾರಾಜರ ಕಾಲದಿಂದಲೂ ಈ ವೃತ್ತಿಯನ್ನು ಕುಲಕಸುಬು ಎಂದೇ ನಂಬಿ ಮುಂದುವರಿಸಿಕೊಂಡು ಬಂದಿದ್ದಾರೆ. ಆಭರಣಗಳ ವಿಷಯದಲ್ಲಿ ಒಬ್ಬೊಬ್ಬರ ಆಯ್ಕೆಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ಗ್ರಾಹಕರ ಕೋರಿಕೆಗೆ ತಕ್ಕಂತೆ ವಿನ್ಯಾಸ ಮಾಡಿಕೊಡುವವರೇ ಜುವೆಲರಿ ಡಿಸೈನರ್‌ಗಳು…

ವಿಶೇಷ ದಿನಗಳು, ಮದುವೆ ಸಮಾರಂಭದ ವೇಳೆ ಅಕ್ಕಸಾಲಿಗರ ಬಳಿ ಚಿನ್ನ ಖರೀದಿಗೆ ಹೋಗುತ್ತಿದ್ದ ದಿನಗಳಿದ್ದವು, ಆತ ನೀಡಿದ ವಿನ್ಯಾಸದ ಆಭರಣವನ್ನು ಮರುಮಾತಾಡದೇ ಪಡೆದು ಬರುತ್ತಿದ್ದರು. ಇನ್ನು ರಾಜ ಮಹಾರಾಜರು ಇಂತಹದ್ದೇ ಒಡವೆಗಳು ಬೇಕೆಂದು ಅಕ್ಕಸಾಲಿಗರನ್ನು ತಿಳಿಸಿ, ತಮ್ಮ ಆಸಕ್ತಿಗೆ ತಕ್ಕಂಥ ಆಭರಣ, ದೇವರ ವಿಗ್ರಹ ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಮಾಡಿಸುತ್ತಿದ್ದರು. 

  ಆದರೆ, ಈಗ ಕಾಲ ಬದಲಾಗಿದೆ. ಚಿನ್ನಕ್ಕೆ ಜಾಗತಿಕ ಮೌಲ್ಯ ದೊರೆತಿದೆ. ಅಲ್ಲದೆ ಬಡವರಿಗೆ ದುರ್ಲಭವಾದ ಹಳದಿಲೋಹ ಗ್ರಾಂ ಲೆಕ್ಕದಲ್ಲಿ ಎಲ್ಲರಿಗೂ ಸಿಗುವಂತಾಗಿದೆ. ಹೀಗಾಗಿ ಆಭರಣ ವಿನ್ಯಾಸದ ಆಯ್ಕೆಗಳೂ ಹೆಚ್ಚಾಗಿದೆ. ಆದ್ದರಿಂದ ಚಿನ್ನ ಖರೀದಿ ಮಾಡುವಾಗ ಗ್ರಾಹಕ ಅನೇಕ ಮಾನದಂಡದ ಜೊತೆಗೆ ಮನಸ್ಸಿಗೆ ಒಪ್ಪುವ ವಿನ್ಯಾಸದ ಬಗೆಗೂ ಯೋಚಿಸುವುದುಂಟು.

  ಇದೇ ರೀತಿಯಲ್ಲಿ ಗ್ರಾಹಕರಿಗಾಗಿ ಜುವೆಲರಿ ಮಳಿಗೆಯವರು ವಿವಿಧ ಮಾದರಿಯ ವಿನ್ಯಾಸಗಳನ್ನು ಸಿದ್ಧಪಡಿಸುವುದಕ್ಕಾಗಿ ವಿನ್ಯಾಸಕರ ವರ್ಗವನ್ನೇ ಇಟ್ಟಿರುತ್ತಾರೆ. ಚಿನ್ನವನ್ನು ಮುಟ್ಟದೆಯೇ ಇಂತಿಷ್ಟು ಗ್ರಾಂ ನಲ್ಲಿ, ಇಂತಿಷ್ಟು ಪ್ರಮಾಣದ ಆಭರಣವನ್ನು ತಯಾರಿಸಬೇಕೆಂದು ಮೊದಲೇ ಪೂರ್ವನಿಯೋಜಿತ ಯೋಜನೆ ತಯಾರಿಸಿ, ಆಭರಣವನ್ನು ತಯಾರು ಮಾಡಿಕೊಡುವವರು ಜ್ಯುವೆಲ್ಲರಿ ಡಿಸೈನರ್‌ಗಳು.  

  ಚಿನ್ನ, ಬೆಳ್ಳಿ, ಪ್ಲಾಟಿನಮ್‌ ಮತ್ತು ರತ್ನಗಳನ್ನು ಬಳಸಿಕೊಂಡು ಹೊಸ ವಿನ್ಯಾಸದ ಸ್ಕೆಚ್‌ ತಯಾರಿಸಿಕೊಡುವ ಕೆಲಸ ಇವರದು. ಗಣಕ ಯಂತ್ರದ ಮೂಲಕ ನವನವೀನ ವಿನ್ಯಾಸಗಳನ್ನು ಅಕ್ಕಸಾಲಿಗನಿಗೆ ನೀಡಿ ಚಿನ್ನಾಭರಣ ತಯಾರಿಕೆಗೆ ರೂಪುರೇಷೆ ನೀಡುವುದೂ ಇವರ ಕೆಲಸ ಇಂಥ ವಿನ್ಯಾಸಕರಾಗಬೇಕೆಂದರೆ…

ಅಧ್ಯಯನ ಹೀಗಿರಬೇಕು…
ಜುವೆಲರಿ ಡಿಸೈನರ್‌ ಆಗಲು ಪಿಯುಸಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಜೆಮ್ಮಾಲಜಿ ಡಿಪ್ಲೋಮಾ ವಿಷಯ ಆರಿಸಿಕೊಂಡು ಜ್ಯುವೆಲ್ಲರಿ ಡಿಸೈನರ್‌ ಆಗಬಹುದು. ಮತ್ತೂಂದು ಮಾರ್ಗದಲ್ಲಿ ಎನ್‌ಐಎಫ್ಟಿ ಪ್ರವೇಶ ಪರೀಕ್ಷೆ ಬರೆದು ಬಳಿಕ ಆಕ್ಸೆಸರಿ ಡಿಸೈನ್‌ ಮಾಡಿಯೂ ಜ್ಯುವೆಲ್ಲರಿ ಡಿಸೈನರ್‌ ಆಗಬಹುದು. ಸೃಜನಾತ್ಮಕ ಮತ್ತು ಕಂಪ್ಯೂಟರ್‌ ಜ್ಞಾನ ಅಗತ್ಯ.

ಕೌಶಲ್ಯಗಳಿರಲಿ…
ಚಿನ್ನ, ಬೆಳ್ಳಿ ಇತರ ಲೋಹಗಳ ಬಗ್ಗೆ, ರತ್ನಗಳ ಗುಣಾವಗುಣಗಳ ಬಗ್ಗೆ ತಿಳಿವಳಿಕೆ, ರತ್ನಶಾಸ್ತ್ರದ ಅರಿವು
ಆಕ್ಸೆಸರಿ, ಫ್ಯಾಷನ್‌ ಕ್ಷೇತ್ರದ ಬಗ್ಗೆ ಜ್ಞಾನ 
ಹೊಸ ಆಯ್ಕೆ ಮತ್ತು ಅವಕಾಶಗಳನ್ನು ಸೃಷ್ಟಿಸುವ ಮತ್ತು ಟ್ರೆಂಡ್‌ ಬಳಸಿಕೊಳ್ಳುವ ಅರಿವು.
ಸ್ಕೆಚ್‌ ಮಾಡುವ ಕಲೆ, ಗಣಕ ಸಂಬಂಧಿತ ಡಿಸೈನ್‌ ತಂತ್ರಾಂಶಗಳ ಬಗ್ಗೆ ತಿಳಿವಳಿಕೆ

ಎಲ್ಲೆಲ್ಲಿ ಅವಕಾಶಗಳಿವೆ?
ಚಿನ್ನಾಭರಣ ತಯಾರಿಕಾ ಘಟಕ
ಚಿನ್ಯಾಭರಣ ತಯಾರಿಕೆ ಮತ್ತು ಸಂಶೋಧನಾ ವಲಯ
ಚಿನ್ನಾಭರಣ ಮಳಿಗೆಗಳು
ಲೋಹ ವಿನ್ಯಾಸ ಕ್ಷೇತ್ರ

ಕಲಿಯುವುದು ಎಲ್ಲಿ?
ವೋಗ್‌ ಇನ್ಸ್‌ಟಿಟ್ಯೂಟ್‌ ಆಫ್ ಫ್ಯಾಷನ್‌ ಅಂಡ್‌ ಟೆಕ್ನಾಲಜಿ, ಬೆಂಗಳೂರು 
ಜೆಡಿ ಇನ್ಸ್‌ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ ಬೆಂಗಳೂರು
ಸಿಆರ್‌ಇಒ ವೆಲ್ಲಿ ಸ್ಕೂಲ್‌ ಆಫ್ ಕ್ರಿಯೇಟಿಟಿ, ಡಿಸೈನ್‌ ಅಂಡ್‌ ಮ್ಯಾನೇಜ್‌ಮೆಂಟ್‌, ಬೆಂಗಳೂರು
ಮುಂಬೈನ ಜೆಮ್ಮಾಲಜಿಕಲ್‌ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ, ಕಾರ್ನಿ ರೋಡ್‌ ಇಲ್ಲಿ ವಿದ್ಯಾಭ್ಯಾಸ ಮಾಡಬಹುದು. 

ಅನಂತನಾಗ್‌ ಎನ್‌.

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.