ಅರವತ್ತು ರೂಪಾಯಿಗಳ ಸೀರೆ


Team Udayavani, May 22, 2018, 6:00 AM IST

7.jpg

ನನಗೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಂಪ್ರದಾಯಿಕ ತತ್ವಗಳಿಗೆ ಅಂಟಿಕೊಂಡಿದ್ದ ಅಣ್ಣನಿಂದ ಸಮ್ಮತಿ ದೊರಕಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ನನಗೆ ಅಂದಿನ ದಿನಗಳಲ್ಲಿ ಉದ್ಯೋಗ ದೊರೆಯುವುದು ಕಷ್ಟವಾಗಿರಲಿಲ್ಲ. ನಮ್ಮ ಮನೆತನದಲ್ಲಿ ಹೆಣ್ಣುಮಕ್ಕಳು ಯಾರೂ ಕೆಲಸಕ್ಕೆ ಹೋಗಬಾರದು ಎಂಬ ಆಜ್ಞೆ ಅಣ್ಣನಿಂದ. ತಂದೆಯನ್ನು ಕಳೆದುಕೊಂಡಿದ್ದ ನಾವು ಅವನ ಮಾತಿಗೆ ತಲೆ ಬಾಗಲೇಬೇಕಾಗಿತ್ತು. ಕಿತ್ತು ತಿನ್ನುವ ಬಡತನ. ಸಣ್ಣಪುಟ್ಟ ಬೇಕು ಬೇಡಗಳಿಗೂ ಮನೆಯವರನ್ನು ಅವಲಂಬಿಸಬೇಕಾಗಿತ್ತು. 

ಅಂಥ ಸಮಯದಲ್ಲಿ ನನಗೆ ನೆರವಾದವಳು ನನ್ನ ಗೆಳತಿ. ಆ ದಿನಗಳಲ್ಲಿ ಮಹಿಳಾ ಸಮಾಜದಿಂದ ಬಾಸ್ಕೆಟ್‌ಗಳನ್ನು ಹೆಣೆಸಿ, ಒಂದಕ್ಕೆ ಹನ್ನೆರಡು ರೂಪಾಯಿಗಳಂತೆ ಕೊಡುತ್ತಿದ್ದರು. ಅವುಗಳನ್ನು ಒಬ್ಬಳೇ ಮಾಡಿ ಪೂರೈಸುವ ಅರ್ಹತೆಯಿದ್ದರೂ ಆ ಗೆಳತಿ ನನ್ನ ಕಷ್ಟವನ್ನು ನೋಡಿ, ಅದರಲ್ಲಿ ಅರ್ಧವನ್ನು ನನಗೂ ವಹಿಸಿ ನಾನೂ ಅಲ್ಪಸ್ವಲ್ಪ ದುಡ್ಡು ಗಳಿಸುವಂತೆ ಮಾಡಿದಳು.

ಮಹಿಳಾ ಮಂಡಳಿಯವರು ಸದಸ್ಯೆಯರಿಂದ ಹಣ ಸಂಗ್ರಹಿಸಿ, ಅದನ್ನು ಅಂಚೆ ಕಚೇರಿಯ ಉಳಿತಾಯ ಖಾತೆಗೆ ತಿಂಗಳು ತಿಂಗಳೂ ಠೇವಣಿ ಇಡುತ್ತಿದ್ದರು. ಅದನ್ನು ಬರೆದು ಕಚೇರಿಗೆ ಕಳುಹಿಸುವ ಜವಾಬ್ದಾರಿಯನ್ನು ನನಗೇ ವಹಿಸಿ, ತಿಂಗಳಿಗೆ ಮೂವತ್ತು ರೂಪಾಯಿಗಳಂತೆ ಕೊಡುತ್ತಿದ್ದರು. 

ಈ ಎಲ್ಲಾ ಹಣವನ್ನು ಸಂಗ್ರಹಿಸಿ, ಅಂಚೆ ಕಚೇರಿಯಲ್ಲಿಟ್ಟು ಅದರಿಂದ 60-70 ರೂಪಾಯಿಗಳನ್ನು ತೆಗೆದು ನನ್ನ ಅಮ್ಮನಿಗೆ ಒಂದು ಸೀರೆ ತೆಗೆದುಕೊಟ್ಟೆ. ಹೊರಗಡೆ ಉಟ್ಟುಕೊಂಡು ಹೋಗಲು ಒಂದು ಒಳ್ಳೆಯ ಸೀರೆಯೂ ಇಲ್ಲದಿದ್ದ ಅವರಿಗೆ ಇದು ಪೀತಾಂಬರದಂತೆ ಭಾಸವಾಗಿ ಸೀರೆಯನ್ನು ಕಂಡು ಗಳಗಳನೆ ಅತ್ತಿದ್ದರು. ಅದನ್ನು ಅವರು ನಾಲ್ಕಾರು ಸಲ ಉಟ್ಟಿರಬಹುದು. ನಂತರ ದುರದೃಷ್ಟಕ್ಕೆ ಹಾಸಿಗೆ ಹಿಡಿದುಬಿಟ್ಟರು. 

ಸೀರೆಯ ಮೌಲ್ಯ ಎಷ್ಟೇ ಇರಲಿ, ಅದನ್ನು ಅವರು ಎಷ್ಟು ಬಾರಿಯೇ ಉಟ್ಟಿರಲಿ, ನನ್ನ ಅಮ್ಮನಿಗೆ ಮೊದಲ ಸಂಪಾದನೆಯಿಂದ ತೆಗೆದುಕೊಟ್ಟ ಉಡುಗೊರೆ ಅದು ಎಂಬ ತೃಪ್ತಿ ನನ್ನಲ್ಲಿ ಇನ್ನೂ ಮಾಸಿಲ್ಲ. 

ಪುಷ್ಪಲತಾ ಎನ್‌.ಕೆ. ರಾವ್‌

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.