ಪ್ರಪೋಸ್‌ ಮಾಡೋಕೆ ಐಡಿಯಾ ಕೊಡಿ, ಪ್ಲೀಸ್‌…


Team Udayavani, Jun 12, 2018, 6:00 AM IST

x-9.jpg

ನಮ್ಮ ತರಗತಿ ಒಂಬತ್ತು ಗಂಟೆಗೆ ಪ್ರಾರಂಭವಾದರೂ, ಕಾಡುವ ಆ ಬಾಲೆಯನ್ನು ನೋಡುವಾಸೆಯಿಂದ ಒಂದು ಗಂಟೆ ಮುಂಚಿತವಾಗಿ ಕ್ಯಾಂಪಸ್‌ನಲ್ಲಿರುತ್ತಿದ್ದೆ. ಸದಾ ಗೆಳೆಯರ ಜೊತೆ ಇರುತ್ತಿದ್ದ ನನಗೆ ಒಂಟಿಯಾಗಿ ಓಡಾಡಬೇಕು ಎನಿಸುತ್ತಿತ್ತು. ತರಗತಿಗೆ ಹೋದರೆ ಯಾರೋ ನನ್ನನ್ನು ಹಿಡಿದು ಹೊರ ನಡೆ ಎಂದು ತಳ್ಳಿದಂತಾಗುತ್ತಿತ್ತು. 

ತರಗತಿ ಪ್ರಾರಂಭವಾಗಲು ಕೆಲವೇ ನಿಮಿಷಗಳು ಬಾಕಿ ಇದ್ದವು. ಅವತ್ಯಾಕೋ ನನಗೆ ತರಗತಿಗೆ ಹೋಗುವ ಬದಲು ಕ್ಯಾಂಪಸ್‌ ಸುತ್ತೋಣ ಅನ್ನಿಸಿತು. ಪುಸ್ತಕದಚೀಲವನ್ನು ಹೆಗಲಿಗೇರಿಸಿ ತರಗತಿಯಿಂದ ಹೊರ ನಡೆದೆ.

ಅದ್ಯಾವ ದೇವರ ಹಾರೈಕೆಯ ಫ‌ಲವೋ ಗೊತ್ತಿಲ್ಲ, ಕಣ್ಣೆದುರಿಗೆ ಒಬ್ಬಳು ಸುಂದರಿ ಎದುರಾದಳು. ಗಳಿಗೆಗೊಮ್ಮೆ ತನ್ನ ಮುಂಗುರುಳ ನೇವರಿಸುತ್ತ, ಗ್ಯಾಲಕ್ಸಿಯಂತೆ ಹೊಳೆಯುವ ಕಂಗಳನ್ನು ತಿರುಗಿಸುತ್ತ,  ಹೈ ಹೀಲ್ಡ್‌ ಪಾದರಕ್ಷೆ ಧರಿಸಿ ನನ್ನ ಮುಂದೆ ನಡೆವಾಗ, ಅವಳ ಪ್ರೀತಿಯ ಬಲೆಗೆ ಬೀಳದೇ ಇರಲಾಗಲಿಲ್ಲ. ತರಗತಿಯಿಂದ ಹೊರಬಂದದ್ದು ಒಳ್ಳೆಯದಾಯಿತು ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಆದರೆ, ಅವಳನ್ನು ಮಾತನಾಡಿಸುವ ಧೈರ್ಯ ಮಾತ್ರ ಬರಲಿಲ್ಲ.

ಅಂದು ರಾತ್ರಿ ಆ ಉದ್ದಜಡೆಯ ಸುಂದರಿ ಅತಿಯಾಗಿ ಕಾಡಿದಳು. ಅಲ್ಲಿಂದ ಪ್ರಾರಭವಾಯಿತು ನೋಡಿ ನನ್ನ ಪ್ರೀತಿ ಎಂಬ ಫ‌ಜೀತಿ. ನಮ್ಮ ತರಗತಿ ಒಂಬತ್ತು ಗಂಟೆಗೆ ಪ್ರಾರಂಭವಾದರೂ, ಕಾಡುವ ಆ ಬಾಲೆಯನ್ನು ನೋಡುವಾಸೆಯಿಂದ ಒಂದು ಗಂಟೆ ಮುಂಚಿತವಾಗಿ ಕ್ಯಾಂಪಸ್‌ನಲ್ಲಿರುತ್ತಿದ್ದೆ. ಸದಾ ಗೆಳೆಯರ ಜೊತೆ ಇರುತ್ತಿದ್ದ ನನಗೆ ಒಂಟಿಯಾಗಿ ಓಡಾಡಬೇಕು ಎನಿಸುತ್ತಿತ್ತು. ತರಗತಿಗೆ ಹೋದರೆ ಯಾರೋ ನನ್ನನ್ನು ಹಿಡಿದು ಹೊರ ನಡೆ ಎಂದು ತಳ್ಳಿದಂತಾಗುತ್ತಿತ್ತು. 

ನನ್ನ ಈ ಪೀಕಲಾಟ ಬಹುಶಃ ಅವಳಿಗೆ ತಿಳಿಯಿತು ಎಂದು ಕಾಣುತ್ತದೆ. ಎದುರಿಗೆ ಬಂದಾಗ ನನ್ನ ನೋಡಿ ಕಿರುನಗೆ ಬೀರಲು ಪ್ರಾರಂಭಿಸಿದಳು. ಆಗೆಲ್ಲಾ ನನಗೆ “ಮಗಾ ಲಡ್ಡು ಬಂದು ಬಾಯಿಗೆ ಬಿತ್ತು’ ಎನಿಸುತ್ತಿತ್ತು. ಕ್ಯಾಂಪಸ್‌ನ ತುಂಬೆಲ್ಲ ನಲಿದಾಡುವ ನವ ಜೋಡಿಗಳನ್ನು ಕಂಡಾಗ, ನನಗೂ ಅವರಂತೆಯೇ ನನ್ನ ಹುಡುಗಿಯ ಕೈ ಹಿಡಿದು ನಲಿಯುವ ಆಸೆ ಮೂಡುತ್ತಿತ್ತು. ಆದರೆ, ಅವಳ ಮುಂದೆ ನಿಂತು “ನಾನು ನಿನ್ನನ್ನು ಪ್ರೀತಿಸ್ತಿದೀನಿ’ ಎಂದು ಹೇಳುವ ಧೈರ್ಯ ಇರಲಿಲ್ಲ. ಹೇಳುವುದು ಬಿಡಿ, ಅವಳ ಎದುರು ನಿಲ್ಲುವ ಶಕ್ತಿಯೂ ಇರಲಿಲ್ಲ ಅನ್ನಿ. ಏಕಾಏಕಿ ಅವಳ ಬಳಿ ಹೋಗಿ, “ಐ ಲವ್‌ ಯೂ’ ಅಂದುಬಿಟ್ಟರೆ, ಅವಳಿಗೆ ಕೋಪ ಬರಬಹುದು, ಭಯವಾಗಬಹುದು, ಅವಳ ಮೃದು ಮನಸ್ಸಿಗೆ ನೋವಾಗಬಹುದು…ನನ್ನನ್ನು ನೋಡಿ ನಸುನಕ್ಕ ಮಾತ್ರಕ್ಕೆ ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಗೆ ತಿಳಿಯಲಿ? ಹೀಗೆಲ್ಲಾ ಅನಿಸಿತು. 

ಆದರೆ, ಅದೆಷ್ಟೇ ಪ್ರಯತ್ನಿಸಿದರೂ, ಅವಳನ್ನು ಮನಸ್ಸಿನಿಂದ ಆಚೆಗೆ ಇಡಲು ಸಾಧ್ಯವಾಗಲೇ ಇಲ್ಲ. ನಾನೀಗ ಪ್ರೀತಿಯಲ್ಲಿ ಬಿದ್ದು ನೀರಿನಿಂದ ಹೊರಬಂದ ಮೀನಿನ ರೀತಿ ವಿಲವಿಲನೆ ಒದ್ದಾಡುತ್ತಿದ್ದೇನೆ. ಅವಳು ನನ್ನನ್ನು ಪ್ರೀತಿಸುತ್ತಿದ್ದಾಳ್ಳೋ, ಇಲ್ಲವೋ ತಿಳಿಯುಲ್ಲ. ಆದರೆ, ಅವಳು ನನ್ನೆದುರಿಗೆ ಬಂದಾಗ ತಪ್ಪದೇ ನನ್ನನ್ನು ನೋಡಿ ಕಿರುನಗೆ ಬೀರುತ್ತಾಳೆ. ಅದಕ್ಕೆ ನಾನಿನ್ನೂ ಯಾವುದೇ ಪ್ರತ್ಯುತ್ತರಕೊಟ್ಟಿಲ್ಲ. 
ಗೆಳೆಯರೇ, ನಿಮ್ಮಲ್ಲಿ ನನ್ನದೊಂದು ಕೋರಿಕೆ; ಈ ನಸುನಗುವ ಮೋಹಿನಿಯ ಎದುರು ನಿಂತು ಪ್ರಪೋಸ್‌ ಮಾಡುವ ಐಡಿಯಾ ಕೊಡಿ, ಪ್ಲೀಸ್‌!

ಗಿರೀಶ ಜಿ.ಆರ್‌ ಗಂಗನಹಳ್ಳಿ

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.