ಹೌದು ಕಣೋ; ನನ್ನ ಲೋಕದಲ್ಲಿ ಈಗ ನೀನಿಲ್ಲ!


Team Udayavani, Jun 19, 2018, 4:53 PM IST

howdu.jpg

ನಾಟಕದಲ್ಲಿ ಮುಖಕ್ಕೆ ಬಣ್ಣ ಹಚ್ಚುವವರನ್ನು ನೋಡಿದ್ದೇನೆ. ಅವರ ಉದ್ದೇಶ ಇನ್ನೊಬ್ಬರನ್ನು ರಂಜಿಸುವುದಾಗಿರುತ್ತದೆ. ಆದರೆ, ನಿನ್ನ ಥರ ಇನ್ನೊಬ್ಬರನ್ನು ನೋಯಿಸಲು, ಬಣ್ಣ ಬಣ್ಣದ ಮಾತುಗಳನ್ನು ಆಡುವವರನ್ನು ನಾನು ನೋಡಿರಲಿಲ್ಲ.

ಮನುಷ್ಯನ ಮನಸ್ಸು ಎಷ್ಟು ವಿಚಿತ್ರ ಅಲ್ವಾ ಗೆಳೆಯ?
ಅಂದು ನೀನು ಪ್ರೇಮದ ವಿಚಾರವನ್ನು ನನ್ನಲ್ಲಿ ನಿವೇದಿಸಿಕೊಂಡೆ. ಆಗ ನಿರ್ಧಾರ ತೆಗೆದುಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ. ಆದರೂ ನಿನ್ನ ಅದೃಷ್ಟವೋ ಏನೋ; ನಾನು ನಿನ್ನನ್ನು ಒಪ್ಪಿದೆ. ಸ್ವಲ್ಪ ದಿನ ಕಳೆದ ಮೇಲೆ ಇದ್ದಕ್ಕಿದ್ದಂತೆ ಜ್ಞಾನೋದಯವಾಯೆ¤àನೋ; ನಿನಗೆ ಈ ಹಳೆಯ ಪ್ರೀತಿ ಬೇಡವಾಯಿತಲ್ಲವೇ?

ಪ್ರೀತಿಯನ್ನು ಹೇಳಿಕೊಳ್ಳುವಾಗ ಮಾಡಿದ ಆಣೆ, ಪ್ರಮಾಣಗಳು ಇಂದು ಏನಾದವು? ಹುಡುಗನಾಗಲಿ ಅಥವಾ ಹುಡುಗಿಯಾಗಲಿ: ಇನ್ನೊಂದು ಮನಸ್ಸಿನ ಜೊತೆ ಏನನ್ನಾದರೂ ಹೇಳುವಾಗ ಹತ್ತು ಬಾರಿ ಯೋಚಿಸಬೇಕು. ಉಹೂಂ, ಅದೇನನ್ನೂ ನೀನು ಯೋಚಿಸಲೇ ಇಲ್ಲ. ಅಗತ್ಯವಿದ್ದಷ್ಟು ದಿನ ನನ್ನೊಂದಿಗೆ ಓಡಾಡಿ, ಓದು ಮುಗಿದು, ನಿನಗೆ ಕೆಲಸ ಸಿಕ್ಕಿದ ನಂತರ ನನ್ನೊಂದಿಗೆ ಸರಿಯಾಗಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟೆ. ನಾನಂದುಕೊಂಡೆ: ಎÇÉೋ ಕೆಲಸದ ಒತ್ತಡದಲ್ಲಿ ಸಿಲುಕಿರಬೇಕು ಅಂತ. 

ಆದರೆ ನನಗೆ ನಿಜ ಸಂಗತಿ ತಿಳಿದಿದ್ದು ಸ್ವಲ್ಪ ತಡವಾಗಿಯೇ. ಹಿಂದಿನ ವರ್ಷ ಜುಲೈ 3ರಂದು, ನಿನ್ನ ವಾಟ್ಸಾéಪ್‌ ಸ್ಟೇಟಸ್‌ ನೋಡಿದಾಗಲೇ ಗೊತ್ತಾಗಿದ್ದು, ನೀನು ಇನ್ನೊಂದು ಹುಡುಗಿಯನ್ನು ಪ್ರೀತಿಸುತಿದ್ದೀಯ ಅಂತ. ಅವತ್ತೇ ನಿನ್ನೊಂದಿಗೆ ಮಾತು ಬಿಟ್ಟೆ. ಹೇಳ್ಳೋ-ಅಗತ್ಯವಿದ್ದಷ್ಟು ದಿನ ನನ್ನೊಂದಿಗೆ ಓಡಾಡಿದ ನೀನ್ಯಾಕೆ ಹೀಗೆ ಮಾಡಿದೆ? ನಾಟಕದಲ್ಲಿ ಮುಖಕ್ಕೆ ಬಣ್ಣ ಹಚ್ಚುವವರನ್ನು ನೋಡಿದ್ದೇನೆ. ಅವರ ಉದ್ದೇಶ ಇನ್ನೊಬ್ಬರನ್ನು ರಂಜಿಸುವುದಾಗಿರುತ್ತದೆ. ಆದರೆ, ನಿನ್ನ ಥರ ಇನ್ನೊಬ್ಬರನ್ನು ನೋಯಿಸಲು, ಬಣ್ಣ ಬಣ್ಣದ ಮಾತುಗಳನ್ನು ಆಡುವವರನ್ನು ನಾನು ನೋಡಿರಲಿಲ್ಲ. ವಿಧಿ ಎಷ್ಟೊಂದು ಕ್ರೂರಿ! ನನ್ನ ಜೀವನದಲ್ಲಿಯೇ ಈ ರೀತಿ ಆಟವಾಡಿಬಿಟ್ಟಿತು.

3 ವರ್ಷಗಳಿಂದ ನಿನ್ನ ಹುಟ್ಟುಹಬ್ಬಕ್ಕೆ ಮೊದಲ ಶುಭಾಶಯ ನನ್ನದೇ ಆಗಿರುತ್ತಿತ್ತು. ಆದರೆ, ಈಗ ಆ ಜಾಗವನ್ನು ಬೇರೆ ಯಾರೋ ಆಕ್ರಮಿಸಿದ್ದಾರೆ. ಇರಲಿ, ನೀನು ನನಗೆ ನೋವು ಮಾಡಿದ್ದರೂ, ನಿನಗೆ ಶುಭ ಹಾರೈಸುತ್ತಿದ್ದೇನೆ.  ಹುಟ್ಟುಹಬ್ಬದ ಶುಭಾಶಯಗಳು, ನಿನಗೆ ಒಳ್ಳೆಯದಾಗಲಿ!

ಒಂದು ಮಾತು ನೆನಪಿಟ್ಟುಕೋ; ಇನ್ಮುಂದೆ ಯಾವ ಹುಡುಗಿಯ ಜೀವನದಲ್ಲಿಯೂ ಈ ರೀತಿ ಆಟವಾಡಬೇಡ, ಪ್ಲೀಸ್‌. 
ನನಗೆ ನನ್ನ ಅಪ್ಪ ,ಅಮ್ಮ  ಮುಖ್ಯ. ಬದುಕು ವಿಶಾಲವಾಗಿದೆ. ನೀನು ಜೊತೆಗಿರದಿದ್ದರೂ, ನಾನು ಜೀವನದಲ್ಲಿ ನನ್ನ ಗುರಿ ತಲುಪುತ್ತೇನೆ. ಒಂದು ವೇಳೆ ನಾನು ನಿನಗೆ ಮುಂದೆ ಎಲ್ಲಾದರೂ ಸಿಕ್ಕಿದರೆ, ದಯವಿಟ್ಟು ನನ್ನನ್ನು ಮಾತನಾಡಿಸಬೇಡ. ಏಕೆಂದರೆ ನನ್ನ ಮನಸ್ಸಿನಿಂದ ನಿನ್ನನ್ನು ಆಚೆಗೆ ಹಾಕಿದ್ದೇನೆ. ಅರ್ಥಾತ್‌, ನೀನು ಈ ಲೋಕದಲ್ಲಿಯೇ  ಇಲ್ಲವೆಂದು  ತಿಳಿದಿದ್ದೇನೆ. ಸರಿ, ಚೆನ್ನಾಗಿರು…  

ಇಂತಿ, ನೊಂದ, ಮೋಸಹೋದ ಮನಸ್ಸು 
– ಶ್ರೇಯಾ ಭಂಡಾರಿ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.