ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!


Team Udayavani, Jun 26, 2018, 6:00 AM IST

t-10.jpg

ಇವಳ್ಯಾರ ಮಗಳ್ಳೋ  ಹಿಂಗವಳಲ್ಲಾ?!
ಮಹಾಲಕ್ಷ್ಮಿ ರೂಪ, ಮೂಗಿನ ತುದಿಯಲಿ ಕೋಪ!

   ಅವತ್ತು ಗುರುವಾರ. ರಾಯರವಾರ ಬೇರೆ. ಅವತ್ತು ನಿಜವಾಗಿ ರಾಯರೇ ನನ್ನತ್ತ ಕಣ್ಣು ಬಿಟ್ಟಿದ್ದರೇನೋ ಗೊತ್ತಿಲ್ಲ! ಯಾವತ್ತಿನಂತೆ ಕ್ಲಾಸಿನಲ್ಲಿ ಸುಮ್ಮನೆ ಕೂತಿದ್ದೆ. ಯಾವಾಗ ಕ್ಲಾಸು ಬಿಡುತ್ತದೋ ಅಂತ ಕಾಯುತ್ತಾ ಅನ್ಯಮನಸ್ಕನಾಗಿ ಕಿಟಕಿಯತ್ತ ನೋಡುತ್ತಿದ್ದೆ. ಕನಕದಾಸರಿಗೆ ಕಿಂಡಿಯ ಮೂಲಕ ಶ್ರೀಕೃಷ್ಣ ಹೇಗೆ ದರುಶನ ನೀಡಿದನೋ,  ಹಾಗೆ ನನಗೆ ಆ ಕಿಟಕಿಯ ಕಿಂಡಿಯಲ್ಲಿ ದೇವಿಯ ದರ್ಶನವಾಯ್ತು. ಗುಂಗುರು ಕೂದಲಿನ ಚೆಲುವೆಯಾಕೆ. ಕೊಲ್ಲುವ ನೋಟ, ರೇಷಿಮೆಯಂಥ ಕೆನ್ನೆ, ರೂಪದರ್ಶಿಯರನ್ನು ನಾಚಿಸುವ ನಡಿಗೆ…ಇನ್ನೇನು ಬೇಕು ಆ ದೇವಿಗೆ ಭಕ್ತನಾಗಲು?

ಯಪ್ಪಾ ದೇವರೇ! ಇವಳ್ಯಾರ ಮಗಳಪ್ಪ ಹಿಂಗವಳಲ್ಲಾ… ಅನ್ನೋ ಹಾಡಿನ ಸಾಲುಗಳು ನೆನಪಾದವು. ನೋಡುನೋಡುತ್ತಿದ್ದಂತೆ ಆಕೆ ನಮ್ಮ ಕ್ಲಾಸಿನ ಕಿಟಕಿ ದಾಟಿ ಮುಂದಕ್ಕೆ ಹೋದಳು. ಅವಳನ್ನು ಹಿಂಬಾಲಿಸುತ್ತಾ ನನ್ನ ಮನಸ್ಸೂ ಕ್ಲಾಸಿನಿಂದಾಚೆ ಹೋಯ್ತು. ಯಾರು ಆ ಹುಡುಗಿ? ಜ್ಯೂನಿಯರ್ರಾ, ಸೀನಿಯರ್ರಾ ಅಂತೆಲ್ಲಾ ತಲೆ ಕೆಡಿಸಿಕೊಂಡು ನಾನು ಮಾತ್ರ ಒಳಗೇ ಕುಳಿತಿದ್ದೆ. ಕೊನೆಗೂ ಪತ್ತೇದಾರಿಕೆ ಮಾಡಿ ಅವಳ ಬಯೋಡೇಟಾವನ್ನೆಲ್ಲ ತಿಳಿದುಕೊಂಡೆ.  ಆನಂತರದಲ್ಲಿ ದಿನಾ ಅವಳು ಬರುವ ಟೈಮಿಗೆ ಕಾರಿಡಾರಿನಲ್ಲಿ ಮರೆಯಾಗಿ ನಿಲ್ಲುವುದು, ಕ್ಲಾಸಿನೊಳಗಿದ್ದುಕೊಂಡೇ ಅವಳ ದಾರಿ ಕಾಯುವುದು ನನ್ನ ದಿನಚರಿಯಾಗಿಬಿಟ್ಟಿತು.

ಈಗ ಹೇಗಾಗಿದೆಯೆಂದರೆ, ದಿನದಲ್ಲಿ ಒಮ್ಮೆಯಾದರೂ ಅವಳನ್ನು ನೋಡದಿದ್ದರೆ ಮನಸ್ಸು ಮರುಭೂಮಿಯಾಗಿಬಿಡುತ್ತದೆ. ಏನೋ ಸರಿ ಇಲ್ಲ, ಎಲ್ಲವೂ ಭಣ ಭಣ ಅನ್ನಿಸುತ್ತದೆ. ಅವಳನ್ನು ನೋಡಿದರೆ ಸಾಕು, ನೋವು, ಕೋಪ, ಆಯಾಸ ಎಲ್ಲವೂ ಮಾಯ! ಅಂಥದೊಂದು ಫೀಲ್‌ ಜೊತೆಯಾದಾಗೆಲ್ಲ ಆಸೆಯಿಂದ, ಪ್ರೀತಿಯಿಂದ, ಉಲ್ಲಾಸದಿಂದ ಹಾಡಿಕೊಳ್ಳುತ್ತೇನೆ: ಇವಳ್ಯಾರ ಮಗಳ್ಳೋ ಹಿಂಗವಳಲ್ಲಾ…

ಲೋಕೇಶ ಡಿ. ಶಿಕಾರಿಪುರ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.