ನಿನ್ನ ನೆನಪುಗಳ ಜೊತೆ ಜೊತೆಗೇ ಹೇಗೋ ಬದುಕಿದ್ದೇನೆ!


Team Udayavani, Jul 10, 2018, 6:00 AM IST

m-8.jpg

ನೀನಿಲ್ಲದೆ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಾರೆನೆಂಬ ಅಂದಿನ ಆ ನಂಬಿಕೆ ಇತ್ತಲ್ಲ, ಅದೊಂದು ಮಾತ್ರ ಬುಡಮೇಲಾಗಿದೆ. ಉಸಿರಾಡುತ್ತಿದ್ದೇನೆ, ನಗುತ್ತಿದ್ದೇನೆ, ಅಳುವೂ ಇದೆ. ಒಟ್ಟಿನಲ್ಲಿ ಬದುಕಿದ್ದೇನೆ.. ನೀನಿಲ್ಲವೆಂಬ ಕೊರಗು ಮಾತ್ರ ನನ್ನ ಜೊತೆಜೊತೆಗೇ ಹೆಜ್ಜೆಹಾಕುತ್ತಿದೆ.

ನೀನ್ಯಾವಾಗಲೂ ಇಷ್ಟಪಟ್ಟು ಒರಗಿ ಕೂತು ದಣಿವಾರಿಸಿಕೊಳ್ಳುತ್ತಿದ್ದೆಯಲ್ಲ? ಅದೇ, ನಿನ್ನ ಮನೆಯ ಹಿಂದಿನ ತೋಟದಲ್ಲಿದ್ದ ಆ ಹಳೆಯ ತೆಂಗಿನ ಮರದ ಮೇಲೆ ನಿನ್ನ ಹೆಸರನ್ನು ನಾನದೆಷ್ಟು ಪ್ರೀತಿಯಿಂದ ಕೆತ್ತಿದ್ದೆ ಗೊತ್ತಾ? ಆಗ ಶುರುವಾದ ಕೈ ನೋವನ್ನು ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕಾಗಿತ್ತು.

ಅದ್ಯಾವಾಗ ಅದು ನಿನ್ನ ಕಣ್ಣಿಗೆ ಬಿತ್ತೋ ಗೊತ್ತಿಲ್ಲ. ತಕ್ಷಣವೇ ಬಂದು ಕೆಂಡ ಕಾರುವ ಕಣ್ಣಲ್ಲೊಮ್ಮೆ ದುರುದುರನೆ ನೋಡಿ,  “ಮರ ಅಂದ್ರೆ ಮನುಷ್ಯರಿದ್ದ ಹಾಗೆ. ಒಂದು ಸಣ್ಣ ಗಾಯವಾದರೂ ನಮ್ಮಿಂದ ಸಹಿಸೋಕಾಗಲ್ಲ. ಅಂತಾದ್ರಲ್ಲಿ ಆ ಮರಕ್ಕೆ ಅಷ್ಟೆಲ್ಲಾ ಗಾಯ ಮಾಡಿದ್ಯಲ್ಲ? ಮನುಷ್ಯಳಾ ನೀನು? ನೀನು ಹೆಣ್ಣಲ್ಲ ರಾಕ್ಷಸಿ…’ ಅದು ಇದು ಎಂದು ಕೂಗಾಡಿ ನನ್ನ ಕಣ್ಣಲ್ಲಿ ನೀರು ಬರೋವರೆಗೂ ಬೈದಿದ್ದೂ ಅಲ್ಲದೆ ನನ್‌ ಕೈಯಿಂದ್ಲೆ ವಾರಾನುಗಟ್ಟಲೆ ಅದರ ಆರೈಕೆಯನ್ನೂ  ಮಾಡಿಸಿದ್ದೆ.

ನನ್ನ ದರಿದ್ರ ಕೈಗಳ ಆರೈಕೆಯಿಂದಲೋ ಏನೋ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಮರಗಳಿಗಿಂತ ಆರೋಗ್ಯವಾಗಿದ್ದ ಆ ಹಳೆಯ ಮರ ಮಾತ್ರ ಇದ್ದಕ್ಕಿದ್ದ ಹಾಗೆ ಒಣಗಿ, ಸೊರಗಿ ಬಿದ್ದೇ ಹೋಗಿತ್ತು. ಆ ಬಿದ್ದ ಮರದ ಬುಡದಲ್ಲಿ ನಿಂತು ನೀನದೆಷ್ಟು ಬಿಕ್ಕಳಿಸಿದ್ದೆ ಅನ್ನೋದು ಬಹುಶಃ ನನ್ನ ಬಿಟ್ಟು ಮತ್ಯಾರಿಗೂ ಗೊತ್ತಿಲ್ಲ. ನಿನ್ನನ್ನು ಆ ದುಃಖದಿಂದ ದೂರ ಮಾಡೋಕೆ ನಾನದೆಷ್ಟು ಸಾಹಸ ಮಾಡಿದ್ದೆ ಗೊತ್ತಾ? ಕೊನೆಗೆ ಆ ಮರವಿದ್ದ ಜಗದಲ್ಲಿ ಪುಟ್ಟ ತೆಂಗಿನ ಸಸಿಯೊಂದನ್ನು ತಂದು ನಿನ್ನ ಕೈಯ್ನಾರೆ ನೆಡಿಸಿ, ನಿನ್ನನ್ನು ಮೊದಲಿನಂತಾಗಿಸುವಲ್ಲಿ ಯಶಸ್ವಿಯಾಗಿದ್ದೆ.

ಅದೀಗ ಮೊದಲಿತ್ತಲ್ಲ; ಥೇಟ್‌ ಹಾಗೇ ಒಂದು ದೊಡ್ಡ ಮರವಾಗಿ ಬೆಳೆದು ನಿಂತಿದೆ. ಜೊತೆಗೆ ಫ‌ಲವನ್ನೂ ಕೊಡ್ತಿದೆ. ತುಂಬ ಆರೋಗ್ಯವಾಗಿಯೂ ಇದೆ. ಆದರೆ ಅದನ್ನು ಮಗುವಿನಂತೆ ಆರೈಕೆ ಮಾಡಿ ಅದರ ನೆರಳಿಗಾಗಿ ಹಾತೊರೆಯುತ್ತಿದ್ದ ನೀನು ಮಾತ್ರವೇ ಕಾಲನ ಕಾಲು¤ಳಿತಕ್ಕೆ ಸಿಲುಕಿ ಕಳೆದು ಹೋಗಿರುವೆ. 

ಇಂಥದ್ದೊಂದು ದಿನದ ಸಣ್ಣ ಊಹೆಯೂ ನನಗಿರಲಿಲ್ಲ. ನೀನಿಲ್ಲದೆ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಾರೆನೆಂಬ ಅಂದಿನ ಆ ನಂಬಿಕೆ ಇತ್ತಲ್ಲ, ಅದೊಂದು ಮಾತ್ರ ಬುಡಮೇಲಾಗಿದೆ. ಉಸಿರಾಡುತ್ತಿದ್ದೇನೆ, ನಗುತ್ತಿದ್ದೇನೆ, ಅಳುವೂ ಇದೆ. ಒಟ್ಟಿನಲ್ಲಿ ಬದುಕಿದ್ದೇನೆ.. ನೀನಿಲ್ಲವೆಂಬ ಕೊರಗು ಮಾತ್ರ ನನ್ನ ಜೊತೆಜೊತೆಗೇ ಹೆಜ್ಜೆಹಾಕುತ್ತಿದೆ.

ನೀ ಕೊಟ್ಟ ಪ್ರೀತಿಯೇ ಅಂಥದ್ದು ಸುರಹೊನ್ನೆಯಿಂದ ಹೊರ ಹೊಮ್ಮುವ ಘಮಲು!! ಪ್ರೀತಿ ಎಂದರೆ ಅದು ಕೇವಲ ವಾಂಛೆಯಲ್ಲ, ತಾಯಿಯೋರ್ವಳು ಗರ್ಭ ಧರಿಸಿದ ಮೊದಲ ದಿನದಿಂದಲೇ ತನ್ನ ಕೂಸಿಗಾಗಿ ಬಚ್ಚಿಟ್ಟುಕೊಳ್ಳುತ್ತಾಳಲ್ಲ; ಅಂಥದ್ದೊಂದು ಅಮೃತ ಸಮಾನ ಭಾವವದು. ಹೂಬಳ್ಳಿಯೊಂದರಲ್ಲಿ ಅರಳಿನಿಂತ ಮೊದಲ ಹೂವಿನಷ್ಟೇ ಕೋಮಲವದು.

ಅದೊಂದು ದಿನ ಸೂರ್ಯಾಸ್ತದ ಸಮಯದಲ್ಲಿ ಹೂವಿನ ತೋಟದ ಬದುವಿನಲ್ಲಿ ಕುಳಿತು; “ಬದುಕು ಹೇಗೇ ಇರಲಿ. ಅದೆಷ್ಟೇ ನೋವಿರಲಿ, ಅದೆಂಥದ್ದೇ ಕಡುಕಷ್ಟವಿರಲಿ. ಕೊನೆಗೆ ನಾನೇ ಇಲ್ಲದಿರಲಿ, ನಿನ್ನ ತುಟಿಯಂಚಲ್ಲಿರುವ ಈ ನಗುವೆಂಬ ಒಡವೆಯೊಂದನ್ನು ಮಾತ್ರ ಕಳಚಿಡದಿರು.. ನನ್ನಾಣೆ’ ಎಂದುಬಿಟ್ಟಿದ್ದೆ ನೀನು. ನಾನು ಯಾವುದೋ ಹುಮ್ಮಸ್ಸಿನಲ್ಲಿ ಹೂn ಎಂದು ಹೂಗುಟ್ಟಿದ್ದೆ.

ಆದರೂ ನೀನು ಆಣೆ ಮಾಡಿಸಿಕೊಂಡಷ್ಟು ಸಲೀಸಲ್ಲ ನಗುತ್ತಲೇ ಬದುಕುವುದು. ಅಳುವುದಕ್ಕಾದರೂ ಏನಿದೆ ಹೇಳು ನೀನಿಲ್ಲವೆಂಬ ಕೊರಗನ್ನು ಮೀರಿಸುವಂಥದ್ದು?! ಬದುಕಿದ್ದೂ ಸತ್ತಿರುವವರೇ ತುಂಬಿರುವ ಈ ಜಗತ್ತಿನಲ್ಲಿ. ಇಲ್ಲದೆಯೂ ಇದ್ದಂತಿರುವ ನಿನ್ನ ಆರಾಧನೆಯ ಮಹಾಕಾರಣವೊಂದಿದೆಯಲ್ಲ? ಹಾಗಾಗಿ ನಾನಿನ್ನೂ ಉಸಿರಾಡುತ್ತಿದ್ದೇನೆ..

ಸತ್ಯ ಗಿರೀಶ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.