ಕಣ್ಣೀರೂ ಒಂದು ಭಾಷೆ ಗೊತ್ತಿಲ್ವಾ ನಿನಗೆ?  


Team Udayavani, Jul 17, 2018, 6:00 AM IST

10.jpg

ದೇವರು ತುಂಬಾ ಆಟ ಆಡ್ತಾನೆ. ಹೆಚ್ಚಿನ ಸಂದರ್ಭದಲ್ಲಿ, ಒಬ್ಬರ ಪ್ರೀತಿ ಇನ್ನೊಬ್ಬರಿಗೆ ದಕ್ಕದ ಹಾಗೆ ಮಾಡಿಬಿಡ್ತಾನೆ. ಯಾರು ಯಾರಿಗೆ ಜೋಡಿ ಎಂದು ಹಣೆಬರಹ ಬರೆಯೋ ಆ ದೇವರು, ಅವರವರ ಜೊತೆಯಲ್ಲೇ ಪ್ರೀತಿ ಹುಟ್ಟುವ ಹಾಗೂ ಮಾಡಿಬಿಟ್ಟಿದ್ರೆ ಈ ಭೂಮಿ ಮೇಲೆ ಯಾರ ಪ್ರೀತಿಯೂ ಸೋಲ್ತಾ ಇರ್ಲಿಲ್ಲ, ಯಾವ ಪ್ರೇಮಿನೂ ಸಾಯ್ತಾ ಇರ್ಲಿಲ್ಲ, ಅಲ್ವಾ?  

ಕೆಲವೊಂದು ಭಾವನೆಗಳನ್ನ ಮಾತಿನಲ್ಲಿ ವ್ಯಕ್ತಪಡಿಸೋಕಾಗಲ್ಲ. ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ಸಾವಿರ ಅರ್ಥ ಇರುತ್ತೆ. ನಾವು ಯಾರನ್ನಾದರೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಅವರ ಮೌನವನ್ನು ಅರ್ಥ ಮಾಡಿಕೊಳ್ಳಬೇಕು ಕಣೊ. ಹೀಗಂತ ಅಂದುಕೊಂಡೇ ಬದುಕಿದವಳು ನಾನು. ಅದೇ ಕಾರಣಕ್ಕೆ, ಅದೆಷ್ಟೋ ಮನದಾಳದ ಮಾತುಗಳನ್ನು ಮನಸ್ಸಿನ ಗರ್ಭದಲ್ಲಿಯೆ ಕರಗಿಸಿ ಮೌನದ ಮೊರೆ ಹೋದೆ. ಆದರೆ ಕೊನೆಗೂ ನನ್ನ ಮೌನವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನೀ ಸೋತೆ. ನಿನೆY ಗೊತ್ತಾ? ಕಣ್ಣೀರು ಕೂಡ ಒಂದು ಭಾಷೆ. ಅತ್ತವರಿಗೆ ಮಾತ್ರ ಅದರ ಅರ್ಥ ತಿಳಿಯುತ್ತೆ.  

ಮೊನ್ನೆ ಜಾತ್ರೆಗೆಂದು ಹೋದಾಗ ನಿನಗಾಗಿ ಪುಟ್ಟದೊಂದು ಉಡುಗೊರೆ ತಂದಿ¨ªೆ. ತುಂಬಾ ಪ್ರೀತಿಯಿಂದ, ಮು¨ªಾದ ಮಾತುಗಳನ್ನಾಡುತ್ತಾ, ಅದನ್ನು ನಿನಗೆ ಉಡುಗೊರೆಯಾಗಿ ನೀಡಲು ಇಷ್ಟು ದಿನ ಆಸೆಯಿಂದ ಕಾದೆ. ಆದರೆ, ತಿಂಗಳುಗಳು ಕಳೆದರೂ ನೀನು ಬರಲೇ ಇಲ್ಲ. ಮುಂದೊಂದು ದಿನ ನೀನು ಬರಬಹುದು ಎನ್ನುವ ಭರವಸೆಯೂ ನನ್ನಲ್ಲಿ ಉಳಿದಿಲ್ಲ ಕಣೊ.  ನನ್ನೆಲ್ಲಾ ಆಸೆಗಳು,ಹೇಳದೇ ಉಳಿದ ಮಾತುಗಳು,ಕಣ್ಣೀರಿನಲ್ಲಿ ಕರಗಿ ಮೌನದ ಸಾಗರ ಸೇರಿವೆ. ಕೊರಗಿ ಕೊರಗಿ ಕಂಗಾಲಾಗಿ, ಅತ್ತು ಅತ್ತು, ಸುಸ್ತಾಗಿ ಯೋಚಿಸಿ ಯೋಚಿಸಿ ಕಲ್ಲಾಗಿ ಈ ನನ್ನ ಪುಟ್ಟ ಹೃದಯ ಮಂಜುಗಡ್ಡೆಯಂತೆ ಹೆಪ್ಪುಗಟ್ಟಿದೆ. ನನ್ನ ಕಣ್ಣೀರು ಬತ್ತಿ, ಮನದಲ್ಲಿ ಬರಗಾಲ ಮೂಡಿದೆ.  

ಇಷ್ಟೆಲ್ಲಾ ರಾಮಾಯಣವಾದ ನಂತರ ನನಗೆ ಅರ್ಥವಾದ ಸತ್ಯ ಏನು ಗೊತ್ತಾ? ನಿಜವಾದ ಪ್ರೀತಿಗೆ ಆ ದೇವರು ಕೊಡೊ ಉಡುಗೊರೆಯೆಂದರೆ ಈ ಕಣ್ಣೀರೇ  ಕಣೊ. ಪ್ರೇಮಿಗಳ ಮಧ್ಯ ಆ ದೇವರು ತುಂಬಾ ಆಟ ಆಡ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಒಬ್ಬರ ಪ್ರೀತಿ ಇನ್ನೊಬ್ಬರಿಗೆ ದಕ್ಕದ ಹಾಗೆ ಮಾಡಿಬಿಡ್ತಾನೆ. ಯಾರು ಯಾರಿಗೆ ಜೋಡಿ ಎಂದು ಹಣೆಬರಹ ಬರೆಯೋ ಆ ದೇವರು ಅವರವರ ಜೊತೆಯಲ್ಲೇ ಪ್ರೀತಿ ಹುಟ್ಟುವ ಹಾಗೆ ಮಾಡಿಬಿಟ್ಟಿದ್ರೆ ಈ ಭೂಮಿ ಮೇಲೆ ಯಾರ ಪ್ರೀತೀನೂ ಸೋಲ್ತಾ ಇರ್ಲಿಲ್ಲ, ಯಾವ ಪ್ರೇಮಿನೂ ಸಾಯ್ತಾ ಇರ್ಲಿಲ್ಲ, ಅಲ್ವಾ? ಹೋಗ್ಲಿ ಬಿಡು.  

ಆ ದೇವರು ನಮ್ಮಿಬ್ಬರ ಪ್ರೇಮ ಜೀವನದಲ್ಲಿ ಟ್ವೆಂಟಿ-ಟ್ವೆಂಟಿ ಮ್ಯಾಚ್‌ ಆಡ್ತಿದಾನೆ. ಅವನು ನಮ್ಮಿಬ್ಬರ ಪ್ರೀತಿ ಗ್ರೌಂಡ್‌ನ‌ಲ್ಲಿ ಅದೆಷ್ಟೇ ಆಡಿದ್ರೂ ಗೆಲುವು ನಮ್ದೇ ಆಗುತ್ತೆ ಅಂತ ಈ ಕ್ಷಣಕ್ಕೂ ಅಂದುಕೊಂಡೇ ಬದುಕಿದ್ದೀನಿ. ಯಾಕಂದ್ರೆ, ಅವನು ನನ್ನ ಹಣೆಯಲಿ ಬರೆಯದ ನಿನ್ನ ಹೆಸರ, ಹೃದಯದೀ ನಾನೇ ಕೊರೆದಿರುವೆ… ಪ್ರಪಂಚವೆಂಬ ಊರಲ್ಲಿ ನೀನೊಂದು ಚಿಕ್ಕ ಜೀವ ಕಣೋ. ನಿನ್ನನ್ನು ಪ್ರೀತಿಸುವ ಈ ಜೀವಕ್ಕೆ ನೀನೆ ದೊಡ್ಡ ಪ್ರಪಂಚ. ವಿಳಾಸವಿಲ್ಲದ ಪಯಣವಿದು. ಆದರೂ, ನಿನ್ನನ್ನು ಕಾಣಬೇಕು ಎಂಬ ಒಂದೇ ಆಸೆಯಿಂದ ಪ್ರಯಾಣ ಆರಂಭಿಸಿಬಿಟ್ಟಿದ್ದೇನೆ. ನನಗೆ ಏನಾದರೂ ಆಗಿಬಿಡುವ ಮುನ್ನ ಸಿಕ್ತೀಯ ಅಲ್ವ?  

ನಿನ್ನ ನಿರೀಕ್ಷೆಯಲ್ಲಿರುವ ಶಬರಿ.
 ಉಮ್ಮೆ ಅಸ್ಮ ಕೆ. ಎಸ್‌.  

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.