ಲಾಸ್‌ ಆಗೋದು ನಿನ್ಗೆನೇ…


Team Udayavani, Jul 17, 2018, 6:00 AM IST

11.jpg

ಒಂದು ಮಾತು ತಿಳ್ಕೊ. ನಾನು ನಿನ್ನ ಸೀನಿಯರ್‌. ಇವತ್ತು ಹೀಗೆಲ್ಲಾ ಕೆಲಸಕ್ಕೆ ಬಾರದ ಬಿಂಕ ಮಾಡಿದ್ರೆ, ನಾಳೆ ನಿಂಗೆ ನೋಟ್ಸ್ ಬೇಕಾಗೋದು ನಂದೇ. ನಮ್ಮಿಡೀ ಕ್ಲಾಸಲ್ಲಿ ನನ್ನಷ್ಟು ಚೆನ್ನಾಗಿ ನೋಟ್ಸ್ ಮಾಡೋದು ಯಾರೂ ಇಲ್ಲ.    

ತ್ರಿಪುರ ಸುಂದರಿ, ಇಂಥದ್ದೊಂದು ಹೆಸರನ್ನೂ ಇಡ್ತಾರೆ ಅನ್ನೋದನ್ನೇ ನಾನು ಕೇಳಿರಲಿಲ್ಲ. ಅದೇನಿದ್ರೂ ಗೇಲಿ ಮಾಡಲು ಬಳಸುವ ಹೆಸರು ಅಂತ ತಿಳಿದುಕೊಂಡಿದ್ದೆ. ಕಾಲೇಜಿನಲ್ಲಿ ಮೊದಲ ಬಾರಿಗೆ ನಿನ್ನ ಹೆಸರು ಕೇಳಿದಾಗ, ದೇವ್ರೇ, ಹೆಸರೇ ಹಿಂಗಿದೆ. ಇನ್ನು ಹುಡುಗಿ ಹೆಂಗಿದ್ದಾಳ್ಳೋ ಎಂದು ಹೇಳಿಕೊಂಡು ಬಿದ್ದು ಬಿದ್ದು ನಕ್ಕಿದ್ದೆ. ಹೆಸರು ಹಾಗಿದೆ ಅನ್ನೋ ಕಾರಣಕ್ಕೇ ನಿನ್ನನ್ನ ನೋಡಬೇಕು ಅನ್ನೋ ಕುತೂಹಲ ಮೂಡಿತು. ನಿನ್ನ ಜೊತೆ ಒಂದ್ಸಾರಿ ಮಾತಾಡಿದ ಮೇಲೆ, ಮತ್ತೆ ಮತ್ತೆ ಮಾತಾಡಬೇಕು ಅನ್ನೋ ಆಸೆ ಹೆಚ್ಚಾಯಿತು. ನಿನ್ನ ಜೊತೆ ಮಾತಾಡೋಕೆ ಕಾಯ್ತಾ ಇರ್ತೀನಿ ಅನ್ನೋ ಕಾರಣಕ್ಕೆ ಫ್ರೆಂಡ್ಸೆಲ್ಲಾ ನನ್ನನ್ನ “ತ್ರಿಪುರಸುಂದರ’ ಅಂತ ಕರೀತಿದ್ದಾರೆ. ನಿನ್ನ ಪರಿಚಯ ಆಗೋದಕ್ಕೆ ಮುಂಚೆ, ಯಾರಾದ್ರೂ ಹೀಗೆಲ್ಲಾ ಛೇಡಿಸಿದ್ರೆ ಮುಖ ಊದಿಸಿಕೊಳ್ತಿದ್ದ ನಾನು, ನಿನ್ನ ಹೆಸರು ಹೇಳಿ  ಛೇಡಿಸಿದಾಗ ಒಳಗೊಳಗೇ ಸಂತೋಷ ಪಡ್ತೀನಿ ಅಂದ್ರೆ ನಂಬಿ¤ಯಾ?! 

ನೀನು ಹೆಸರಿಗಷ್ಟೇ ಸುಂದರಿ, ಒಳಗೆಲ್ಲಾ ಹೊಟ್ಟೆ ಉರಿ! ಒಂದ್ಸಾರಿನಾದ್ರೂ ನನ್‌° ಜೊತೆ ನಗ್ತಾ ಮಾತಾಡಿದ್ಯಾ? ನನ್ಹತ್ರ ಮಾತಾಡಿದ್ರೆ ಎಲ್ಲಿ ಮೈಲಿಗೆ ಆಗತ್ತೋ ಅನ್ನೋಹಾಗೆ ದೂರ ಓಡ್ತೀಯಲ್ಲ, ಯಾಕೆ? ಯಾವುದೋ ದುಬುìದ್ಧಿ ಮನಸಲ್ಲಿ ಇಟ್ಟುಕೊಂಡು ನಿನ್ನ ಮಾತಾಡಿಸ್ತಿಲ್ಲ ಮಾರಾಯ್ತಿ, ನಿಜವಾಗಿ ಒಳ್ಳೆ ಮನಸ್ಸಿನಿಂದಲೇ ಮಾತಾಡಬೇಕು ಅಂತಿದ್ದೀನಿ. ಆದ್ರೆ ನಿಂಗದೆಲ್ಲಾ ಯಾಕೆ ತಿಳಿಯಲ್ಲ? 

ನಿನ್ನ ಫ್ರೆಂಡ್‌ ಕೋಮಲಾ ಹೇಳಿದ್ಲು, ಇಂಥವರ ಹತ್ರ ಮಾತಾಡಿದ್ರೆ ನಾಳೆ ನನ್‌° ಹೆಸ್ರು ಕಾಲೇಜ್‌ ಗೋಡೆ ಮೇಲೆ ಬರತ್ತೆ. ಇಂಥವರ ಸಹವಾಸ ಸರಿಯಿಲ್ಲ ಅಂದ್ಯಂತೆ! ಅಂಥದ್ದೇನು ಅಪರಾಧ ಮಾಡಿದೆ ನಾನು? ನನ್ನ ನೋಡಿದ್ರೆ ಹಾಗೆಲ್ಲಾ ಕೆಟ್ಟು ಕೆರ ಹಿಡಿದು ಹೋದ ಹುಡುಗ ಅನ್ಸತ್ತಾ? ನೋಡೂ, ಒಂದು ಮಾತು ತಿಳ್ಕೊ. ನಾನು ನಿನ್ನ ಸೀನಿಯರ್‌. ಇವತ್ತು ಹೀಗೆಲ್ಲಾ ಕೆಲಸಕ್ಕೆ ಬಾರದ ಬಿಂಕ ಮಾಡಿದ್ರೆ, ನಾಳೆ ನಿಂಗೆ ನೋಟ್ಸ್ ಬೇಕಾಗೋದು ನಂದೇ. ನಮ್ಮಿಡೀ ಕ್ಲಾಸಲ್ಲಿ ನನ್ನಷ್ಟು ಚೆನ್ನಾಗಿ ನೋಟ್ಸ್ ಮಾಡೋದು ಯಾರೂ ಇಲ್ಲ.ಇದನ್ನ ಜಂಬದಿಂದ ಹೇಳ್ತಿಲ್ಲ, ತೀರಾ ಸಹಜವಾಗಿ ಹೇಳ್ತಿದ್ದೀನಿ. ಈ ವಿಷಯ ನಿಂಗೆ ಗೊತ್ತಿರ್ಲಿ ಅಂತ ಹೇಳ್ತಿದ್ದೀನಿ. 

ಇದ್ನೇಲ್ಲಾ ಹೇಳಿ ನಿನ್ನ ಬ್ಲ್ಯಾಕ್‌ ಮೇಲ್‌ ಮಾಡ್ತಿದ್ದೀನಿ ಅಂದ್ಕೊಂಡ್ಯಾ? ಖಂಡಿತ ಇಲ್ಲ ಮಾರಾಯ್ತಿ. ಅಂತಹ ದುರ್ಭುದ್ಧಿ ನಂಗಿಲ್ಲ. ನಾನೇನು ಗಾಂಧಿ ಅಂತ ಹೇಳ್ಕೊತಿಲ್ಲ. ಅಷ್ಟೆಲ್ಲಾ ಸಾಧು ನಾನು ಅಲ್ಲವೂ ಅಲ್ಲ. ಆದ್ರೆ ಪೋಲಿ-ಪಡ್ಡೆಯಂತೂ ಅಲ್ಲ. ನನ್ನ ಹತ್ರ ಇನ್ನೊಂದ್ಸಾರಿ ಮಾತಾಡು. ಆಗ ನಿಂಗೇ ಗೊತ್ತಾಗತ್ತೆ ನಾನೆಷ್ಟು ಒಳ್ಳೆಯ ಹುಡುಗ ಅಂತ. ಉಳಿದೆಲ್ಲಾ ಹುಡುಗರ ಹಾಗೆ ಪಾರ್ಕಿಗೆ ಬಾ, ಕ್ಯಾಂಟೀನಲ್ಲಿ ಸಿಗು, ಲೈಬ್ರರಿಯಲ್ಲಿ ಕಾಣು ಅಂತೆಲ್ಲಾ ನಾನು ಹೇಳಲ್ವೆ. ಮಾತಾಡಬೇಕು, ಮಾತಾಡ್ತಾನೇ ಇರಬೇಕು ಅನ್ನೋ ಬಯಕೆ ಇರೋದು ನಿಜ. ಇಷ್ಟಾದ್ರೂ ನೀನು ನನ್ ಹತ್ರ ಮಾತಾಡ್ಲೆಬೇಕ್‌ ಅಂತ ಜಬರ್ದಸ್ತು ಮಾಡೋದಿಲ್ಲ, ಮಾಡಕ್ಕೆ ನಂಗಿಷ್ಟ ಇಲ್ಲ. 

ನಿನ್ನ ಉಳಿದೆಲ್ಲಾ ಸ್ನೇಹಿತರ ಹಾಗೆ ನಾನೂ ಕೂಡ ಅಂತ ತಿಳಿದು ಮಾತಾಡಿದ್ರೆ ನಂಗೆ ಸಂತೋಷ ಆಗತ್ತೆ. ಆದ್ರೆ ನಿನ್ನ ಹಿಂದೆ ನಾನು ಅಥವಾ ನನ್ನ ಹಿಂದೆ ನೀನು ಸುತ್ತಿದ್ರೆ ಕಾಲೇಜಲ್ಲಿ ಇಲ್ಲದ್ದು-ಸಲ್ಲದ್ದು ಮಾತಾಡ್ತಾರೆ. ಅದ್ಕೆ, ಮಾತಾಡಬೇಕು ಅನ್ನಿಸಿದಾಗ ಫೋನ್‌ ಮಾಡು. ಅಲ್ಲೀವರೆಗೂ ಕಾಯ್ತಾ ಇರ್ತೆನೆ… 

ನನ್ನ ಹೆಸರು ಮೋನ  

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.