ನಾಲ್ಕು ಬಿಂದಿಗಳ ನೆವದಲ್ಲಿ…


Team Udayavani, Aug 7, 2018, 6:00 AM IST

7.jpg

ಎದೆಯೊಳಗೇ ಉಳಿದ ನೆನಪೆ, 
ಬಹುಶಃ, ಮರೆತಂತೆ ಮುಚ್ಚಿಹೋಗಿದ್ದ ಭಾವವೊಂದು ನಿನ್ನೆ ತಾನೇ ಗೇಟ್‌ ಮುರಿದು ಹರಿದಾಡಿತು. ಹೌದು. ನಾನು ಹೇಳ್ತಿರೋದು ನನ್ನ ಬಾಳಿನ ಕಥೆಯನ್ನ. ನೀನು, ಒಂದಿಷ್ಟು ಪ್ರಾಮಾಣಿಕವಾಗಿ ನಿನ್ನ ಹಾದಿಯ ಕಡೆ ಹೊರಳಿ ನೋಡು. ಎಂದಿಗೂ ಮಾಸದ ನನ್ನ ಹೆಜ್ಜೆ ಗುರುತುಗಳಿವೆ ಅಲ್ಲಿ. ದೂರವಾಗುವಾಗಲೂ ಮುತ್ತಿಟ್ಟು, ಹೆಜ್ಜೆ ಹಿಂದೆ ಸರಿಸಿದವನನ್ನು ನೀನಾದರೂ ಹೇಗೆ ಮರೆಯಲು ಸಾಧ್ಯ? 

ಮೈಮೇಲೆ ಸಂಜೆಯ ಸುಕ್ಕುಗಳಿವೆ. ಸುಕ್ಕಿನ ಗುಳಿಗಳಲ್ಲಿ ಭರ್ತಿ ನೆನಪುಗಳಿವೆ. ನೋಡು, ನಿನಗೆ ಕೊಟ್ಟ ಮಾತಿನಂತೆಯೇ ನಾನು ಬದುಕಿ ಬಿಟ್ಟೆ! ಈಗ, ನನ್ನ ಪಾಲಿಗೆ ಕಾಲವೂ ಮಾಗಿದೆ. ಆದರೆ ನನ್ನ ಪ್ರೀತಿಯಲ್ಲ; ಅದ್ಯಾವಾಗಲೂ ಹದಿನೆಂಟರ ಬಿಸುಪಿನದು. ಬಹುಶಃ ಈ ಬದುಕಿನಲ್ಲಿ ಇದೇ ಕೊನೆಯ ಪತ್ರವಾಗಬಹುದು! ಅನಾಮತ್ತು ನಲವತ್ತು ವರ್ಷ ನಿನ್ನ ಮರೆಯದೆ, ಮರೆತಂತೆ ಬದುಕಿದೆ. ಸಾಲುಗಳನ್ನು ಎಗರಿಸದೇ ಓದ್ತಾ ಇದೀಯ ತಾನೆ?

ನಿನ್ನೆ ಮನೆ ಬದಲಿಸಬೇಕಾಗಿ ಬಂತು. ಆಗ ನನ್ನ ಹಳೆಯ ಟ್ರಂಕ್‌ ಅನ್ನು ತಡಕಾಡುತ್ತಿದ್ದಾಗ ಅಲ್ಲಿ ಸಿಕ್ಕಿದ್ದು, ಕಾಗದದ ಮಡಿಕೆಗಳಲ್ಲಿ ಇನ್ನೂ ಉಳಿದು ಹೋಗಿರುವ ಪ್ರೀತಿ ಮತ್ತು ನಾಲ್ಕು ಬಿಂದಿಗಳು. ನಂಗೊತ್ತು, ನನ್ನೆಡೆಗೆ ನಿನಗೂ ಪ್ರೀತಿಯಿದೆ. ಅದು ಹೇಗಿದೆ ಗೊತ್ತಾ? ಈ ಹಾಳೆಯ ಮಡಿಕೆಗಳಲ್ಲಿ ಬಚ್ಚಿಟ್ಟುಕೊಂಡ ಅಕ್ಷರಗಳಂತೆ! 

ಈ ಬಿಂದಿಗಳು ಯಾವುವು? ನೆನಪಿದೆಯಾ? ಪರಸ್ಪರರನ್ನು ನೋಡಲು ಕೂಡ ನೂರು ಕಷ್ಟಪಡಬೇಕಾಗಿದ್ದ ಕಾಲದಲ್ಲಿ ಅವತ್ತು ನೀನು ಜಾತ್ರೆಯಲ್ಲಿ ಸಿಕ್ಕಿದ್ದೆ. ನನ್ನನ್ನು ಕಾಣುವ ಅವಸರದಲ್ಲಿ ಹಣೆಗೊಂದು ಚುಕ್ಕಿಯನ್ನು ಇಟ್ಟುಕೊಳ್ಳಲು ಕೂಡ ಮರೆತು ಬಂದಿ¨ªೆ. ಬೋಳುಹಣೆ ನಿನಗೆ ಶೋಭಿಸುವುದಿಲ್ಲ ಅನ್ನುತ್ತಲೇ, ಅಂಗಡಿಯಲ್ಲಿ ಕೊಂಡ ಕೆಂಪು ಬಿಂದಿಗಳನ್ನು ನಿನ್ನ ಮುಂದೆ ಹಿಡಿದಾಗ ಒಂದನ್ನೆತ್ತಿಕೊಂಡು ಹಣೆಗಿಟ್ಟು ಉಳಿದವನ್ನು ನನ್ನ ಜೇಬಿನಲ್ಲಿಟ್ಟೆ. ಅವು ನನ್ನ ಬಳಿಯೇ ಉಳಿದು ಹೋದವು: ನಿನ್ನ ನೆನಪಿನಂತೆ! 

ಈಗ ನಿನ್ನ ಹಣೆಯ ಮೇಲೊಂದು ನಾಲ್ಕಾಣೆ ಗಾತ್ರದ ಕುಂಕುಮ ಇರಬಹುದು. ಪ್ರತಿದಿನ ನೀನು ಅದನ್ನು ಇಟ್ಟುಕೊಳ್ಳುವಾಗ ನನ್ನ ನೆನಪು ಇಣುಕುತ್ತಾ? ಉಳಿದು ಹೋದ ಬಿಂದಿಗಳ ನೆನಪು ಕಾಡುತ್ತಾ? ಬದುಕಿನ ಜಾತ್ರೆಯನ್ನೇ ಬಹುಪಾಲು ಮುಗಿಸಿದವಳಿಗೆ ಹಳೆಯ ಜಾತ್ರೆಯ ಉಳಿದ ಬಿಂದಿಯೇಕೆ ಎಂಬ ಪ್ರಶ್ನೆಯಾ? ಅವುಗಳಿಗೆ ನೀನೇ ಉತ್ತರಿಸಬೇಕು. 

ಈ ಪತ್ರವನ್ನು ನಿನಗೆ ಕಳುಹಿಸಬೇಕು ಎಂಬುದು ನನ್ನಾಸೆ. ಆದರೆ, ವಿಳಾಸವಾದರೂ ಎಲ್ಲಿದೆ? ನೀನು ಇರುವುದಾದರೂ ಎಲ್ಲಿ? ಅದೆಲ್ಲಿ ನೆಲೆ ನಿಂತಿದ್ದೀಯ? ಉಹುಂ, ಈ ಯಾವ ಪ್ರಶ್ನೆಗೂ ಉತ್ತರ ಗೊತ್ತಿಲ್ಲ. ಆದರೂ, ತೀರಾ ಆಕಸ್ಮಿಕವಾಗಿ ಈ ಪತ್ರ ನಿನ್ನ ಕೈ ಸೇರಿಬಿಟ್ಟರೆ ಎದೆಯೊಳಗೆ ಮಲಗಿರುವ ನಿನ್ನ ನೆನಪುಗಳನ್ನು ಕೆದಕಿಕೊ! ಈ ಬದುಕಿಗೆ ಅದೊಂದು ಪ್ರಯತ್ನವನ್ನಾದರೂ ಮಾಡು. ಇದನ್ನಲ್ಲದೆ ನಿನ್ನ ಬಳಿ ಹೇಳಿಕೊಳ್ಳುವಂಥ ಮಾತು ಯಾವುದೂ ಇಲ್ಲ… 

ದೇಹದಿಂದ ಉಸಿರು ಕಳಚಿ ಹಾರುವಾಗ ಕೇಳಿಸಬಹುದಾದ ಕೊನೆಯ ಮಾತು- ಅದು ನಿನ್ನ ಹೆಸರು! ಸಾಕು ಕಣೇ, ಈ ಜನ್ಮಕ್ಕಿಷ್ಟು. ಥ್ಯಾಂಕ್ಸ್ 

ಸದಾ

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.