ಮನಸು ಈಗಲೂ ನಿನ್ನನ್ನೇ ಬಯಸುತಿದೆ…


Team Udayavani, Aug 7, 2018, 6:00 AM IST

8.jpg

ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. 

ಹಾಯ್‌ ಶ್ರೀ,
 ನಾನು ನಿನ್ನ ಮುದ್ದಿನ ಪಂಡು. ಈಗ ನೀನು ಎಲ್ಲಿದ್ದೀಯೋ? ಹೇಗಿದ್ದೀಯೋ? ನನಗಂತೂ ತಿಳಿಯದು. ನಿನ್ನನ್ನು ನೋಡಿದ ಮೊದಲ ದಿನದಿಂದಲೇ ನಿನ್ನ ಮೇಲೆ ಪ್ರೀತಿಯಾಯಿತು. ಅಂದಿನಿಂದ ಇಂದಿನವರೆಗೂ ಮನಸ್ಸಲ್ಲಿ ನಿನ್ನದೇ ಗುನುಗು. ನಿನ್ನನ್ನು ನೋಡದೇ ಸುಮಾರು ಆರೇಳು ವರ್ಷಗಳು ಉರುಳಿಹೋದವೆಂದರೆ ನನಗಿನ್ನೂ ನಂಬಲಾಗುತ್ತಿಲ್ಲ! 

ಆಗ ನಾವೆಲ್ಲಾ ಹತ್ತನೇ ತರಗತಿಯಲ್ಲಿದ್ದೆವು. ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದ ನಾನು ಎಲ್ಲರನ್ನೂ ನೋಡುತ್ತಿದ್ದೆ. ಆದರೆ, ನನ್ನನ್ನು ನೋಡುವವಳೂ ಒಬ್ಬಳು ಇದ್ದಾಳೆಂದು ಸ್ನೇಹಿತ ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಪಕ್ಕದಲ್ಲಿ ಕೂರುತ್ತಿದ್ದ ಸ್ನೇಹಿತ, ಆ ಹುಡುಗಿ ಯಾಕೋ ನಿನ್ನನ್ನೇ ನೋಡಿ ನಗುತ್ತಿರುತ್ತಾಳೆ? ಎಂದು ಕೇಳುತ್ತಿದ್ದ. ಏನೋ ತಮಾಷೆ ಮಾಡ್ತಿದ್ದಾನೆ ಎಂದುಕೊಂಡು ನಾನು ಗಮನ ಹರಿಸಿರಲಿಲ್ಲ. ಆದರೂ ಅವನು ಪ್ರತಿದಿನವೂ ಅದನ್ನೇ ಹೇಳುತ್ತಿದ್ದುದರಿಂದ, ನೋಡಿಯೇ ಬಿಡೋಣ ಇವನು ಹೇಳುತ್ತಿರುವುದು ಸುಳ್ಳೋ? ನಿಜವೋ? ಎಂದು ಪರೀಕ್ಷಿಸಲು ಒಂದು ದಿನ ನಾನೂ ನಿನ್ನತ್ತ ತಿರುಗಿ ನೋಡಿಯೇ ಬಿಟ್ಟೆ! 

ಹಾಗೆ ನೋಡಿದಾಗ ನನಗೆ ನೀನು ಮಾತ್ರ ಕಾಣಲಿಲ್ಲ. ಬದಲಿಗೆ ನನ್ನ ಭವಿಷ್ಯವೇ ನಿನ್ನಲ್ಲಿ ಕಾಣಿಸಿಬಿಟ್ಟಿತು. ಅದುವರೆಗೂ ಲಂಗು-ಲಗಾಮಿಲ್ಲದೆ, ಎಲ್ಲೆಲ್ಲೋ ಸುತ್ತುತ್ತಿದ್ದ ನನ್ನ ಮನಸ್ಸು ಅಂದಿನಿಂದ ನಿನ್ನದೇ ಧ್ಯಾನದಲ್ಲಿ ಮುಳುಗಿಹೋಯಿತು. 

ನಿನ್ನ ನೋಡುವ ಸಲುವಾಗಿಯೇ, ನೋಟ್ಸ್‌ ಬೇಕೆಂಬ ನೆಪವೊಡ್ಡಿ  ನಿಮ್ಮ ಮನೆಗೆ ಬರುತ್ತಿದ್ದೆ. ನಿನಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇದ್ದುದರಿಂದ, ಅದೇ ನೆಪವನ್ನೊಡ್ಡಿ ನೀನೂ ನಮ್ಮ ಮನೆಗೆ ಬರುತ್ತಿದ್ದೆ. ಆದರೂ ನನ್ನ ಮನದಾಳದ ಗೊಂದಲಕ್ಕೆ ಉತ್ತರವಾಗಿ, ನೀನೇ ಅಲ್ಲವೇ ನೋಟ್ಸ್‌ಅನ್ನು ಹಿಂದಿರುಗಿಸುವಾಗ, ಅದರೊಳಗೆ “ಐ ಲವ್‌ ಯೂ’ ಎಂದು ಬರೆದು,ನನಗೆ ಪ್ರೇಮಲೋಕವನ್ನು ಪರಿಚಯಿಸಿದ್ದು?

 ಹೀಗೆ ಸುಂದರವಾಗಿ ಸಾಗುತ್ತಿದ್ದ ನಮ್ಮಿಬ್ಬರ ಪ್ರೇಮದ ಪಯಣದ ಮೇಲೆ ಅದ್ಯಾರ ಕಣ್ಣು ಬಿತ್ತೋ? ನಮ್ಮಿಬ್ಬರ ಪ್ರೀತಿಯ ವಿಷಯ ನಮ್ಮ ಮನೆಗಳಲ್ಲಿ ತಿಳಿದು, ರಂಪವಾಯಿತು. ಅದೊಂದು ದಿನ ನಿಮ್ಮಮ್ಮ, “ಇನ್ಮುಂದೆ ನಮ್ಮ ಮನೆಯ ಹತ್ತಿರ ಬರಬೇಡಪ್ಪ’ ಎಂದು ಹೇಳಿಬಿಟ್ಟರು. ಅಂದಿನಿಂದ ನಿನ್ನನ್ನು ಭೇಟಿಯಾಗಲು ನಾನು ಮಾಡದ ಪ್ರಯತ್ನವಿಲ್ಲ. ನಿನ್ನ ಮನೆಯವರು ನಿನಗೇನು ಹೇಳಿ ನನ್ನಿಂದ ದೂರವಿಟ್ಟರೋ ನನಗಂತೂ ಗೊತ್ತಿಲ್ಲ. ನೀನು ನನ್ನನ್ನು ಬಿಟ್ಟು ಹೋಗಿ ಎಷ್ಟೋ ವರ್ಷಗಳು ಕಳೆದರೂ, ನಿನ್ನ ನೆನಪುಗಳು ಈಗಲೂ ಕಾಡುತ್ತಲೇ ಇವೆ. ಮನಸ್ಸು ಇಂದಿಗೂ ನಿನ್ನನ್ನೇ ಬಯಸುತ್ತಿದೆ. ಈಗ ಹಠಾತ್ತಾಗಿ ನಾನು ಈ ಪತ್ರ ಬರೆಯಲು ಕಾರಣ ಕೂಡ ನೀನೇ ಶ್ರೀ. ಈ ಪತ್ರ ಓದಿದರೆ ನೀನು ವಾಪಸ್‌ ಬಂದೇ ಬರ್ತೀಯಾ ಅನ್ನೋ ಭರವಸೆ ನನ್ನದು. ಹಾಗೆಯೇ ಆಗಲಿ ಎಂದು ಆಶಿಸುತ್ತಾ…….

ಇಂತಿ,
ನಿನ್ನ ಮುದ್ದಿನ ಪಂಡು
-ಗಿರೀಶ್‌ ಚಂದ್ರ ವೈ.ಆರ್‌.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.