ತಲೆ ಚಕ್ಕರ್‌ ಬರ್ತಿದೆ…


Team Udayavani, Aug 14, 2018, 6:00 AM IST

8.jpg

ಅದು 1998. ನಾನಾಗ 6ನೇ ತರಗತಿ ಓದುತ್ತಿದ್ದೆ. ನನ್ನ ತಮ್ಮನೂ ಕೂಡ ನನಗೆ ಕ್ಲಾಸ್‌ ಮೇಟ್‌ ಆಗಿದ್ದ. ಈಗಿರುವಂತೆ ನೂರೆಂಟು ಟಿವಿ ಚಾನೆಲ್‌ಗ‌ಳು ಆಗ ಇರಲಿಲ್ಲ. ನಮ್ಮ ಮನರಂಜನೆಗೆ ಡಿಡಿ 1 ಚಾನೆಲ್‌ ಒಂದೇ ಆಧಾರ. ರವಿವಾರಕ್ಕೊಮ್ಮೆ ಬರುವ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೆವು. ಅದೇ ಚಾನೆಲ್‌ನಲ್ಲಿ ಪ್ರತಿ ಬುಧವಾರ ರಾತ್ರಿ 9ಕ್ಕೆ “ಮಿಸ್ಟರ್‌ – ಮಿಸೆಸ್‌ ಗುಂಡಣ್ಣ’ ಎನ್ನುವ ಹಾಸ್ಯ ಧಾರಾವಾಹಿ ಪ್ರಸಾರವಾಗುತ್ತಿತ್ತು. ದ್ವಾರಕೀಶ್‌, ಸಾಧುಕೋಕಿಲ ಅವರ ನಟನೆಯ ಆ ಧಾರಾವಾಹಿ ನಮಗೆ ತುಂಬಾ ಅಚ್ಚುಮೆಚ್ಚು. ಆದರೆ, ಅಪ್ಪ ಅಷ್ಟೊತ್ತಲ್ಲಿ ಟಿವಿ ನೋಡೋಕೆ ಬಿಡುತ್ತಿರಲಿಲ್ಲ. ಅದೇ ಧಾರಾವಾಹಿ ಶುಕ್ರವಾರ ಮಧ್ಯಾಹ್ನ 12ಕ್ಕೆ ಮರುಪ್ರಸಾರವಾಗುತ್ತಿತ್ತು. ಅದನ್ನು ನೋಡಲೇಬೇಕೆಂಬ ಹಂಬಲದಿಂದ ಒಮ್ಮೆ ನಾನು ನನ್ನ ತಮ್ಮ ಸೇರಿ ಒಂದು ಚಕ್ಕರ್‌ವ್ಯೂಹ ರಚಿಸಿದೆವು. 

ಒಂದು ಶುಕ್ರವಾರ ಶಾಲೆಯಲ್ಲಿ ಮೊದಲೆರಡು ತರಗತಿಗಳು ಮುಗಿದಿದ್ದವು. 3ನೇ ಪಿರಿಯಡ್‌ ತೆಗೆದುಕೊಳ್ಳಲು ಹಿಂದಿ ಟೀಚರ್‌ ತರಗತಿಗೆ ಬಂದರು. ಇನ್ನೇನು ಅವರು ಪಾಠ ಶುರುಮಾಡುತ್ತಾರೆ ಎನ್ನುವಷ್ಟರಲ್ಲಿ ನನ್ನ ತಮ್ಮ ಎದ್ದು ನಿಂತು “ಮೇಡಂ, ನಮ್ಮಣ್ಣಂಗೆ ಹುಷಾರಿಲ್ಲ. ತಲೆ ಚಕ್ಕರ್‌ ಬರ್ತಿದೆ’ ಅಂತೇಳಿ ಸುಮ್ನೆ ಕೂತ. ಟೀಚರ್‌ ನನ್ನತ್ರ ಬಂದು, “ಪಾಠ ಕೇಳ್ಳೋಕೆ ಆಗುತ್ತೋ ಅಥವಾ ಮನೆಗೆ ಹೋಗ್ತಿಯೋ?’ ಅಂತ ಕೇಳಿದರು. ಅವರು ಕೊಟ್ಟ ಈ ಬಂಪರ್‌ ಆಫ‌ರ್‌ ಕೇಳಿ ನಾನು ಮನದಲ್ಲೇ ಕುಣಿದಾಡಿ, “ಮೇಡಂ, ತುಂಬಾ ತಲೆ ಸುತ್ತುತ್ತಾ ಇದೆ. ಕೂತ್ಕೊಳಕ್ಕೆ ಆಗಲ್ಲ. ಮನೆಗೆ ಹೋಗ್ತಿನಿ’ ಅಂತ ಎದ್ದು ನಿಂತೆ. ಮೊದಲ ಹೆಜ್ಜೆಯಲ್ಲೇ ಬೀಳುವಂತೆ ನಟಿಸಿ ಅಲ್ಲೇ ಕುಸಿದು ಕೂತೆ. 

ಇದನ್ನು ನೋಡಿದ ಮೇಡಂ, “ನೀನೊಬ್ಬನೇ ಹೋಗಬೇಡ ಜೊತೇಲಿ ನಿನ್ನ ತಮ್ಮನ್ನ ಕರೆದುಕೊಂಡು ಹೋಗು’ ಎಂದು ಹೇಳಿದ ಕೂಡಲೇ ನನ್ನ ತಮ್ಮ ನನ್ನ ಪಕ್ಕ ಹಾಜರಾದ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆದವರಂತೆ ಇಬ್ಬರೂ ಹಿಗ್ಗಿನಿಂದ ಶಾಲೆ ಆವರಣದಿಂದ ಮಾಯವಾಗಿ ಮನೆಗೆ ತಲುಪಿ, ಅಮ್ಮನಿಗೆ ಇನ್ನೊಂದು ಸುಳ್ಳು ಹೇಳಿ ಖುಷಿಯಾಗಿ ಧಾರಾವಾಹಿ ನೋಡಿದೆವು. ಹೀಗೆ ಕ್ಲಾಸಿಗೆ ಚಕ್ಕರ್‌ ಹೊಡೆದು, ನಮ್ಮಿಷ್ಟದ ಧಾರಾವಾಹಿ ನೋಡಿದ್ದು, ಆಗಾಗ ಮನಸ್ಸಿಗೆ ಕಚಗುಳಿ ಇಡುತ್ತಾ ನೆನಪಿನ ಅಂಗಳದಲ್ಲಿ ಹಾಗೆಯೇ ಉಳಿದುಕೊಂಡಿದೆ.

ಶಿವರಾಜ್‌ ಬಿ.ಎಲ್‌. ದೇವದುರ್ಗ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.