ಕಾಲ್ಬೆರಳು ಕಾದಿವೆ ಕಣೋ ಹುಡುಗಾ! 


Team Udayavani, Aug 14, 2018, 6:00 AM IST

9.jpg

ಅವನು ಯಾವತ್ತು ಮರಳಿ ಬರುತ್ತಾನೋ ಗೊತ್ತಿಲ್ಲ. ಆದರೆ, ಅದೆಷ್ಟು ದಿನವಾದರೂ ಸರಿಯೇ, ನಾನು ಕಾಯುತ್ತೇನೆ. ಈ ಕಾಲ್ಬೆರಳುಗಳಿಗೆ ಬಣ್ಣ ಹಚ್ಚುವ ಅವಕಾಶವನ್ನು ನಾನೆಂದೂ ಬೇರೆಯವರಿಗೆ ಕೊಡಲಾರೆ. 

ತಂಗಾಳಿ ಬೀಸುತ್ತಿದೆ ಎಂದರೆ, ಪ್ರಕೃತಿ ಮಳೆಯನ್ನು ಬರ ಮಾಡಿಕೊಳ್ಳಲು ತಯಾರಿ ನಡೆಸಿದೆ ಅಂತ ಅರ್ಥ. ನನ್ನ ಮನದಲ್ಲಿ ತಂಗಾಳಿ ಸುಳಿದಾಡುತ್ತಿದ್ದರೆ, ಅವನು ಬಂದೇ ಬರುವ ಅನ್ನೋ ಖಾತರಿ. ಅವನು ನನ್ನತ್ತ ಹೆಜ್ಜೆ ಹಾಕಿದರೆ, ಮನಸ್ಸಿನಲ್ಲಿ ಸಾವಿರ ಚಿಟ್ಟೆಗಳ ಆಗಮನ. ಅವನು ನನ್ನೆದುರು ಹಾದು ಹೋದರೆ, ಭಾವದ ಅಲೆಗಳ ತಕಧಿಮಿತ. ಯಾಕಿರಬಹುದು? ನಮ್ಮಿಬ್ಬರಿಗೂ ಗೊತ್ತಿಲ್ಲ! ಆದರೆ ಈ ಭಾವವ ಬೊಗಸೆಯಲ್ಲಿಟ್ಟ ನಮ್ಮ  ಕಾಲೇಜ್‌ ಕ್ಯಾಂಪಸ್‌ಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು. ಕ್ಯಾಂಪಸ್‌ ಎಂಬ ದೋಣಿಯೇ ನಮ್ಮನ್ನು ಎದುರುಬದುರು ನಿಲ್ಲಿಸಿದ್ದು. ಅದೇ ಕ್ಯಾಪಂಸ್‌ನಿಂದಲೇ ನಮ್ಮ ಪಯಣ ಶುರುವಾಗಿದ್ದು. 

  ಈ ಪಯಣದಲ್ಲಿ ಬರೀ ಸುಖಗಳಿಗೆ, ನಲಿವುಗಳಿಗೆ ಮಾತ್ರ ಅವಕಾಶವಿತ್ತು. ಬೇರೆಲ್ಲವೂ ಇಲ್ಲಿ ನಗಣ್ಯ. ನಾವೆಂದೂ ಬೇರೆಯವರನ್ನು ಅನುಕರಿಸಲು ಹೊರಟವರಲ್ಲ. ಬೇರೆಯವರಂತೆ ಕೈ ಕೈ ಹಿಡಿದು ನಡೆಯಲಿಲ್ಲ, ಒನ್‌ ಬೈ ಟು ಕಾಫಿ ಕುಡಿಯಲಿಲ್ಲ, ಐಸ್‌ ಕ್ರೀಂ ಪಾರ್ಲರ್‌ಗೆ ನುಗ್ಗಿದವರಲ್ಲ. ಒಬ್ಬರಿಗೊಬ್ಬರು ದುಬಾರಿ ಉಡುಗೊರೆ ಕೊಡಲಿಲ್ಲ. ನಮ್ಮ ಪ್ರೀತಿ ತೋರಿಕೆಯದ್ದಾಗಿರಲಿಲ್ಲ. ಅದು ಹಸಿರು ತುಂಬಿದ ಮರದ ಮರೆಯಲ್ಲಿರುವ ಕಾಣದ ಕೋಗಿಲೆಯ ದನಿಯಂಥದ್ದು.

ಅವನು ನನಗೋಸ್ಕರ ಕೊಡುತ್ತಿದ್ದ ಉಡುಗೊರೆ ಯಾವುದು ಗೊತ್ತಾ? ನಾನು ಬೇಜಾರಿನಲ್ಲಿದ್ದಾಗ ನನಗೇ ಗೊತ್ತಿಲ್ಲದಂತೆ ನನ್ನಿಷ್ಟದ ನೈಲ್‌ ಪಾಲಿಶ್‌ ಅವನ ಕೈಯಲ್ಲಿರುತ್ತಿತ್ತು. ಅದನ್ನು ಅವನೇ ನನ್ನ ಕಾಲುಗುರಿಗೆ ಹಚ್ಚಬೇಕು. ಹಾಗಂತ ಅವನೇ ಆಸೆ ಪಡುತ್ತಿದ್ದ. ಹೀಗೆ ಪ್ರೀತಿ ಸುರಿದು ಕೊಟ್ಟ ಅವನು, ಆಡಲು ಕಲಿತ ಕಂದ ದಾರಿ ತಪ್ಪಿ ಕಳೆದು ಹೋಗುವಂತೆ ನನ್ನಿಂದ ಮರೆಯಾದ! ಅವನು ಯಾಕಾಗಿ ನನ್ನ ದಾರಿಯಿಂದ ಪಟ್‌ ಅಂತ ಕಾಲು ಕಿತ್ತನೋ ಗೊತ್ತಿಲ್ಲ. ಈ ಕಣ್ಣುಗಳು ಅವನನ್ನು ಕ್ಷಣ ಕ್ಷಣಕ್ಕೂ ಹುಡುಕಿ ಸೋತಿವೆ. ಬಿಸಿಲಿನೊಡಗೂಡಿ ಬಂದ ಮಳೆಯಲ್ಲಿ ಮೂಡಿದ ಕಾಮನಬಿಲ್ಲಿನಂತೆ, ಕಂಡೂ ಕಾಣದಂತೆ ಮರೆಯಾದ. 

ಅವನು ಯಾವತ್ತು ಮರಳಿ ಬರುತ್ತಾನೋ ಗೊತ್ತಿಲ್ಲ. ಆದರೆ, ಅದೆಷ್ಟು ದಿನವಾದರೂ ಸರಿಯೇ, ನಾನು ಕಾಯುತ್ತೇನೆ. ಈ ಕಾಲೆºರಳುಗಳಿಗೆ ಬಣ್ಣ ಹಚ್ಚುವ ಅವಕಾಶವನ್ನು ನಾನೆಂದೂ ಬೇರೆಯವರಿಗೆ ಕೊಡಲಾರೆ. ಆ ಬಣ್ಣಗಳು ಅವನಿಗೆ ಮಾತ್ರ ಸ್ವಂತ; ನನ್ನ ಕಾಲೆºರಳುಗಳು ಕೂಡ! 

ಸೌಮ್ಯ ಸಿ. ದೇವಾಂಗದ 

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.