ಪದೇಪದೆ ಸೋತರೂ ಗೆಲುವಿನ ಆಸೆ ಇದೆ!


Team Udayavani, Aug 14, 2018, 6:00 AM IST

13.jpg

ತುಂಬಾ ಮುದ್ದಾಗಿದ್ದೆ ನೀನು, ಮಾತಿನಲ್ಲಿಯೂ ಮತ್ತು ಮನಸಿನಲ್ಲಿಯೂ. ನಿನ್ನ ಜೊತೆಯಲ್ಲಿದ್ದಾಗ ವಾಹ್‌, ಸ್ವರ್ಗಕ್ಕೆ ಮೂರೇ ಗೇಣು ಎಂದು ಬೀಗುತ್ತಿದ್ದವ ನಾನು. ನಿನ್ನೊಂದಿಗೆ ಕಳೆದ ಕ್ಷಣಗಳನ್ನು ವಿವರಿಸಬೇಕೆಂದರೂ ಪದಗಳೇ ಸಿಗದಿದ್ದಾಗಲೇ ತಿಳಿದಿದ್ದು, ನಿನ್ನ ಮೇಲಿದ್ದ ಒಲವು ಅನುರಾಗದ ರೂಪ ಪಡೆಯಿತೆಂದು. ಆದರೆ, ಅದೇ ಅನುರಾಗ ಇಂದು ಅಳಿವಿನಂಚಿನಲ್ಲಿದೆ. ಬೇಗ ಬಂದು ಸಹಕರಿಸು, ಅನುರಾಗವನ್ನು ಬದುಕಿಸು.

ಪ್ರೀತಿ ಆರಂಭವಾಗಿದ್ದು ನಿನ್ನಿಂದಲ್ಲವೇ? ಅದು ಕೊನೆಯಾದರೂ ನಿನ್ನಿಂದಲೇ ಆಗಲಿ ಎಂದು ನಾನು ಹೇಳಲಾರೆ. ಯಾಕೆಂದರೆ ತಂಗಾಳಿಯಂತೆ ಬಂದು ನನ್ನಲಿ ಉಸಿರಾಗಿ ಉಳಿದವಳು ನೀನು. ಪದಗಳೇ ಸಿಗದೆ ಮೂಕನಾಗಿ ನಿಂತಿದ್ದ ನನಗೆ, ಅನುರಾಗದ ಅರಿವಾದ ಮೇಲಂತೂ ಏನು ಮಾಡಬೇಕೆಂದು ತೋಚದೆ ಸ್ತಬ್ಧನಾದೆ, ಭಾವನೆಗಳ ಬಲೆಯಲ್ಲಿ ಬಂಧಿಯಾದೆ. ನಿನಗೆ ತಿಳಿದಿಲ್ಲ, ಅನುರಾಗ ತಿಳಿಸಲು ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೇನೆಂದು. ಆದರೆ, ಅಷ್ಟೂ ಬಾರಿ ಸೋತಾಗಲೂ ಮನದಂಚಲ್ಲೆಲ್ಲೋ ಗೆದ್ದೆನೇನೋ ಎಂದೆನಿಸುತ್ತಿತ್ತು. ಕಾರಣ ಇಂದಿಗೂ ತಿಳಿಯುತಿಲ್ಲ.

ನಿನ್ನ ಕಣ್ಣ ನೋಟದ ಸೆಳೆತದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಮುಗ್ಧ ಮಾತಿನ ಮೋಡಿಯಲ್ಲಿ ಮಿಂದೇಳುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಸಾಂಗತ್ಯದ ಸಮೀಪದಲ್ಲಿ ಒದ್ದಾಡುತ್ತಿದ್ದಾಗಲೂ ಅರಿವಿತ್ತು ನನಗೆ ಇದು ಅನುರಾಗವೇ ಎಂದು.ಆದರೆ ನಿನಗೆ ಇದಾವುದೂ ತಿಳಿಯುತ್ತಿಲ್ಲ ಎಂಬುದು ಮಾತ್ರ ನನಗೆ ಅರಿವಿಲ್ಲದೇ ಹೋಯಿತು.

ನಿನ್ನಲ್ಲಿ ಹೇಳಲು ಬಹಳಷ್ಟಿದೆ ಎಂದು ಪ್ರತಿ ಬಾರಿ ಬಳಿ ಬಂದಾಗಲೂ, ನಾನು ಹೇಳದೇ ಉಳಿದಿದ್ದೇ ಹೆಚ್ಚು. ಆದರೆ ಇನ್ನು ಹಾಗಾಗದು. ಮಾತಿನಲ್ಲಿ ಹೇಳಲಾಗದ್ದನ್ನು ಮೌನದಲ್ಲಿಯೇ ಹೇಳುವೆ; ಎಲ್ಲವನ್ನೂ ಅಲ್ಲದಿದ್ದರೂ, ಎಂದೆಂದೂ ನನ್ನ ಜೊತೆಗಿರು ಎಂಬುದನ್ನಾದರೂ.
ಅದೇ ಹೆಜ್ಜೆ ನಾದಗಳೊಡನೆ, ಅದೇ ಮುಗ್ಧ ಮಾತುಗಳೊಡನೆ… 

ಅಭಿಷೇಕ್‌ ಎಂ. ತೀರ್ಥಹಳ್ಳಿ

ಟಾಪ್ ನ್ಯೂಸ್

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.