ಪದೇಪದೆ ಸೋತರೂ ಗೆಲುವಿನ ಆಸೆ ಇದೆ!


Team Udayavani, Aug 14, 2018, 6:00 AM IST

13.jpg

ತುಂಬಾ ಮುದ್ದಾಗಿದ್ದೆ ನೀನು, ಮಾತಿನಲ್ಲಿಯೂ ಮತ್ತು ಮನಸಿನಲ್ಲಿಯೂ. ನಿನ್ನ ಜೊತೆಯಲ್ಲಿದ್ದಾಗ ವಾಹ್‌, ಸ್ವರ್ಗಕ್ಕೆ ಮೂರೇ ಗೇಣು ಎಂದು ಬೀಗುತ್ತಿದ್ದವ ನಾನು. ನಿನ್ನೊಂದಿಗೆ ಕಳೆದ ಕ್ಷಣಗಳನ್ನು ವಿವರಿಸಬೇಕೆಂದರೂ ಪದಗಳೇ ಸಿಗದಿದ್ದಾಗಲೇ ತಿಳಿದಿದ್ದು, ನಿನ್ನ ಮೇಲಿದ್ದ ಒಲವು ಅನುರಾಗದ ರೂಪ ಪಡೆಯಿತೆಂದು. ಆದರೆ, ಅದೇ ಅನುರಾಗ ಇಂದು ಅಳಿವಿನಂಚಿನಲ್ಲಿದೆ. ಬೇಗ ಬಂದು ಸಹಕರಿಸು, ಅನುರಾಗವನ್ನು ಬದುಕಿಸು.

ಪ್ರೀತಿ ಆರಂಭವಾಗಿದ್ದು ನಿನ್ನಿಂದಲ್ಲವೇ? ಅದು ಕೊನೆಯಾದರೂ ನಿನ್ನಿಂದಲೇ ಆಗಲಿ ಎಂದು ನಾನು ಹೇಳಲಾರೆ. ಯಾಕೆಂದರೆ ತಂಗಾಳಿಯಂತೆ ಬಂದು ನನ್ನಲಿ ಉಸಿರಾಗಿ ಉಳಿದವಳು ನೀನು. ಪದಗಳೇ ಸಿಗದೆ ಮೂಕನಾಗಿ ನಿಂತಿದ್ದ ನನಗೆ, ಅನುರಾಗದ ಅರಿವಾದ ಮೇಲಂತೂ ಏನು ಮಾಡಬೇಕೆಂದು ತೋಚದೆ ಸ್ತಬ್ಧನಾದೆ, ಭಾವನೆಗಳ ಬಲೆಯಲ್ಲಿ ಬಂಧಿಯಾದೆ. ನಿನಗೆ ತಿಳಿದಿಲ್ಲ, ಅನುರಾಗ ತಿಳಿಸಲು ಹಲವಾರು ಬಾರಿ ಪ್ರಯತ್ನಿಸಿ ಸೋತಿದ್ದೇನೆಂದು. ಆದರೆ, ಅಷ್ಟೂ ಬಾರಿ ಸೋತಾಗಲೂ ಮನದಂಚಲ್ಲೆಲ್ಲೋ ಗೆದ್ದೆನೇನೋ ಎಂದೆನಿಸುತ್ತಿತ್ತು. ಕಾರಣ ಇಂದಿಗೂ ತಿಳಿಯುತಿಲ್ಲ.

ನಿನ್ನ ಕಣ್ಣ ನೋಟದ ಸೆಳೆತದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಮುಗ್ಧ ಮಾತಿನ ಮೋಡಿಯಲ್ಲಿ ಮಿಂದೇಳುತ್ತಿದ್ದಾಗಲೂ ನನಗರಿವಿತ್ತು ಇದು ಅನುರಾಗವೇ ಎಂದು. ನಿನ್ನ ಸಾಂಗತ್ಯದ ಸಮೀಪದಲ್ಲಿ ಒದ್ದಾಡುತ್ತಿದ್ದಾಗಲೂ ಅರಿವಿತ್ತು ನನಗೆ ಇದು ಅನುರಾಗವೇ ಎಂದು.ಆದರೆ ನಿನಗೆ ಇದಾವುದೂ ತಿಳಿಯುತ್ತಿಲ್ಲ ಎಂಬುದು ಮಾತ್ರ ನನಗೆ ಅರಿವಿಲ್ಲದೇ ಹೋಯಿತು.

ನಿನ್ನಲ್ಲಿ ಹೇಳಲು ಬಹಳಷ್ಟಿದೆ ಎಂದು ಪ್ರತಿ ಬಾರಿ ಬಳಿ ಬಂದಾಗಲೂ, ನಾನು ಹೇಳದೇ ಉಳಿದಿದ್ದೇ ಹೆಚ್ಚು. ಆದರೆ ಇನ್ನು ಹಾಗಾಗದು. ಮಾತಿನಲ್ಲಿ ಹೇಳಲಾಗದ್ದನ್ನು ಮೌನದಲ್ಲಿಯೇ ಹೇಳುವೆ; ಎಲ್ಲವನ್ನೂ ಅಲ್ಲದಿದ್ದರೂ, ಎಂದೆಂದೂ ನನ್ನ ಜೊತೆಗಿರು ಎಂಬುದನ್ನಾದರೂ.
ಅದೇ ಹೆಜ್ಜೆ ನಾದಗಳೊಡನೆ, ಅದೇ ಮುಗ್ಧ ಮಾತುಗಳೊಡನೆ… 

ಅಭಿಷೇಕ್‌ ಎಂ. ತೀರ್ಥಹಳ್ಳಿ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.