ಮನಸಿದು ನೆನಪಿನ ಸಂಚಿಕೆ 


Team Udayavani, Aug 21, 2018, 6:00 AM IST

9.jpg

ಕಳೆದು ಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!

ಹುಡುಗ,
ಹಗಲಿರುಳುಗಳ ನಡುವಿನಲ್ಲಿ ಯಂತ್ರದಂತೆ ಸಾಗುತ್ತಿದೆ ಬದುಕು, ಯಾವುದರಲ್ಲಿಯೂ ತಲ್ಲೀನಗೊಳ್ಳದೆ ಛಿಧ್ರಗೊಳ್ಳುತ್ತಿರುವ ಹೃದಯದ ಒಡಕು, ಏನೋ ಕಳೆದುಕೊಳ್ಳುತ್ತಿದ್ದೇನೆಂಬ ಅವ್ಯಕ್ತ ಭಯ, ಯಾವ ದಾರಿಯೆಡೆಗೂ ಹೆಜ್ಜೆಯಿಡಲು ಮುಗಿಯದ ಗೊಂದಲದ ಸಮಯ, ನಿರೀಕ್ಷೆ ಎಂಬುದು ಮುಳುಗತೊಡಗಿರುವ ತಳ ಒಡೆದ ದೋಣಿ. ಆದರೂ ಒಂದೇ ಒಂದು ಬಾರಿ ನಿನ್ನ ನೋಡಬೇಕೆಂಬ ಅಪೇಕ್ಷೆಗೆ ಮನಸು ಹಿಡಿಯುತ್ತಿದೆ ಸಾಣಿ. ಅದೆಷ್ಟು ಸಾವಿರ ಸಲ ನಿನ್ನ ಮೊಬೈಲ್‌ಗೆ ಕಾಲ್‌ ಮಾಡಿದ್ದೇನೋ? ಅದೇ ಸಾವಿನಂಥ ಸ್ವರದಲ್ಲಿ, ನನ್ನೆಡೆಗಿನ ನಿನ್ನ ಕೊನೆಯ ಮಾತೇನೋ ಅನ್ನುವ ಹಾಗಿನ ದನಿ.. ಸ್ವಿಚ್‌ಆಫ್.

ಒಂದೇ ಒಂದು ಕಾಲ್‌ ಮಾಡಿ ಮಾತಾಡೋ ಮಾರಾಯ. ಏನಾಯಿತೋ ನಿಂಗೆ. ಇಳಿಸಂಜೆ ಹೊತ್ತಲ್ಲಿ ಹೂ ಮುತ್ತನಿತ್ತು, ನನ್ನ ಮುಂಗುರುಳ ಸರಿಸಿ, “ಎಷ್ಟು ಚಂದವಿದ್ದೀಯೆ? ನಿನ್ನ ಗುಳಿಕೆನ್ನೆಯಲ್ಲಿ ಬಿದ್ದು ಸತ್ತೋಗ್ತಿನಿ ಕಣೆ’ ಎಂದು ಸಿಹಿಯಾಗಿ ನಕ್ಕವನೆ.. ಎಲ್ಲಿ ಹೋದೆಯೋ? ಅಲ್ಲೇಲ್ಲೋ ಮರೆಯಾಗಿ ಕೂತವನೆ, ನಿನ್ನ ಮೌನ ನನ್ನನ್ನು ಕೊಲ್ಲುವ ವಿಷ ಕಣೋ.

ಅನುಕ್ಷಣವೂ ಜೀವ ಹಿಂಡುವ ಒಂಟಿತನದ ಕ್ರೂರತೆ ನಿನಗೆ ಗೊತ್ತಿಲ್ಲ. ಲೋ ಹುಡುಗ, ನೀ ಇಲ್ಲವೆಂಬ ಈ ದುಗುಡದ ಕಡಲ ನಾ ಹೇಗೆ ದಾಟಲೋ? ಒಳಗಿನ ದುಃಖದ ಕುದಿಗೆ ನನ್ನ ಕಣ್ಣ ಹನಿಗಳೇ ಆವಿಯಾಗಿ ಹೋಗಿವೆ. ನೀ ಇಲ್ಲದ ಬದುಕನ್ನು ಅರೆಕ್ಷಣವೂ ಕಲ್ಪಿಸಿಕೊಳ್ಳದ ನಾನು, ನಿನ್ನ ಸುಳಿವೇ ಇಲ್ಲದ ಈ ವಾಸ್ತವವನ್ನು ಹೇಗೆ ಎದುರುಗೊಳ್ಳಲಿ ಹೇಳು? ಹಗಲಿರುಳುಗಳ ಪರಿವೇ ಇಲ್ಲದೇ ನಿನ್ನೊಂದಿಗೆ ಬದುಕನ್ನು ಕಳೆಯುತ್ತೇನೆಂಬ ಸುಂದರ, ಸಾವಿರ ಸ್ವಪ್ನಗಳ ಕಂಡವಳು ನಾನು. ಈಗ ರಂಗು ಕಳೆದುಕೊಂಡ ಬದುಕಿನ ಬಣ್ಣಗಳು ಸುಟ್ಟುಹೋಗಿ, ಬರೀ ಹೊಗೆಯಷ್ಟೇ ಉಳಿದಿದೆ. ಉಸಿರುಗಟ್ಟಿಸುವ ಈ ಅಂತರಾಳದ ತಳಮಳವನ್ನು ಹೇಗೆ ಭರಿಸಲಿ ಹೇಳ್ಳೋ ಹುಡುಗ?

ಇನ್ನೆಲ್ಲು ಕಾಣದ ತಲ್ಲೀನತೆ
ನಿನ್ನಲ್ಲಿ ಕಾಣುತಾ ಹೀಗಾಯಿತೆ
ಕೈಯಿಂದ ಜಾರಿತೇನೋ ನನ್ನಯ ಕತೆ

ನೀನು ನನ್ನ ಬದುಕಿನ ಕತೆಗಾರ. ಬರೆಯ ಬಾರೋ ಒಂದು ಸಾಲನ್ನಾದರೂ, ನಿನಗಾಗೇ ಸದಾ ಕಾಯುತ್ತಲೇ ಉಳಿಯುವ ಹೊರತು, ಮತ್ತೂಂದು ಆಸೆಯಿಲ್ಲ ಮನಸಿಗೆ. ಜಗತ್ತು ನನ್ನನ್ನು ಹುಚ್ಚಿ ಅನ್ನುತ್ತದೆ. ಅದು ಮನಸು ಮಾರಿಕೊಂಡ ಜಗತ್ತಿನ ಲೆಕ್ಕಾಚಾರ. ಅದು ಹೃದಯಹೀನರ ಮುಖವಾಡ ಧರಿಸಿದ ಬದುಕಿನ ವ್ಯಾಪಾರ. ಅದೆಲ್ಲಾ ಯಾವತ್ತೂ ನನ್ನನ್ನು ಸೋಕಲಾರದು ಗೆಳೆಯ.

ಕಳೆದುಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!

ನಿನ್ನವಳು
ಅಮ್ಮು ಮಲ್ಲಿಗೆಹಳ್ಳಿ 

ಜೀವ ಮುಳ್ಳೂರು

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.