ಕಾದಿರುವೆ ನಿನಗಾಗಿ ಬರುವೆಯಾ ಹಾಡಾಗಿ..?


Team Udayavani, Aug 21, 2018, 6:00 AM IST

10.jpg

ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ.

ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮನಸ್ಸಿಗೇಕೋ ಮಂಕು ಕವಿದಂತಾಗಿದೆ. ಕೆನ್ನೆಯ ಮೇಲೆ ಕೈಯೂರಿ ಕುಳಿತು, ತೊಟ್ಟಿಕ್ಕುವ ಮಳೆಯ ಹನಿಗಳನ್ನೇ ನೋಡುತ್ತಾ ಕುಳಿತಿದ್ದೆ. ಹೀಗಿದ್ದಾಗಲೇ ನನ್ನ ಕಣ್ಮುಂದೆ ಬಂದಿದ್ದು ನೀನು… ನಿನ್ನೊಂದಿಗೆ ಕಳೆದೆನಲ್ಲ; ಅವೆಲ್ಲಾ ಸುಂದರ ಬಾಲ್ಯದ ನೆನಪುಗಳು, ಜೊತೆ ಕಳೆದ ಸಮಯಗಳು, ಕೂಡಿ ಆಡಿದ ಆಟಗಳು… ಆ ನೆನಪೇ ಒಂದು ಮಧುರ ಭಾವಗೀತೆ. ಆದರೆ ಇಂದು ನೀನೆಲ್ಲೋ, ನಾನೆಲ್ಲೋ. ನನ್ನಿಂದ ಅದೆಷ್ಟೇ ದೂರವಿದ್ದರೂ ಕೂಡ, ನಿನ್ನ ನೆನಪುಗಳು ಆಗಾಗ ಬಂದು ಮನಸಿನ ಕದ ಬಡಿಯುತ್ತವೆ. ಅಂದು ಮಾವಿನ ಮರದಡಿ ಬಿದ್ದಿದ್ದ ಪಕ್ಷಿ ಯಾವುದೆಂದು ತಿಳಿಯಲು, ಅದನ್ನು ಕೋಲಿನಿಂದ ಆ ಕಡೆ ಈ ಕಡೆ ಹೊರಳಾಡಿಸಿ, ಅದು ಸತ್ತ ಕಾಗೆಯೆಂದು ತಿಳಿದಾಗ ಹೊಳೆಗೆ ಹೋಗಿ ತಲೆಯವರೆಗೂ ಮುಳುಗೆದ್ದು ಬಂದಿದ್ದೆ ನೋಡು; ಅದನ್ನಂತೂ ನನ್ನಿಂದ ಮರೆಯಲು ಸಾಧ್ಯವೇ ಇಲ್ಲ. 

ಹೇಗಿದ್ದೀಯಾ ನೀನು? ನನ್ನ ನೆನಪಿದೆಯಾ? ಇಂದಲ್ಲಾ ನಾಳೆ ನಿನ್ನನ್ನು ನೋಡುತ್ತೇನೆ ಎಂಬ ಭರವಸೆ ನನಗಿದೆ. ನಿನಗೂ ಹಾಗನ್ನಿಸಿರಬಹುದು ಅಂತ ಮನಸು ಹೇಳುತ್ತಿದೆ. ಒಂಟಿಯಾಗಿ ಕುಳಿತಾಗಲೆಲ್ಲಾ ಕಣ್ಮುಂದೆ ಬರುವುದು ನಿನ್ನ ನೆನಪುಗಳೇ. ಅದು ಯಾಕೆಂದು ನಾನರಿಯೆ. ಮನದಲ್ಲಿ ಮರೆಯಾಗಿ ಕುಳಿತ ನಿನ್ನ ನೆನಪುಗಳು ಎಂದೂ ಅಳಿಸಿ ಹೋಗುವುದಿಲ್ಲ.

 ದಿನದಿಂದ ದಿನಕ್ಕೆ ಮನಸು ನಿನ್ನದೇ ನೆನಪುಗಳೊಂದಿಗೆ ಚಿಗುರುತ್ತಿದೆ. ಕನಸಲ್ಲಿ ಅದೆಷ್ಟು ಬಾರಿ ಬಂದಿರುವೆಯೋ ಲೆಕ್ಕವೇ ಇಲ್ಲ. ಆದರೆ ಕಣ್ಮುಂದೆ ಮಾತ್ರ ಗೋಚರವಾಗುತ್ತಿಲ್ಲ. ಯಾಕೆ ಹಾಗೆ ಕಾಡುತ್ತಿರುವೆ? ಇದಕ್ಕೆಲ್ಲಾ ಉತ್ತರ ಸಿಗುವುದು ಯಾವಾಗ? ಕೆಲವೊಮ್ಮೆ ನಿನ್ನ ನೆನೆಯುತ್ತಾ ಮಂಕಾಗಿ ಕುಳಿತು ಗೆಳತಿಯರೆದುರು ಅವಮಾನವಾಗಿದೆ. ಕ್ಲಾಸಲ್ಲಿ ಲೆಕ್ಚರರ್‌ ಪಾಠ ಮಾಡುತ್ತಿರುವಾಗಲೂ ನಿನ್ನದೇ ಲೋಕದಲ್ಲಿ ಮುಳುಗಿರುತ್ತೇನೆ. ಇತ್ತೀಚೆಗಂತೂ ನಿನ್ನ ನೆನಪುಗಳ ಕಾಡುವಿಕೆಯಿಂದ ನಿದ್ದೆಗೂ ಕೊರತೆ ಬಂದಿದೆ. ದಿನದ ಕೆಲಸಗಳೂ ಸಾಗುತ್ತಿಲ್ಲ.

ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ. ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿರುವ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಬೇಕೆಂದರೆ ನೀನೇ ಬರಬೇಕು. ಇಷ್ಟು ದಿನ ಕಾಯಿಸಿರುವುದೇ ಸಾಕು. ನನ್ನ ಮನಸ್ಸಿನ ಈ ಮಾತುಗಳನ್ನಾದರೂ ಕೇಳಿ ಆದಷ್ಟು ಬೇಗ ಬಂದು, ನನ್ನ ಗೊಂದಲಗಳಿಗೆ, ಪ್ರಶ್ನೆಗಳಿಗೆ ಉತ್ತರ ನೀಡುವೆಯಾ?

 ಇಂತಿ
 ನಿನಗಾಗಿ ಕಾಯುತ ಕುಳಿತಿರುವ

ಗೀತಾ ಕೆ ಬೈಲಕೊಪ್ಪ

ಟಾಪ್ ನ್ಯೂಸ್

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.