ಮಧ್ಯರಾತ್ರಿ ನಿರಂತರವಾಗಿ ಬಾಗಿಲು ತಟ್ಟುತ್ತಿದ್ದ!


Team Udayavani, Aug 28, 2018, 6:00 AM IST

3.jpg

ಎರಡು ವರ್ಷದ ಹಿಂದಿನ ಘಟನೆ. ಅತ್ತೆ- ಮಾವ ಶಿರಸಿಗೆ ಹೋಗಿದ್ದರು. ಮನೆಯವರು, ಸಂಜೆ ಆಫೀಸಿಗೆ ಹೋದವರು, ಬೆಳಗ್ಗೆ ಬರುವುದಾಗಿ ಹೇಳಿದ್ದರು. ಮನೆಯಲ್ಲಿ ಇದ್ದಿದ್ದು ನಾನು ಮತ್ತು ಮಗಳು ಮಾತ್ರವೇ.

  ರಾತ್ರಿ ಎರಡು ಗಂಟೆ ಸುಮಾರು. ಯಾರೋ ಬಾಗಿಲು ತಟ್ಟುತ್ತಿರುವ ಸದ್ದು. ಮೊದಲೇ ನನಗೆ ಪುಕ್ಕಲುತನ ಜಾಸ್ತಿ. ಎಲ್ಲ ಬಾಗಿಲುಗಳನ್ನು ಭದ್ರಪಡಿಸಿ, ಅದಕ್ಕೆ ಲಾಕ್‌ ಹಾಕಿಯೇ ಮಲಗುತ್ತೇನೆ. ಮನೆಯವರು ಬರುವ ಮುಂಚೆ ಹೇಗಿದ್ದರೂ, ದೂರವಾಣಿ ಕರೆ ಮಾಡಿಯೇ ಬರುತ್ತಾರೆ. ಆದರೆ, ಈಗ ಬಂದು ಬಾಗಿಲು ತಟ್ಟುತ್ತಿರುವುದು ಯಾರಿರಬಹುದು ಎಂಬ ಕುತೂಹಲ, ಆತಂಕ ಹೆಚ್ಚಾಗುತ್ತಿತ್ತು. ಮನೆಯಲ್ಲಿ ನಾದಿನಿ ಮದುವೆಯ ಖರ್ಚಿಗೆಂದು ತಂದಿಟ್ಟ ಹಣಕಾಸು ಬೇರೆ ಜಾಸ್ತಿಯಿತ್ತು.

  ಬರುಬರುತ್ತಾ ಬಾಗಿಲು ಬಡಿದ ಶಬ್ದ ಹೆಚ್ಚಾಗುತ್ತಲೇ, ನನ್ನ ಎದೆ ಬಡಿತವೂ ಜಾಸ್ತಿಯಾಯಿತು. ಏನು ಮಾಡುವುದೆಂದು ತಿಳಿಯದೇ ಅಕ್ಕಪಕ್ಕದ ಮನೆಯವರೆಲ್ಲರಿಗೂ ಫೋನಾಯಿಸಲು ಶುರುಮಾಡಿದೆ. ಗಾಢ ನಿದ್ರೆಯಲ್ಲಿರುವ ಕಾರಣ ಯಾರೂ ಕರೆಯನ್ನು ಸ್ವೀಕರಿಸದೇ ಇದ್ದಿದ್ದರಿಂದ, ಬಹಳ ಭಯವಾಯಿತು. ಹಾಗೆಯೇ ಫೋನಾಯಿಸುತ್ತ ಕುಳಿತಾಗ, ಸನಿಹದ ಮನೆಯ ಅಜಯ್‌ ಬಾಯಾರಿಕೆಯಾಗಿ ನೀರು ಕುಡಿಯಲು ಎದ್ದವನು, ಮೊಬೈಲ್‌ನ ಮೇಲೆ ಕಣ್ಣುಹಾಯಿಸಿದ. ಆತ ವಾಪಸು ನನಗೆ ಕರೆಮಾಡಿ ಧೈರ್ಯ ಹೇಳಿದ. ತನಗೆ ಗೊತ್ತಿರುವ ಪೊಲೀಸರಿಗೆ ಬರುವುದಾಗಿಯೂ ಹೇಳಿದ.

  ಅಜಯ್‌ ಮತ್ತು ಪೋಲಿಸ್‌ ಬರುವವರೆಗೂ ಬಾಗಿಲು ಬಡಿದ ಶಬ್ದ ಜೋರಾಗಿ ಕೇಳಿಸುತ್ತಲೇ ಇತ್ತು. ಬಂದಿರುವನು ಕಳ್ಳನೇ ಆಗಿರಬೇಕು, ಮನೆಯಲ್ಲಿರುವ ಆಭರಣ, ಹಣದ ಸುಳಿವು ಸಿಕ್ಕಿ ಕಳ್ಳರ ಸಮೂಹವೇ ಬಂದಿರಬಹುದು ಎಂಬ ಅನುಮಾನ ಒಂದು ಕಡೆ. ನನ್ನ ಮತ್ತು ಕಳ್ಳರ ನಡುವೆ 2-3 ಬಾಗಿಲುಗಳ ಕೋಟೆಯಿದ್ದರೂ ಕಳ್ಳರಿಗೆ ಅದನ್ನು ಒಡೆದು ಬರಲು ಹೆಚ್ಚೇನೂ ಕಷ್ಟವಿಲ್ಲ. ಭಯದಲ್ಲಿ ನೂರಾರು ಸಂದೇಹಗಳು ನನ್ನ ತಲೆಯನ್ನು ಹೊಕ್ಕುತ್ತಿದ್ದವು.

  ಪೋಲಿಸರು ಬಂದು ಬಾಗಿಲು ಬಡಿಯುತ್ತಿದ್ದವನನ್ನು ಬಂಧಿಸಿದರು. ಅವನ ವಿಚಾರಣೆ ನಡೆಸಿದಾಗ, ಆತ ಕುಡಿದು ಬಂದಿದ್ದ ಸಂಗತಿ ತಿಳಿಯಿತು. ಆದರೆ, ಕೆಲ ಹೊತ್ತಿನವರೆಗೆ ನನ್ನೊಳಗೆ ಭಯ ಹುಟ್ಟಿಸಿದ ಆ ಅಪರಿಚಿತನನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಅಬ್ಟಾ! ಅಂದು ನಮ್ಮನ್ನು ದೇವರೇ ಕಾಪಾಡಿದ್ದ.

ಸಾವಿತ್ರಿ ಶ್ಯಾನಭಾಗ್‌

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.