ಮಧ್ಯರಾತ್ರಿ ನಿರಂತರವಾಗಿ ಬಾಗಿಲು ತಟ್ಟುತ್ತಿದ್ದ!


Team Udayavani, Aug 28, 2018, 6:00 AM IST

3.jpg

ಎರಡು ವರ್ಷದ ಹಿಂದಿನ ಘಟನೆ. ಅತ್ತೆ- ಮಾವ ಶಿರಸಿಗೆ ಹೋಗಿದ್ದರು. ಮನೆಯವರು, ಸಂಜೆ ಆಫೀಸಿಗೆ ಹೋದವರು, ಬೆಳಗ್ಗೆ ಬರುವುದಾಗಿ ಹೇಳಿದ್ದರು. ಮನೆಯಲ್ಲಿ ಇದ್ದಿದ್ದು ನಾನು ಮತ್ತು ಮಗಳು ಮಾತ್ರವೇ.

  ರಾತ್ರಿ ಎರಡು ಗಂಟೆ ಸುಮಾರು. ಯಾರೋ ಬಾಗಿಲು ತಟ್ಟುತ್ತಿರುವ ಸದ್ದು. ಮೊದಲೇ ನನಗೆ ಪುಕ್ಕಲುತನ ಜಾಸ್ತಿ. ಎಲ್ಲ ಬಾಗಿಲುಗಳನ್ನು ಭದ್ರಪಡಿಸಿ, ಅದಕ್ಕೆ ಲಾಕ್‌ ಹಾಕಿಯೇ ಮಲಗುತ್ತೇನೆ. ಮನೆಯವರು ಬರುವ ಮುಂಚೆ ಹೇಗಿದ್ದರೂ, ದೂರವಾಣಿ ಕರೆ ಮಾಡಿಯೇ ಬರುತ್ತಾರೆ. ಆದರೆ, ಈಗ ಬಂದು ಬಾಗಿಲು ತಟ್ಟುತ್ತಿರುವುದು ಯಾರಿರಬಹುದು ಎಂಬ ಕುತೂಹಲ, ಆತಂಕ ಹೆಚ್ಚಾಗುತ್ತಿತ್ತು. ಮನೆಯಲ್ಲಿ ನಾದಿನಿ ಮದುವೆಯ ಖರ್ಚಿಗೆಂದು ತಂದಿಟ್ಟ ಹಣಕಾಸು ಬೇರೆ ಜಾಸ್ತಿಯಿತ್ತು.

  ಬರುಬರುತ್ತಾ ಬಾಗಿಲು ಬಡಿದ ಶಬ್ದ ಹೆಚ್ಚಾಗುತ್ತಲೇ, ನನ್ನ ಎದೆ ಬಡಿತವೂ ಜಾಸ್ತಿಯಾಯಿತು. ಏನು ಮಾಡುವುದೆಂದು ತಿಳಿಯದೇ ಅಕ್ಕಪಕ್ಕದ ಮನೆಯವರೆಲ್ಲರಿಗೂ ಫೋನಾಯಿಸಲು ಶುರುಮಾಡಿದೆ. ಗಾಢ ನಿದ್ರೆಯಲ್ಲಿರುವ ಕಾರಣ ಯಾರೂ ಕರೆಯನ್ನು ಸ್ವೀಕರಿಸದೇ ಇದ್ದಿದ್ದರಿಂದ, ಬಹಳ ಭಯವಾಯಿತು. ಹಾಗೆಯೇ ಫೋನಾಯಿಸುತ್ತ ಕುಳಿತಾಗ, ಸನಿಹದ ಮನೆಯ ಅಜಯ್‌ ಬಾಯಾರಿಕೆಯಾಗಿ ನೀರು ಕುಡಿಯಲು ಎದ್ದವನು, ಮೊಬೈಲ್‌ನ ಮೇಲೆ ಕಣ್ಣುಹಾಯಿಸಿದ. ಆತ ವಾಪಸು ನನಗೆ ಕರೆಮಾಡಿ ಧೈರ್ಯ ಹೇಳಿದ. ತನಗೆ ಗೊತ್ತಿರುವ ಪೊಲೀಸರಿಗೆ ಬರುವುದಾಗಿಯೂ ಹೇಳಿದ.

  ಅಜಯ್‌ ಮತ್ತು ಪೋಲಿಸ್‌ ಬರುವವರೆಗೂ ಬಾಗಿಲು ಬಡಿದ ಶಬ್ದ ಜೋರಾಗಿ ಕೇಳಿಸುತ್ತಲೇ ಇತ್ತು. ಬಂದಿರುವನು ಕಳ್ಳನೇ ಆಗಿರಬೇಕು, ಮನೆಯಲ್ಲಿರುವ ಆಭರಣ, ಹಣದ ಸುಳಿವು ಸಿಕ್ಕಿ ಕಳ್ಳರ ಸಮೂಹವೇ ಬಂದಿರಬಹುದು ಎಂಬ ಅನುಮಾನ ಒಂದು ಕಡೆ. ನನ್ನ ಮತ್ತು ಕಳ್ಳರ ನಡುವೆ 2-3 ಬಾಗಿಲುಗಳ ಕೋಟೆಯಿದ್ದರೂ ಕಳ್ಳರಿಗೆ ಅದನ್ನು ಒಡೆದು ಬರಲು ಹೆಚ್ಚೇನೂ ಕಷ್ಟವಿಲ್ಲ. ಭಯದಲ್ಲಿ ನೂರಾರು ಸಂದೇಹಗಳು ನನ್ನ ತಲೆಯನ್ನು ಹೊಕ್ಕುತ್ತಿದ್ದವು.

  ಪೋಲಿಸರು ಬಂದು ಬಾಗಿಲು ಬಡಿಯುತ್ತಿದ್ದವನನ್ನು ಬಂಧಿಸಿದರು. ಅವನ ವಿಚಾರಣೆ ನಡೆಸಿದಾಗ, ಆತ ಕುಡಿದು ಬಂದಿದ್ದ ಸಂಗತಿ ತಿಳಿಯಿತು. ಆದರೆ, ಕೆಲ ಹೊತ್ತಿನವರೆಗೆ ನನ್ನೊಳಗೆ ಭಯ ಹುಟ್ಟಿಸಿದ ಆ ಅಪರಿಚಿತನನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಅಬ್ಟಾ! ಅಂದು ನಮ್ಮನ್ನು ದೇವರೇ ಕಾಪಾಡಿದ್ದ.

ಸಾವಿತ್ರಿ ಶ್ಯಾನಭಾಗ್‌

ಟಾಪ್ ನ್ಯೂಸ್

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ

Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್‌ ನಾಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.