ಕ(ಹೆ)ಣ್ಣೇ, ನೀ ಮಾತಾಡು…


Team Udayavani, Aug 28, 2018, 6:00 AM IST

10.jpg

ನನಗದು ಎರಡನೇ ವರ್ಷದ ಎಂಎ ತರಗತಿಯ ಮೊದಲ ದಿನ. ಜಿಟಿ ಜಿಟಿ ಸುರಿಯುವ ಮಳೆ. ಕ್ಯಾಂಪಸ್‌ ತುಂಬೆಲ್ಲಾ ಹಚ್ಚ ಹಸಿರಿನ ಸ್ವಚ್ಛಂದ ಗಾಳಿಯ ನಿನಾದ. ಮನಸ್ಸು ಅಂದೇಕೋ ತುಂಬಾ ಖುಷಿಯಲ್ಲಿತ್ತು. ತರಗತಿ ಪ್ರಾರಂಭವಾಗಿ ಎರಡು ದಿನಗಳು ಮಾತ್ರ ಕಳೆದಿದ್ದರಿಂದ ನನ್ನ ತರ್ಲೆ ಗೆಳೆಯರು ಬಂದಿರಲಿಲ್ಲ. ಮಧ್ಯಾಹ್ನ ತರಗತಿ ಮುಗಿಸಿ ಸೀದಾ ಕ್ಯಾಂಟೀನ್‌ ಕಡೆ ನಡೆದೆ. ಎರಡು ಮೂರು ಗುಟ್ಕು ಚಹಾ ಹೀರಿದ್ದೆ ಅನ್ಸುತ್ತೆ. ಯಾರೋ ಕ್ಯಾಂಟೀನ್‌ ಕ್ಯಾಶಿಯರ್‌ ಜಗ್ಗಣ್ಣನ ಜೊತೆ ಜೊರಾಗಿ ನಗ್ತಾ ಮಾತನಾಡೋದು ಕೇಳಿಸಿತು. ಯಾರೆಂದು ಒಮ್ಮೆ ತಿರುಗಿ ನೋಡಿದೆ. ಒಂದು ಕ್ಷಣ ಕಣ್‌ ಮುಚ್ಚಬೇಕೆನಿಸಲಿಲ್ಲ. ಯಾಕಂದ್ರೆ, ಕ್ಯಾಂಪಸ್‌ನಲ್ಲಿ ಉದ್ದ ಜಡೆಯ ಆ ಸುಂದರಿಯನ್ನ ನೋಡಿದ್ದೆ. 

ಅಬ್ಬಬ್ಟಾ ಅವಳದೇನು ಆ ನಗು, ಬಳ್ಳಿಯ ಸುರುಳಿಯಂತೆ ಜೋಲಾಡುತ್ತಿದ್ದ ಮುಂಗುರುಳಿಗೆ ಗಳಿಗೆಗೊಮ್ಮೆ ಬೆರಳಾಡಿಸುತ್ತಿದ್ದನ್ನು ಕಂಡರೆ ಹೃದಯಕ್ಕೆ ಕಚಗುಳಿ ಇಟ್ಟಂತಾಗುತ್ತಿತ್ತು.. ಸಂಪಿಗೆ ಮೂಗಿಗೆ ರಿಂಗ್‌ ಹಾಕಿದ್ದಳು. ಪಟ ಪಟ ಮಾತಾಡುವ ಅವಳ ಆ ತುಟಿಗಳು ಒಂದುವೇಳೆ ಮರದಿಂದ ಮಾಡಿದ್ದವಾಗಿದ್ದರೆ ನಿಜವಾಗಿಯೂ ಒಡೆದೊಗುತ್ತಿದ್ದವು. ಮಿನುಗುವ ಅವಳ ಕಣ್ಣನ್ನೇ ನೋಡುವ ಆಸೆಯಾಯ್ತು. ಆದರೆ ಪರಿಚಯವಿಲ್ಲದ ಬೆಡಗಿಯನ್ನು ಹೇಗೆ ಮಾತನಾಡಿಸಲಿ? ಇರಲಿ, ಊರಿಗೆ ಬಂದವಳು ನೀರಿಗೆ ಬರಲ್ವಾ? ಒಂದಲ್ಲಾ ಒಂದು ದಿನ ನನಗೆ ಪರಿಚಯವಾಗ್ತಾಳೆ ಅಂದುಕೊಂಡು ಹಾಸ್ಟೆಲ… ಕಡೆ ಹೆಜ್ಜೆ ಹಾಕಿದೆ… 

ನಾಲ್ಕು ದಿನ ಕಳೆದವು. ಖಾಲಿಯಾಗಿದ್ದ ಕ್ಯಾಂಪಸ್‌ ಬಣ್ಣ ಬಣ್ಣದ ಪತಂಗಗಳಿಂದ ಕಂಗೊಳಿಸುತ್ತಿತ್ತು. ಆದರೆ ಜಿಟಿಜಿಟಿ ಮಳೆ ಮಾತ್ರ ನಿಂತಿರಲಿಲ್ಲ. ಎಲ್ಲಿ ನೋಡಿದರೂ ಛತ್ರಿಗಳದ್ದೇ ಹಾವಳಿ. ಮಧ್ಯಾಹ್ನ ತರಗತಿ ಮುಗಿಸಿಕೊಂಡು ಹಾಸ್ಟೆಲ್‌ಗೆ ಹೋಗುವಾಗ ಐದಾರು ಹುಡುಗಿಯರು ಛತ್ರಿ ಹಿಡಿದುಕೊಂಡು ನಡೆಯುತ್ತಿದ್ದರು. ನಾವು ಸೆಕೆಂಡ್‌ ಇಯರ್‌ ಆಗಿದ್ದರಿಂದ ಸೀನಿಯಾರಿಟಿ ಮೆರೆಯಬೇಕೆಂಬ ಧಿಮಾಕಿನಿಂದ ಆ ಹುಡುಗಿಯರನ್ನು ನೋಡುತ್ತ “ಏನೋ ಮಗ ನಮ್‌ ಕ್ಯಾಂಪಸ್‌ ತುಂಬ ಬರೀ ಛತ್ರಿಗಳೇ ಇವೆ’ ಎಂದೆ. ಆ ಮಾತು ಕೇಳಿದ್ದೇ ತಡ; ಸೀದಾ ನಡೆಯುತ್ತಿದ್ದ ಅಮ್ಮಣ್ಣಿಯರು ಸರಕ್ಕನೆ ತಿರುಗಿದರು. ಏನ್‌ ಆಶ್ಚರ್ಯ! ಕ್ಯಾಂಟೀನ್‌ನಲ್ಲಿ ಕಂಡ ಬೆಡಗಿ ಆ ಹುಡುಗಿಯರ ಗುಂಪಲ್ಲಿದ್ದಳು. ನನ್ನ ನೋಡಿ ಹೂಂ, ಯಾಕೆ? ನಿಮಗೊಂದು ಛತ್ರಿ ಬೇಕಾ?… ಎಂದು ಕೇಳಿ ನಸುನಗುತ್ತ ಹೆಜ್ಜೆ ಮುಂದಿಟ್ಟಳು.

ಅವಳು ಕ್ಯಾಂಪಸ್‌ನ ಲೈಬ್ರರಿ, ಕ್ಯಾಂಟೀನ್‌, ಮಂಡಕ್ಕಿ ಅಂಗಡಿ, ಪಂಪವನ, ಕುವೆಂಪು ಸ್ಟಾಚ್ಯು… ಇಲ್ಲೆಲ್ಲ ಎದುರಾಗುತ್ತಾಳೆ. ನನ್ನನ್ನು ನೋಡಿ ಗೆಳತಿಯರ ಜೊತೆ ಅದೇನನ್ನೋ ಹೇಳುತ್ತಾ ನಗುತ್ತಾಳೆ.ಆದರೆ ನನ್ನ ಜೊತೆ ಒಂದು ಮಾತೂ ಆಡದೆ ಮುಂದೆ ಸಾಗ್ತಾಳೆ. ಅಯ್ಯೋ ಮಾರಾಯ್ತಿ, ನಿನಗೇನಾಯಿತು.. ಏಕೆ ನನ್ನ ನೋಡಿ ನಗ್ತಿ? ಎಂದು ಕೇಳಬೇಕೆನಿಸುತ್ತದೆ. ಆದರೆ ನಿಮಗ್ಯಾಕ್ರಿ ಅವೆಲ್ಲ ಎಂಬ ಉತ್ತರ ಬಂದ್ರೆ ಕಷ್ಟ ಆಗುತ್ತೆ ಅಲ್ವಾ? ಆದ್ದರಿಂದ ಇಲ್ಲಿಯವರಿಗೂ ಕೇಳಿಲ್ಲ. ಏನು ಮಾಡಲಿ, ಕೊಂಚ ಧೈರ್ಯ ಕಡಿಮೆ ನನಗೆ.. 

ಗಿರೀಶ ಗಂಗನಹಳ್ಳಿ

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.