ಚಿನ್ಮಯಿ ಕೀ ಬಾತ್‌


Team Udayavani, Sep 4, 2018, 6:00 AM IST

11.jpg

“ನಮಸ್ಕಾರ ಪ್ರಧಾನಿಯವರೇ, ನನ್ನ ಹೆಸರು ಚಿನ್ಮಯಿ…’ ಎಂದು ಈ ಹುಡುಗಿ “ಮನ್‌ ಕೀ ಬಾತ್‌’ನಲ್ಲಿ ಆಡಿದ ಮಾತುಗಳು ಸಾಕಷ್ಟು ಸಂಚಲನ ಸೃಷ್ಟಿಸಿತು. ಯಾಕಂದ್ರೆ, ಅವತ್ತು ಈಕೆ ಮಾತಾಡಿದ್ದು ಸಂಸ್ಕೃತದಲ್ಲಿ. ಅದಕ್ಕೆ ಪ್ರಧಾನಿ ಮೋದಿಯವರೂ ಒಂದೆರಡು ಸಾಲು ಸಂಸ್ಕೃತ ಮಾತಾಡಿದರು. ಇಡೀ ದೇಶವೇ ಇಂಗ್ಲಿಷ್‌ನ ಹಿಂದೆ ಬಿದ್ದಿರುವಾಗ, ಬೆಂಗಳೂರಿನ ಚಿನ್ಮಯಿಯ ಮಾತೃಭಾಷೆ ಸಂಸ್ಕೃತ. ಅವರ ಮನೆಯಲ್ಲಿ ಮಾತು, ಕತೆ, ನಗು, ಕೀಟಲೆ ಎಲ್ಲವೂ ಸಂಸ್ಕೃತದಲ್ಲೇ ನಡೆಯುತ್ತದಂತೆ. ತನ್ನ ಮಾತೃಭಾಷೆ ಸಂಸ್ಕೃತದ ಬಗ್ಗೆ ಚಿನ್ಮಯಿ ಇಲ್ಲಿ ಮಾತಾಡಿದ್ದಾರೆ…

1. ಪ್ರಧಾನಿ ಮೋದಿಯವರ ಜೊತೆ ಸಂಸ್ಕೃತದಲ್ಲಿ ಮಾತಾಡಿದ ಕ್ಷಣದ ಬಗ್ಗೆ ಹೇಳಿ…
ನಾನು ಪ್ರಧಾನಿಯವರ “ಮನ್‌ ಕೀ ಬಾತ್‌’ ಅನ್ನು ಆಗಾಗ ಕೇಳುತ್ತೇನೆ. ಆಗಸ್ಟ್‌ 26ರ ಕಾರ್ಯಕ್ರಮಕ್ಕೆ ಅಪ್ಪ ಕರೆ ಮಾಡಲು ಪ್ರಯತ್ನಿಸ್ತಾ ಇದ್ದರು. ಕೊನೆಗೂ ಅವರಿಗೆ ಲೈನ್‌ ಸಿಕ್ಕಿತು. ಅಪ್ಪ ತಕ್ಷಣ ನನಗೆ ಫೋನ್‌ ಕೊಟ್ಟು, “ನೀನು ಮಾತಾಡು’ ಅಂದರು. ಆಗ ಗಾಬರಿ, ಆಶ್ಚರ್ಯ, ಖುಷಿ ಎಲ್ಲಾ ಒಟ್ಟಿಗೇ ಆಯ್ತು. ಪ್ರಶ್ನೆ ಕೇಳುವಾಗಲೂ ನನ್ನ ಧ್ವನಿ ನಡುಗುತ್ತಿತ್ತು. ಅದು ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. 

2. ನೀವು ಪ್ರಧಾನಿಯವರಿಗೆ ಯಾವ ಪ್ರಶ್ನೆ ಕೇಳಿದಿರಿ?
ಆವತ್ತು (ಆ.26) ಸಂಸ್ಕೃತ ದಿನಾಚರಣೆ ಇತ್ತು. ನಾನು ಪ್ರಧಾನಿಯವರ ಬಳಿ, “ಸಂಸ್ಕೃತ ಬಹಳ ಸರಳ ಅಂತ ನಾನು ಭಾವಿಸಿದ್ದೇನೆ. ನನ್ನ ಮಾತೃಭಾಷೆ ಸಂಸ್ಕೃತವೇ. ಸಂಸ್ಕೃತ ದಿನಾಚರಣೆಯ ಈ ಸಂದರ್ಭದಲ್ಲಿ ಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಸಂಸ್ಕೃತದಲ್ಲಿಯೇ ಪ್ರಶ್ನೆ ಕೇಳಿದೆ. 30 ಸೆಕೆಂಡ್‌ಗಳ ಆ ಪ್ರಶ್ನೆಗೆ ಅವರು ಮೂರೂವರೆ ನಿಮಿಷ ಉತ್ತರ ಕೊಟ್ಟರು. ಅದರಲ್ಲೂ ಒಂದೆರಡು ಸಾಲುಗಳನ್ನು ಸಂಸ್ಕೃತದಲ್ಲಿಯೇ ಮಾತಾಡಿದ್ದರಿಂದ ಬಹಳ ಖುಷಿಯಾಯ್ತು. 

3. ಅದೇ ಪ್ರಶ್ನೆಯನ್ನು ಕೇಳಿದ್ದೇಕೆ?
ಹೆಚ್ಚಿನವರಿಗೆ ಆವತ್ತು ಅಂದರೆ, ಶ್ರಾವಣ ಪೌರ್ಣಮಿಯಂದು ಸಂಸ್ಕೃತ ದಿನ ಆಚರಿಸುತ್ತಾರೆ ಅಂತ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ, ಎಲ್ಲರೂ ಸಂಸ್ಕೃತ ಹಳೆಯ  ಭಾಷೆ, ಅದನ್ನು ಕಲಿತರೆ ಏನೂ ಪ್ರಯೋಜನವಿಲ್ಲ ಅಂತ ಭಾವಿಸಿದ್ದಾರೆ. ಆ ಬಗ್ಗೆ ಪ್ರಧಾನಿಯವರ ಅಭಿಪ್ರಾಯ ಏನು ಅಂತ ತಿಳಿದುಕೊಳ್ಳುವ ಕುತೂಹಲವಿತ್ತು. ಹಾಗಾಗಿ ಆ ಪ್ರಶ್ನೆ ಕೇಳಿದೆ.

4. ಮನೆಯಲ್ಲಿ ನೀವು ಮಾತಾಡುವ ಭಾಷೆ ಯಾವುದು?
ನಮ್ಮ ಮನೆಯಲ್ಲಿ ಎಲ್ಲರೂ ಸಂಸ್ಕೃತವನ್ನೇ ಮಾತಾಡುತ್ತೇವೆ. ನನಗೆ ಸಂಸ್ಕೃತವೇ ಮಾತೃಭಾಷೆ. ಬೇರೆಯವರು ಹೇಗೆ ಕನ್ನಡ, ಇಂಗ್ಲಿಷ್‌ ಮಾತಾಡುತ್ತಾರೋ ಅಷ್ಟೇ ಸರಾಗವಾಗಿ ನಾವು ಸಂಸ್ಕೃತ ಮಾತಾಡುತ್ತೇವೆ. ಅಪ್ಪ-ಅಮ್ಮ ಇಬ್ಬರೂ ಮೂಲತಃ ಶೃಂಗೇರಿಯವರು. ಅಪ್ಪ 8ನೇ ತರಗತಿಯಲ್ಲಿದ್ದಾಗಲೇ “ಸಂಸ್ಕೃತ ಭಾರತಿ’ ಸಂಸ್ಥೆ ಸೇರಿದರು. ಮದುವೆಯ ನಂತರ ಅಮ್ಮನೂ ಸಂಸ್ಕೃತ ಕಲಿತುಕೊಂಡರು. ಈಗ ಅಮ್ಮ, ಸಂಸ್ಕೃತ ವಿಕಿಪೀಡಿಯದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಇಂಗ್ಲಿಷ್‌, ಹಿಂದಿಯನ್ನು ದೆಹಲಿಯಲ್ಲಿದ್ದಾಗ ಕಲಿತೆ. ಕನ್ನಡ ಕಲಿತಿದ್ದು ಐದನೇ ತರಗತಿಯಲ್ಲಿ. 

5.  ಸಂಸ್ಕೃತ ಕಲಿಯುವುದು ಕಷ್ಟವೇ?
ನನ್ನ ಮಾತೃಭಾಷೆಯೇ ಸಂಸ್ಕೃತವಾಗಿರೋದ್ರಿಂದ ನನಗದು ಕಷ್ಟ ಅನ್ನಿಸಲೇ ಇಲ್ಲ. ಬೇರೆಯವರಿಗೂ ಅದು ಕಷ್ಟವಾಗಲಾರದು. ಕನ್ನಡ, ಇಂಗ್ಲಿಷ್‌, ಹಿಂದಿಯ ಬಹಳಷ್ಟು ಪದಗಳ ಮೂಲ ಸಂಸ್ಕೃತವೇ ಆಗಿದೆ. ಇಂಗ್ಲಿಷ್‌ನ ಫಾದರ್‌ ಪದಕ್ಕೆ ಮೂಲ, ಸಂಸ್ಕೃತದ ಪಿತೃ, ಮದರ್‌ ಪದ ಬಂದದ್ದು ಮಾತೃ ಎಂಬ ಪದದಿಂದ. ಹಾಗಾಗಿ, ಕಲಿಯುವುದು ಕಷ್ಟವಾಗಲಾರದು. ಆಸಕ್ತರಿಗೆ ಸಂಸ್ಕೃತ ಭಾರತಿಯವರೇ ಉಚಿತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಾರೆ.  

6. ನೀವು ಯಾವ ತರಗತಿಯಲ್ಲಿದ್ದೀರಿ? ಮುಂದೆ ಸಂಸ್ಕೃತದಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಇಚ್ಛೆಯಿದೆಯಾ?
ನಾನೀಗ ಗಿರಿನಗರದ ವಿಜಯ ಭಾರತಿ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿದ್ದೇನೆ. ಮುಂದೆ ಏನು ಓದಬೇಕು ಅಂತ ಈಗಲೇ ನಿರ್ಧರಿಸಿಲ್ಲ. 

7. ನಿಮ್ಮ ಹವ್ಯಾಸಗಳೇನು?
ನನಗೆ ಸಂಗೀತ, ಚಿತ್ರಕಲೆ, ಪುಸ್ತಕ ಓದುವುದರಲ್ಲಿ ಆಸಕ್ತಿ ಇದೆ. ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಕಂಠಪಾಠ ಮಾಡಿದ್ದೇನೆ. 

“ಭಾರತದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮಾತೃಭಾಷೆ ಸಂಸ್ಕೃತ. ಸುಮಾರು ಗ್ರಾಮಗಳಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಅಲ್ಲಿ ಅಂಗಡಿ, ಶಾಲೆ, ಆಟೋ ಸ್ಟಾಂಡ್‌ ಹೀಗೆ ಎಲ್ಲಾ ಕಡೆ ಸಂಸ್ಕೃತವನ್ನೇ ಮಾತಾಡುತ್ತಾರೆ. ಶಿವಮೊಗ್ಗ ಜಿಲ್ಲೆಯ ಮತ್ತೂರು ಹಾಗೂ ಅದಕ್ಕೆ ಸಮೀಪದ ಹೊಸಹಳ್ಳಿ, ಮಧ್ಯಪ್ರದೇಶದ ಝಿರಿ, ಮೋಹದ್‌, ಬಾಗುÌರ್‌ ಎಂಬ ಹಳ್ಳಿಗಳು, ಒರಿಸ್ಸಾದ ಸಸಾನ, ರಾಜಸ್ಥಾನದ ಗನೋಡದಲ್ಲಿ ಸರ್ವವೂ ಸಂಸ್ಕೃತಮಯ. ಸಂಸ್ಕೃತ ಓದುವುದು ವ್ಯರ್ಥ ಎಂದು ಹಲವರು ಹೇಳುತ್ತಾರೆ. ಆದರೆ, ಸಂಸ್ಕೃತ ಓದಿದವರಿಗೂ ಸಾಕಷ್ಟು ಉದ್ಯೋಗಾವಕಾಶಗಳಿವೆ. ನಮ್ಮ ಸಂಸ್ಕೃತ ಭಾರತಿ ಸಂಸ್ಥೆಯೇ 4800 ಶಾಖೆಗಳನ್ನು ಹೊಂದಿದ್ದು, 39ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಮೆರಿಕದ 40ಕ್ಕೂ ಹೆಚ್ಚು ನಗರಗಳಲ್ಲಿ ಶಾಖೆಗಳಿವೆ. ದೇಶ- ವಿದೇಶಗಳಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಅಕಾಡೆಮಿಗಳಿವೆ. ಹಾಗಾಗಿ ಸಂಸ್ಕೃತ ಅಧ್ಯಯನ ಮಾಡುವುದು ಉದ್ಯೋಗದ ದೃಷ್ಟಿಯಿಂದಲೂ ವ್ಯರ್ಥವಲ್ಲ’
– ಲಕ್ಷ್ಮೀನಾರಾಯಣ್‌, ಚಿನ್ಮಯಿ ತಂದೆ

ಸಂಸ್ಕೃತ ಕಲಿಯಲು ಸುಲಭದ ಹಾದಿಗಳು
– “ಸಂಸ್ಕೃತ ಭಾರತಿ’ಯ ಉಚಿತ ಸಂಸ್ಕೃತ ಶಿಬಿರಗಳು
– ಸಂಸ್ಕೃತ ಕಲಿಯಲು ದೂರಶಿಕ್ಷಣ (ಕರೆಸ್ಪಾಂಡೆನ್ಸ್‌ ಕೋರ್ಸ್‌) ಇದೆ
– ಸಂಸ್ಕೃತ ಪುಸ್ತಕಗಳು
– ಸ್ಮಾರ್ಟ್‌ಫೋನ್‌ನಲ್ಲಿಯೂ ದೇವನಾಗರಿ ಲಿಪಿ ಲಭ್ಯ
– ಇಂಟರ್ನೆಟ್‌ನಲ್ಲಿ ಸಂಸ್ಕೃತ ಗ್ರಂಥಗಳ ಜಾಡು ಹಿಡಿಯಿರಿ

ಸಂದರ್ಶನ: ಪ್ರಿಯಾಂಕ ಎನ್‌.

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.