ಪ್ರಿನ್ಸಿಪಾಲರ ಕೈ ಕಾಲಿಗೆ ಬಿದ್ದು…


Team Udayavani, Jun 27, 2017, 3:45 AM IST

JOJSH-1.jpg

ಪದವಿ ಅಭ್ಯಾಸ ಮಾಡುತ್ತಿದ್ದಾಗ ನಮ್ಮದು ಉಢಾಳರ ಗುಂಪು. ಆ ಗುಂಪಿನಲ್ಲಿ ನಾನೂ ಒಬ್ಬನಾಗಿದ್ದೆ. ಪದವಿಯಲ್ಲಿ ಬರುವ ಇಂಟರ್ನಲ್‌ ಎಕ್ಸಾಮ್ಸ್‌ ದಿನವಷ್ಟೇ ನನಗೆ, ಗೆಳತಿ ಶ್ವೇತಾ ನೆನಪಾಗುತ್ತಿದ್ದಳು.

ನಮ್ಮ ಗುಂಪಿನ ಹುಡುಗರೆಲ್ಲಾ ಸೀರಿಯಸ್‌ ಆಗಿ ಓದಲು ಪ್ರಾರಂಭಿಸಿದರೆ, ನಾನು ಪರೀಕ್ಷೆಯ ಹಿಂದಿನ ದಿನ ಇಂಪಾರ್ಟೆಂಟ್‌ ಪಾಯಿಂಟ್‌ಗಳನ್ನು ಸಣ್ಣ ಸಣ್ಣ ಅಕ್ಷರದಲ್ಲಿ ಚಿಕ್ಕ- ಚಿಕ್ಕ ಚೀಟಿಗಳಲ್ಲಿ ಬರೆಯುವುದರಲ್ಲಿ ಮಗ್ನನಾಗಿರುತ್ತಿದ್ದೆ. ಮರುದಿನ ಆ ಚೀಟಿಗಳು ಕೈ ಹಿಡಿಯುತ್ತವೆ ಎಂದು.

ಇಂಟರ್ನಲ್ಸ್‌ನಲ್ಲಿ ಬೆಂಚಿಗೆ ಇಬ್ಬರನ್ನು ಕೂರಿಸುತ್ತಿದ್ದರು. ನನ್ನ ಪಕ್ಕದಲ್ಲಿ ಕೂರುತ್ತಿದ್ದವಳೇ ಶ್ವೇತಾ. ಅವಳು ಕೂಡಾ ನನ್ನ ಹಾಗೆಯೇ ಪೆದ್ದಿ! ನನಗೂ ಅವಳಿಗೂ ಇದ್ದ ವ್ಯತ್ಯಾಸವೆಂದರೆ ಅವಳು ಪರೀಕ್ಷೆಗೆ ಕಾಪಿ ಚೀಟಿಗಳನ್ನು ತರುತ್ತಿರಲಿಲ್ಲ. ಮನಸ್ಸಿಗೆ ಬಂದದ್ದನ್ನು ಬರೆಯುತ್ತಿದ್ದಳು. ಹಾಗೆ ಬೇಕಾಬಿಟ್ಟಿ ಬರೆದೂ ಇದುವರೆಗಿನ ಪರೀಕ್ಷೆಗಳನ್ನು ಹೇಗೆ ಪಾಸು ಮಾಡಿದ್ದಳ್ಳೋ ನನಗಂತೂ ಗೊತ್ತಿಲ್ಲ! ನಾನು ದಡ್ಡ ಶಿಖಾಮಣಿ. ಪರೀಕ್ಷೆ ಬರೆಯಲು ಕಾಪಿಚೀಟಿ ಬಿಟ್ಟರೆ ಬೇರೆ ಯಾವುದೇ ಮಾರ್ಗ ನನಗೆ ಗೊತ್ತಿಲ್ಲ. ಅದೊಮ್ಮೆ ನನ್ನಲ್ಲಿದ್ದ ಕಾಪಿಚೀಟಿಗಳನ್ನು ನೋಡಿ ಬರೆಯಲು ಶುರು ಮಾಡಿದೆ. ಪಾಪ, ಅವಳಿಗೂ ಆಸೆಯಾಯಿತು ಅಂತ ಕಾಣುತ್ತೆ. ಅವಳು ನನ್ನ ಪೇಪರ್‌ ನೋಡಿಕೊಂಡು ಬರೆಯಲು ಪ್ರಾರಂಭಿಸಿದಳು. ಅಂದಿನಿಂದಲೇ ನಾವು ಸಮಾನ ಚಿಂತನೆ, ಯೋಚನೆಯ ಫ್ರೆಂಡ್ಸ್‌ ಆದೆವು! ಅಂದಿನಿಂದ, ನಾನು ಕಾಪಿ ಚೀಟಿಗಳನ್ನು ಬರೆದು ಅವಳಿಗೆ ಕೊಡುತ್ತಿದ್ದೆ.

ಅವಳು ಕಾಪಿ ಚೀಟಿಗಳನ್ನು ವೇಲ್‌ ಅಡಿ ಮುಚ್ಚಿಟ್ಟು ಯಾರಿಗೂ ಕಾಣದಂತೆ ಸರಿಸಿ ಸರಿಸಿ ಬರೆಯಲು ಶುರು ಮಾಡುತ್ತಿದ್ದಳು. ನಾನು, ಅವಳೇನು ಬರೀತಾಳ್ಳೋ ಅದನ್ನೇ ಕಾಪಿ ಮಾಡಲು ಶುರುಮಾಡಿದೆ. ಅವಳು ಗೀಟು ಹೊಡೆದರೆ ನಾನೂ ಗೀಟು ಹಾಕುತ್ತಿದ್ದೆ. ಅವಳು ನನ್ನ ಕಾಪಿ ಚೀಟಿ ನೋಡಿ ಬರೆಯುತ್ತಿದ್ದುದನ್ನು ಕಂಡು ನನಗೂ ಒಂದು ಥರ ಹೆಮ್ಮೆ. ಅದೊಮ್ಮೆ, ನಮ್ಮ ನಕಲು ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಅನುಮಾನಗೊಂಡ ಅಧ್ಯಾಪಕರು ನಮ್ಮನ್ನು ಎದ್ದು ನಿಲ್ಲಲು ಹೇಳಿದರು. ಅವಳು ಗಡಗಡ ನಡುಗುತ್ತಾ ಎದ್ದು ನಿಂತಳು. ಆ ರಭಸಕ್ಕೆ ವೇಲ್‌ ಕೆಳಗಿದ್ದ ಕಾಪಿ ಚೀಟಿಗಳು ಹಾರಿ ನೆಲದ ಮೇಲೆ ಬಿದ್ದವು. ಅಧ್ಯಾಪಕರು ತಕ್ಷಣವೇ ನಮ್ಮಿಬ್ಬರ ಪೇಪರ್‌ ಕಿತ್ತುಕೊಂಡು, ಪ್ರಿನ್ಸಿಪಾಲ್‌ ಹತ್ತಿರ ಕರೆದುಕೊಂಡು ಹೋಗಿ, ನಡೆದಿದ್ದನ್ನೆಲ್ಲಾ ಹೇಳಿದರು. ಕೋಪಗೊಂಡ ಪ್ರಿನ್ಸಿಪಾಲರು “ಇವರಿಗೆ ಮುಂದಿನ ಎಕ್ಸಾಮ್‌ಗೆ ಹಾಲ್‌ಟಿಕೆಟ್‌ ಕೊಡಬೇಡಿ’ ಗದರಿಸಿ ಕಳುಹಿಸಿದರು. ನಾವು ಪೆಚ್ಚುಮೋರೆ ಹಾಕಿಕೊಂಡು ಹೊರಗಡೆ ಬಂದಿದೆ. ಕೆಲವು ದಿನಗಳ ನಂತರ ಪ್ರಿನ್ಸಿಪಾಲರ ಕೈ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹಾಲ್‌ಟಿಕೆಟ್‌ ಪಡೆದುಕೊಂಡು ಪರೀಕ್ಷೆ ಬರೆದೆವು.

ಬಸವರಾಜ ಕೊಪ್ಪದ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.