ಪ್ರಿನ್ಸಿಪಾಲರ ಕೈ ಕಾಲಿಗೆ ಬಿದ್ದು…


Team Udayavani, Jun 27, 2017, 3:45 AM IST

JOJSH-1.jpg

ಪದವಿ ಅಭ್ಯಾಸ ಮಾಡುತ್ತಿದ್ದಾಗ ನಮ್ಮದು ಉಢಾಳರ ಗುಂಪು. ಆ ಗುಂಪಿನಲ್ಲಿ ನಾನೂ ಒಬ್ಬನಾಗಿದ್ದೆ. ಪದವಿಯಲ್ಲಿ ಬರುವ ಇಂಟರ್ನಲ್‌ ಎಕ್ಸಾಮ್ಸ್‌ ದಿನವಷ್ಟೇ ನನಗೆ, ಗೆಳತಿ ಶ್ವೇತಾ ನೆನಪಾಗುತ್ತಿದ್ದಳು.

ನಮ್ಮ ಗುಂಪಿನ ಹುಡುಗರೆಲ್ಲಾ ಸೀರಿಯಸ್‌ ಆಗಿ ಓದಲು ಪ್ರಾರಂಭಿಸಿದರೆ, ನಾನು ಪರೀಕ್ಷೆಯ ಹಿಂದಿನ ದಿನ ಇಂಪಾರ್ಟೆಂಟ್‌ ಪಾಯಿಂಟ್‌ಗಳನ್ನು ಸಣ್ಣ ಸಣ್ಣ ಅಕ್ಷರದಲ್ಲಿ ಚಿಕ್ಕ- ಚಿಕ್ಕ ಚೀಟಿಗಳಲ್ಲಿ ಬರೆಯುವುದರಲ್ಲಿ ಮಗ್ನನಾಗಿರುತ್ತಿದ್ದೆ. ಮರುದಿನ ಆ ಚೀಟಿಗಳು ಕೈ ಹಿಡಿಯುತ್ತವೆ ಎಂದು.

ಇಂಟರ್ನಲ್ಸ್‌ನಲ್ಲಿ ಬೆಂಚಿಗೆ ಇಬ್ಬರನ್ನು ಕೂರಿಸುತ್ತಿದ್ದರು. ನನ್ನ ಪಕ್ಕದಲ್ಲಿ ಕೂರುತ್ತಿದ್ದವಳೇ ಶ್ವೇತಾ. ಅವಳು ಕೂಡಾ ನನ್ನ ಹಾಗೆಯೇ ಪೆದ್ದಿ! ನನಗೂ ಅವಳಿಗೂ ಇದ್ದ ವ್ಯತ್ಯಾಸವೆಂದರೆ ಅವಳು ಪರೀಕ್ಷೆಗೆ ಕಾಪಿ ಚೀಟಿಗಳನ್ನು ತರುತ್ತಿರಲಿಲ್ಲ. ಮನಸ್ಸಿಗೆ ಬಂದದ್ದನ್ನು ಬರೆಯುತ್ತಿದ್ದಳು. ಹಾಗೆ ಬೇಕಾಬಿಟ್ಟಿ ಬರೆದೂ ಇದುವರೆಗಿನ ಪರೀಕ್ಷೆಗಳನ್ನು ಹೇಗೆ ಪಾಸು ಮಾಡಿದ್ದಳ್ಳೋ ನನಗಂತೂ ಗೊತ್ತಿಲ್ಲ! ನಾನು ದಡ್ಡ ಶಿಖಾಮಣಿ. ಪರೀಕ್ಷೆ ಬರೆಯಲು ಕಾಪಿಚೀಟಿ ಬಿಟ್ಟರೆ ಬೇರೆ ಯಾವುದೇ ಮಾರ್ಗ ನನಗೆ ಗೊತ್ತಿಲ್ಲ. ಅದೊಮ್ಮೆ ನನ್ನಲ್ಲಿದ್ದ ಕಾಪಿಚೀಟಿಗಳನ್ನು ನೋಡಿ ಬರೆಯಲು ಶುರು ಮಾಡಿದೆ. ಪಾಪ, ಅವಳಿಗೂ ಆಸೆಯಾಯಿತು ಅಂತ ಕಾಣುತ್ತೆ. ಅವಳು ನನ್ನ ಪೇಪರ್‌ ನೋಡಿಕೊಂಡು ಬರೆಯಲು ಪ್ರಾರಂಭಿಸಿದಳು. ಅಂದಿನಿಂದಲೇ ನಾವು ಸಮಾನ ಚಿಂತನೆ, ಯೋಚನೆಯ ಫ್ರೆಂಡ್ಸ್‌ ಆದೆವು! ಅಂದಿನಿಂದ, ನಾನು ಕಾಪಿ ಚೀಟಿಗಳನ್ನು ಬರೆದು ಅವಳಿಗೆ ಕೊಡುತ್ತಿದ್ದೆ.

ಅವಳು ಕಾಪಿ ಚೀಟಿಗಳನ್ನು ವೇಲ್‌ ಅಡಿ ಮುಚ್ಚಿಟ್ಟು ಯಾರಿಗೂ ಕಾಣದಂತೆ ಸರಿಸಿ ಸರಿಸಿ ಬರೆಯಲು ಶುರು ಮಾಡುತ್ತಿದ್ದಳು. ನಾನು, ಅವಳೇನು ಬರೀತಾಳ್ಳೋ ಅದನ್ನೇ ಕಾಪಿ ಮಾಡಲು ಶುರುಮಾಡಿದೆ. ಅವಳು ಗೀಟು ಹೊಡೆದರೆ ನಾನೂ ಗೀಟು ಹಾಕುತ್ತಿದ್ದೆ. ಅವಳು ನನ್ನ ಕಾಪಿ ಚೀಟಿ ನೋಡಿ ಬರೆಯುತ್ತಿದ್ದುದನ್ನು ಕಂಡು ನನಗೂ ಒಂದು ಥರ ಹೆಮ್ಮೆ. ಅದೊಮ್ಮೆ, ನಮ್ಮ ನಕಲು ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಅನುಮಾನಗೊಂಡ ಅಧ್ಯಾಪಕರು ನಮ್ಮನ್ನು ಎದ್ದು ನಿಲ್ಲಲು ಹೇಳಿದರು. ಅವಳು ಗಡಗಡ ನಡುಗುತ್ತಾ ಎದ್ದು ನಿಂತಳು. ಆ ರಭಸಕ್ಕೆ ವೇಲ್‌ ಕೆಳಗಿದ್ದ ಕಾಪಿ ಚೀಟಿಗಳು ಹಾರಿ ನೆಲದ ಮೇಲೆ ಬಿದ್ದವು. ಅಧ್ಯಾಪಕರು ತಕ್ಷಣವೇ ನಮ್ಮಿಬ್ಬರ ಪೇಪರ್‌ ಕಿತ್ತುಕೊಂಡು, ಪ್ರಿನ್ಸಿಪಾಲ್‌ ಹತ್ತಿರ ಕರೆದುಕೊಂಡು ಹೋಗಿ, ನಡೆದಿದ್ದನ್ನೆಲ್ಲಾ ಹೇಳಿದರು. ಕೋಪಗೊಂಡ ಪ್ರಿನ್ಸಿಪಾಲರು “ಇವರಿಗೆ ಮುಂದಿನ ಎಕ್ಸಾಮ್‌ಗೆ ಹಾಲ್‌ಟಿಕೆಟ್‌ ಕೊಡಬೇಡಿ’ ಗದರಿಸಿ ಕಳುಹಿಸಿದರು. ನಾವು ಪೆಚ್ಚುಮೋರೆ ಹಾಕಿಕೊಂಡು ಹೊರಗಡೆ ಬಂದಿದೆ. ಕೆಲವು ದಿನಗಳ ನಂತರ ಪ್ರಿನ್ಸಿಪಾಲರ ಕೈ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹಾಲ್‌ಟಿಕೆಟ್‌ ಪಡೆದುಕೊಂಡು ಪರೀಕ್ಷೆ ಬರೆದೆವು.

ಬಸವರಾಜ ಕೊಪ್ಪದ

ಟಾಪ್ ನ್ಯೂಸ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.