ನೀನು ನಾಚುತ್ತಾ ಕಾಫಿ ಕೊಡು, ಉಳಿದಿದ್ದು ನನಗೆ ಬಿಡು!


Team Udayavani, Sep 11, 2018, 6:00 AM IST

25.jpg

ಪ್ರತಿಬಾರಿ ನಾನು ಗೆದ್ದಾಗ ಭಯವಾಗುತ್ತಿತ್ತು. ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ.

ಸೂರ್ಯನೆಂಬ ಪುಕ್ಕಲ, ರಾತ್ರಿಗೆ ಹೆದರಿ ಓಡಿ ಹೋಗಿದ್ದ. ಚಂದ್ರನದು ಪಾರ್ಟ್‌ಟೈಮ್‌ ಡ್ನೂಟಿ, ಅವನ ಸುಳಿವೂ ಇರಲಿಲ್ಲ. ನಕ್ಷತ್ರಗಳ ಬೆಳಕೊಂದು ಬೆಳಕೆ!? ಕಪ್ಪು ಗವ್ವೆಂದಿತ್ತು. ಅಂಗೈ ಬೆವರಿನಲ್ಲಿ ನಲುಗುತ್ತಿದ್ದ ನಿನ್ನ ಪತ್ರವನ್ನು ಅಂಥ ಕತ್ತಲಲ್ಲೂ ಒಂದೇ ಗುಕ್ಕಿಗೆ ಓದಿಬಿಟ್ಟೆ! ಪ್ರೀತಿಯ ಪಾಲಿಗೆ ಕಡು ಕತ್ತಲೆಯೂ ಅಂದು ಬೆಳಕಾಗಿತ್ತಾ? ಆ ಕತ್ತಲಲ್ಲೂ ನಿನ್ನ ಅಕ್ಷರಗಳಷ್ಟೇ ಹೊಳೆಯುತ್ತಿದ್ದವಾ? ಗೊತ್ತಿಲ್ಲ. ಪ್ರೀತಿಯ ಮುಂದೆ ಕತ್ತಲು ಬೆಳಕಿನದು ಯಾವ ಮಾತು ಬಿಡು…

“ಮುಂಜಾನೆಯ ನನ್ನೆಲ್ಲಾ ಕನಸುಗಳನ್ನು ಜೀವನಪೂರ್ತಿ ಸಿಂಗರಿಸುವ ಜವಾಬ್ದಾರಿಯನ್ನು ನಿನಗೆ ಗುತ್ತಿಗೆಯಾಗಿ ಕೊಡುತ್ತಿದ್ದೀನಿ ಕಣೋ ಹುಡುಗ…’ ಅನ್ನುವ ಸಾಲನ್ನು ಓದಿಕೊಂಡಾಗ ಈ ಬದುಕಿನಲ್ಲಿ  ಮೊದಲ ಬಾರಿಗೆ ಖುಷಿಯ ಅನುಭವವಾಯ್ತು. ನನ್ನ ಅಷ್ಟೆಲ್ಲಾ ಸೋಲುಗಳು ಇಂದು ದೊಡ್ಡ ಗೆಲುವನ್ನು ತಂದು ಕೊಟ್ಟವು. ಈ ಒಂದು ಗೆಲುವಿಗಾಗಿ ನಾನು ಎಂಥ ಸೋಲುಗಳಿಗಾಗಿಯೂ ಸಿದ್ಧನಿದ್ದೆ. ಸೋಲುತ್ತಾ ಹೋದೆ. ನಿಜಕ್ಕೂ ಗೆದ್ದಿದ್ದು ನಾನಾ? ಅಲ್ಲ ನಮ್ಮ ಪ್ರೀತಿ.

“ಬದುಕು ಈ ಮಟ್ಟಿಗೆ ಚೆಂದ ಎನಿಸಲು ಆರಂಭಿಸಿದ್ದು ನೀನು ಕಾಡಲು ಶುರುವಿಟ್ಟುಕೊಂಡ ಮೇಲೆಯೇ ಕಣೋ. ಪ್ರತಿಬಾರಿ ನಾನು ಗೆ¨ªಾಗ ಭಯವಾಗುತ್ತಿತ್ತು.ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ. ಎದೆಯ ತಂಬೂರಿಯ ತಂತಿಗಳನ್ನು ಶೃತಿಗೊಳಿಸಿ ಇಟ್ಟಿದೀನಿ. ಒಮ್ಮೆ ನುಡಿಸಿ ಹೋಗು. ಯಾವ ಜನ್ಮದಲ್ಲೂ ಆ ನಾದದ ಗುಂಗು ಹೊರಟ ಹೋಗಬಾರದು ಕಣೋ…’ ಇಂತಹ ಸಾಲುಗಳನ್ನು ಬರೆದರೆ ನಾನಾದರೂ ಹೇಗೆ ಬದುಕಲಿ?

ನಾಳೆಯ ದಿನಗಳನ್ನು ನೆನೆಸಿಕೊಂಡರೆ ಅದೆಷ್ಟು ಪುಳಕ. ನನ್ನ ತೊಳುಗಳಲ್ಲಿ ನಿನ್ನ ಜೀಕಿಸಬೇಕು. ನಿನ್ನ ತೊಡೆಯ ಮೇಲೆ ನನ್ನೆಲ್ಲಾ ದುಗುಡಗಳನ್ನು ಆಚೆ  ಕಟ್ಟಿಟ್ಟು ಮಲಗಬೇಕು. ಮನೆ ಕಟ್ಟಿಸುವಾಗ ನೀನು ಕಿಚನ್‌ ವಿಷಯಕ್ಕೆ, ನಾನು ಬೆಡ್‌ರೂಮ್‌ ವಿಷಯಕ್ಕೆ ಜಗಳ ಕಾಯಬೇಕು. ನನ್ನಿಷ್ಟದ ಪಲಾವ್‌ಅನ್ನು ನೀನು ಮಾಡುವುದನ್ನು ಮುಂದೂಡಿ ರೇಗಿಸಬೇಕು. ಮಲ್ಲಿಗೆ ಹೂವನ್ನು ಮರೆತು ಬಂದು ಬೈಸಿಕೊಳ್ಳಬೇಕು. ನೋಡು, ನಾವು ಬದುಕಿಗೆ ಏನೆಲ್ಲಾವನ್ನು ಜೋಡಿಸಿಕೊಳ್ಳಬೇಕು. ಪರಸ್ಪರ ಒಪ್ಪಿಗೆ ಪತ್ರಗಳಿಗೆ ಸಹಿಯಾದ ಮೇಲೆ ಶಾಖೆ ತೆರೆಯಲು ತಡಮಾಡಬಾರದು. ನಾಳೆ ಬೆಳಗ್ಗೆ ಹೊತ್ತಿಗೆ ನನ್ನ ಅಪ್ಪಅಮ್ಮ ನಿಮ್ಮನೆಯಲ್ಲಿರುತ್ತಾರೆ. ನೀನು ಅವರಿಗೆ ನಾಚುತ್ತಾ ಕಾಫಿ ಕೊಡು, ಉಳಿದಿದ್ದನ್ನು ನನಗೆ ಬಿಡು! 

ಸದಾ. 

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.