ನೀನು ನನ್ನ ಪ್ರೀತಿ ನೀನೇ ಬಾಳ ಸ್ಫೂರ್ತಿ!
Team Udayavani, Sep 18, 2018, 7:55 AM IST
ನೀನು ನನಗೆ ಪ್ರೀತಿಯಷ್ಟೇ ಅಲ್ಲ, ಬಹುದೊಡ್ಡ ಸ್ಫೂರ್ತಿ ಕೂಡ ಹೌದು. ನೀನು ಸಿಕ್ಕ ಮೇಲೆ ಬದುಕಿಗೊಂದು ಶಿಸ್ತು ಬಂತು. ಜವಾಬ್ದಾರಿಯನ್ನು ಹೊರೋಕೆ ಹೆಗಲು ಸಿದ್ಧವಾಯ್ತು. ಈಗೀಗ ಯಾವಾಗಂದ್ರೆ ಆಗ ಎದ್ದು ಓದ್ಕೋಳ್ತಾ ಇರ್ತೀನಿ.
“ಇನ್ಮೆಲೆ ನನ್ನನ್ನು ಮಾತಾಡಿಸಲೇಬೇಡ. ಫೋನ್ ಮಾಡೋಕೆ ಪ್ರಯತ್ನ ಮಾಡ್ಬೇಡ. ಯಾಕೆ, ಏನು ಅಂತೆಲ್ಲಾ ಪ್ರಶ್ನೆನೂ ಕೇಳ್ಬೇಡ… ಪ್ಲೀಸ್ ಕಣೋ ಪೆದ್ದು… ನನ್ನ ಪಾಡಿಗೆ ನನ್ನ ಬಿಟ್ಟುಬಿಡು…’ ಇಂಥದ್ದೊಂದು ಮಾತು ನಿನ್ನಿಂದ ಬಂತಲ್ಲ; ಆ ಕ್ಷಣ ನನ್ನ ಹೃದಯವೆಂಬ ಹೃದಯವು ಲಬ್ಡಬ್ ಬಡಿತ ನಿಲ್ಲಿಸಿ ಕೆಲಕಾಲ ಸ್ತಬ್ಧವಾಗಿತ್ತು. ಅದೇ ಕ್ಷಣಕ್ಕೆ ನನಗೆ ತಿಳಿಯದೇ ಕಣ್ಣಂಚು ಒದ್ದೆಯಾಗಿತ್ತು. ಕಣ್ಣೀರಿನ ಹನಿಗಳು ಸ್ಪರ್ಧೆಗಿಳಿದವರಂತೆ ಕೆನ್ನೆಯನ್ನು ತೋಯಿಸಿದವು.
ಅವತ್ತಿನ ದಿನಗಳು ನೆನಪಿದ್ಯಾ ಅಮ್ಮು?
ಕಣ್ಣಿನಲ್ಲೇ ಪಿಸುಗುಟ್ಟಿ, ಮೌನಭಾಷೆಯಲ್ಲೇ ಕೋಟಿ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ಕಲೆಯನ್ನು ನನಗೆ ಕಲಿಸಿದವಳೇ ನೀನು. ಯಾವಾಗಲೂ ವಟವಟ ಅಂತ ಮಾತಾಡ್ತಿದ್ದ ನಾನು, ನೀನು ಎದುರಿಗಿದ್ದಾಗ ಮಹಾ ಮೌನಿಯಾಗುತ್ತಿದ್ದೆ. ನಿನ್ನ ಪ್ರೀತಿ ಜೀವನಪರ್ಯಂತ ನನಗಾಗಿಯೇ ಮೀಸಲಾಗಿರಬೇಕು ಅಂತ ಕನಸು ಕಾಣಿ¤ರೋ ಪರಮ ಸ್ವಾರ್ಥಿ ನಾನು.
ನೀನು ನನಗೆ ಪ್ರೀತಿಯಷ್ಟೇ ಅಲ್ಲ, ಬಹುದೊಡ್ಡ ಸ್ಫೂರ್ತಿ ಕೂಡ ಹೌದು. ನೀನು ಸಿಕ್ಕ ಮೇಲೆ ಬದುಕಿಗೊಂದು ಶಿಸ್ತು ಬಂತು. ಜವಾಬ್ದಾರಿಯನ್ನು ಹೊರೋಕೆ ಹೆಗಲು ಸಿದ್ಧವಾಯ್ತು. ಈಗೀಗ ಯಾವಾಗಂದ್ರೆ ಆಗ ಎದ್ದು ಓದ್ಕೋಳ್ತಾ ಇರ್ತೀನಿ. ಚೆನ್ನಾಗಿ ಓದಿ, ಒಳ್ಳೆಯದೊಂದು ಕೆಲಸ ಪಡ್ಕೊàಬೇಕು, ಆಮೇಲೆ ನಿನಗೆ ಇಷ್ಟವಾಗಿದ್ದನ್ನೆಲ್ಲಾ ತಂದು ನಿನ್ನ ಮಡಿಲಿಗೆ ಸುರಿಯಬೇಕು ಅಂತೆಲ್ಲಾ ಕನಸು ಕಾಣುತ್ತಿದ್ದೇನೆ.
ಆದ್ರೆ, ಇದ್ದಕ್ಕಿದ್ದಂಗೆ ನಿನಗೇನಾತೋ ಗೊತ್ತಿಲ್ಲ. ಕಾಲೇಜಲ್ಲಿ ನನ್ನನ್ನು ನೋಡಿದರೂ ನೋಡಿಲ್ಲದ ರೀತಿ, ಮುಖಕ್ಕೆ ಮುಖ ಕೊಟ್ಟು ಮಾತಾಡದೇ ಹೋಗಿ ಬಿಡ್ತೀಯ. ನಾನು ಕಾಲ್ ಮಾಡ್ತೀನಿ ಅಂತಾನೇ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದೀಯ. ಮೊನ್ನೆ ಸಿಕ್ಕಾಗ, ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡು ಅಂತ ಗೋಗರೆಯುವ ದನಿಯಲ್ಲಿ ಹೇಳಿದ್ಯಲ್ಲಾ? ನಾನು ಮಾಡಿದ ತಪ್ಪಾದರೂ ಏನು? ನನ್ನ ಒಲವನ್ನು ದ್ವೇಷ ಮಾಡೋಕೆ ಕಾರಣ ಏನಂತ ಹೇಳದಿದ್ದರೆ ನಾನು ಏನಂತ ಅರ್ಥ ಮಾಡಿಕೊಳ್ಳಬೇಕು? ನೀನು ನನ್ನಿಂದ ದೂರ ಆಗ್ತಿàಯ, ನನಗೆ ಮೋಸ ಮಾಡ್ತೀಯ ಅಂತ ಕಲ್ಪಿಸಿಕೊಳ್ಳೋಕೂ ನನ್ನಿಂದ ಆಗ್ತಾ ಇಲ್ಲ. ಪ್ಲೀಸ್, ನೀನು ಈ ರೀತಿ ವರ್ತಿಸೋಕೆ ಕಾರಣ ಏನಂತ ಹೇಳಿಬಿಡು.
ನಿನ್ನ ಒಲವಿನ ಸಣ್ಣ ಮುಗುಳುನಗೆಗಾಗಿ ಕಾಯ್ತಿರೋ…
ರವಿತೇಜ, ಚಿಗಳಿಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ