ಪ್ರಜ್ಞೆ ಬಂದಾಗ, ಕಣ್ಣೆದುರು ದೇವತೆ ಇದ್ದಳು…


Team Udayavani, Sep 25, 2018, 6:00 AM IST

moore-nimisha.jpg

ಚೌತಿ ಹಬ್ಬಕ್ಕೆ ನಾನು, ನನ್ನ ಊರು ಪುತ್ತೂರಿಗೆ ಹೋಗಬೇಕಿತ್ತು. ಆದರೆ, ಅವತ್ತು ರಾತ್ರಿ ಬಸ್‌ಗಳೆಲ್ಲ ಬುಕ್‌ ಆಗಿ, ಸೀಟ್‌ ಇಲ್ಲದ ಕಾರಣ ಬೆಂಗಳೂರಿನಲ್ಲಿಯೇ ಇರಬೇಕಾಯಿತು. ಆಫೀಸಿನಲ್ಲಿ ಕೆಲಸವೂ ಜಾಸ್ತಿ ಇದ್ದಿದ್ದರಿಂದ ತಡರಾತ್ರಿ ರೂಮ್‌ಗೆ ತಲುಪಿ, ಹಬ್ಬದ ದಿನ ಬೆಳಗ್ಗೆ ಏಳುವಾಗ 11 ಗಂಟೆ! ಯಾಕೋ ಮೈ ತುಂಬಾ ಬಿಸಿಯಾಗಿ, ಜ್ವರ ಬಂದಿತ್ತು. ವೈದ್ಯರ ಕ್ಲಿನಿಕ್ಕಿಗೆ ಹುಡುಕಾಡಿದೆ. ಯಾವುದೂ ತೆರೆದಿರಲಿಲ್ಲ. ಜೋರು ಬಿಸಿಲು. ಬೆಳಗ್ಗೆ ತಿಂಡಿ ಬೇರೆ ತಿಂದಿರಲಿಲ್ಲ. ಹಸಿವು ನನ್ನನ್ನೇ ನುಂಗುತ್ತಿತ್ತು. ರೂಮ್‌ನಲ್ಲಿ ಏನಾದರೂ ತಿಂಡಿ ಮಾಡಿಕೊಳ್ಳಲು ತಾಳ್ಮೆ ಇದ್ದಿರಲಿಲ್ಲ, ಆರೋಗ್ಯವೂ ಸಹಕರಿಸುತ್ತಿರಲಿಲ್ಲ. ಕೆಲ ದೂರದಲ್ಲಿದ್ದ ಹೋಟೆಲ್‌ಗೆ ನಡೆದು ಹೋಗೋಣ ಅಂತ ಹೊರಟೆ.

ಆದರೆ, ಅದೇನಾಯಿತೋ? ಕೆಲ ದೂರ ನಡೆದಿದ್ದೆನಷ್ಟೇ… ಅಲ್ಲೇ ಮೂಛೆì ಬಿದ್ದುಬಿಟ್ಟೆ. ಕಣ್ಣು ಬಿಟ್ಟು ನೋಡುವಾಗ, ಒಬ್ಬರ ಮನೆಯಲ್ಲಿದ್ದೆ. ಹಾಸಿಗೆ ಮೇಲೆ ಮಲಗಿದ್ದೆ. ನನ್ನೆದುರು ಒಬ್ಬರು ಮಹಿಳೆ ಕುಳಿತಿದ್ದರು. ನನ್ನ ಹಣೆಗೆ ಥಂಡಿ ಬಟ್ಟೆ ಹಾಕಿ,
ಉಪಚರಿಸುತ್ತಿದ್ದರು.

“ವಿಶ್ರಾಂತಿ ತೆಗೆದುಕೊಳ್ಳಿ. ನಿಮಗೆ ವಿಪರೀತ ಜ್ವರ ಬಂದಿದೆ…’ ಎಂದು ಹೇಳಿ, ಅವರ ಮನೆ ಬಾಗಿಲೆದುರೇ ಮೂಛೆì ಬಿದ್ದ ನನ್ನ ಅವಸ್ಥೆಯನ್ನು ಹೇಳಿದರು. “ಯಾರೋ ಪಾಪ, ಹುಷಾರು ತಪ್ಪಿದ್ದಾರೆ’ ಎಂದು ಅವರ ಯಜಮಾನರು ಒಳಗೆ ಎತ್ತಿಕೊಂಡು ಬಂದರಂತೆ. ನಿಜಕ್ಕೂ ಗಣಪತಿಯೇ ಅಂದು ಮನುಷ್ಯನ ರೂಪದಲ್ಲಿ ಬಂದು ನನ್ನ ಕಷ್ಟಕ್ಕೆ ನೆರವಾದನೇನೋ! ಅಂದು ಅವರ ಮನೆಯಲ್ಲಿಯೇ ಹಬ್ಬದ ಊಟ ಆಯಿತು. ಒಟ್ಟಿಲ್ಲಿ, ಅಂದು ಅವರಿಗೆ ನಾನು ಬಂಧುವಾಗಿದ್ದೆ.

ಬೆಂಗಳೂರಿನ ಮೇಲೆ ಅನೇಕರು ಆರೋಪ ಹೊರಿಸುತ್ತಾರೆ. ಇಲ್ಲಿನವರು ಯಾರೊಂದಿಗೂ ಬೆರೆಯುವುದಿಲ್ಲ, ಅಕ್ಕಪಕ್ಕದ ಮನೆಯವರೂ ಇಲ್ಲಿ ಪರಿಚಿತರಾಗುವುದಿಲ್ಲ. ನಕ್ಕರೆ ಪ್ರತಿಯಾಗಿ ನಗುವುದಿಲ್ಲ… ಇತ್ಯಾದಿ ಮಾತುಗಳನ್ನು ಕೇಳಿದ್ದೆ. ಆದರೆ, ಆ ಮಾತನ್ನು ಈ ದಂಪತಿ ಸುಳ್ಳು ಮಾಡಿದ್ದರು. ಅವರಿಗೆ ನಾನು ಎಂದೆಂದಿಗೂ ಋಣಿ.

– ಕಾರ್ತಿಕ್‌ ನಾಯಕ್‌

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.