ಹೇಳ್ರಿ ,ಪಯಣದಲ್ಲಿ ನಂಗೆ ಜೊತೆ ಆಗ್ತೀರಾ?


Team Udayavani, Sep 25, 2018, 6:00 AM IST

letter-harsha-x.jpg

ಈಗಲೇ ನಿಮ್ಮ ನಿರ್ಧಾರ ಹೇಳಿ ಅಂತ ಒತ್ತಾಯವೇನಿಲ್ಲ. ನಿಮ್ಗೆ ನನ್ನ ಬಗ್ಗೆ ಏನ್‌ ಅನ್ಸುತ್ತೂ ಅದನ್ನ ಹೇಳ್ಳೋಕೆ, ಯೋಚನೆ ಮಾಡೋಕೆ ಎಷ್ಟು ಟೈಮ್‌ ಬೇಕೋ ತಗೊಳ್ಳಿ. ಏಳೇಳು ಜನ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಈ ಜನ್ಮದಲ್ಲಿ ನೀವು ಜೊತೆಯಾದರೆ ಚಂದ.
 
ಏನೇನೋ ಹೇಳ್ಬೇಕು, ಮಾತಾಡ್ಬೇಕು ಅಂತ ತುಂಬಾ ಆಸೆ. ಆದ್ರೆ ಹೇಗ್‌ ಮಾತಾಡೋದು ಅಂತ ಗೊತ್ತಾಗ್ತಿಲ್ಲ. ನೀವ್‌ ನನ್ನ ಬಗ್ಗೆ ತಪ್ಪು ತಿಳ್ಕೊಂಡಿಟ್ರೆ ಅಂತ ಭಯ. ಆದ್ರೂ, ನೇರವಾಗಿ ವಿಷಯಕ್ಕೆ ಬರ್ತೀನಿ..

ನಂಗೊತ್ತಿಲ್ಲ ಯಾಕೆ, ಏನು, ಹೇಗೆ ಅಂತೆಲ್ಲಾ, ನಂಗೆ ನೀವೊಂಥರಾ ಲಕ್ಕಿ ಸ್ಟಾರ್‌ ಇದ್ದಂಗೆ. ನೀವು ಸುಮ್ನೆ ಜೊತೆಗಿದ್ದರೂ ಖುಷಿ.   ನಿಮ್‌ ಎಡಗೈ ಕಿರು ಬೆರಳನ್ನ, ನನ್ನ ಬಲಗೈ ಕಿರುಬೆರಳು ಜೊತೆ ಸೇರಿಸಿ ಇಡೀ ಲೋಕ ಸುತೆºàಕು ಅನ್ನೋ ಆಸೆ ಇತ್ತೀಚೆಗೆ ಶುರುವಾಗಿದೆ. ನಿಮ್‌ ಮಡಿಲಲ್ಲಿ ಮಲಗಿ ಆಕಾಶದಲ್ಲಿರೋ ಚುಕ್ಕಿಗಳನ್ನೆಲ್ಲ ಎಣಿಸಬೇಕು ಅಂತ ಅನ್ಸುತ್ತೆ.

ಏನಿಲ್ಲ, ವಿಷಯ ಇಷ್ಟೇ. ನಾನು ನಿಮ್ನ ತುಂಬಾ ಇಷ್ಟ ಪಡ್ತಿದೀನಿ. ಹಾಗಂತ ಹೇಳ್ಳೋಕೆ ಧೈರ್ಯ ಸಾಲತಿಲ್ಲ. ನೀವ್‌ ಹೂಂ ಅಂದ್ರೆ, ಇಡೀ ಲೋಕಕ್ಕೆ ಕೂಗಿ ಕೂಗಿ ಹೇಳ್ತೀನಿ, ನನ್ನ ಹೃದಯ ರಾಜ್ಯದ ರಾಣಿ ನೀವೇ ಅಂತ.

ಈಗಂತೂ ಯಾರನ್ನ ನೋಡಿದರೂ ನೀವೇ ಕಂಡ ಹಾಗಾಗುತ್ತೆ. ಅದ್ಕೆà ಯಾರೊಂದಿಗೂ ಮಾತಾಡೋಕೇ ಹೋಗ್ತಿಲ್ಲ ನಾನು. ಕೊನೆಗೂ ಧೈರ್ಯ ಮಾಡಿ ಹೇಳ್ತಿದೀನಿ ಕೇಳಿ, ನಾನೀಗ ಒಂಟಿತನ ಬಿಡಬೇಕು ಅಂತ ಮಾಡಿದ್ದೀನಿ. ನನ್ನ ಪಯಣದಲ್ಲಿ ನೀವು ಜೊತೆ ಆಗ್ತೀರಾ? ನಿಮ್ಮನ್ನೇ ಕೇಳದೆ ನಾನು ನಿಮ್ಮನ್ನ, ನಿಮ್ಮ ಪ್ರೀತಿಯನ್ನ ಬಯಸಿದ್ದೀನಿ. ಈಗಲೇ ನಿಮ್ಮ ನಿರ್ಧಾರ ಹೇಳಿ ಅಂತ ಒತ್ತಾಯವೇನಿಲ್ಲ. ನಿಮ್ಗೆ ನನ್ನ ಬಗ್ಗೆ ಏನ್‌ ಅನ್ಸುತ್ತೂ ಅದನ್ನ ಹೇಳ್ಳೋಕೆ, ಯೋಚನೆ ಮಾಡೋಕೆ ಎಷ್ಟು ಟೈಮ್‌ ಬೇಕೋ ತಗೊಳ್ಳಿ. ಏಳೇಳು ಜನ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಈ ಜನ್ಮದಲ್ಲಿ ನೀವು ಜೊತೆಯಾದರೆ ಚಂದ. ಆಗಾಗ ನಿಮ್ಗೆ ಬೈದು, ಮು
ದ್ದಾಡಿ, ಕಾಡಿಸಿ, ಪೀಡಿಸಿ, ಅಳಿಸಿ.. ನಿಮ್ಮ ಮುಖಾನೇ ನೋಡ್ತಾ ಬದುಕು ಕಳೆದುಬಿಡ್ತೀನಿ. 

ಒಂದು ಹನಿ ಕಣ್ಣೀರು ಭೂಮಿ ತಾಕೋಕೆ ಬಿಡಲ್ಲ ಅಂತೆಲ್ಲಾ ಹೇಳ್ಳೋದಿಲ್ಲ, ಯಾಕಂದ್ರೆ ನಾನು ನಿಮ್ಮನ್ನ ಮುದ್ದಿಸೋ ರೀತಿಗೆ ಕಣ್ಣೀರು ಪನ್ನೀರಾಗಿ ಹರಿಯಬಹುದು. ಸುಳ್ಳು ಪೊಳ್ಳು ಮಾತುಗಳಿಂದ ಮೋಡಿ ಮಾಡೋ ಹುಡುಗ ನಾನಲ್ಲ. ಆದರೆ, ಜೊತೆಗೆ ಬಂದರೆ ರಾಣಿ ಥರಾ ನೋಡಿಕೊಳ್ತೀನಿ. ಯೋಚೆ° ಮಾಡಿ..

ಎಷ್ಟು ಟೈಂ ಬೇಕೋ ತೆಗೆದುಕೊಳ್ಳಿ ಅಂತ ಹೇಳಿಬಿಟ್ಟಿದ್ದೇನೆ. ಹಾಗಂತ ತುಂಬಾ ಕಾಯಿಸಬೇಡಿ. ಈ ಕಾಯುವಿಕೆಯಲ್ಲಿ ಏನೋ ಖುಷಿ ಇದೆ ನಿಜ. ಆದರೆ, ಅಷ್ಟೇ ನೋವು, ಚಡಪಡಿಕೆ, ಒಂಟಿತನ, ಹೆದರಿಕೆ, ವಿರಹವೂ ಇದೆ. 

ಈ ಮಾತುಗಳನ್ನು ಹೇಳಿಯೇ ಬಿಡಬೇಕು ಅಂತ ಪ್ರತಿ ಸಾರಿ ಬಂದಾಗಲೂ ಆ ನಿಮ್ಮ ವಾರೆ ನೋಟ, ನನ್ನೆಲ್ಲಾ ಮಾತುಗಳಿಗೆ ಕಡಿವಾಣ ಹಾಕಿಬಿಡುತ್ತೆ. ಏನ್‌ ಹೇಳ್ಬೇಕು ಅಂತ ಗೊತ್ತಾಗದೆ ತಬ್ಬಿಬ್ಟಾಗಿಬಿಡುತ್ತೇನೆ. ಅಲ್ಲೆಲ್ಲೋ ಸುಖವಾಗಿ ಇದ್ದ ನನ್ನನ್ನು ನಿಮ್ಮ ಕಡೆಗೆ ಸೆಳೆದು, ಈಗ ಸುಮ್ಮನೆ ನೋವು ತಿಂತಿರೋ ಹೃದಯಕ್ಕೆ ಬೈದುಕೊಂಡು ವಾಪಸಾಗಿಬಿಡ್ತಿದ್ದೆ. ಉಹೂಂ, ಇಷ್ಟು ಕಾದಿದ್ದು ಸಾಕು. ಈ ಎಲ್ಲ ಚಡಪಡಿಕೆಗೊಂದು ಪೂರ್ಣ ವಿರಾಮ ಹಾಕಲೆಂದೇ ಈ ಪತ್ರ. ಮುಕ್ತಾಯ ಯಾವತ್ತೂ ಸುಖಾಂತ್ಯವೇ ಆಗಿರುತ್ತದೆ ಎಂಬ ನಂಬಿಕೆಯಲ್ಲಿ ನಿಮ್ಮದೇ ನೆನಪಲ್ಲಿ ಏನೇನೋ ಗೀಚಿದ ಹುಂಬ

– ಹರ್ಷ ಮ್ಯಾಗೇರಿ

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.