ಪ್ರೀತಿ ಮಾಯೆ ಹುಷಾರು!


Team Udayavani, Sep 25, 2018, 6:00 AM IST

love.jpg

ಬ್ಯುಸಿ ಕೆಲಸದ ಮಧ್ಯೆ ನನಗೆ ಹೆಚ್ಚು ಸಮಯ ಕೊಡೋಕೆ ನಿನಗೆ ಸಾಧ್ಯವಾಗಲ್ಲ. ಅದು ಗೊತ್ತಿದ್ದರೂ ನಾನು ಹಠ ಮಾಡ್ತೀನಿ. ಕೆಲಸ ಮಾಡುವಾಗ ಕಾಲ್‌, ಮೆಸೇಜ್‌ ಮಾಡಿ ನಿನಗೆ ಸಿಟ್ಟು ಬರೋ ಹಾಗೆ ಮಾಡ್ತೀನಿ. ಏನ್ಮಾಡೋದು? ನಂಗೆ ನೀನು ಬೇಕು ಅಷ್ಟೇ. ನಿಂಗೆ ಡಿಸ್ಟರ್ಬ್ ಮಾಡಾರ್ಧು, ಆಫೀಸ್‌ ಟೈಮಲ್ಲಿ ಕಾಲ್‌ ಮಾಡಬಾರ್ಧು ಅಂತೆಲ್ಲಾ ನನಗೆ ನಾನೇ ನಿರ್ಬಂಧ ಹೇರಿಕೊಂಡಿರಿ¤àನಿ. ಆದ್ರೆ, ಅವೆಲ್ಲಾ ಠುಸ್‌ ಪಟಾಕಿಯೇ! 

ಏ ಹುಡುಗಾ,
ನನ್ನ ಮೇಲೆ ಕೋಪ ಬಂದಿದ್ಯಾ? ನಿನ್ನನ್ನ ಸುಮ್‌ ಸುಮ್ನೆ ಡೌಟ್‌ ಮಾಡ್ತೀನಿ ಅಂತ ಬೇಜಾರಾ? ಅದು ಅನುಮಾನವಲ್ಲ, ನೀನು ನನ್ನವನು, ನನಗೆ ಮಾತ್ರ ಸೇರಿದವನು ಎಂಬ ಹುಚ್ಚು ಆಸೆ. ನೀನು  ಬೇರೆ ಯಾವ ಹುಡುಗಿಯೊಂದಿಗೂ ಮಾತನಾಡಬಾರದು ಅನ್ನೋದು, ಪ್ರೀತಿಯ ಜೊತೆಗೇ ಅಡಗಿರೋ ಸ್ವಾರ್ಥ. 

ನಿನ್ನ ಪ್ರತಿ ಯೋಚನೆಯಲ್ಲೂ ನನಗೆ ಪಾಲಿರಬೇಕು, ನಿನ್ನ ಪ್ರತಿ ಉಸಿರಿನಲ್ಲೂ ನಾನಿರಬೇಕು ಅನ್ನೋದು ಹುಚ್ಚು ಪ್ರೀತಿಯ ಕುರುಹು. ನಿನಗೆ ಹೇಗೆ ಹೇಳ್ಳೋದು? ನಾನು ನಿನ್ನ ಎಷ್ಟು ಪ್ರೀತಿ ಮಾಡ್ತೀನಿ ಅಂತ ಪದಗಳಲ್ಲಿ ಹೇಳಿ ಮುಗಿಸೋಕೆ ಸಾಧ್ಯ ಇಲ್ಲ.ಅದನ್ನು ನಿನಗೆ ಅರ್ಥ ಮಾಡಿಸೋ ಅಗತ್ಯವೂ ಇಲ್ಲ. ಯಾಕಂದ್ರೆ ನಿಂಗದು ಗೊತ್ತಿರೋ ವಿಷಯವೇ.

ನಿನ್ನ ಬ್ಯುಸಿ ಕೆಲಸದ ಮಧ್ಯೆ ನನಗೆ ಹೆಚ್ಚು ಸಮಯ ಕೊಡೋಕೆ ನಿಂಗೆ ಸಾಧ್ಯವಾಗಲ್ಲ. ಅದು ಗೊತ್ತಿದ್ದರೂ ನಾನು ಹಠ ಮಾಡ್ತೀನಿ. ಕೆಲಸ ಮಾಡುವಾಗ ಕಾಲ್‌, ಮೆಸೇಜ್‌ ಮಾಡಿ ನಿನಗೆ ಸಿಟ್ಟು ಬರೋ ಹಾಗೆ ಮಾಡ್ತೀನಿ. ಏನ್ಮಾಡೋದು? ನಂಗೆ ನೀನು ಬೇಕು ಅಷ್ಟೇ. ನಿಂಗೆ ಡಿಸ್ಟರ್ಬ್ ಮಾಡಾರದು, ಆಫೀಸ್‌ ಟೈಮಲ್ಲಿ ಕಾಲ್‌ ಮಾಡಬಾರದು ಅಂತೆಲ್ಲಾ ನನಗೆ ನಾನೇ ನಿರ್ಬಂಧ ಹೇರಿಕೊಂಡಿರಿ¤àನಿ. ಆದ್ರೆ, ಅವೆಲ್ಲಾ ಠುಸ್‌ ಪಟಾಕಿಯೇ! 

ನೀನು ಜಗಳ ಮಾಡಿಕೊಂಡು, ಮುನಿಸ್ಕೊಂಡು ಗುಮ್ಮನ ರೀತಿ ಇದ್ದಾಗ ನಾನೇ ನಿನ್ನ ಹಿಂದೆ ಬರ್ತೀನಿ. ಮಗೂಗೆ ಅಮ್ಮ ಬೈದ್ರೂ, ಹೊಡೆದ್ರೂ, ಸ್ವಲ್ಪ ಹೊತ್ತಿಗೆ ಎಲ್ಲಾ ಮರೆತು ಮಗು, ಅಮ್ಮಾ ಅನ್ನುತ್ತಲ್ಲಾ ಹಾಗೆ. ಆಗ ನೀನು, ನಿನಗೆ ಸ್ವಾಭಿಮಾನಾನೇ ಇಲ್ವಾ ಅಂತ ಅಣಕಿಸ್ತೀಯ. ನಿನ್ನ ಮುಂದೆ ಅದೆಂಥ ಸ್ವಾಭಿಮಾನಾನೋ? 

ನಿನ್ನ ಫೋನ್‌ ಬ್ಯುಸಿ ಬಂದ್ರೆ, ಆನ್‌ಲೈನ್‌ ಇದ್ರೂ ನನ್ನ ಜೊತೆ ಚಾಟ್‌ ಮಾಡದಿದ್ರೆ ನಾನು ಸಿಐಡಿ ಆಫೀಸರ್‌ ಥರ ಆಗಿಬಿಡ್ತೀನಿ. ಯಾಕೆ ಬ್ಯುಸಿ ಬರಿ¤ದೆ? ಯಾರ ಜೊತೆ ಚಾಟ್‌ ಮಾಡ್ತಾ ಇದ್ದೀಯ? ಅಂತೆಲ್ಲಾ ಸಾವಿರ ಪ್ರಶ್ನೆ ಕೇಳ್ತೀನಿ, ಅದು ನಿನ್ನ ಮೇಲಿನ ಅಪನಂಬಿಕೆಯಿಂದಲ್ಲ. ನೀನು ನನ್ನೋನು ಅನ್ನೋ ಸ್ವಾರ್ಥದಿಂದ! 

ನೀನು ಆಗಾಗ ಹೇಳ್ತಾ ಇರಿ¤àಯ- ಸಂಬಂಧಗಳು ತುಂಬಾ ನಾಜೂಕು. ಗಟ್ಟಿ ಹಿಡಿದರೆ ಉಸಿರುಗಟ್ಟುತ್ತದೆ, ಜಾಸ್ತಿ ಸಡಿಲ ಬಿಟ್ಟರೆ ಹಾರಿ ಹೋಗುತ್ತದೆ ಅಂತ. ಆ ಮಾತು ನಿಜ. ನಿನ್ನನ್ನ ಗಟ್ಟಿಯಾಗಿ ಹಿಡ್ಕೊಂಡು ಉಸಿರುಗಟ್ಟಿಸೋಕೆ ನನಗೂ ಇಷ್ಟ ಇಲ್ಲ. ಹಾಗಂತ ಸಡಿಲ ಬಿಟ್ಟು ನೀನು ಹಾರಿಹೋಗಿಬಿಟ್ರೆ… ಈಗಷ್ಟೇ ನಂಬಿಕೆ ಇದೆ ಅಂದೆ, ಮತ್ತೆ ಹಳೇ ರಾಗ ತೆಗೆದೆಯಲ್ಲಾ ಅಂತ ಕೋಪಿಸ್ಕೊಳ್ಳಬೇಡ. 

ನನ್ನ ಕೆಲವೊಂದು ವರ್ತನೆ ನಿನಗೆ ಕೋಪ ತರಿಸುತ್ತೆ. ಚಿಕ್ಕ ಹುಡುಗಿ ಥರ ಹಠ ಮಾಡೋದು, ನಿನಗೆ ತಿರುಗಿಸಿ ಮಾತಾಡೋದು.. ಅದು ನನ್ನ ಹುಟ್ಟುಗುಣ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತಾರೆ. ಆದರೆ, ನಿನಗೋಸ್ಕರ ಆ ಎಲ್ಲಾ ಗುಣಗಳನ್ನು ಸುಟ್ಟುಬಿಡ್ತೀನಿ ಸರೀನಾ? ನನ್ನ ಈ ಹುಚ್ಚು ಪ್ರೀತೀನ ಅರ್ಥ ಮಾಡ್ಕೊà…ಅದಕ್ಕೆ ಈ ಪತ್ರದ ಮೂಲಕ ನನ್ನ ಹುಚ್ಚುತನಕ್ಕೆಲ್ಲಾ ಸಮರ್ಥನೆ ಕೊಡುತ್ತಿದ್ದೇನೆ. ಯಾಕಂದ್ರೆ, ನೀನು ನನ್ನವನು ಮತ್ತು ನನಗೆ ಮಾತ್ರ ಸೇರಿದವನು… 
ಇಂತಿ ನಿನ್ನಾಕೆ 
ರೋಸ್‌, ತುಮಕೂರು

ಟಾಪ್ ನ್ಯೂಸ್

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.