ನಿನ್ನ ಹೆಜ್ಜೆಗಳ ಗುರುತು ಕಂಡು….


Team Udayavani, Oct 2, 2018, 6:00 AM IST

7.jpg

ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು.

ಒಂಟಿ ಬರಗಾಲಕ್ಕೆ ಒಣಗಿ ಹೋಗಿದ್ದ ಕನಸುಗಳಿಗೆ ನಿನ್ನೆಯಷ್ಟೇ ಒಂದು ಹನಿಯಷ್ಟು ಚಿಗುರು ಮೂಡಿದೆ. ನೋಡು, ಹಾದಿಯೂ ಕೂಡ ಎಷ್ಟು ಸಂಭ್ರಮಿಸುತ್ತಿದೆ?! ಅದಕ್ಕೊಂದು ಫ‌ಲಿತಾಂಶದ ಖುಷಿ. ಹಾದಿಯ ಪಾಲಿಗಿದು ಡಿಸ್ಟಿಂಕ್ಷನ್‌. ನಾನು ಪಾಸಾದೆ. ನನ್ನ ಪ್ರೇಮಕ್ಕೆ, ಕನವರಿಕೆಗೆ ರ್‍ಯಾಂಕ್‌ ಪಡೆದ ಖುಷಿ. ಮಾರ್ಕ್ಸ್ ಕಾರ್ಡ್‌ ಕೊಡಲು ನೀನೇ ಬರುತ್ತೀಯಲ್ವಾ?

ನಿನ್ನನ್ನು ನೋಡಿದ್ದು ಊರ ದಾರಿಯ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಪಾದಗಳ ಗುರುತಿನಲ್ಲಿ. ನಿನ್ನ ಹೆಜ್ಜೆ ಊರಿಸಿಕೊಂಡ ಮಣ್ಣು ಕೂಡ ಒಂದೊಳ್ಳೇ ಲಹರಿಯಲ್ಲಿತ್ತು. ಅಷ್ಟು ಚೆಂದದ ಪಾದಗಳನ್ನು ಈ ಬರಗೆಟ್ಟ ಕಣ್ಣುಗಳು ನೋಡಿಯೇ ಇರಲಿಲ್ಲ. ಊರ ತೇರಿನ ನೂರು ಹಬ್ಬಗಳು ಒಮ್ಮೆಲೇ ಆದಂಥ ಖುಷಿ ಮೊದಲ ಬಾರಿಗೆ ನನ್ನ ಕಣ್ಣಲ್ಲಿ. ಪಾದಗಳ ಗುರುತನ್ನು ಬೆನ್ನು ಹತ್ತಿದವನಿಗೆ ಸಿಕ್ಕಿದ್ದು ನೀನು. 

ನಿಜ ಹೇಳಾ!? ನಿನ್ನ ನೋಡಿದಾಗ ಮೊದಲ ಬಾರಿಗೆ ಅನಿಸಿದ್ದು- ಅದ್ಭುತ ರೂಪವತಿ ಅಂತ ಅಂದಾಜು ಮಾಡಿರಿ¤àವಲ್ಲ; ಅಂಥವಳು ದಿಢೀರ್‌ ಎದುರು ನಿಂತಾಗ ಆಗುವ ಪುಳಕ! ಅದೇ ಕಾರಣಕ್ಕೆ ನಾನು ನಿನ್ನ ಮುಂದೆ ಪೆಕರನಂತೆ ನಿಂತುಬಿಟ್ಟೆ. ಇವನ್ಯಾರೋ ಹುಚ್ಚನಿರಬೇಕು ಅಂತ ಎದೆಯ ಮೇಲಿಂದ ಹಾದು ಮಲಗಿದ್ದ ಜಡೆಯನ್ನು ಹಿಂದಕ್ಕೆ ಎಸೆದು ನೀನು ನಡೆದುಬಿಟ್ಟೆ. ಆಮೇಲೆ ನೋಡುತ್ತಾ ನಿಂತಿದ್ದು ನಿನ್ನ ಪಾದಗಳನ್ನು. ಈ ಪತ್ರದೊಂದಿಗೆ ನಾನು ಅವತ್ತು ಕ್ಲಿಕ್ಕಿಸಿದ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತುಗಳ ಚಿತ್ರಗಳನ್ನು ಲಗತ್ತಿಸಿದ್ದೇನೆ ನೋಡು.

ನೀನು ಪರಿಚಯವಾದ ನಂತರ, ನಿರುದ್ಯೋಗಿಯಾಗಿದ್ದ ನನಗೊಂದು ಕೆಲಸ ಸಿಕ್ಕಿತು ನೋಡು. ಪ್ರೀತಿ ಗೆಲ್ಲಲು ಹೊರಟವನದು ಅದೆಂಥ ರಿಸ್ಕಿನ ಕೆಲಸ ಎಂಬುದು ಈ ಜನರಿಗೇನು ಗೊತ್ತು. ಅವರು ಗೇಲಿ ಮಾಡುವುದನ್ನು ಕಂಡು ಪಾಪ ಎನಿಸುತ್ತದೆ. ನಾನು ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ ಏಳು ವರ್ಷಗಳನ್ನು. ಅಷ್ಟು ದಿನಗಳಲ್ಲಿ ನನ್ನ ಪಾಲಿಗಿದ್ದಿದ್ದು ಕೇವಲ ಮಂಪರಿನಂಥ ಒಂದಿಡೀ ನಿದ್ದೆ, ಬದುಕಲು ನಾಲ್ಕಾರು ತುತ್ತು ಅನ್ನ, ರಾಶಿ ರಾಶಿ ಕನಸುಗಳು, ತೀರದ ಪ್ರಯತ್ನ ಮತ್ತು ನನ್ನ ಹುಚ್ಚಾಟಗಳಿಗೆ ಕ್ಯಾರೇ ಅನ್ನದ ನೀನು.

ಅವತ್ತು ನನ್ನ ಪ್ರೀತಿ ಅರಸುವಿಕೆಯ ಮ್ಯಾರಥಾನ್‌ ಓಟಕ್ಕೆ ಬ್ರೇಕ್‌ ಹಾಕಿಬಿಟ್ಟೆ ನೀನು. ಯಾಕೋ ಹುಡುಗ ಇಷ್ಟು ಹಠ? ನನ್ನಲ್ಲಿ ಅಂಥದ್ದು ಏನಿದೆ? ಯಾಕೆ ಹೀಗೆ ಸಾಯುವಷ್ಟು ಇಷ್ಟ ಪಡ್ತೀಯ? ಅಂದಾಗ ನನ್ನ ಬಳಿ ಮಾತುಗಳಿರಲಿಲ್ಲ. ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು. ಕದ್ದು ಜಾರಿದ ಹನಿಯನ್ನು ಕೊನೆಗೂ ನೀನು ನೋಡಿಬಿಟ್ಟೆ. ಲೇ ಇದೇನೋ ಹುಡುಗನಾಗಿ ಕಣ್ಣೀರು? ಅಂದಾಗ ಮಾತಾಡದೆ ಸುಮ್ಮನೇ ನಿಲ್ಲುವುದಷ್ಟೇ ನನ್ನಿಂದ ಸಾಧ್ಯವಾಗಿದ್ದು. ನಿಧಾನಕ್ಕೆ ಎದ್ದ ನಿನ್ನ ಕೈಗಳು ನನ್ನ ಕೈ ಹಿಡಿದವು ನೋಡು, ಆಗ ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಬಿತ್ತು! 

ಸದಾಶಿವ್‌ ಸೊರಟೂರು.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.