ಪೇಪರ್‌ ಕೈಗಿಟ್ಟ, ಅದರಲ್ಲಿ ನನ್ನ ಭವಿಷ್ಯವಿತ್ತು..!


Team Udayavani, Oct 9, 2018, 6:00 AM IST

3.jpg

ಚಿಕ್ಕಮಗಳೂರು ಸಮೀಪದ ಪುಟ್ಟ ಹಳ್ಳಿ ನನ್ನದು. ಎಂ.ಎ. ಮುಗಿಸಿದ್ದೆ. ಆದರೆ, ಹೊಟ್ಟೆ ಪಾಡಿಗೆ ಕೆಲಸ ಬೇಕಲ್ಲ? ಬೆಂಗಳೂರಿಗೆ ಹೋದ್ರೆ, ಕೆಲಸ ಸಿಗುತ್ತೆ ಅಂತ ಊರಿನವರೆಲ್ಲ ಹೇಳಿದ ಕಾರಣ, ರಾಜಧಾನಿಗೆ ಬಸ್ಸನ್ನೇರಿ ಬಂದೆ. ಪರಿಚಿತ ಸ್ನೇಹಿತರನ್ನೆಲ್ಲ ಭೇಟಿಯಾಗಿ, ಅವರು ಹೇಳಿದ ಕಂಪನಿಗಳಿಗೆಲ್ಲ ರೆಸ್ಯೂಮ್‌ ಕೊಟ್ಟು, ಕೆಲವು ಕಡೆ ಇಂಟರ್‌ವ್ಯೂ ಕೊಟ್ಟು ಕಾದಿದ್ದೇ ಬಂತು. ಕೆಲಸ ಮಾತ್ರ ಸಿಗಲಿಲ್ಲ. ಅಮ್ಮ ಸಾಲ ಮಾಡಿ ಕೊಟ್ಟಿದ್ದ 3 ಸಾವಿರ ರೂ., ಹೋಟೆಲ್ಲಿಗೆ ಊಟ- ತಿಂಡಿಗೇ ಖರ್ಚಾಗಿ ಹೋಗಿತ್ತು.

ಊರಿಗೆ ಹೋಗಿ ಮತ್ತೆ ಹಣ ಜೋಡಿಸಿಕೊಂಡು ಬೆಂಗಳೂರಿನ ನವರಂಗ್‌ನಲ್ಲಿ ಬಸ್ಸು ಇಳಿದಿದ್ದೆ. ರಾಜಾಜಿನಗರದ ರೂಮ್‌ಗೆ ನಡೆದು ಬರುತ್ತಿದ್ದಾಗ ಒಬ್ಬ ಪೇಪರ್‌ ಹಾಕುವವ, “ಯಾಕಣ್ಣಾ… ಇಷ್ಟು ಸಪ್ಪಕ್ಕಿದ್ದೀಯಾ?’ ಅಂತ ಕೇಳಿದ್ದ. ಬೆಂಗಳೂರಿನಲ್ಲಿ ಇದುವರೆಗೂ ಇಂಥ ಪ್ರಶ್ನೆಯನ್ನು ನನ್ನನಾéರೂ ಕೇಳಿರಲಿಲ್ಲ. “ಕೆಲಸ ಇಲ್ಲ ಮಾರಾಯ, ಇಷ್ಟು ಚಿಕ್ಕವನು. ನಿಂಗಾದ್ರೂ ಒಂದು ಕೆಲಸ ಇದೆ ನೋಡು’ ಎಂದೆ. ಅದಕ್ಕವನು, “ಹೋಗಣ್ಣೋ… ನನ್ನ ಕಷ್ಟ ನಿಂಗೆಂಗೆ ಅರ್ಥ ಆಯ್ತದೆ?’ ಅಂದ. “ಹೋಗ್ಲಿ ತಗೋ’ ಎನ್ನುತ್ತಾ ಇಂಗ್ಲಿಷ್‌ ಪತ್ರಿಕೆಯನ್ನು ಕೈಗಿಟ್ಟ. ಚಿಲ್ಲರೆ ಕೊಡಲು ಹೋದರೆ, ಬೇಡ ಎಂದು ನಿರಾಕರಿಸಿದ್ದ. 

ರೂಮ್‌ಗೆ ಬಂದೆ. ಗೆಳೆಯರೆಲ್ಲ ಮಲಗಿದ್ದರು. ಪೇಪರ್‌ನಲ್ಲಿ ಕಣ್ಣಾಡಿಸಿದೆ. “ವಾಂಟೆಡ್‌’ ಕಾಲಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಮಾಹಿತಿ ಇತ್ತು. ಆ ನಂಬರ್‌ ಅನ್ನು ನೋಟ್‌ ಮಾಡಿಕೊಂಡು, ಅವತ್ತೇ ಇಂಟರ್‌ವ್ಯೂ ಕೊಟ್ಟೆ. ಖಾಲಿ ಇದ್ದ 3 ಹುದ್ದೆಯ ಸಂದರ್ಶನಕ್ಕೆ 18 ಮಂದಿ ಬಂದಿದ್ದರು. ಪುಣ್ಯಕ್ಕೆ ನನಗೂ ಕೆಲಸ ಸಿಕ್ಕಿತು. ಇದೀಗ ಅದೇ ಕಂಪನಿಯಲ್ಲಿ 6 ವರ್ಷದ ಅನುಭವ ನನ್ನದು. ಈಗ ಅನ್ನಿಸುತ್ತಿದೆ, ಅವತ್ತು ಆ ಪೇಪರ್‌ ಹುಡುಗ ದೇವರ ರೂಪದಲ್ಲಿ ಬಂದು, ನನ್ನ ಕಷ್ಟ ಆಲಿಸಿದ್ದ ಅಂತ.

– ಮಂಜುನಾಥ ಬಿ.ಆರ್‌.

ಟಾಪ್ ನ್ಯೂಸ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.