ಒಂದರಲ್ಲಿ ಟಾಪರ್‌, ಮೂರರಲ್ಲಿ ಫ್ಲಾಪರ್‌


Team Udayavani, Oct 23, 2018, 6:00 AM IST

5.jpg

ಫ‌ಸ್ಟ್‌ ಪಿಯೂಸಿ ಓದುವಾಗ ನಡೆದ ಘಟನೆ. ನನಗೆ ಕೆಮಿಸ್ಟ್ರಿ ಎಂದರೆ ಅಚ್ಚುಮೆಚ್ಚು. ತಗೊಂಡ ಕಾಂಬಿನೇಷನ್‌ ಪಿಸಿಎಂಬಿ ಆದರೂ ಫಿಸಿಕ್ಸ್‌ನಲ್ಲಿ ಆ ಲಾಗಳು, ಅಪ್ಲಿಕೇಶನ್‌ಗಳು ತಲೆಗೆ ಹತ್ತುತ್ತಿರಲಿಲ್ಲ, ಬಯಾಲಜಿ ಹೆಸರುಗಳಂತೂ ಉಚ್ಛರಿಸಲು ನಾಲಗೆ ಹೊರಳುತ್ತಿರಲಿಲ್ಲ. ಜೊತೆಗೆ ಕ್ಲಿಷ್ಟಕರ ಹೆಸರುಗಳು ಒಂದೂ ಜ್ಞಾಪಕವಿರುತ್ತಿರಲಿಲ್ಲ. ಗಣಿತಕ್ಕೆ ದೇವರೇ ಗತಿ! ಆ ರಾಶಿ ರಾಶಿ ಫಾರ್ಮುಲಾಗಳನ್ನು ನೆನಪಿಟ್ಟುಕೊಂಡರೂ ಯಾವ ಸಮಯದಲ್ಲಿ ಯಾವ ಫಾರ್ಮುಲಾ ಉಪಯೋಗಿಸಬೇಕು ಎಂಬುವಲ್ಲಿ ಎಡವುತ್ತಿದ್ದೆ. ಇದ್ಯಾವ ಜಂಜಾಟವೂ ಇಲ್ಲದ ಕೆಮಿಸ್ಟ್ರಿ ನನಗೆ ಸುಲಭ ಎನಿಸಿತ್ತು.  ಹಾಗಾಗಿ ಬರೀ ಅದೊಂದೇ ವಿಷಯಕ್ಕೆ ಹೆಚ್ಚು ಒತ್ತು ನೀಡಿದ್ದೆ. ಎಷ್ಟೋ ವರ್ಷಗಳ ನಂತರ ಈಗ ನನಗೆ ಅನಿಸುತ್ತಿರುವುದು ವಿಜಾnನದ ಬದಲು ಕಲಾ ವಿಭಾಗ ನನ್ನ ಆಯ್ಕೆ ಆಗಬೇಕಿತ್ತೇನೋ ಎಂದು. 

ಮೊದಲನೇ ಕಿರುಪರೀಕ್ಷೆಗೆ ಹಾಜರಾಗಿದ್ದಾಯಿತು. ಆಯಾ ವಿಷಯದ ಶಿಕ್ಷಕರು, ಆಯಾ ಪೀರಿಯಡ್ಡಿನಲ್ಲಿ ಉತ್ತರ ಪತ್ರಿಕೆಗಳನ್ನು ನೀಡುತ್ತಾ ಎಲ್ಲರ ಮುಂದೆ ಮಾರ್ಕ್ಸ್ ಅನೌನ್ಸ್‌ ಮಾಡುವಾಗ ಜೀವವೇ ಬಾಯಿಗೆ ಬಂದಿತ್ತು. ಒಟ್ಟು 25 ಮಾರ್ಕ್ಸ್ಗಳ ಪೇಪರ್‌ನಲ್ಲಿ ಫಿಸಿಕ್ಸ್‌ನಲ್ಲಿ 5, ಬಯಾಲಜಿಯಲ್ಲಿ 7, ಗಣಿತದಲ್ಲಿ 6 ಅಂಕಗಳು ಬಂದಿದ್ದವು. ಮಗಳು ಡಾಕ್ಟರ್‌ ಆಗುತ್ತಾಳೆಂದು ಕನಸು ಕಾಣುತ್ತಿದ್ದ ಅಪ್ಪನಿಗೆ ಹೇಗೆ ಮುಖ ತೋರಿಸುವುದೆಂದು ನಾನು ಯೋಚಿಸುತ್ತಿದ್ದೆ. ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರನ್ನು ಮುಂದಕ್ಕೆ ಕರೆದು, ತರಗತಿಯಲ್ಲಿ ಎಲ್ಲರ ಮುಂದೆ ಶಹಬ್ಟಾಸ್‌ಗಿರಿ ಕೊಟ್ಟು ಚಪ್ಪಾಳೆ ಹೊಡೆಸುತ್ತಿದ್ದರು. ನನ್ನ ಕರ್ಮಕ್ಕೆ ಕ್ಲಾಸಿಗೆ ಟಾಪರ್‌ ಆಗಿದ್ದ ಹುಡುಗಿ ನನ್ನ ಪಕ್ಕದಲ್ಲೇ ಕುಳಿತುಕೊಂಡಿರಬೇಕೇ?  ಚಪ್ಪಾಳೆ ಹೊಡೆಸಿಕೊಳ್ಳಲು ಅವಳು, ಫೇಲಾಗಿದ್ದಕ್ಕೆ ಉಗಿಸಿಕೊಳ್ಳಲು ನಾನು! ನಮ್ಮ ಜೋಡಿ ಸರಿಯಾಗಿತ್ತು. ಪ್ರತಿಸಲ ಆಕೆ ಹೆಮ್ಮೆಯಿಂದ ಬೀಗುವಾಗ ನಾನು ಅವಮಾನದಿಂದ ಕುಗ್ಗಿ ಹೋಗುತ್ತಿದ್ದೆ.

ಅದರ ಮುಂದಿನ ಕ್ಲಾಸು ಕೆಮಿಸ್ಟ್ರಿಯದು. ನಾನು ಫೇಲಾದ ದುಃಖದಲ್ಲಿದ್ದೆ. ಅದೇ ಸಮಯಕ್ಕೆ ಶಿಕ್ಷಕರು “ಈ ಸಲ ನಳಿನಿ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ’ ಎಂದು ಘೋಷಿಸಿ, ತರಗತಿಯ ಮುಂದಕ್ಕೆ ಕರೆದು ಚಪ್ಪಾಳೆ ಹೊಡೆಸಿದರು. ನಾನು ಪೆಚ್ಚು ಪೆಚ್ಚಾಗಿ ನೋಡಿದ್ದೆ. ಎರಡು ಸಬ್ಜೆಕ್ಟ್ ಫೇಲಾಗಿದ್ದಕ್ಕೆ ಅಳಬೇಕೋ, ಒಂದು ವಿಷಯದಲ್ಲಿ ತರಗತಿಗೇ ಹೆಚ್ಚು ಅಂಕ ಪಡೆದುಕೊಂಡಿದ್ದಕ್ಕೆ ಸಂತೋಷ ಪಡಬೇಕೋ ತಿಳಿಯದೆ ಒದ್ದಾಡಿದ್ದೆ.  ಮೂರು ವಿಷಯಗಳಲ್ಲಿ ಅಂಕಗಳು ತಳಹತ್ತಿ, ಒಂದು ವಿಷಯದಲ್ಲಿ ಅತಿ ಹೆಚ್ಚಾಗಿ ತೇಲಾಡಿದ ನನ್ನೆಡೆ ಸಹಪಾಠಿಗಳಂತೂ ವಿಚಿತ್ರ ಪ್ರಾಣಿ ನೋಡುವಂತೆ ನೋಟ ಬೀರುತ್ತಿದ್ದ ನೆನಪು ಹಸಿರಾಗಿದೆ.  
                                     
ನಳಿನಿ. ಟಿ. ಭೀಮಪ್ಪ, ಧಾರವಾಡ

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.