ಇಬ್ಬರ ತಳ್ಳಾಟಕ್ಕೆ ಸಿಕ್ಕಿ ಸೀರೆ ಸಡಿಲವಾಯ್ತು!


Team Udayavani, Nov 13, 2018, 6:00 AM IST

5.jpg

ಚಿತ್ರದುರ್ಗದ ಮುರುಘಾಮಠವು, ಪ್ರತಿವರ್ಷ ಶರಣ ಸಂಸ್ಕೃತಿ ಉತ್ಸವ ನಡೆಸುತ್ತದೆ. ಹತ್ತುದಿನಗಳ ಆ ಉತ್ಸವದಲ್ಲಿ ಒಂದು ದಿನ, ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಜಾನಪದ ಕಲಾಮೇಳವು, ಮಠದಿಂದ ಕೋಟೆಯ ತಪ್ಪಲಿನವರೆಗೆ ನಡೆಯುತ್ತದೆ. ಆ ದಿನ ಮೆರವಣಿಗೆಯಲ್ಲಿ ಮಠದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಒಂದೊಂದು ರೂಪಕವನ್ನು ಪ್ರದರ್ಶಿಸಬೇಕು. ನಾನೂ ಮಠದ ವತಿಯಿಂದ ನಡೆಯುತ್ತಿದ್ದ ಕಾಲೇಜಿನ ವಿದ್ಯಾರ್ಥಿ ಆಗಿದ್ದೆ. ನಮ್ಮ ಎಸ್‌.ಜೆ.ಎಂ. ಫಾರ್ಮಸಿ ಕಾಲೇಜಿನ ವತಿಯಿಂದ “ವರದಕ್ಷಿಣೆಯ ಪಿಡುಗು’ ಎಂಬ ವಿಷಯದ ಮೇಲೆ ಒಂದು ಕಿರು ರೂಪಕವನ್ನು ಸಿದ್ಧಪಡಿಸಿದ್ದೆವು. 

 ಆ ರೂಪಕದಲ್ಲಿ ಅಮ್ಮ, ಅತ್ತೆ ಹಾಗೂ ವಧು, ಹೀಗೆ ಮೂರು ಹೆಣ್ಣು ಪಾತ್ರಗಳು ಬರುತ್ತವೆ. ನಮ್ಮ ಕಾಲೇಜಿನಲ್ಲಿ ಆಗ ಹೆಣ್ಣುಮಕ್ಕಳ ಸಂಖ್ಯೆ ಬಹಳ ಕಡಿಮೆ ಇತ್ತು. ಈ ಪಾತ್ರಗಳಲ್ಲಿ ಅಭಿನಯಿಸಲು ಯಾವ ಹೆಣ್ಣುಮಕ್ಕಳೂ ಮುಂದೆ ಬರದೇ ಹೋದಾಗ ಒಬ್ಬ ಹಿರಿಯ ವಿದ್ಯಾರ್ಥಿಯನ್ನು ಅತ್ತೆ ಪಾತ್ರ ನಿರ್ವಹಿಸಲು ಹಾಗೂ ತೆಳ್ಳಗೆ ಬೆಳ್ಳಗೆ ಇದ್ದ ನನ್ನನ್ನು ವಧುವಿನ ಪಾತ್ರಕ್ಕೆ ಬಲವಂತವಾಗಿ ಒಪ್ಪಿಸಿದರು. ಅಮ್ಮನ ಪಾತ್ರಕ್ಕೆ ಯಾರೂ ಸಿಗದೇ ಹೋದ್ದರಿಂದ ವಧುವಿಗೆ ಅಮ್ಮ ಇಲ್ಲವೆನ್ನುವ ರೀತಿಯಲ್ಲಿ ರೂಪಕವನ್ನು ಸಿದ್ಧಪಡಿಸಿದೆವು. 

    ಮೂರುನಾಲ್ಕು ದಿನಗಳ ತಾಲೀಮು ಮಾಡಿ, ಕೊನೆಯ ದಿನ ಅಕ್ಕನ ಸೀರೆಯೊಂದಿಗೆ ಕಾಲೇಜಿಗೆ ಬಂದೆ. ರಿಹರ್ಸಲ್‌ ವೇಳೆ, ಸೀರೆ ಧರಿಸಿರಲಿಲ್ಲ. ಹಾಗಾಗಿ ಸೀರೆ ಉಡಲು ಅಭ್ಯಾಸವೂ ಆಗಿರಲಿಲ್ಲ. ಇವತ್ತೇ ನಾಟಕದ ದಿನ. ಆದರೆ, ಸೀರೆ ಉಡಲು ಬರುತ್ತಿಲ್ಲ. ಏನ್ಮಾಡೋದು ಎಂದು ತಿಳಿಯದೆ ಪೇಚಾಡುತ್ತಿದ್ದಾಗ, ಕಾಲೇಜಿನ ಎದುರಿನ ಹೂದೋಟದಲ್ಲಿ ಕೆಲಸ ಮಾಡುತ್ತಿದ್ದ ಹನುಮಜ್ಜಿ ಕಾಣಿಸಿದರು. ಅವರಿಗೆ ವಿಷಯ ತಿಳಿಸಿ, ಅವರಿಂದಲೇ ಸೀರೆ ಉಡಿಸಿಕೊಂಡೆವು. ಎಲ್ಲಾ ರೆಡಿಯಾಗಿ ಟ್ರ್ಯಾಕ್ಟರ್‌ಅನ್ನು ಏರಬೇಕೆನ್ನುವಷ್ಟರಲ್ಲಿ, ಮೆರವಣಿಗೆಯು ಆರರಿಂದ ಏಳು ತಾಸು ನಡೆಯುವುದರಿಂದ ಮೂತ್ರ ವಿಸರ್ಜನೆ ಕೆಲಸ ಮುಗಿಸಿಬಿಡೋಣ ಎಂದು ಶೌಚಾಲಯದ ಒಳಹೊಕ್ಕೆ. ಅಲ್ಲಿದ್ದ ಹುಡುಗರೆಲ್ಲ ಕೇಕೆ ಹಾಕುತ್ತ ಜೋರಾಗಿ ಕೂಗಿಕೊಂಡರು! ಹುಡುಗಿಯೊಬ್ಬಳು ಪುರುಷರ ಶೌಚಾಲಯ ಹೊಕ್ಕಳು ಎಂಬುದು ಆ ಕೇಕೆಗೆ ಕಾರಣ ಆಗಿತ್ತು. ಅವರ ಕಿರುಚಾಟ ಕೇಳಿ ಗಾಬರಿಯಾಯಿತು. ತಕ್ಷಣವೇ “ಲೇ, ನಾನ್‌ ಕಣೊÅà ಕಿಟ್ಟ’ ಎಂದುಬಿಟ್ಟೆ ಅಷ್ಟೆ; ಎಲ್ಲರೂ ಇನ್ನೂ ಜೋರಾಗಿ ನಗತೊಡಗಿದರು.

ಟ್ರ್ಯಾಕ್ಟರ್‌ ಹತ್ತಿ ರೂಪಕ ಶುರುವಾದ ಮೇಲೂ ಹುಡುಗರ ಕಾಟ ತಪ್ಪಲಿಲ್ಲ. ರೂಪಕದಲ್ಲಿ ಗಂಡ ಮತ್ತು ಅತ್ತೆ ನನ್ನನ್ನು, ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೊಡೆಯುವಾಗ ಅಲ್ಲೇ ಕೆಳಗಿದ್ದ ಹುಡುಗರು, “ನಿನ್ನ ಗಂಡ ಸರಿ ಇಲ್ಲ, ನನ್ನನ್ನು ಮದುವೆಯಾಗ್ತಿàಯಾ?’ ಎಂದು ಕಿಚಾಯಿಸುವುದು, ಹಿಂದಿನಿಂದ ಸೆರಗು ಹಿಡಿದು ಎಳೆಯುವುದು, ಕಣ್ಣು ಹೊಡೆಯುವುದು, ಕಾಗದದ ಉಂಡೆ ಮಾಡಿ ನನ್ನ ಮೇಲೆ ಎಸೆಯುವುದು, ಹೀಗೆಲ್ಲಾ ಮಾಡುತ್ತಿದ್ದರು. ಮತ್ತೂಂದು ಕಡೆಯಲ್ಲಿ, ಟ್ರ್ಯಾಕ್ಟರ್‌ ಬೇರೆ ಎತ್ತಾಕುತ್ತಿತ್ತು. ಗಂಡ ಮತ್ತು ಅತ್ತೆಯ ಪಾತ್ರಧಾರಿಗಳ ತಳ್ಳಾಟದಲ್ಲಿ, ಅಜ್ಜಿ ಉಡಿಸಿದ್ದ ಸೀರೆಯೆಲ್ಲಾ ಸಡಿಲವಾಗಿ ಸೊಂಟದ ಮೇಲೆ ನಿಲ್ಲದಂತಾಯಿತು. ಏನು ಮಾಡಬೇಕೆಂದು ತಿಳಿಯದೆ ಒಂದು ಕ್ಷಣ ಗಾಬರಿಯಾದೆ. ನಂತರ ಒಂದು ಉಪಾಯ ಹೊಳೆದು, ಅಲ್ಲೇ ಇದ್ದ ಸೆಳೇದುರಿ ತೆಗೆದುಕೊಂಡು ಸೀರೆಯನ್ನು ಹಾಗೇ ಸುಮ್ಮನೆ ಸುತ್ತಿಕೊಂಡು ಗಟ್ಟಿಯಾಗಿ ಕಟ್ಟಿ ರೂಪಕವನ್ನು ಮುಂದುವರಿಸಿದೆವು. ಎಲ್ಲಾ ಮುಗಿಯುವದರೊಳಗೆ ಸಂಜೆಯಾಗಿತ್ತು. 

ಸದ್ಯ ಮುಗಿಯಿತಲ್ಲ ಎಂದು ಸ್ನೇಹಿತನ ರೂಮ್‌ಗೆ ಹೋಗಿ ಬಟ್ಟೆ ಬದಲಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಆಗ ಸ್ನೇಹಿತರು ಹುಡುಕಿಕೊಂಡು ಬಂದು- “ಏ, ನೀ ಇಲ್ಲಿದ್ದೀಯ? ನಮ್ಮ ರೂಪಕಕ್ಕೆ ಮೂರನೇ ಬಹುಮಾನ ಬಂದಿದೆ ಬಾ’ ಎಂದಾಗ, ಬೆಳಗ್ಗೆಯಿಂದ ಸೀರೆ ಉಟ್ಟು ಅನುಭವಿಸಿದ್ದ ಸಂಕಟವೆಲ್ಲ ಮಾಯವಾಯಿತು. 

ಸ್ವಾನ್‌ ಕೃಷ್ಣಮೂರ್ತಿ

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.