ಪಾಠ ಕೇಳ್ಳೋದು ಕಷ್ಟವೇ?


Team Udayavani, Nov 13, 2018, 6:00 AM IST

11.jpg

“ನನ್ನ ಮಗನಿಗೆ ಕಾಲೇಜಿಗೆ ಹೋಗುವ ವಯಸ್ಸು. ಆದರೆ, ನಾನೇ ಕಾಲೇಜಿಗೆ ಹೋಗಿ ಪಾಠ ಕೇಳಬೇಕಾಗಿ ಬಂತು…’- ಈ ಲೆಕ್ಚರರ್‌ ಕತೆ ಹೀಗೆ ತೆರೆದುಕೊಳ್ಳುತ್ತೆ. ಈಗ ಇವರಿಗೆ ಕಾಲೇಜು ಬಿಡಲು ಮನಸ್ಸಾಗ್ತಿಲ್ವಂತೆ…

ಒಂದು ಬ್ರೇಕ್‌ ತಗೊಳ್ಳೋದು ಅಂತಾರೆ ನೋಡಿ, ಹಾಗೇ ಆಗೋಯ್ತು ನನ್ನ ಕತೆ. ಬಿ.ಕಾಂ. ಪದವಿ ಮುಗಿದ ಕೆಲ ತಿಂಗಳಲ್ಲೇ ನಂಗೆ ಮದುವೆ. ವಿದ್ಯಾಭ್ಯಾಸ ಅರ್ಧಕ್ಕೇ ಮೊಟಕಾಯಿತು. ಎಂ.ಕಾಂ. ಮಾಡುವ ಕನಸೂ ಕಮರಿತು ಅಂತಂದುಕೊಂಡಿದ್ದೆ. ಆದರೆ, ಸದ್ಯ ಹಾಗಾಗಲಿಲ್ಲ. ಕೆಲ ವರ್ಷಗಳ ನಂತರ ದೂರ ಶಿಕ್ಷಣದ ಮೂಲಕ ಎಂ.ಕಾಂ. ಆಸೆ ಹೇಗೋ ಈಡೇರಿತು. ಎರಡು ವರ್ಷಗಳ ಬಳಿಕ ಮಾಸ್ಟರ್‌ ಡಿಗ್ರಿ ಸರ್ಟಿಫಿಕೇಟ್‌ ಕೈ ತಲುಪಿ ಆಗಿತ್ತು. ಆಗ ನನ್ನ ಸಂತೋಷ ಕೇಳಬೇಕೇ?

  ತಕ್ಷಣ ಲೆಕ್ಚರರ್‌ ಆದೆ. ಆದರೆ, ಕೆಲವು ಸಲ ನಾವು ಆಸೆಪಟ್ಟ ವೃತ್ತಿಗಳೂ, ನಮ್ಮಿಂದ ಏನಾದರೂ ಕೆಲಸ ಮಾಡಿಸಿಕೊಳ್ಳುತ್ತವೆ. ಅದರಂತೆ ನಾನು ಅನಿವಾರ್ಯವಾಗಿ ಬಿ.ಎಡ್‌. ಮಾಡಬೇಕಾಗಿ ಬಂತು. ಪುನಃ ಕಾಲೇಜು ಮೆಟ್ಟಿಲು ಹತ್ತುವ ಸಂದರ್ಭ ಒದಗಿಬಂತು. ಸಂತೋಷದ ವಿಷಯವೆಂದರೆ, ನನ್ನಂತೆಯೇ ಉಪನ್ಯಾಸಕ ವೃತ್ತಿಯಲ್ಲಿರುವ ಇನ್ನೂ ಮೂರು ಜನ ಆ ಕಾಲೇಜು ಸೇರಿದ್ದರು!

  ಹಲವು ವರ್ಷಗಳ ಬಳಿಕ ಮತ್ತೆ ಕಾಲೇಜು ವಿದ್ಯಾರ್ಥಿನಿ ಆಗೋದೂ ಒಂದು ಖುಷಿ. ಅದು ಬೇರೆ, ಅತೀ ಶಿಸ್ತಿನ ಕಾಲೇಜು. ಪಿಯುಸಿ ಕಲಿಯಲು ಕಾಲೇಜಿಗೆ ಸೇರುವಾಗ ಇರದ ಭಯ, ಮೊದಲ ದಿನ ನನ್ನಲ್ಲಿ ಮನೆ ಮಾಡಿತ್ತು. ಇದ್ದಿದ್ದು ಒಂದೇ ಚಿಂತೆ; ಹೇಗೆ ಒಂಬತ್ತು ಗಂಟೆಯಿಂದ ನಾಲ್ಕು ಗಂಟೆಯವರೆಗೆ ತರಗತಿಯಲ್ಲಿ ಪಾಠ ಕೇಳಲಿ? ಎಂಬುದು. ಗಂಟೆಗಟ್ಟಲೆ ಪಾಠ ಮಾಡಿ ಅನುಭವವಿತ್ತೇ ವಿನಾ ಪಾಠ ಕೇಳುತ್ತಾ ಕುಳಿತಿದ್ದ ದಿನಗಳು ಮರೆತೇ ಹೋಗಿದ್ದವು! ಈಗ ಆ ದಿನಗಳು ಒಂದೊಂದಾಗಿ ಕಣ್ಮುಂದೆ ಬಂದವು. ಮೊದಲ ದಿನವೇ ಪ್ರಾಂಶುಪಾಲರ ನೇರ-ಬಿರುಸಾದ ಮಾತು- You are a student here, not a lecturer. You have come here to learn. You should be a learner; a continuous learner. Even I am learner…ಹೀಗೆ ಪಾಂಶುಪಾಲರು ಉತ್ತಮವಾದ ಸ್ವಾಗತವನ್ನು ನಮಗೆ ನೀಡಿದರು!

  ನಾವು ನಾಲ್ಕು ಜನ ತರಗತಿಗೆ ಕಾಲಿಟ್ಟಿದ್ದೇ ತಡ, ಎಲ್ಲರೂ ನಮ್ಮತ್ತ ಎವೆಯಿಕ್ಕದೆ ದೃಷ್ಟಿ ನೆಟ್ಟರು. ಅಲ್ಲಿದ್ದಿದ್ದು ಬಹುತೇಕ, ಆಗತಾನೆ ಪದವಿ ಮುಗಿಸಿ ಬಂದ ಹುಡುಗಿಯರು. ಇಡೀ ದಿನ ಮಾತು, ನಗು, ಗದ್ದಲ. ಹಿತಮಿತವಾಗಿ ಮಾತನಾಡುತ್ತಿದ್ದ ನನಗೆ “ಸಂತೆಯೊಳಗೊಂದು ಮನೆಯ ಮಾಡಿ ಸದ್ದುಗದ್ದಲಕೆ ಅಂಜಿದೊಡೆ ಎಂತಯ್ಯ?’ ಎಂಬ ಗಾದೆಮಾತು ನೆನಪಿಗೆ ಬಂತು.

  21- 22 ವಯಸ್ಸಿನ ಯುವತಿಯರೊಂದಿಗೆ ಬೆರೆಯುವುದು ತುಂಬಾ ಕಷ್ಟವೆನಿಸಿದರೂ ಕಾಲಕ್ರಮೇಣ ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆಗಳನ್ನು ಇರಿಸಲಾರಂಭಿಸಿದೆ. ಬರಬರುತ್ತಾ ನಾನೂ ಅವರ ನಗು, ಮಾತಿನಲ್ಲಿ ಭಾಗಿಯಾದೆ. ಎಷ್ಟೋ ಸಲ ನಾನೊಬ್ಬಳು ಉಪನ್ಯಾಸಕಿ ಎಂಬುದನ್ನು ಮರೆತು ಕಳ್ಳ- ಪೊಲೀಸ್‌ ಆಟ, ಚೆಸ್‌ ಆಟ ಆಡಿದ್ದಿದೆ. ಕಾಲೇಜಿಗೆ ಹೋಗುವ ಮಗನಿದ್ದರೂ, ನಾನೂ ಸಣ್ಣ ಮಕ್ಕಳಂತೆ ವರ್ತಿಸತೊಡಗಿದ್ದೆ! ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತೆ ನಾನೂ ತರಗತಿಗೆ ಬಿಡುವಿನ ವೇಳೆಯಲ್ಲಿ ತಿನ್ನಲು ಕುರು ಕುರು ತಿಂಡಿ, ಮಾವಿನಕಾಯಿ ಒಯ್ಯಲಾರಂಭಿಸಿದೆ.

  ಇದೀಗ ಅಂತೂ ಇಂತೂ ಮೂರು ಸೆಮಿಸ್ಟರ್‌ ಮುಗಿದು ಕೊನೆಯ ಸೆಮಿಸ್ಟರ್‌ನಲ್ಲಿದ್ದೇನೆ. ಮೊದಲ ದಿನ ಪ್ರಾಂಶುಪಾಲರ ಮಾತು ಕೇಳಿದಾಗ, 400 ದಿನ ಈ ಕಾಲೇಜಿನಲ್ಲಿ ಹೇಗೆ ಕಳೆಯುವುದೆಂದು ಚಿಂತಿಸಿದ್ದೆ. ಇದೀಗ ಇನ್ನು ಒಂದೇ ಸೆಮಿಸ್ಟರ್‌ ಬಾಕಿ ಎನ್ನುವಾಗ ಸಂತೋಷದ ಜೊತೆ ಯಾಕೋ ಸ್ವಲ್ಪ ಬೇಸರವೂ ಆಗುತ್ತಿದೆ. ಕಾಲೇಜಿನಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ ಅತ್ಯಂತ ಖುಷಿಯಲ್ಲಿ ತೇಲಿದೆ. ಆರಂಭದಲ್ಲಿ ಕಿರಿಕಿರಿ ಉಂಟುಮಾಡಿದ ತರಗತಿಯ ಗದ್ದಲ ಈಗ ಪ್ರಿಯವಾಗಲಾರಂಭಿಸಿದೆ. ನನಗಿಂತ 16 ವರ್ಷ ಕಿರಿಯವಳಾದ ಬೆಂಚ್‌ಮೇಟ್‌, ಈಗ ಆತ್ಮೀಯ ಸ್ನೇಹಿತೆಯಾಗಿದ್ದಾಳೆ. ಅವಳಿಂದ Feel young at heart ಅಂದರೆ ಏನೆಂಬುದನ್ನು ಕಲಿತೆ. ಹೌದು, ಈಗ ನಾನು 16ರ ಯುವತಿ!

ರಶ್ಮಿ ಭಟ್‌, ಮಂಗಳೂರು

ಟಾಪ್ ನ್ಯೂಸ್

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.