ಬಿಡಲಾರೆ ಎಂದೂ ನಿನ್ನ ನೀನಾದೆ ನನ್ನೀ ಪ್ರಾಣ….


Team Udayavani, Nov 20, 2018, 6:10 AM IST

lover.jpg

ಪ್ರೀತಿಯ ಹುಡುಗಿ,
ಎದೆಯ ಗೂಡ ಕಡಲಲ್ಲಿ, ಮೊಹಬತ್‌ನ ಮೇಘ ಹೊತ್ತು ತಂದ ತಂಗಾಳಿ ತೂಕದ ಹುಡುಗಿಯೇ.. ಭೂಮಿಯ ಹಾಯಿ ದೋಣಿಯಲ್ಲಿ, ಚಂದ್ರಮನ ದೀಪ ಹಚ್ಚಿ ಕುಳಿತು ಏಕಾಂತವನ್ನು ಆಸ್ವಾದಿಸುತಿದ್ದ ಪರಮ ಸುಖೀ ನಾನು.. ಅದ್ಯಾವ ಘಳಿಗೆಯಲಿ ನನ್ನದೆಯ ಹೊಸ್ತಿಲು ತುಳಿದು ಮನಸೊಳಗೆ ಬಂದುಬಿಟ್ಟೆ ನೀನು?

ನನ್ನ ಕಂಗಳಲ್ಲಿ ಪ್ರೀತಿಯ ಲಾಟೀನು ಹೊತ್ತಿಸಿದ ರೂಪಸಿಯೆ, ನಿನ್ನ ಕಣ್ಣೋಟದ ಆಲಿಂಗನಕೆ ನನ್ನ ಹೃದಯದಲ್ಲಿ ಸಾವಿರ ತಂತಿಗಳು ಸ್ವರ ಮೀಟಿವೆ. ನಿನ್ನ ಸ್ಪರ್ಶಿಸುವ ಸಮ್ಮತಿಗೆ ಹೃದಯದ ಕೋಣೆಯಲ್ಲಿ ಬೆಚ್ಚಗಿನ ಭಾವನೆಗಳ ಉಗಮವಾಗುತ್ತಿದೆ. ನಿನ್ನ ನಿದಿರೆಗೆ ನನ್ನ ಮಡಿಲ ತೊಟ್ಟಲಲಿ ಜೋಗುಳ ಗೀತೆಯ ಹಾಡಲು ಹೃದಯ ತವಕಿಸುತ್ತಿದೆ.

ನಿನ್ನ ಮಾತಿನ ಕಡಗೋಲಿಗೆ ನನ್ನ ಎದೆಯಲ್ಲಿ ಒಲವ ಮಂಥನ, ಉದಯಿಸಿದ ಪ್ರೀತಿಗೆ ಸಾವಿರ ಬಣ್ಣ. ಇಳಿ ಸಂಜೆಯ ಮಬ್ಬಿನಲೂ ನಿನ್ನ ಕೆನ್ನೆಯ ಮೇಲೆ ನಾಚಿಕೆಯ ರಂಗು. ಹಿಡಿದಿಟ್ಟ ಬಿಸಿಯ ಭಾವನೆಗಳಿಗೆ ಈ ಮನವೀಗ ಒಲವ ಕುಲುಮೆ. ನೀ ಎದೆಗೆ ಒರಗಿದಾಗ ಸೋಕಿದ ಕೂದಲಿನ ಘಮ, ಕಣ್ಣುಚ್ಚದೆ ನಿನ್ನೊಂದಿಗೆ ಕಳೆದ ರಾತ್ರಿಗೆ ಈಗ ಪ್ರತಿ ರಾತ್ರಿಗಳ ಕಂದಾಯ. ಇಬ್ಬರೇ ಇದ್ದ ಏಕಾಂತದಲೂ ಸಂಯಮ ತಪ್ಪದ ನನ್ನ ಪ್ರೀತಿಗೆ ಬೆಲೆ ಕಟ್ಟಲಾಗದ ಗರ್ವ..

ಸಮಯ ಸರಿದು ಬಾನಲ್ಲೇ ಕರಗಿ ಹೋದ ಚಂದ್ರಮನ ಮೇಲಾಣೆ. ನೀನು ನನ್ನ ಹೃದಯ ಹೊಕ್ಕ ಸುಂದರ ಸ್ಪಪ್ನ. ಹಾಲಲ್ಲಿ ಅದ್ದಿ ತೆಗೆದ ಬೊಂಬೆಗೆ ಸೂರ್ಯನ ಹೊಂಬಿಸಿಲ ಕೆಂಪ ಸೋಕಿಸಿ, ಶ್ವೇತವರ್ಣದ ಹತ್ತಿಯ ಸುತ್ತಿ ಚರ್ಮದ ಹೊದಿಕೆ ಹೊದಿಸಿದಂತಿದೆ ನಿನ್ನ ಮೈ ಬಣ್ಣ. 

ನಾ ಹರವಿ ಕೂತ ಎಲ್ಲ ಕನಸುಗಳಲಿ ನಿನ್ನ ಪಾಲುದಾರಿಕೆ ಇದೆ. ಒಲವ ಅಕ್ಷರ ತೀಡಿದ ಬೆರಳ ಇನ್ನೊಮ್ಮೆ ಸೋಕುವ ಬಯಕೆ. ಎದೆಯ ಕೋಟೆಯಲಿ ನಿನ್ಹೆಸರ ಸ್ಮಾರಕ. ಕಪ್ಪು ಬಿಳುಪು ಕಂಗಳಲ್ಲಿ ನಿನ್ನ ನೆನಪ ಚಿತ್ತಾರ. ಹೃದಯದ ಬೀದಿಗಳಲ್ಲಿ ಪ್ರೇಮೋತ್ಸವದ ತಯಾರಿ. ಏಕಾಂತಕ್ಕೂ ನಿನ್ನ ಹೆಸರ ಧ್ಯಾನ.

ಸಾಕು, ಈ ದೂರ ಸಾಕಿನ್ನು. ನನ್ನ ಪ್ರೇಮ ದೀವಟಿಗೆಗೆ ನೀ ಒಲವ ತೈಲವಾಗು. ಎದೆಯ ಗೂಡಲ್ಲಿ ಪ್ರೇಮ ಜ್ಯೋತಿಯಾಗು. ನನ್ನವಳಾಗು. ನೆರಳಾಗಿ ಜೊತೆಗಿರುವೆ ನಾ ಎಂದೆಂದಿಗೂ…

– ಗಣೇಶ್‌, ಶಿವಮೊಗ್ಗ

ಟಾಪ್ ನ್ಯೂಸ್

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.