ಸ್ವಲ್ಪ ಫ್ರೀ ಮಾಡ್ಕೊಂಡು ಉತ್ತರ ಬರಿ…


Team Udayavani, Dec 4, 2018, 6:00 AM IST

c-10.jpg

ಬೇಸರವಾದಾಗ, ಸಿಟ್ಟು ಬಂದಾಗ ಮೌನಕ್ಕೆ ಶರಣಾಗಿ, ಖುಷಿಯಾದಾಗ ಎಲ್ಲರೊಂದಿಗೂ ಹಂಚಿಕೊಂಡು ಕುಣಿದಾಡಿ, ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಆಡಿ, ಕೆಲವೊಮ್ಮೆ ಗಾಂಭೀರ್ಯ ತಾಳುವ ನಿನ್ನನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ. ನಿನಗೇ ಗೊತ್ತಿಲ್ಲದ ಹಾಗೆ, ನೀನು ಬದುಕನ್ನು ಪ್ರೀತಿಸುವ ಶೈಲಿಯನ್ನು ನಾನು ಕಲಿತಿದ್ದೇನೆ.

ಮೊದಲ ಸಲ ನಿನ್ನ ಜೊತೆ ಮಾತಾಡಿದಾಗ, ಮುಂದೆ ಇಬ್ಬರೂ ಇಷ್ಟು ಹತ್ತಿರ ಆಗ್ತಿವಿ ಅಂತ ನಾನು ಅಂದುಕೊಂಡಿರಲಿಲ್ಲ. ನಾವಿಬ್ಬರೂ ಹತ್ತಿರವಾಗೋಕೆ ಕಾರಣ, ನಮ್ಮ ಯೋಚನಾಲಹರಿ, ಒದಗಿ ಬಂದ ಪರಿಸ್ಥಿತಿಗಳು, ನಮ್ಮ ಬೇಜಾರುಗಳು, ನೋವುಗಳು, ನಲಿವುಗಳು, ನಂಗಿಷ್ಟದ ಭಾವ ಗೀತೆಗಳು, ನಿಂಗಿಷ್ಟವಾಗಿದ್ದ ಇಂಗ್ಲಿಷ್‌ ಹಾಡುಗಳು… ಇತ್ಯಾದಿ ಇತ್ಯಾದಿ. ನಮ್ಮ ದುಃಖವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ ಅದು ಕಡಿಮೆ ಆಗುತ್ತಂತೆ, ಖುಷಿ ಹಂಚಿಕೊಂಡರೆ ಜಾಸ್ತಿ ಆಗುತ್ತಂತೆ. ಹಾಗೆ ಹೇಳ್ಳೋದನ್ನು ಕೇಳಿದ್ದೆ. ನಿನ್ನ ಭೇಟಿ ಆಗೋವರೆಗೂ ಆ ಮಾತಿನ ಮೇಲೆ ನಂಗೆ ನಂಬಿಕೇನೇ ಇರಲಿಲ್ಲ.

ಎಲ್ಲ ಹೆಣ್ಣಿನಲ್ಲಿಯೂ ತಾಯಿಯ ಗುಣ ಇರುತ್ತಂತೆ. ನಿನ್ನಲ್ಲಿ ಆ ಗುಣ ತುಸು ಜಾಸ್ತಿಯೇ ಇದೆ. ಯಾಕೆಂದರೆ ನಿನ್ನಲ್ಲಿ ಕಷ್ಟ ಹೇಳಿಕೊಂಡರೆ, ನನಗಿಂತ ಜಾಸ್ತಿ ನೀನೇ ಅದಕ್ಕೆ ಮರುಗುತ್ತೀಯ. ನನ್ನ ನೋವು ನಿನಗೇ ಆಗಿದೆಯೇನೋ ಅನ್ನುವ ಹಾಗೆ ಚಡಪಡಿಸ್ತೀಯ. ಸಮಸ್ಯೆಗೆ ಪರಿಹಾರ ಸೂಚಿಸ್ತೀಯ. ನಾನು ನಂಗೆ ಗೊತ್ತಿಲ್ಲದೆಯೇ ನಿನ್ನ ಮನಸ್ಸು ನೋಯಿಸಿದಾಗಲೂ, ಅವೆಲ್ಲವನ್ನು ಮರೆತು ಮತ್ತೆ ನನ್ನ ಬಗ್ಗೆ ಕಾಳಜಿ ತೋರಿಸ್ತೀಯ. ಬೇಸತ್ತ ನನ್ನ ಮನಸ್ಸಿಗೆ ಸಾಂತ್ವನ ಹೇಳಿ, ಜೊತೆಗೆ ಕೀಟಲೆ ಮಾತುಗಳನ್ನಾಡಿ ನಗಿಸೋ ನಿನ್ನ ಗುಣವಿದೆಯಲ್ಲ…

ನೀನೆಷ್ಟು ಹಸನ್ಮುಖಿಯೋ, ಅಷ್ಟೇ ಅಂತರ್ಮುಖಿಯೆಂದು ನನಗೆ ಗೊತ್ತು. ಬೇಸರವಾದಾಗ, ಸಿಟ್ಟು ಬಂದಾಗ ಮೌನಕ್ಕೆ ಶರಣಾಗಿ, ಖುಷಿಯಾದಾಗ ಎಲ್ಲರೊಂದಿಗೂ ಹಂಚಿಕೊಂಡು ಕುಣಿದಾಡಿ, ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಆಡಿ, ಕೆಲವೊಮ್ಮೆ ಗಾಂಭೀರ್ಯ ತಾಳುವ ನಿನ್ನನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ. ನಿನಗೇ ಗೊತ್ತಿಲ್ಲದ ಹಾಗೆ, ನೀನು ಬದುಕನ್ನು ಪ್ರೀತಿಸುವ ಶೈಲಿಯನ್ನು ನಾನು ಕಲಿತಿದ್ದೇನೆ. ನೂರಾರು ಪಾಠಗಳನ್ನು ಹೇಳಿ ಕೊಟ್ಟ ಗುರು ನೀನು. ಇಷ್ಟೆಲ್ಲಾ ಸದ್ಗುಣಗಳಿರೋ ನಿನ್ನನ್ನು ಯಾರು ತಾನೇ ಮೆಚ್ಚಿಕೊಳ್ಳುವುದಿಲ್ಲ ಹೇಳು? ನೀನು ನನಗೂ ಇಷ್ಟ ಆಗಿದ್ದೀಯ. ನಾನು ನಿನ್ನನ್ನು ತುಂಬಾ ಪ್ರೀತಿಸ್ತಿದ್ದೀನಿ. ನೀನು ಹೂಂ ಅಂದ್ರೆ, ನನ್ನ ಸಣ್ಣ ಸಾಮ್ರಾಜ್ಯದ ಪಟ್ಟದ ರಾಣಿಯಾಗಿ ನೋಡಿಕೊಳ್ತೀನಿ.

ಇದನ್ನೆಲ್ಲ ನಿನ್ನ ಮುಂದೆ ನೇರವಾಗಿ ಹೇಳಲಾರದಷ್ಟು ದೂರದವನೇನಲ್ಲ ನಾನು. ಅದು ನನಗೂ ಗೊತ್ತು, ನಿನಗೂ ಕೂಡ. ಆದರೆ ನೀನು ನನ್ನ ಮುಂದೆ ನಿಂತು ಮುಗುಳ್ನಕ್ಕರೆ ಸಾಕು, ಹೇಳಬೇಕಾಗಿರೋ ಎಲ್ಲ ಮಾತೂ ಮರೆತೇ ಹೋಗುತ್ತೆ. ಅದಕ್ಕೋಸ್ಕರಾನೇ ಬಿಡುವಿಲ್ಲದ ಸಮಯದಲ್ಲಿ, ಸ್ವಲ್ಪ ಪುರುಸೊತ್ತು ಮಾಡ್ಕೊಂಡು ಈ ಪತ್ರ ಬರೆದಿದ್ದೀನಿ. ನೀನೂ ಕೂಡ ಅಷ್ಟೇ ಪುರುಸೊತ್ತು ಮಾಡ್ಕೊಂಡು ಓದಿ ಪ್ರತಿಕ್ರಿಯೆ ತಿಳಿಸು. 

ನಿನ್ನ ಉತ್ತರಕ್ಕಾಗಿ ಕಾದಿರುವ…

ಈರಯ್ಯ ಉಡೇಜಲ್ಲಿ, ಹುಬ್ಬಳ್ಳಿ 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.