ಹೃದಯ ಕಳೆದುಕೊಂಡವನ ಕನಸು, ಕನವರಿಕೆ…


Team Udayavani, Dec 18, 2018, 6:00 AM IST

26.jpg

ನಾನು ಕಾಲೇಜಿಗೆ ಬೇಗ ಬರುವುದೇ ನಿನ್ನನ್ನು ನೋಡಲಿಕ್ಕೆ ಎಂಬಂತಾಗಿದೆ. ನಿನ್ನೊಡನೆ ನಿಧಾನವಾಗಿ ನಡೆಯುತ್ತಾ, ಕ್ಯಾಂಪಸ್‌ನಲ್ಲಿ ತಿರುಗಾಡಬೇಕೆಂಬ ಹೊಸ ಕನಸಿಗೆ ಕಾವು ಕೊಡುತ್ತಾ ಕೂತಿದ್ದೇನೆ.

ನೀರಿನಷ್ಟೇ ನಿರ್ಮಲಳು, ಹೂವಿನಷ್ಟೇ ಕೋಮಲಳು  ನೀನು. ನಿನ್ನ ನಿಷ್ಕಲ್ಮಷ ಮನಸ್ಸಿಗೆ, ನಿನ್ನ ನೋಟಕ್ಕೆ, ತಕರಾರಿಲ್ಲದೆ ಸೋತು ಹೋದವನು ನಾನು. ಅರಿವಳಿಕೆಯಷ್ಟೇ ಮತ್ತು ಬರಿಸಿತ್ತು ನಿನ್ನ ಕಿರುಲಜ್ಜೆ. ಏಕೋ ಏನೋ ಆ ವಾರೆಗಣ್ಣಿನ ನೋಟ ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದೆ. ನೀನು ಬೇಕೇ  ಬೇಕೆಂದು ಮನಸ್ಸು ಹಠ ಮಾಡಿದೆ.

 ಮೊದಲ ದಿನ ತರಗತಿಯಲ್ಲಿ ನಿನ್ನನ್ನು ಕಂಡಾಗ ಮನಸಲ್ಲಿ ಉಲ್ಲಾಸದ ಜಡಿಮಳೆ ಸುರಿದ ಅನುಭವ. ಸ್ನೇಹಿತೆಯರ ಜೊತೆ ಮಾತನಾಡುತ್ತಾ, ನಿನ್ನ ಪಾಡಿಗೆ ನೀನು ಯಾರಿಗೂ ಕೇರ್‌ ಮಾಡದೆ ಓಡಾಡುವ ರೀತಿ, ಯಾರೇ ಮಾತಾಡಿಸಿದರೂ ನಸುನಗುತ್ತಾ ಉತ್ತರಿಸುವ ನಿನ್ನ ತಾಳ್ಮೆಯ ಕಂಡು ಸೋತು ಹೋಗಿದ್ದೇನೆ. ಅಂದಿನಿಂದ ಮನಸ್ಸು ನಿನ್ನದೇ ತಿಲ್ಲಾನ ಹಾಡುತ್ತಿದೆ. ಹೃದಯವು ನಿನ್ನ ಸನಿಹ ಬಯಸುತ್ತಾ, ಕನಸಲ್ಲೂ ನಿನ್ನನ್ನೇ ಕನವರಿಸುತ್ತಿದೆ. 

ನೀನು ಕಿರುಗಣ್ಣಲ್ಲಾದರೂ ನನ್ನನ್ನು ನೋಡಲಿ, ನಸುನಗಲಿ ಅಂತ ಹಾತೊರೆಯುತ್ತಿದ್ದ ನನಗೆ, ಆವತ್ತು ನೀನು ಇದ್ದಕ್ಕಿದ್ದಂತೆ ಬಂದು “ಹಾಯ್‌’ ಎಂದು ಹೇಳಿದಾಗ, ಗಾಳಿಯಲ್ಲಿ ತೇಲುವುದೊಂದು ಬಾಕಿ. ನಿನಗೆ ಸರಿಯಾಗಿ “ಹಾಯ್‌’ ಮಾಡಲೂ ಆಗಲಿಲ್ಲ ಆವತ್ತು. ಆ ದಿನಪೂರ್ತಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗಂತೂ ನಾನು ಕಾಲೇಜಿಗೆ ಬೇಗ ಬರುವುದೇ ನಿನ್ನನ್ನು ನೋಡಲಿಕ್ಕೆ ಎಂಬಂತಾಗಿದೆ. ನಿನ್ನೊಡನೆ ನಿಧಾನವಾಗಿ ನಡೆಯುತ್ತಾ, ಕ್ಯಾಂಪಸ್‌ನಲ್ಲಿ ತಿರುಗಾಡಬೇಕೆಂಬ ಹೊಸ ಕನಸಿಗೆ ಕಾವು ಕೊಡುತ್ತಾ ಕೂತಿದ್ದೇನೆ. ಹಾಗೆ ನಡೆಯುತ್ತ ನಡೆಯುತ್ತಲೇ ನೀನು ನನ್ನ ಬದುಕಿಗೆ ಪ್ರವೇಶಿಸಬೇಕು, ಜೀವನಪೂರ್ತಿ ಜೊತೆಯಾಗಿ ಇರಬೇಕು… ಅಬ್ಟಾ, ನನ್ನ ಕನಸುಗಳಿಗೆ ಮಿತಿಯೇ ಇಲ್ಲ! 

 ನಿನ್ನೊಡನೆ ಮನಬಿಚ್ಚಿ ಮಾತನಾಡಬೇಕು, ನಿನ್ನ ಸ್ನೇಹ ಪಡೆಯಬೇಕು ಅಂತೆಲ್ಲಾ ಅನ್ನಿಸುತ್ತಲೇ ಇರುತ್ತದೆ. ಆದರೆ, ನಿನ್ನ ಮುಂದೆ ನಿಲ್ಲಲೂ ಅಂಜಿಕೆ. ನೀನು ಮಾತನಾಡಿದರೆ ನನಗೆ ಮಾತೇ ನಿಂತು ಹೋಗುತ್ತದೆ.

ನಿನಗಾಗಿ ಹೃದಯದಲ್ಲಿ ರಂಗಸಜ್ಜಿಕೆಯೊಂದು ಸಜಾಗಿದೆ. ನೀನು ಕಾಲ್ಗೆಜ್ಜೆ ಕಟ್ಟಿ ನಲಿಯಬೇಕಿದೆ. ನಿನ್ನ ಆಗಮನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಈ ಪ್ರೇಮಿಯ ಮೇಲೆ ಪ್ರೀತಿಯ ಮಳೆ ಸುರಿಸಲು ಬಾ. 

ಇಂತಿ ಹೃದಯ ಕಳೆದುಕೊಂಡವ!

ಚಂದ್ರಶೇಖರ್‌ ಬಿ.ಎನ್‌    

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.