ಗವಾಹ್‌ ಹೈ ಚಾಂದ್‌ ತಾರೇ ಗವಾಹ್‌ ಹೈ… 


Team Udayavani, Dec 25, 2018, 6:00 AM IST

raji.jpg

“ಪಿಜಿಗೆ ಬರುವುದು ಸ್ವಲ್ಪ ತಡವಾಯ್ತು. ಊಟವೂ ಇಲ್ಲ, ಸಂಜೆ ನಿನ್ನ ಜೊತೆ ಭೇಲ್‌ಪುರಿ ತಿಂದಿದ್ದಷ್ಟೆ. ವಿಪರೀತ ಹಸಿವು. ಎರಡು ಬಿಸ್ಕೆಟ್‌ ತಿಂದು ನೀರು ಕುಡಿದೆ’ ಜೋಲುಮೋರೆಯ ಇಮೋಜಿಯೊಂದಿಗೆ ಹೀಗೊಂದು ಸಂದೇಶವನ್ನೂ ಅವನಿಗೆ ಕಳುಹಿಸಿದಳು. ಅತ್ತ ಕಡೆಯಿಂದ ಸಾಂತ್ವನ ಬರಲಿಲ್ಲ. 

ನಸುಗೋಪದಿಂದಲೇ ಕಣ್ಮುಚ್ಚಿದಳು, ಎಫ್ಎಂ ರೇಡಿಯೋ ಹಚ್ಚಿ…

“ಕನಸಲಿ ನಡೆಸು ಬಿಸಿಲಾದರೆ ಒಲವನೆ  ಬಡಿಸು ಹಸಿವಾದರೆ 

ಜಗವ ಮರೆಸು ನಗುವ ಮುಡಿಸು ನೀ ನನ್ನ ಪ್ರೇಮಿ ಆದರೆ…’  

ಅವಳಿಷ್ಟದ ಹಾಡು ಕೇಳುತ್ತಾ ಕನಸು ಕಾಣತೊಡಗಿದಳು. ಮನಸ್ಸು ಬೆಚ್ಚಗಾಯಿತು. 

ಹತ್ತು ನಿಮಿಷಕ್ಕೆ ಅವನಿಂದ ಮೆಸೇಜ್‌- “ಮೊಬೈಲಿಗೆ ಊಟ ಇರಲಿಲ್ಲ, ತಡವಾದುದ್ದಕ್ಕೆ ಕ್ಷಮಿಸು, ಮಲಗಿಬಿಟ್ಯಾ?’ ಅವಳ ಕೋಪ ಒಮ್ಮೆಲೇ ಕರಗಿತು. “ಎಷ್ಟು ಸಲ ಹೇಳಿದ್ದೀನಿ, ಮೊಬೈಲ್‌ ಚಾರ್ಜ್‌ ವಿಷಯದಲ್ಲಿ ಯಾಮಾರಬೇಡ ಅಂತ. ನಿನ್ನಿಂದ ಉತ್ತರ ಬರದೇ ಹೋದರೆ ತಳಮಳ ಶುರುವಾಗಿಬಿಡುತ್ತೆ… ಇಲ್ಲ, ನಿದ್ದೆ ಹತ್ತಿರಲಿಲ್ಲ…ನೀನು ಬಂದಿದ್ಯಲ್ಲ …ಕನಸಿನಲ್ಲಿ’- ಇವಳು ಕೂತಲ್ಲೇ ನಾಚಿಕೊಂಡು, ತನ್ನಷ್ಟಕ್ಕೇ ನಗುತ್ತಾ, ಹಲ್ಕಿರಿವ ಇಮೋಜಿಯನ್ನೂ ರವಾನಿಸಿದಳು! 

ಅವನು ಹಗುರಾದ. 

ಹಿಂದೆಯೇ ಕೇಳಿದ: “ಏನು ಕನಸು ಕಾಣುತ್ತಿದ್ದೆ?’

“ಇನ್ನೇನು?ಈ ಪಿಜಿ ಸಹವಾಸ ಸಾಕಾಗಿದೆ. ನಮ್ಮದು ಅಂತ ಒಂದು ಗೂಡು ಆದರೆ ಎಷ್ಟು ಚಂದ. ನೀನು ಇಲ್ಲಿಗೆ ಬರೋದು ಯಾವಾಗ, “ನಾನು ನಿನ್ನವಳು’ ಅಂತ ತಲೆ ತಗ್ಗಿಸಿ, ನಾನು ನಾಚುವುದು ಯಾವಾಗ? ಐ ಮಿಸ್‌ ಯು, ಯು ನೋ ದಟ್‌..’
ಇವಳ ಪದಗಳಲ್ಲಿ ಪ್ರೀತಿ ತುಂಬಿತ್ತು. 

“ಇಷ್ಟು ದಿನವೇ ಕಾದಿದ್ದಾಗಿದೆ. ಇವತ್ತೂ ಅಮ್ಮ ಹೇಳಿದರು: “ಇನ್ನು ಒಂದು ತಿಂಗಳು ಕಾಯಿರಿ. ಪುಷ್ಯ ಮಾಸ ಕಳೀಲಿ, ಸಂಕ್ರಾಂತಿ ಬರ್ತಿದ್ದ ಹಾಗೆ ಓಲಗ ಊದಿಸೋಣ ಅಂತ’ ಅವನು ರಮಿಸಿದ..  

ಅವಳು ನರ್ತಿಸುವ ಬಾಲೆಯನ್ನು ರವಾನಿಸಿದಳು ತನ್ನ ಸಂಭ್ರಮವನ್ನು ವ್ಯಕ್ತಪಡಿಸಲು.

ರೇಡಿಯೋದಲ್ಲಿ ಅವಳ ಮೂಡ್‌ಗೆ ತಕ್ಕ ಹಾಡು… 

“ಗವಾಹ್‌ ಹೈ ಚಾಂದ್‌ ತಾರೇ ಗವಾಹ್‌ ಹೈ…’ 

ಅಲ್ಲವೇ, ನನ್ನ ನಿನ್ನ ಪ್ರೀತಿಗೆ ಆ ಚಂದ್ರ ತಾರೆಯರೇ ಸಾಕ್ಷಿ …

– ರಾಜಿ, ಬೆಂಗಳೂರು 

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.